ಕನ್ನಡಿಗರ ಕೆಣಕಿದ ಕೋರಮಂಗಲ ಜಿ.ಎಸ್ ಸೂಟ್ ಹೊಟೇಲ್​ಗೆ ತಕ್ಕ ಶಾಸ್ತಿ; ಏನಾಯ್ತು ಗೊತ್ತಾ?

author-image
Veena Gangani
Updated On
ಕನ್ನಡಿಗರ ಕೆಣಕಿದ ಕೋರಮಂಗಲ ಜಿ.ಎಸ್ ಸೂಟ್ ಹೊಟೇಲ್​ಗೆ ತಕ್ಕ ಶಾಸ್ತಿ; ಏನಾಯ್ತು ಗೊತ್ತಾ?
Advertisment
  • ಕನ್ನಡಿಗರನ್ನು ಕೆಣಕೋ ಮುನ್ನ ಎಚ್ಚರವಾಗಿದ್ದರೇ ಒಳ್ಳೆಯದು
  • ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್ ಸೂಟ್ ಹೋಟೆಲ್​
  • ಹೊಟೇಲ್ ಮಾಲೀಕ ಜಮ್ಸದ್ ಮೇಲು ದಾಖಲಾಯ್ತು FIR

ಬೆಂಗಳೂರು: ಕನ್ನಡಿಗರನ್ನು ಅವಮಾನಿಸಿದ ಕೋರಮಂಗಲದ ಹೊಟೇಲ್​ಗೆ ತಕ್ಕ ಶಾಸ್ತಿ ಕಲಿಸೋಕೆ ಮುಂದಾಗಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನ ಡಿಸ್ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿತ್ತು.

ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೋಟೆಲ್​ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದರು. ಈ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾಫಾತೀಮಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದರು.

ಇದೀಗ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದಗಳನ್ನ ಪ್ರದರ್ಶಿಸಿದ ಹೋಟೆಲ್ ವಿರುದ್ದ ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್​ ಅವರು ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಹೋಟೆಲ್ ಲೈಸೆನ್ಸ್ ಶಾಶ್ವತವಾಗಿ ರದ್ದುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ. ಕನ್ನಡಿಗರ ಕೆಣಕಿದ ಕೋರಮಂಗಲದ ಹೊಟೇಲ್​ಗೆ ತಕ್ಕ ಶಾಸ್ತಿ ಕಲಿಸೋಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ಕನ್ನಡಿಗರ ಬಗ್ಗೆ ಹೋಟೆಲ್​ ಡಿಸ್​ಪ್ಲೇನಲ್ಲಿ ಅವಾಚ್ಯ ಪದ ಬಳಕೆ.. ಮ್ಯಾನೇಜರ್ ವಶಕ್ಕೆ

ಇನ್ನೂ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ‌ ಮ್ಯಾನೇಜರ್ ಸರ್ಫರಾಜ್ ಎಂಬಾತನನ್ನು ಬಂಧನ ಮಾಡಲಾಗಿದೆ. ಹೋಟೆಲ್​ ಮಾಲೀಕ ಜಮ್ಸದ್ ಮೇಲು ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಜಿ.ಎಸ್ ಸೂಟ್ ಮಾಲೀಕ ಜಮ್ಸದ್ ಕೇರಳದಲ್ಲಿದ್ದಾರೆ.

publive-image

ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್​ಗೆ ನೀಡಿದ ಲಿಖಿತ ದೂರಿನಲ್ಲಿ ಏನಿದೆ?

ಬೆಂಗಳೂರಿನ ಕೋರಮಂಗಲದಲ್ಲಿರುವ ಜಿ.ಎಸ್.ಸೂಟ್ಸ್ ಹೋಟೆಲ್ಲಿನವರು ಕನ್ನಡಿಗರ ಬಗ್ಗೆ ಅತಿ ತುಚ್ಚವಾದ ಪದಗಳನ್ನು ಬಳಸಿರುವ ತೋರುಫಲಕ ಪ್ರದರ್ಶಿಸಿ ಕನ್ನಡಿಗರ ಮಾನ ಹರಾಜು ಹಾಕಿರುವಂತಹ ನಾಡದ್ರೋಹದ ಕೆಲಸ ಮಾಡಿದ್ದಾನೆ. ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ಈ ವಲಸೆ ಉದ್ದಿಮೆದಾರರು ಕನ್ನಡಿಗರನ್ನು ಅವಹೇಳನ ಮಾಡಿರುವುದು ಸಹಿಸಲಸಾಧ್ಯ ಈಗಾಗಲೇ ಹೋಟೆಲ್ ಮಾಲೀಕನ ಮೇಲೆ ಸಿಬ್ಬಂದಿಯ ಮೇಲೆ ಮಡಿವಾಳ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸದೆ. ಈ ಕೂಡಲೇ ಜಿ.ಎಸ್.ಟ್ಸ್ ಹೋಟೆಲ್​ನಲ್ಲಿ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಲು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ್ ಕುಮಾರ ಆಗ್ರಹ ಪಡಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

Advertisment