newsfirstkannada.com

ಬಿಗ್‌ಬಾಸ್‌ ಸೀಸನ್ 11 ಬಿಗ್ ಅಪ್ಡೇಟ್‌.. ಮುಕ್ತಾಯ ಹಂತದಲ್ಲಿವೆ ಈ 3 ಸೀರಿಯಲ್ಸ್; ಯಾವುದು?

Share :

Published August 14, 2024 at 7:38pm

    ಶುರುವಾಗುವ ಮುನ್ನವೇ ಹೊಸ ಚರ್ಚೆ ಶುರು ಮಾಡಿದೆ ಬಿಗ್​ಬಾಸ್​ 11

    ಬಿಗ್​ಬಾಸ್​ ಸೀಸನ್​ 11ಗಾಗಿ ತುತ್ತ ತುದಿಯಲ್ಲಿ ಕಾಯುತ್ತಿದ್ದಾರೆ ವೀಕ್ಷಕರು

    ಆದಷ್ಟು ಬೇಗನೇ ಮುಕ್ತಾಯಗೊಳ್ಳುತ್ತಾ 3 ಟಾಪ್​ ಸೀರಿಯಲ್​ಗಳು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಸೀಸನ್​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಗ್​​ಬಾಸ್​ ಬರ್ತಿದೆ ಅಂದ್ಮೇಲೆ ಒಂದೂವರೆ ಗಂಟೆಯ ಟೈಮ್​ ಸ್ಲಾಟ್​ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳನ್ನ ಮುಕ್ತಾಯ ಮಾಡ್ತಿದೆಯಂತೆ ವಾಹಿನಿ.

ಆಗಸ್ಟ್​ ಬರುತ್ತಿದ್ದಂತೆ ವೀಕ್ಷಕರು ಬಿಗ್​ಬಾಸ್​ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್​ ಶುರುವಾಗೋದು ಅಕ್ಟೋಬರ್​ ಕೊನೆ ವಾರ ಅಥವಾ ಸೆಪ್ಟಂಬರ್​ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇನೆ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ. ಹೌದು, ಈ ವರ್ಷ ಹೊಸ ಸಂಚಲನ ಮೂಡಿಸಿದ್ದು ಸೀಸನ್​ 10. ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತು.

ಇದನ್ನೂ ಓದಿ: ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

ಹಲವರಿಗೆ ಬದುಕು ಕಟ್ಟಿಕೊಟ್ಟಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಹಜವಾಗಿಯೇ ಬಿಗ್​ಬಾಸ್​ ಸೀಸನ್​ 11ರ ಬಗ್ಗೆ ಕುತೂಹಲ ಇದೆ. ಇದರ ಜೊತೆಗೆ ಯಾವ ಧಾರಾವಾಹಿಗಳು ಮುಕ್ತಾಯವಾಗ್ತಿವೆ ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳು ಓಡಾಡ್ತಿವೆ. ಮುಕ್ತಾಯ ಅಂತ ಬಂದಾಗ ಮೊದಲಿಗೆ ಕೌಂಟ್​ ಆಗೋದೆ ರೇಟಿಂಗ್​. ಧಾರಾವಾಹಿಯನ್ನ ಎಷ್ಟು ಜನ ವೀಕ್ಷಿಸಿತ್ತಿದ್ದಾರೆ.

ಟಿಆರ್​ಪಿ ರೇಟಿಂಗ್​ ಲಿಸ್ಟ್​ನಲ್ಲಿ ಯಾವ ಸ್ಥಾನದಲ್ಲಿ ಅನ್ನೋದರ ಆಧಾರದ ಮೇಲೆ ಧಾರಾವಾಹಿಯನ್ನ ವೈಂಡಪ್ ಮಾಡಲಾಗುತ್ತೆ. ಈ ಪ್ರಕಾರ ಕೆಂಡಸಂಪಿಗೆ, ಚುಕ್ಕಿತಾರೆ, ಅಂತರಪಟ ಧಾರಾವಾಹಿಗಳು ಮುಕ್ತಾಯದ ಸೂಚನೆಯಿದೆ. ಹೌದು, ಮೊದಲು ಒಳ್ಳೆಯ ರೇಟಿಂಗ್​ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್​ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್​ಗೆ ಹೊಡೆತ ಬಳಲು ಕಾರಣವಾಗಿದೆ.

ಇದನ್ನೂ ಓದಿ: ಮಿಲನಾ ನಾಗರಾಜ್​ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್​ ನಿರೂಪಕಿ

ಅದೇ ರೀತಿ ಇತ್ತಿಚೀಗಷ್ಟೇ ಲಾಂಚ್​ ಆದ ಧಾರಾವಾಹಿ ಚುಕ್ಕಿತಾರೆ. ನನ್ನಮ್ಮ ಸೂಪರ್​ ಸ್ಟಾರ್​, ಗಿಚ್ಚಿಗಿಲಿಗಿಲಿ ಖ್ಯಾತಿಯ ಬಾಲ ನಟಿ ಮಹಿತಾ ಸುತ್ತಸುತ್ತುವ ಕತೆ. ಗಾಯಕ ನವೀನ್​ ಸಜ್ಜು ಅಪ್ಪನ ಪಾತ್ರ ಮಾಡಿದ್ರು. ಅವರ ಪಾತ್ರ ಸತ್ತೋದ ನಂತರ ನೋಡುಗರ ಸಂಖ್ಯೆ ಕೂಡ ಕಡಿಮೆ ಆಗಿದೆ. ನಟಿ ನೇಹಾ ಗೌಡ ಪತಿ ಚಂದನ್​ ಅವರು ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಧಾರಾವಾಹಿ ಅಂತರಪಟ.

ಬ್ಯಾಗ್ರೌಂಡ್​ ಡ್ಯಾನ್ಸರ್​ ಆಗಿ ಕೆಲಸ ಮಾಡ್ತಿದ್ದ ತನ್ವಿಯಾ ಬಾಲರಾಜ್​​ ಉದಯೋನ್ಮಖ ನಟಿ ಆಗಿ ಹೊರಹೊಮ್ಮಿದ್ದರು. ಸ್ವಪ್ನಕೃಷ್ಣ ಅವರು ನಿರ್ಮಾಣ ಮಾಡಿದ ಕತೆ. ಸದ್ಯ ಟಿಆರ್​ಪಿ ಕಡಿಮೆ ರೇಟಿಂಗ್​ ಹೊಂದಿದೆ. ವಿಶೇಷ ಅಂದ್ರೇ ಸ್ವಪ್ನಕೃಷ್ಣ ಅವರ ನಿರ್ಮಾಣದ ಸತ್ಯ ಕೂಡ ಮುಕ್ತಾಯವಾಗಿದೆ. ಈಗ ಅಂತರಪಟ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ ಎಂಬ ಮಾಹಿತಿಯಿದೆ. ಒಟ್ಟಿನಲ್ಲಿ ಬಿಗ್​ಬಾಸ್​ಗೆ ಈ ಮೂರು ಧಾರಾವಾಹಿಗಳು ಮುಗಿತಾ ಇವೆ ಎಂಬ ಸುದ್ದಿಯಂತೂ ಸದ್ದು ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್‌ ಸೀಸನ್ 11 ಬಿಗ್ ಅಪ್ಡೇಟ್‌.. ಮುಕ್ತಾಯ ಹಂತದಲ್ಲಿವೆ ಈ 3 ಸೀರಿಯಲ್ಸ್; ಯಾವುದು?

https://newsfirstlive.com/wp-content/uploads/2024/08/bigg-boss.jpg

    ಶುರುವಾಗುವ ಮುನ್ನವೇ ಹೊಸ ಚರ್ಚೆ ಶುರು ಮಾಡಿದೆ ಬಿಗ್​ಬಾಸ್​ 11

    ಬಿಗ್​ಬಾಸ್​ ಸೀಸನ್​ 11ಗಾಗಿ ತುತ್ತ ತುದಿಯಲ್ಲಿ ಕಾಯುತ್ತಿದ್ದಾರೆ ವೀಕ್ಷಕರು

    ಆದಷ್ಟು ಬೇಗನೇ ಮುಕ್ತಾಯಗೊಳ್ಳುತ್ತಾ 3 ಟಾಪ್​ ಸೀರಿಯಲ್​ಗಳು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಸೀಸನ್​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಗ್​​ಬಾಸ್​ ಬರ್ತಿದೆ ಅಂದ್ಮೇಲೆ ಒಂದೂವರೆ ಗಂಟೆಯ ಟೈಮ್​ ಸ್ಲಾಟ್​ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳನ್ನ ಮುಕ್ತಾಯ ಮಾಡ್ತಿದೆಯಂತೆ ವಾಹಿನಿ.

ಆಗಸ್ಟ್​ ಬರುತ್ತಿದ್ದಂತೆ ವೀಕ್ಷಕರು ಬಿಗ್​ಬಾಸ್​ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್​ ಶುರುವಾಗೋದು ಅಕ್ಟೋಬರ್​ ಕೊನೆ ವಾರ ಅಥವಾ ಸೆಪ್ಟಂಬರ್​ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇನೆ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ. ಹೌದು, ಈ ವರ್ಷ ಹೊಸ ಸಂಚಲನ ಮೂಡಿಸಿದ್ದು ಸೀಸನ್​ 10. ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತು.

ಇದನ್ನೂ ಓದಿ: ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

ಹಲವರಿಗೆ ಬದುಕು ಕಟ್ಟಿಕೊಟ್ಟಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಹಜವಾಗಿಯೇ ಬಿಗ್​ಬಾಸ್​ ಸೀಸನ್​ 11ರ ಬಗ್ಗೆ ಕುತೂಹಲ ಇದೆ. ಇದರ ಜೊತೆಗೆ ಯಾವ ಧಾರಾವಾಹಿಗಳು ಮುಕ್ತಾಯವಾಗ್ತಿವೆ ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳು ಓಡಾಡ್ತಿವೆ. ಮುಕ್ತಾಯ ಅಂತ ಬಂದಾಗ ಮೊದಲಿಗೆ ಕೌಂಟ್​ ಆಗೋದೆ ರೇಟಿಂಗ್​. ಧಾರಾವಾಹಿಯನ್ನ ಎಷ್ಟು ಜನ ವೀಕ್ಷಿಸಿತ್ತಿದ್ದಾರೆ.

ಟಿಆರ್​ಪಿ ರೇಟಿಂಗ್​ ಲಿಸ್ಟ್​ನಲ್ಲಿ ಯಾವ ಸ್ಥಾನದಲ್ಲಿ ಅನ್ನೋದರ ಆಧಾರದ ಮೇಲೆ ಧಾರಾವಾಹಿಯನ್ನ ವೈಂಡಪ್ ಮಾಡಲಾಗುತ್ತೆ. ಈ ಪ್ರಕಾರ ಕೆಂಡಸಂಪಿಗೆ, ಚುಕ್ಕಿತಾರೆ, ಅಂತರಪಟ ಧಾರಾವಾಹಿಗಳು ಮುಕ್ತಾಯದ ಸೂಚನೆಯಿದೆ. ಹೌದು, ಮೊದಲು ಒಳ್ಳೆಯ ರೇಟಿಂಗ್​ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್​ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್​ಗೆ ಹೊಡೆತ ಬಳಲು ಕಾರಣವಾಗಿದೆ.

ಇದನ್ನೂ ಓದಿ: ಮಿಲನಾ ನಾಗರಾಜ್​ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್​ ನಿರೂಪಕಿ

ಅದೇ ರೀತಿ ಇತ್ತಿಚೀಗಷ್ಟೇ ಲಾಂಚ್​ ಆದ ಧಾರಾವಾಹಿ ಚುಕ್ಕಿತಾರೆ. ನನ್ನಮ್ಮ ಸೂಪರ್​ ಸ್ಟಾರ್​, ಗಿಚ್ಚಿಗಿಲಿಗಿಲಿ ಖ್ಯಾತಿಯ ಬಾಲ ನಟಿ ಮಹಿತಾ ಸುತ್ತಸುತ್ತುವ ಕತೆ. ಗಾಯಕ ನವೀನ್​ ಸಜ್ಜು ಅಪ್ಪನ ಪಾತ್ರ ಮಾಡಿದ್ರು. ಅವರ ಪಾತ್ರ ಸತ್ತೋದ ನಂತರ ನೋಡುಗರ ಸಂಖ್ಯೆ ಕೂಡ ಕಡಿಮೆ ಆಗಿದೆ. ನಟಿ ನೇಹಾ ಗೌಡ ಪತಿ ಚಂದನ್​ ಅವರು ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಧಾರಾವಾಹಿ ಅಂತರಪಟ.

ಬ್ಯಾಗ್ರೌಂಡ್​ ಡ್ಯಾನ್ಸರ್​ ಆಗಿ ಕೆಲಸ ಮಾಡ್ತಿದ್ದ ತನ್ವಿಯಾ ಬಾಲರಾಜ್​​ ಉದಯೋನ್ಮಖ ನಟಿ ಆಗಿ ಹೊರಹೊಮ್ಮಿದ್ದರು. ಸ್ವಪ್ನಕೃಷ್ಣ ಅವರು ನಿರ್ಮಾಣ ಮಾಡಿದ ಕತೆ. ಸದ್ಯ ಟಿಆರ್​ಪಿ ಕಡಿಮೆ ರೇಟಿಂಗ್​ ಹೊಂದಿದೆ. ವಿಶೇಷ ಅಂದ್ರೇ ಸ್ವಪ್ನಕೃಷ್ಣ ಅವರ ನಿರ್ಮಾಣದ ಸತ್ಯ ಕೂಡ ಮುಕ್ತಾಯವಾಗಿದೆ. ಈಗ ಅಂತರಪಟ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ ಎಂಬ ಮಾಹಿತಿಯಿದೆ. ಒಟ್ಟಿನಲ್ಲಿ ಬಿಗ್​ಬಾಸ್​ಗೆ ಈ ಮೂರು ಧಾರಾವಾಹಿಗಳು ಮುಗಿತಾ ಇವೆ ಎಂಬ ಸುದ್ದಿಯಂತೂ ಸದ್ದು ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More