/newsfirstlive-kannada/media/post_attachments/wp-content/uploads/2024/04/Samosa.jpg)
ಪುಣೆಯ ಪಿಂಪ್ರಿ ಆಟೋಮೊಬೈಲ್ ಕಂಪನಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಂಪನಿ ನೌಕರರಿಗೆ ನೀಡಲಾದ ಸಮೋಸಾದಲ್ಲಿ ಕಾಂಡೋಮ್, ಕಲ್ಲುಗಳು, ತಂಬಾಕು ಪತ್ತೆಯಾಗಿವೆ ಎಂದು ಆರೋಪ ಕೇಳಿಬಂದಿದೆ. ಈ ಕುರಿತಾಗಿ ಪ್ರಕರಣ ಕೂಡ ದಾಖಲಾಗಿದೆ.
ಕಲ್ಲು, ಗುಟ್ಕಾ, ಕಾಂಡೋಮ್
ಮಾರ್ಚ್ 27ರಂದು ಈ ಘಟನೆ ಬೆಳಕಿಗೆ ಬಂದಿದೆ. ನೌಕರರು ಸೇವಿಸಲು ನೀಡಿದ ಸಮೋಸಾದಲ್ಲಿ ಕಲ್ಲುಗಳು, ಗುಟ್ಕಾ, ಕಾಂಡೋಮ್ಗಳು ಮತ್ತೆಯಾದಂತೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಐವರ ಮೇಲೆ ಪ್ರಕರಣ ದಾಖಲು
ಕಂಪನಿಯಲ್ಲಿ ಕೆಲಸ ಮಾಡುವ ನೌಕಕರಿಗೆ ಸಮೋಸ ಒದಗಿಸಲು ಬೇರೊಂದು ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಉಪಗುತ್ತಿಗೆ ನೀಡಲಾದ ಇಬ್ಬರು ಕಾರ್ಮಿಕರು ಮತ್ತು ಈ ಹಿಂದೆ ಕಲಬೆರಕೆ ವಿಚಾರದಿಂದ ಹೊರಹಾಕಲಾದ ಸಂಸ್ಥೆಯ ಮೂವರು ಸೇರಿ ಒಟ್ಟು ಐವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇಡು ತೀರಿಸಲು ಈ ಪ್ಲಾನ್
ಮಾಹಿತಿ ಪ್ರಕಾರ, ಆಟೋಮೊಬೈಲ್ ಕಂಪನಿ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಸೇಡು ತೀರಿಸಿಕೊಳ್ಳಲು ಉದ್ಯಮಿಯೊಬ್ಬರು ಈ ಕೃತ್ಯವನ್ನೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಏನಂದ್ರು?
ಪೊಲೀಸರ ಪ್ರಕಾರ, ಮೂವರು ಪಾಲುದಾರರು ಈ ಕೃತ್ಯವನ್ನು ಯೋಚಿಸಿ ಮಾಡಿದ್ದಾರೆ. ಸಮೋಸಾ ಒದಗಿಸುವ ಒಪ್ಪಂದ ಮಾಡಿಕೊಂಡ ಸಂಸ್ಥೆಗೆ ಮಾನಹಾನಿಯನ್ನು ಮಾಡಲು ಬೇರಿಬ್ಬರು ಕಾರ್ಮಿಕರನ್ನು ಪ್ಲಾನ್ನಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಲಿಮಿಟೆಡ್ ಎಂಬ ಕಂಪನಿಯ ಕ್ಯಾಂಟೀನ್ಗೆ ಕ್ಯಾಟಲಿಸ್ಟ್ ಸರ್ವೀರ್ಸ್ ಸೊಲ್ಯೂಷನ್ಸ್ ಪ್ರೈ.ಲಿ ತಿಂಡಿ ಒದಗಿಸುವ ಕೆಲಸ ಮಾಡುತ್ತಿತ್ತು. ಆದರೆ ಅವರನ್ನು ಬದಲಾಯಿಸಿ ಮನೋಹರ್ ಎಂಟರ್ಪ್ರೈಸ್ ಎಂಬ ಕಂಪನಿಗೆ ಉಪಗುತ್ತಿಗೆ ನೀಡಲಾಯಿತು.
ಇದನ್ನೂ ಓದಿ: ವರ್ತೂರು ಕೆರೆಯಲ್ಲಾದ ಕಹಿ ಘಟನೆಯನ್ನ ನೆನಪಿಸುತ್ತೆ ಈ ಕಾಕ್ಟೈಲ್.. ಆ ಘಟನೆ ಬಗ್ಗೆ ಕೇಳಿದ್ರೆ ಬೇಸರವಾಗುತ್ತೆ
ಸಮೋಸಾ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದ್ದು, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಕ್ ಎಂಬ ಕೆಲಸಗಾರರು ಕಾಂಡೋಮ್, ಗುಟ್ಕಾ, ಕಲ್ಲುಗಳನ್ನು ತುಂಬಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅರೆಸ್ಟ್ ಆದ ಐವರ ವಿರುದ್ಧ ಐಪಿಸಿ ಸೆಕ್ಷನ್ 328 ಮತ್ತು 120ಬಿ ಅಡಿಯಲ್ಲಿ ಕೆಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ