ಕಡೂರಿನಲ್ಲಿ ಜಲಯುದ್ಧ! 2 ಗ್ರಾಮಗಳ ಮಧ್ಯೆ ಭಯಾನಕ ಕೋಲ್ಡ್​ವಾರ್​.. ತಪ್ಪಿದ ಭಾರೀ ಅನಾಹುತ

author-image
Ganesh
Updated On
ಕಡೂರಿನಲ್ಲಿ ಜಲಯುದ್ಧ! 2 ಗ್ರಾಮಗಳ ಮಧ್ಯೆ ಭಯಾನಕ ಕೋಲ್ಡ್​ವಾರ್​.. ತಪ್ಪಿದ ಭಾರೀ ಅನಾಹುತ
Advertisment
  • ಹೆಣ್ಣು, ಹೊನ್ನು, ಮಣ್ಣಿಗಾಗಿ ಅಲ್ಲ, ನೀರಿಗಾಗಿ ಯುದ್ಧ
  • ವೇದ ನದಿ ನೀರು ಕೆರೆಗೆ ಹರಿಸಲು ಒಂದು ಗ್ರಾಮ ವಿರೋಧ
  • ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹೈಡ್ರಾಮಾ

ಚಿಕ್ಕಮಗಳೂರು: ಹೆಣ್ಣು, ಹೊನ್ನು, ಮಣ್ಣಿಗಾಗಿ ಭೂಮಿಯಲ್ಲಿ ದೊಡ್ಡ ದೊಡ್ಡ ಯುದ್ಧಗಳೇ ನಡೆದಿವೆ. ಅದರ ಸಾಲಲ್ಲೇ ಜಲ ವಿವಾದ ಕೂಡ ಸೇರುತ್ತೆ. ನೀರಿಗಾಗಿ ದೇಶ-ದೇಶ ನಡುವೆ, ರಾಜ್ಯ, ರಾಜ್ಯಗಳ ಮಧ್ಯೆ ಸಂಘರ್ಷ ಹೊಸದಲ್ಲ. ಅಂತೆಯೇ ಚಿಕ್ಕಮಗಳೂರಲ್ಲಿ ಎರಡು ಗ್ರಾಮಗಳ ಮಧ್ಯೆ ಜಲಕ್ಕಾಗಿ ಕೋಲ್ಡ್​ ವಾರ್​ ನಡೆದಿದೆ.

ಇದನ್ನೂ ಓದಿ: ಹರ್ಭಜನ್​ ಸಿಂಗ್ ಕರಿಯರ್ ಮುಗಿಸಿದ್ದು ಅಶ್ವಿನ್​​..? ಸತ್ಯ ರಿವೀಲ್ ಮಾಡಿದ ಭಜ್ಜಿ..!

publive-image

ವೇದಾ ನದಿ ನೀರಿಗಾಗಿ 2 ಊರಿನ ರೈತರ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ. ಕಡೂರು ತಾಲೂಕಿನ ವೇದಾ ನದಿ ನೀರಿಗಾಗಿ ಹುಲಿಕೆರೆ-ನಾಗೇನಹಳ್ಳಿ ಮತ್ತು ಕಡೂರು-ಸಖರಾಯಪಟ್ಟಣ ರೈತರ ಮಧ್ಯೆ ವಾರ್ ಶುರುವಾಗಿದೆ. ಹುಲಿಕೆರೆ-ನಾಗೇನಹಳ್ಳಿ ಕೆರೆಗೆ ನೀರು ಹರಿಸಲು ಕಡೂರು-ಸಖರಾಯಪಟ್ಟಣ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

publive-image

ನೀರು ವಿವಾದ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಮ್ಮುಖದಲ್ಲಿ ಸಭೆ ನಡೆದಿತ್ತು. ಈ ವೇಳೆ ಎರಡು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೂ ಜಗಳ ಹೋಗಿದೆ. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಇದನ್ನೂ ಓದಿ: ದರ್ಶನ್​​ಗೆ ಗುರುವಾರದ ತನಕ ರಿಲೀಫ್; ಸುಪ್ರೀಂ ಕೋರ್ಟ್​ನ ಇವತ್ತಿನ ವಿಚಾರಣೆಯಲ್ಲಿ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment