‘ನೀನು ಬೇಕೇ ಬೇಕು’ ಎಂದು KL​ ರಾಹುಲ್​ ಕಾಲು ಹಿಡಿದ ಕೋಚ್​ ಗಂಭೀರ್​​.. ಅಸಲಿಗೆ ಆಗಿದ್ದೇನು?

author-image
Ganesh Nachikethu
Updated On
ಜಸ್​​ಪ್ರೀತ್ ಬೂಮ್ರಾಗೆ ದಂಡದ ಬರೆ.. ಗಣೇಶನ ಮೊರೆ ಹೋದ ಪಾಂಡ್ಯ.. ಏನೇನ್ ಆಗಿದೆ ಕ್ರಿಕೆಟ್ ಲೋಕದಲ್ಲಿ..?
Advertisment
  • ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು
  • ಬಾಂಗ್ಲಾದೇಶದ ವಿರುದ್ಧ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದ ಭಾರತ ಕ್ರಿಕೆಟ್​ ತಂಡ!
  • ವಿಕೆಟ್​ ಕೀಪಿಂಗ್​ ಬ್ಯಾಟರ್​ ಸ್ಥಾನಕ್ಕೆ ಮತ್ತೆ ಕೆ.ಎಲ್​ ರಾಹುಲ್​ ಕಾಲು ಹಿಡಿದ ಗಂಭೀರ್​​

ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​​ ಮೇಲೆ ಫುಲ್​​ ಫೋಕಸ್​ ಮಾಡುತ್ತಿದೆ. ಇದಕ್ಕಾಗಿ ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಭಾರೀ ತಯಾರಿ ನಡೆಸಿಕೊಂಡಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಭಾರೀ ರೋಚಕತೆಯಿಂದ ಕೂಡಿರಲಿದೆ.

ಮುಂದಿನ ತಿಂಗಳು ಸೆಪ್ಟೆಂಬರ್​​​ 19ನೇ ತಾರೀಕಿನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಇದು ಅಕ್ಟೋಬರ್ 1 ರವರೆಗೆ ನಡೆಯಲಿದೆ. ಬಾಂಗ್ಲಾದೇಶ ವಿರುದ್ಧ ಗೆದ್ದರೆ ಟೀಮ್​ ಇಂಡಿಯಾ ನೇರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಲುಪಲಿದೆ.

ಇನ್ನು, ಈ ಮಹತ್ವದ ಸರಣಿಗಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಗೌತಮ್​ ಗಂಭೀರ್​​ ಮಹತ್ವದ ಪ್ಲಾನ್​ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಸರಣಿಗಾಗಿ ಭಾರತ ಟೆಸ್ಟ್​ ತಂಡದಲ್ಲಿ ಭಾರೀ ಬದಲಾವಣೆ ಮಾಡಲಿದ್ದಾರೆ. ವಿಶೇಷ ಎಂದರೆ ಭಾರತದ ಟೆಸ್ಟ್ ತಂಡದಲ್ಲಿ ಕೆ.ಎಲ್​ ರಾಹುಲ್​ಗೆ ಮಣೆ ಹಾಕಲಿದ್ದಾರೆ.

ರಾಹುಲ್​ಗೆ ಅವಕಾಶ ನೀಡಲು ನಿರ್ಧಾರ

ಕೆ.ಎಲ್​ ರಾಹುಲ್​ ಅತ್ಯಂತ ಯಶಸ್ವಿ ಟೆಸ್ಟ್​ ಕ್ರಿಕೆಟರ್​. ಇವರು 6ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ ಕೆಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಂದು ಕಾರಣಕ್ಕೆ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್‌ಗೆ ಖಂಡಿತವಾಗಿ ಅವಕಾಶ ನೀಡಬಹುದು.

ಕೆಎಲ್ ರಾಹುಲ್ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅತ್ಯಂತ ಪ್ರವೀಣರು. ವಿಕೆಟ್ ಕೀಪಿಂಗ್​ನಲ್ಲಿ ರಾಹುಲ್ ಕ್ಯಾಚಿಂಗ್ ಮತ್ತು ಸ್ಟಂಪಿಂಗ್ ಕೂಡ ಅತ್ಯುತ್ತಮವಾಗಿದೆ. ಭಾರತ ಪರ ರಾಹುಲ್ 50 ಟೆಸ್ಟ್ ಪಂದ್ಯಗಳಲ್ಲಿ 34.08 ಸರಾಸರಿಯಲ್ಲಿ 2863 ರನ್ ಗಳಿಸಿದ್ದಾರೆ. ಈ ಪೈಕಿ 8 ಶತಕ ಮತ್ತು 14 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇವರ ಹೈಎಸ್ಟ್​ ಸ್ಕೋರ್​ 199 ರನ್ ಆಗಿದೆ.

ಇದನ್ನೂ ಓದಿ:‘ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಇವರೇ’- ಸ್ಫೋಟಕ ಸುಳಿವು ಕೊಟ್ಟ ಬ್ಯಾಟಿಂಗ್​ ಕೋಚ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment