/newsfirstlive-kannada/media/post_attachments/wp-content/uploads/2024/06/CHIKKANNA-2.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅತ್ತ​ ಬಳ್ಳಾರಿ ಜೈಲಿಗೆ ಶಿಫ್ಟ್ ಆದರೆ ಇತ್ತ ನಟ ಚಿಕ್ಕಣ್ಣ ವಿಚಾರಣೆ ಹಾಜರಾಗಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ನಟ ಚಿಕ್ಕಣ್ಣ ವಿಚಾರಣೆ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಚಿಕ್ಕಣ್ಣನ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಸೆಕ್ಷನ್​ 164ರ ಅಡಿ ಚಿಕ್ಕಣ್ಣನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಅದಾದ ಬಳಿಕ ಜೈಲಿನಲ್ಲಿದ್ದ ದರ್ಶನ್​ರನ್ನು ಚಿಕ್ಕಣ್ಣ ​ ಭೇಟಿ ಮಾಡಿದ್ದರು.
ಇದನ್ನೂ ಓದಿ: ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!
ಚಿಕ್ಕಣ್ಣ ದರ್ಶನ್​ ​ ಭೇಟಿ ಮಾಡಿದ ಹಿನ್ನೆಲೆ ತನಿಖಾಧಿಕಾರಿ ಎಸಿಪಿ ಚಂದನ್ ನೋಟಿಸ್ ನೀಡಿದ್ದಾರೆ. ನೋಟಿಸ್ ಹಿನ್ನೆಲೆ ನಟ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/06/chikkanna-3.jpg)
ಇದನ್ನೂ ಓದಿ: ದರ್ಶನ್​ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಏನು ನಷ್ಟ.. ಜೈಲು ಅಧಿಕಾರಿಗಳಿಗೆ ಏನು ಲಾಭ..?
ನಿನ್ನೆ ತಡರಾತ್ರಿ ಚಿಕ್ಕಣನಿಗೆ ಎಸಿಪಿ ಚಂದನ್ ನೋಟಿಸ್ ನೋಟೀಸ್ ಜಾರಿ ಮಾಡಿದ್ರು. ನೋಟೀಸ್ ಹಿನ್ನೆಲೆ ನಟ ಚಿಕ್ಕಣ್ಣ ಇಂದು ಮತ್ತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಎಸಿಪಿ ಮುಂದೆ ಹಾಜರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us