ಶುರುವಾಗುವ ಮುನ್ನವೇ ಹೊಸ ಚರ್ಚೆ ಶುರು ಮಾಡಿದೆ ಬಿಗ್ಬಾಸ್ 11
ಬಿಗ್ಬಾಸ್ ಸೀಸನ್ 11ಗಾಗಿ ತುತ್ತ ತುದಿಯಲ್ಲಿ ಕಾಯುತ್ತಿದ್ದಾರೆ ವೀಕ್ಷಕರು
ಆದಷ್ಟು ಬೇಗನೇ ಮುಕ್ತಾಯಗೊಳ್ಳುತ್ತಾ 3 ಟಾಪ್ ಸೀರಿಯಲ್ಗಳು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ ಸೀಸನ್ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಗ್ಬಾಸ್ ಬರ್ತಿದೆ ಅಂದ್ಮೇಲೆ ಒಂದೂವರೆ ಗಂಟೆಯ ಟೈಮ್ ಸ್ಲಾಟ್ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳನ್ನ ಮುಕ್ತಾಯ ಮಾಡ್ತಿದೆಯಂತೆ ವಾಹಿನಿ.
ಆಗಸ್ಟ್ ಬರುತ್ತಿದ್ದಂತೆ ವೀಕ್ಷಕರು ಬಿಗ್ಬಾಸ್ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್ ಶುರುವಾಗೋದು ಅಕ್ಟೋಬರ್ ಕೊನೆ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇನೆ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ. ಹೌದು, ಈ ವರ್ಷ ಹೊಸ ಸಂಚಲನ ಮೂಡಿಸಿದ್ದು ಸೀಸನ್ 10. ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತು.
ಇದನ್ನೂ ಓದಿ: ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ
ಹಲವರಿಗೆ ಬದುಕು ಕಟ್ಟಿಕೊಟ್ಟಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಹಜವಾಗಿಯೇ ಬಿಗ್ಬಾಸ್ ಸೀಸನ್ 11ರ ಬಗ್ಗೆ ಕುತೂಹಲ ಇದೆ. ಇದರ ಜೊತೆಗೆ ಯಾವ ಧಾರಾವಾಹಿಗಳು ಮುಕ್ತಾಯವಾಗ್ತಿವೆ ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳು ಓಡಾಡ್ತಿವೆ. ಮುಕ್ತಾಯ ಅಂತ ಬಂದಾಗ ಮೊದಲಿಗೆ ಕೌಂಟ್ ಆಗೋದೆ ರೇಟಿಂಗ್. ಧಾರಾವಾಹಿಯನ್ನ ಎಷ್ಟು ಜನ ವೀಕ್ಷಿಸಿತ್ತಿದ್ದಾರೆ.
ಟಿಆರ್ಪಿ ರೇಟಿಂಗ್ ಲಿಸ್ಟ್ನಲ್ಲಿ ಯಾವ ಸ್ಥಾನದಲ್ಲಿ ಅನ್ನೋದರ ಆಧಾರದ ಮೇಲೆ ಧಾರಾವಾಹಿಯನ್ನ ವೈಂಡಪ್ ಮಾಡಲಾಗುತ್ತೆ. ಈ ಪ್ರಕಾರ ಕೆಂಡಸಂಪಿಗೆ, ಚುಕ್ಕಿತಾರೆ, ಅಂತರಪಟ ಧಾರಾವಾಹಿಗಳು ಮುಕ್ತಾಯದ ಸೂಚನೆಯಿದೆ. ಹೌದು, ಮೊದಲು ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್ಗೆ ಹೊಡೆತ ಬಳಲು ಕಾರಣವಾಗಿದೆ.
ಇದನ್ನೂ ಓದಿ: ಮಿಲನಾ ನಾಗರಾಜ್ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್ ನಿರೂಪಕಿ
ಅದೇ ರೀತಿ ಇತ್ತಿಚೀಗಷ್ಟೇ ಲಾಂಚ್ ಆದ ಧಾರಾವಾಹಿ ಚುಕ್ಕಿತಾರೆ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿಗಿಲಿಗಿಲಿ ಖ್ಯಾತಿಯ ಬಾಲ ನಟಿ ಮಹಿತಾ ಸುತ್ತಸುತ್ತುವ ಕತೆ. ಗಾಯಕ ನವೀನ್ ಸಜ್ಜು ಅಪ್ಪನ ಪಾತ್ರ ಮಾಡಿದ್ರು. ಅವರ ಪಾತ್ರ ಸತ್ತೋದ ನಂತರ ನೋಡುಗರ ಸಂಖ್ಯೆ ಕೂಡ ಕಡಿಮೆ ಆಗಿದೆ. ನಟಿ ನೇಹಾ ಗೌಡ ಪತಿ ಚಂದನ್ ಅವರು ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಧಾರಾವಾಹಿ ಅಂತರಪಟ.
ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡ್ತಿದ್ದ ತನ್ವಿಯಾ ಬಾಲರಾಜ್ ಉದಯೋನ್ಮಖ ನಟಿ ಆಗಿ ಹೊರಹೊಮ್ಮಿದ್ದರು. ಸ್ವಪ್ನಕೃಷ್ಣ ಅವರು ನಿರ್ಮಾಣ ಮಾಡಿದ ಕತೆ. ಸದ್ಯ ಟಿಆರ್ಪಿ ಕಡಿಮೆ ರೇಟಿಂಗ್ ಹೊಂದಿದೆ. ವಿಶೇಷ ಅಂದ್ರೇ ಸ್ವಪ್ನಕೃಷ್ಣ ಅವರ ನಿರ್ಮಾಣದ ಸತ್ಯ ಕೂಡ ಮುಕ್ತಾಯವಾಗಿದೆ. ಈಗ ಅಂತರಪಟ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ ಎಂಬ ಮಾಹಿತಿಯಿದೆ. ಒಟ್ಟಿನಲ್ಲಿ ಬಿಗ್ಬಾಸ್ಗೆ ಈ ಮೂರು ಧಾರಾವಾಹಿಗಳು ಮುಗಿತಾ ಇವೆ ಎಂಬ ಸುದ್ದಿಯಂತೂ ಸದ್ದು ಮಾಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶುರುವಾಗುವ ಮುನ್ನವೇ ಹೊಸ ಚರ್ಚೆ ಶುರು ಮಾಡಿದೆ ಬಿಗ್ಬಾಸ್ 11
ಬಿಗ್ಬಾಸ್ ಸೀಸನ್ 11ಗಾಗಿ ತುತ್ತ ತುದಿಯಲ್ಲಿ ಕಾಯುತ್ತಿದ್ದಾರೆ ವೀಕ್ಷಕರು
ಆದಷ್ಟು ಬೇಗನೇ ಮುಕ್ತಾಯಗೊಳ್ಳುತ್ತಾ 3 ಟಾಪ್ ಸೀರಿಯಲ್ಗಳು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ ಸೀಸನ್ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಗ್ಬಾಸ್ ಬರ್ತಿದೆ ಅಂದ್ಮೇಲೆ ಒಂದೂವರೆ ಗಂಟೆಯ ಟೈಮ್ ಸ್ಲಾಟ್ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳನ್ನ ಮುಕ್ತಾಯ ಮಾಡ್ತಿದೆಯಂತೆ ವಾಹಿನಿ.
ಆಗಸ್ಟ್ ಬರುತ್ತಿದ್ದಂತೆ ವೀಕ್ಷಕರು ಬಿಗ್ಬಾಸ್ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್ ಶುರುವಾಗೋದು ಅಕ್ಟೋಬರ್ ಕೊನೆ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇನೆ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ. ಹೌದು, ಈ ವರ್ಷ ಹೊಸ ಸಂಚಲನ ಮೂಡಿಸಿದ್ದು ಸೀಸನ್ 10. ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತು.
ಇದನ್ನೂ ಓದಿ: ಪೂಜೆ, ಹೋಮ, ಹವನ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ನಟ ದೊಡ್ಡಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ
ಹಲವರಿಗೆ ಬದುಕು ಕಟ್ಟಿಕೊಟ್ಟಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಹಜವಾಗಿಯೇ ಬಿಗ್ಬಾಸ್ ಸೀಸನ್ 11ರ ಬಗ್ಗೆ ಕುತೂಹಲ ಇದೆ. ಇದರ ಜೊತೆಗೆ ಯಾವ ಧಾರಾವಾಹಿಗಳು ಮುಕ್ತಾಯವಾಗ್ತಿವೆ ಎಂಬುದರ ಬಗ್ಗೆ ಸಾಕಷ್ಟು ವಿಚಾರಗಳು ಓಡಾಡ್ತಿವೆ. ಮುಕ್ತಾಯ ಅಂತ ಬಂದಾಗ ಮೊದಲಿಗೆ ಕೌಂಟ್ ಆಗೋದೆ ರೇಟಿಂಗ್. ಧಾರಾವಾಹಿಯನ್ನ ಎಷ್ಟು ಜನ ವೀಕ್ಷಿಸಿತ್ತಿದ್ದಾರೆ.
ಟಿಆರ್ಪಿ ರೇಟಿಂಗ್ ಲಿಸ್ಟ್ನಲ್ಲಿ ಯಾವ ಸ್ಥಾನದಲ್ಲಿ ಅನ್ನೋದರ ಆಧಾರದ ಮೇಲೆ ಧಾರಾವಾಹಿಯನ್ನ ವೈಂಡಪ್ ಮಾಡಲಾಗುತ್ತೆ. ಈ ಪ್ರಕಾರ ಕೆಂಡಸಂಪಿಗೆ, ಚುಕ್ಕಿತಾರೆ, ಅಂತರಪಟ ಧಾರಾವಾಹಿಗಳು ಮುಕ್ತಾಯದ ಸೂಚನೆಯಿದೆ. ಹೌದು, ಮೊದಲು ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್ಗೆ ಹೊಡೆತ ಬಳಲು ಕಾರಣವಾಗಿದೆ.
ಇದನ್ನೂ ಓದಿ: ಮಿಲನಾ ನಾಗರಾಜ್ ಸೀಮಂತ ಶಾಸ್ತ್ರದ ಡೆಕೋರೇಷನ್ ಮಾಡಿದ್ಯಾರು? ಸಂಭ್ರಮಕ್ಕೆ ಮೆರಗು ತಂದ ಸ್ಟಾರ್ ನಿರೂಪಕಿ
ಅದೇ ರೀತಿ ಇತ್ತಿಚೀಗಷ್ಟೇ ಲಾಂಚ್ ಆದ ಧಾರಾವಾಹಿ ಚುಕ್ಕಿತಾರೆ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿಗಿಲಿಗಿಲಿ ಖ್ಯಾತಿಯ ಬಾಲ ನಟಿ ಮಹಿತಾ ಸುತ್ತಸುತ್ತುವ ಕತೆ. ಗಾಯಕ ನವೀನ್ ಸಜ್ಜು ಅಪ್ಪನ ಪಾತ್ರ ಮಾಡಿದ್ರು. ಅವರ ಪಾತ್ರ ಸತ್ತೋದ ನಂತರ ನೋಡುಗರ ಸಂಖ್ಯೆ ಕೂಡ ಕಡಿಮೆ ಆಗಿದೆ. ನಟಿ ನೇಹಾ ಗೌಡ ಪತಿ ಚಂದನ್ ಅವರು ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ ಧಾರಾವಾಹಿ ಅಂತರಪಟ.
ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡ್ತಿದ್ದ ತನ್ವಿಯಾ ಬಾಲರಾಜ್ ಉದಯೋನ್ಮಖ ನಟಿ ಆಗಿ ಹೊರಹೊಮ್ಮಿದ್ದರು. ಸ್ವಪ್ನಕೃಷ್ಣ ಅವರು ನಿರ್ಮಾಣ ಮಾಡಿದ ಕತೆ. ಸದ್ಯ ಟಿಆರ್ಪಿ ಕಡಿಮೆ ರೇಟಿಂಗ್ ಹೊಂದಿದೆ. ವಿಶೇಷ ಅಂದ್ರೇ ಸ್ವಪ್ನಕೃಷ್ಣ ಅವರ ನಿರ್ಮಾಣದ ಸತ್ಯ ಕೂಡ ಮುಕ್ತಾಯವಾಗಿದೆ. ಈಗ ಅಂತರಪಟ ಕೂಡ ಮುಕ್ತಾಯದ ಹಂತಕ್ಕೆ ಬಂದಿದೆ ಎಂಬ ಮಾಹಿತಿಯಿದೆ. ಒಟ್ಟಿನಲ್ಲಿ ಬಿಗ್ಬಾಸ್ಗೆ ಈ ಮೂರು ಧಾರಾವಾಹಿಗಳು ಮುಗಿತಾ ಇವೆ ಎಂಬ ಸುದ್ದಿಯಂತೂ ಸದ್ದು ಮಾಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ