ಲಂಕಾ ಟಿ20 ಸರಣಿ ಕ್ಲೀನ್ಸ್ವೀಪ್ ಬೆನ್ನಲ್ಲೇ ಖಡಕ್ ವಾರ್ನಿಂಗ್
ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಗಂಭೀರ್?
ಮುಂದಿನ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮನ
ಶ್ರೀಲಂಕಾ ಎದುರಿನ ಚುಟುಕು ಸರಣಿ ಗೆಲುವಿನ ಬೆನ್ನಲ್ಲೇ ಹೆಡ್ ಕೋಚ್ ಗೌತಮ್ ಗಂಭೀರ್ ಗರಂ ಆಗಿದ್ದಾರೆ. ಖಡಕ್ ಮಾತುಗಳಲ್ಲಿ ಟೀಮ್ ಇಂಡಿಯಾ ಸ್ಟಾರ್ಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅದ್ಧೂರಿ ಆರಂಭ ಮಾಡಿದ್ದಾರೆ. ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಯಾಡಿದೆ. ಕ್ಲೀನ್ ಸ್ವೀಪ್ ದಿಗ್ವಿಜಯ ಸಾಧಿಸೋದ್ರೊಂದಿಗೆ ಗೌತಮ್ ಗಂಭೀರ್, ಕೋಚ್ ಆಗಿ ಮೊದಲ ಅಗ್ನಿ ಪರೀಕ್ಷೆ ಗೆದ್ದಿದ್ದಾರೆ. 3-0 ಅಂತರದಲ್ಲಿ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾದಲ್ಲಿ ಗಂಭೀರ್ ಯುಗ ಆರಂಭವಾಗಿದೆ.
ಸರಣಿ ಕ್ಲೀನ್ಸ್ವೀಪ್ ಬೆನ್ನಲ್ಲೇ ಖಡಕ್ ವಾರ್ನಿಂಗ್
ಆಟಗಾರರಿಗೆ ಎಚ್ಚರಿಕೆ ಕೊಟ್ಟ ಗುರು ಗಂಭೀರ್
ಪೆಲ್ಲೆಕೆಲೆಯಲ್ಲಿ ಚುಟುಕು ಸರಣಿ ಗೆದ್ದ ಬಳಿಕ ಏಕದಿನ ಸರಣಿಯ ಭಾಗವಾಗಿರೋ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್ ಕೊಲಂಬೋಗೆ ಬಂದಿದ್ದಾರೆ. ಇನ್ನುಳಿದ ಆಟಗಾರರು ಸೀದಾ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ ಭಾರತಕ್ಕೆ ವಾಪಾಸ್ಸಾದ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪೆಲ್ಲೆಕೆಲೆಯಲ್ಲಿ ಪಂದ್ಯ ಮುಕ್ತಾಯದ ಬಳಿಕ ಗಂಭೀರ್ ಡ್ರೆಸ್ಸಿಂಗ್ರೂಮ್ನಲ್ಲಿ ಮಾತನಾಡಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ.
ಸ್ಕಿಲ್, ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ
ಸುದೀರ್ಘ ಬ್ರೇಕ್ಗೂ ಮುನ್ನ ‘ಗಂಭೀರ’ ಮಾತು
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಟೀಮ್ ಇಂಡಿಯಾ ಮತ್ತೆ ಪಂದ್ಯವನ್ನಾಡೋದು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ. ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲಿದ್ದು, 2 ಟೆಸ್ಟ್ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಅಲ್ಲಿಯವರೆಗೆ ಸುಮಾರು 1 ತಿಂಗಳಿಗೂ ಅಧಿಕ ಕಾಲದ ವಿಶ್ರಾಂತಿ ಆಟಗಾರರಿಗೆ ಸಿಗಲಿದೆ. ಈ ವಿಶ್ರಾಂತಿಯ ವೇಳೆ ಮೈ ಮರೆಯದೇ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ ಎಂದು ಗಂಭೀರ್ ಹೇಳಿದ್ದಾರೆ.
ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಇಲ್ಲ. ಅವರಿಗೆ ಸುದೀರ್ಘ ಬ್ರೇಕ್ ಸಿಗಲಿದೆ. ನೀವು ಕಮ್ಬ್ಯಾಕ್ ಮಾಡೋದು ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ. ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹರು. ಆದ್ರೆ, ನಿಮ್ಮ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ. ಆ ಸರಣಿಗೂ ಮುನ್ನ ಫಿಟ್ನೆಸ್ ಮೇಲೆ ಫೋಕಸ್ ಮಾಡ್ತೇವೆ ಅಂದ್ರೆ ಆಗಲ್ಲ. ಆ ಟೈಮ್ನಲ್ಲಿ ಸಂಪೂರ್ಣ ಫಿಟ್ನೆಸ್ ಇರಬೇಕು.
ಇದನ್ನೂ ಓದಿ: ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್!
2025ರಲ್ಲಿ ಚಾಂಪಿಯನ್ಸ್ ಟ್ರೋಫಿಯಂತಾ ಮಹತ್ವದ ಐಸಿಸಿ ಟೂರ್ನಿಗಳಿವೆ. ಹೀಗಾಗಿ ಆಟಗಾರರ ಇಂಜುರಿ ಮ್ಯಾನೇಜ್ ಮ್ಯಾನೇಜ್ಮೆಂಟ್ಗೆ ಬಿಗ್ ಟಾಸ್ಕ್ ಆಗಲಿದೆ. ಗೌತಮ್ ಗಂಭೀರ್ ಕೋಚ್ ಹುದ್ದೆ ಅಲಂಕರಿಸೋದಕ್ಕೆ ಮುನ್ನವೂ ಕೂಡ ಫಿಟ್ನೆಸ್ ವಿಚಾರದಲ್ಲಿ ಹಲವು ಕಡೆಗಳಲ್ಲಿ ಮಾತನಾಡಿದ್ದರು. ಮೂರೂ ಫಾರ್ಮೆಟ್ನ ಫ್ಲೇಯರ್ ಫಿಟ್ ಇರಬೇಕು. ಆತನಿಗೆ ಸರಣಿಯಿಂದ ಸರಣಿಗೆ ವಿಶ್ರಾಂತಿ ನೀಡಬಾರದು ಅಂತಾ ವಾದಿಸಿದ್ದರು. ಇದೀಗ ಕೋಚ್ ಆದ ಬಳಿಕ ಅದೇ ಮಾತನ್ನ ಪಾಲಿಸ್ತಿರೋ ಗೌತಿ, ಫಿಟ್ನೆಸ್ ಮೇಲೆ ಹೆಚ್ಚಿನ ಗಮನ ಹರಿಸಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ.
ಹಾರ್ದಿಕ್ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಗಂಭೀರ್.?
ಕೆಲ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಪದೇ ಪದೇ ಇಂಜುರಿ ಸಮಸ್ಯೆಯನ್ನ ಎದುರಿಸಿದ್ದಾರೆ. ಇಂಜುರಿ ಮ್ಯಾನೇಜ್ಮೆಂಟ್ ಕಾರಣಕ್ಕೆ ಹೆಚ್ಚು ವಿಶ್ರಾಂತಿಯನ್ನೂ ಪಡೆದಿದ್ದಾರೆ. ಇದೇ ಕಾರಣಕ್ಕೆ ಟಿ20 ಮಾದರಿಯ ನಾಯಕತ್ವ ಕೂಡ ಹಾರ್ದಿಕ್ ಕೈ ತಪ್ಪಿತು. ಸದ್ಯ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿ ತಂಡದ ಭಾಗವಾಗಿಲ್ಲ. ಟಿ20 ಪಂದ್ಯವನ್ನ ಮಾತ್ರ ಆಡಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಅದಕ್ಕೂ ಮುನ್ನ ಹಾರ್ದಿಕ್ ಸಮ್ಮುಖದಲ್ಲೇ ಗಂಭೀರ್ ಫಿಟ್ನೆಸ್ ಪಾಠ ಮಾಡಿದ್ದಾರೆ. ಗಂಭೀರ್ ಹೇಳಿದ ಗಂಭೀರ ಮಾತುಗಳು ಹಾರ್ದಿಕ್ಗೆ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗ್ತಿದೆ.
ಇದನ್ನೂ ಓದಿ: ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ನಿಧನ; ಪಾಕ್ ವಿರುದ್ಧ ದಾಖಲೆ ಬರೆದ ಸರದಾರ ಇನ್ನಿಲ್ಲ
ಲಂಕಾ ಟಿ20 ಸರಣಿ ಬಳಿಕ ವಿಶ್ರಾಂತಿಗೆ ಜಾರ್ತಿರೋ ಆಟಗಾರರು ಮಾತ್ರವಲ್ಲ. ತಂಡದ ಎಲ್ಲಾ ಆಟಗಾರರಿಗೂ ಇದು ಗಂಭೀರ್ ನೀಡಿದ ಸಂದೇಶವಾಗಿದೆ. ಹೆಡ್ಕೋಚ್ ಮಾತುಗಳು ಫಿಟ್ ಇದ್ದವರಿಗೆ ಮಾತ್ರವೇ ಟೀಮ್ ಇಂಡಿಯಾ ಸ್ಥಾನ ಅನ್ನೋ ಪರೋಕ್ಷ ಎಚ್ಚರಿಕೆಯನ್ನೂ ನೀಡ್ತಿದೆ. ಹೀಗಾಗಿ ಸುದೀರ್ಘ ವಿಶ್ರಾಂತಿಯ ಮೊರೆ ಹೋಗ್ತಿರೋ ಆಟಗಾರರು ಎಚ್ಚರಿಕೆಯಿಂದ ಇರಬೇಕಿದೆ. ಫಾರ್ಮ್, ಫಿಟ್ನೆಸ್ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ, ಟೀಮ್ ಇಂಡಿಯಾದಿಂದಲೇ ದೂರವಾಗಬೇಕಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಲಂಕಾ ಟಿ20 ಸರಣಿ ಕ್ಲೀನ್ಸ್ವೀಪ್ ಬೆನ್ನಲ್ಲೇ ಖಡಕ್ ವಾರ್ನಿಂಗ್
ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಗಂಭೀರ್?
ಮುಂದಿನ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮನ
ಶ್ರೀಲಂಕಾ ಎದುರಿನ ಚುಟುಕು ಸರಣಿ ಗೆಲುವಿನ ಬೆನ್ನಲ್ಲೇ ಹೆಡ್ ಕೋಚ್ ಗೌತಮ್ ಗಂಭೀರ್ ಗರಂ ಆಗಿದ್ದಾರೆ. ಖಡಕ್ ಮಾತುಗಳಲ್ಲಿ ಟೀಮ್ ಇಂಡಿಯಾ ಸ್ಟಾರ್ಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅದ್ಧೂರಿ ಆರಂಭ ಮಾಡಿದ್ದಾರೆ. ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಯಾಡಿದೆ. ಕ್ಲೀನ್ ಸ್ವೀಪ್ ದಿಗ್ವಿಜಯ ಸಾಧಿಸೋದ್ರೊಂದಿಗೆ ಗೌತಮ್ ಗಂಭೀರ್, ಕೋಚ್ ಆಗಿ ಮೊದಲ ಅಗ್ನಿ ಪರೀಕ್ಷೆ ಗೆದ್ದಿದ್ದಾರೆ. 3-0 ಅಂತರದಲ್ಲಿ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾದಲ್ಲಿ ಗಂಭೀರ್ ಯುಗ ಆರಂಭವಾಗಿದೆ.
ಸರಣಿ ಕ್ಲೀನ್ಸ್ವೀಪ್ ಬೆನ್ನಲ್ಲೇ ಖಡಕ್ ವಾರ್ನಿಂಗ್
ಆಟಗಾರರಿಗೆ ಎಚ್ಚರಿಕೆ ಕೊಟ್ಟ ಗುರು ಗಂಭೀರ್
ಪೆಲ್ಲೆಕೆಲೆಯಲ್ಲಿ ಚುಟುಕು ಸರಣಿ ಗೆದ್ದ ಬಳಿಕ ಏಕದಿನ ಸರಣಿಯ ಭಾಗವಾಗಿರೋ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್ ಕೊಲಂಬೋಗೆ ಬಂದಿದ್ದಾರೆ. ಇನ್ನುಳಿದ ಆಟಗಾರರು ಸೀದಾ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ ಭಾರತಕ್ಕೆ ವಾಪಾಸ್ಸಾದ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪೆಲ್ಲೆಕೆಲೆಯಲ್ಲಿ ಪಂದ್ಯ ಮುಕ್ತಾಯದ ಬಳಿಕ ಗಂಭೀರ್ ಡ್ರೆಸ್ಸಿಂಗ್ರೂಮ್ನಲ್ಲಿ ಮಾತನಾಡಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ.
ಸ್ಕಿಲ್, ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ
ಸುದೀರ್ಘ ಬ್ರೇಕ್ಗೂ ಮುನ್ನ ‘ಗಂಭೀರ’ ಮಾತು
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಟೀಮ್ ಇಂಡಿಯಾ ಮತ್ತೆ ಪಂದ್ಯವನ್ನಾಡೋದು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ. ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲಿದ್ದು, 2 ಟೆಸ್ಟ್ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಅಲ್ಲಿಯವರೆಗೆ ಸುಮಾರು 1 ತಿಂಗಳಿಗೂ ಅಧಿಕ ಕಾಲದ ವಿಶ್ರಾಂತಿ ಆಟಗಾರರಿಗೆ ಸಿಗಲಿದೆ. ಈ ವಿಶ್ರಾಂತಿಯ ವೇಳೆ ಮೈ ಮರೆಯದೇ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ ಎಂದು ಗಂಭೀರ್ ಹೇಳಿದ್ದಾರೆ.
ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಇಲ್ಲ. ಅವರಿಗೆ ಸುದೀರ್ಘ ಬ್ರೇಕ್ ಸಿಗಲಿದೆ. ನೀವು ಕಮ್ಬ್ಯಾಕ್ ಮಾಡೋದು ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ. ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹರು. ಆದ್ರೆ, ನಿಮ್ಮ ಸ್ಕಿಲ್ಸ್ ಹಾಗೂ ಫಿಟ್ನೆಸ್ ಮೇಲೆ ವರ್ಕೌಟ್ ಮಾಡಿ. ಆ ಸರಣಿಗೂ ಮುನ್ನ ಫಿಟ್ನೆಸ್ ಮೇಲೆ ಫೋಕಸ್ ಮಾಡ್ತೇವೆ ಅಂದ್ರೆ ಆಗಲ್ಲ. ಆ ಟೈಮ್ನಲ್ಲಿ ಸಂಪೂರ್ಣ ಫಿಟ್ನೆಸ್ ಇರಬೇಕು.
ಇದನ್ನೂ ಓದಿ: ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್!
2025ರಲ್ಲಿ ಚಾಂಪಿಯನ್ಸ್ ಟ್ರೋಫಿಯಂತಾ ಮಹತ್ವದ ಐಸಿಸಿ ಟೂರ್ನಿಗಳಿವೆ. ಹೀಗಾಗಿ ಆಟಗಾರರ ಇಂಜುರಿ ಮ್ಯಾನೇಜ್ ಮ್ಯಾನೇಜ್ಮೆಂಟ್ಗೆ ಬಿಗ್ ಟಾಸ್ಕ್ ಆಗಲಿದೆ. ಗೌತಮ್ ಗಂಭೀರ್ ಕೋಚ್ ಹುದ್ದೆ ಅಲಂಕರಿಸೋದಕ್ಕೆ ಮುನ್ನವೂ ಕೂಡ ಫಿಟ್ನೆಸ್ ವಿಚಾರದಲ್ಲಿ ಹಲವು ಕಡೆಗಳಲ್ಲಿ ಮಾತನಾಡಿದ್ದರು. ಮೂರೂ ಫಾರ್ಮೆಟ್ನ ಫ್ಲೇಯರ್ ಫಿಟ್ ಇರಬೇಕು. ಆತನಿಗೆ ಸರಣಿಯಿಂದ ಸರಣಿಗೆ ವಿಶ್ರಾಂತಿ ನೀಡಬಾರದು ಅಂತಾ ವಾದಿಸಿದ್ದರು. ಇದೀಗ ಕೋಚ್ ಆದ ಬಳಿಕ ಅದೇ ಮಾತನ್ನ ಪಾಲಿಸ್ತಿರೋ ಗೌತಿ, ಫಿಟ್ನೆಸ್ ಮೇಲೆ ಹೆಚ್ಚಿನ ಗಮನ ಹರಿಸಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ.
ಹಾರ್ದಿಕ್ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಗಂಭೀರ್.?
ಕೆಲ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಪದೇ ಪದೇ ಇಂಜುರಿ ಸಮಸ್ಯೆಯನ್ನ ಎದುರಿಸಿದ್ದಾರೆ. ಇಂಜುರಿ ಮ್ಯಾನೇಜ್ಮೆಂಟ್ ಕಾರಣಕ್ಕೆ ಹೆಚ್ಚು ವಿಶ್ರಾಂತಿಯನ್ನೂ ಪಡೆದಿದ್ದಾರೆ. ಇದೇ ಕಾರಣಕ್ಕೆ ಟಿ20 ಮಾದರಿಯ ನಾಯಕತ್ವ ಕೂಡ ಹಾರ್ದಿಕ್ ಕೈ ತಪ್ಪಿತು. ಸದ್ಯ ಹಾರ್ದಿಕ್ ಪಾಂಡ್ಯ, ಏಕದಿನ ಸರಣಿ ತಂಡದ ಭಾಗವಾಗಿಲ್ಲ. ಟಿ20 ಪಂದ್ಯವನ್ನ ಮಾತ್ರ ಆಡಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಅದಕ್ಕೂ ಮುನ್ನ ಹಾರ್ದಿಕ್ ಸಮ್ಮುಖದಲ್ಲೇ ಗಂಭೀರ್ ಫಿಟ್ನೆಸ್ ಪಾಠ ಮಾಡಿದ್ದಾರೆ. ಗಂಭೀರ್ ಹೇಳಿದ ಗಂಭೀರ ಮಾತುಗಳು ಹಾರ್ದಿಕ್ಗೆ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗ್ತಿದೆ.
ಇದನ್ನೂ ಓದಿ: ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ನಿಧನ; ಪಾಕ್ ವಿರುದ್ಧ ದಾಖಲೆ ಬರೆದ ಸರದಾರ ಇನ್ನಿಲ್ಲ
ಲಂಕಾ ಟಿ20 ಸರಣಿ ಬಳಿಕ ವಿಶ್ರಾಂತಿಗೆ ಜಾರ್ತಿರೋ ಆಟಗಾರರು ಮಾತ್ರವಲ್ಲ. ತಂಡದ ಎಲ್ಲಾ ಆಟಗಾರರಿಗೂ ಇದು ಗಂಭೀರ್ ನೀಡಿದ ಸಂದೇಶವಾಗಿದೆ. ಹೆಡ್ಕೋಚ್ ಮಾತುಗಳು ಫಿಟ್ ಇದ್ದವರಿಗೆ ಮಾತ್ರವೇ ಟೀಮ್ ಇಂಡಿಯಾ ಸ್ಥಾನ ಅನ್ನೋ ಪರೋಕ್ಷ ಎಚ್ಚರಿಕೆಯನ್ನೂ ನೀಡ್ತಿದೆ. ಹೀಗಾಗಿ ಸುದೀರ್ಘ ವಿಶ್ರಾಂತಿಯ ಮೊರೆ ಹೋಗ್ತಿರೋ ಆಟಗಾರರು ಎಚ್ಚರಿಕೆಯಿಂದ ಇರಬೇಕಿದೆ. ಫಾರ್ಮ್, ಫಿಟ್ನೆಸ್ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ, ಟೀಮ್ ಇಂಡಿಯಾದಿಂದಲೇ ದೂರವಾಗಬೇಕಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ