/newsfirstlive-kannada/media/post_attachments/wp-content/uploads/2024/10/Siddaramaiah-1.jpg)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಟ್ಟೆಗೆ ಬೆಂಕಿಯ ಕಿಡಿ ತಾಕಿದ ಘಟನೆ ವಿಧಾನ ಸೌಧದಲ್ಲಿ ನಡೆದಿದೆ. ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಈ ಅವಘಡ ಸಂಭವಿಸಿದೆ.
ಆಕಸ್ಮಿಕವಾಗಿ ಸಿಎಂ ಸಿದ್ದರಾಮಯ್ಯನವರ ಬಟ್ಟೆಗೆ ಬೆಂಕಿಯ ಸಣ್ಣ ಕಿಡಿ ತಾಕಿದೆ. ಜ್ಯೋತಿ ಬೆಳಗುವಾಗ ನಡೆದ ಈ ಘಟನೆ ಕಂಡ ಸಿಎಂ ಭದ್ರತಾ ಸಿಬ್ಬಂದಿ ಕೂಡಲೇ ಕಿಡಿಯನ್ನ ಆರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/Siddaramaiah-2.jpg)
ಸದ್ಯ ಸಿಎಂ ಮುಡಾ ಪ್ರಕರಣ ಎದುರಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಮುಡಾ ಸೈಟ್​ಗಳನ್ನು ವಾಪಸ್ ನೀಡಿದ್ದಾರೆ. ಹೀಗಾಗಿ ಸಿಎಂ ಇನ್ನೂ ಮೂರು ದಿನಗಳ ಕಾಲ ತವರು ಮೈಸೂರಲ್ಲೇ ಉಳಿಯಲಿದ್ದಾರೆ. ಅದರ ಜೊತೆಗೆ ಸಿದ್ದರಾಮಯ್ಯನವರು ದಸರಾ ಉದ್ಘಾಟನೆ ಹಿನ್ನಲೆ ಮೈಸೂರಿನಲ್ಲೇ ಇರಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us