/newsfirstlive-kannada/media/post_attachments/wp-content/uploads/2024/04/Samosa.jpg)
ಪುಣೆಯ ಪಿಂಪ್ರಿ ಆಟೋಮೊಬೈಲ್​ ಕಂಪನಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಂಪನಿ ನೌಕರರಿಗೆ ನೀಡಲಾದ ಸಮೋಸಾದಲ್ಲಿ ಕಾಂಡೋಮ್​, ಕಲ್ಲುಗಳು, ತಂಬಾಕು ಪತ್ತೆಯಾಗಿವೆ ಎಂದು ಆರೋಪ ಕೇಳಿಬಂದಿದೆ. ಈ ಕುರಿತಾಗಿ ಪ್ರಕರಣ ಕೂಡ ದಾಖಲಾಗಿದೆ.
ಕಲ್ಲು, ಗುಟ್ಕಾ, ಕಾಂಡೋಮ್
ಮಾರ್ಚ್​ 27ರಂದು ಈ ಘಟನೆ ಬೆಳಕಿಗೆ ಬಂದಿದೆ. ನೌಕರರು ಸೇವಿಸಲು ನೀಡಿದ ಸಮೋಸಾದಲ್ಲಿ ಕಲ್ಲುಗಳು, ಗುಟ್ಕಾ, ಕಾಂಡೋಮ್​ಗಳು ಮತ್ತೆಯಾದಂತೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಐವರ ಮೇಲೆ ಪ್ರಕರಣ ದಾಖಲು
ಕಂಪನಿಯಲ್ಲಿ ಕೆಲಸ ಮಾಡುವ ನೌಕಕರಿಗೆ ಸಮೋಸ ಒದಗಿಸಲು ಬೇರೊಂದು ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಉಪಗುತ್ತಿಗೆ ನೀಡಲಾದ ಇಬ್ಬರು ಕಾರ್ಮಿಕರು ಮತ್ತು ಈ ಹಿಂದೆ ಕಲಬೆರಕೆ ವಿಚಾರದಿಂದ ಹೊರಹಾಕಲಾದ ಸಂಸ್ಥೆಯ ಮೂವರು ಸೇರಿ ಒಟ್ಟು ಐವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇಡು ತೀರಿಸಲು ಈ ಪ್ಲಾನ್​
ಮಾಹಿತಿ ಪ್ರಕಾರ, ಆಟೋಮೊಬೈಲ್​ ಕಂಪನಿ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಸೇಡು ತೀರಿಸಿಕೊಳ್ಳಲು ಉದ್ಯಮಿಯೊಬ್ಬರು ಈ ಕೃತ್ಯವನ್ನೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಏನಂದ್ರು?
ಪೊಲೀಸರ ಪ್ರಕಾರ, ಮೂವರು ಪಾಲುದಾರರು ಈ ಕೃತ್ಯವನ್ನು ಯೋಚಿಸಿ ಮಾಡಿದ್ದಾರೆ. ಸಮೋಸಾ ಒದಗಿಸುವ ಒಪ್ಪಂದ ಮಾಡಿಕೊಂಡ ಸಂಸ್ಥೆಗೆ ಮಾನಹಾನಿಯನ್ನು ಮಾಡಲು ಬೇರಿಬ್ಬರು ಕಾರ್ಮಿಕರನ್ನು ಪ್ಲಾನ್​ನಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಲಿಮಿಟೆಡ್​ ಎಂಬ ಕಂಪನಿಯ ಕ್ಯಾಂಟೀನ್​ಗೆ ಕ್ಯಾಟಲಿಸ್ಟ್​ ಸರ್ವೀರ್ಸ್​ ಸೊಲ್ಯೂಷನ್ಸ್​ ಪ್ರೈ.ಲಿ ತಿಂಡಿ ಒದಗಿಸುವ ಕೆಲಸ ಮಾಡುತ್ತಿತ್ತು. ಆದರೆ ಅವರನ್ನು ಬದಲಾಯಿಸಿ ಮನೋಹರ್​ ಎಂಟರ್​​ಪ್ರೈಸ್​ ಎಂಬ ಕಂಪನಿಗೆ ಉಪಗುತ್ತಿಗೆ ನೀಡಲಾಯಿತು.
ಸಮೋಸಾ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದ್ದು, ಫಿರೋಜ್​ ಶೇಖ್​ ಮತ್ತು ವಿಕ್ಕಿ ಶೇಕ್​ ಎಂಬ ಕೆಲಸಗಾರರು ಕಾಂಡೋಮ್​, ಗುಟ್ಕಾ, ಕಲ್ಲುಗಳನ್ನು ತುಂಬಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅರೆಸ್ಟ್​ ಆದ ಐವರ ವಿರುದ್ಧ ಐಪಿಸಿ ಸೆಕ್ಷನ್​ 328 ಮತ್ತು 120ಬಿ ಅಡಿಯಲ್ಲಿ ಕೆಸ್​ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ