ಸಮಾವೇಶದಲ್ಲಿ MB ಪಾಟೀಲ್ ಹಾಗೂ ರಾಹುಲ್ ಗಾಂಧಿ ನಡೆದ ಸಂಭಾಷಣೆ
BJP ಭದ್ರಕೋಟೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ರಾಹುಲ್ ಗಾಂಧಿ ವಿಡಿಯೋ
ಕರ್ನಾಟಕ ಲೋಕಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಈಗಾಗಲೇ ರಾಜ್ಯದಲ್ಲಿ ಮೊದಲು ಹಂತದ 14 ಕ್ಷೇತ್ರದ ಮತದಾನ ಮುಗಿದಿದ್ದು, ಎರಡನೇ ಹಂತದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತಯಾಚನೆ ಜೋರಾಗಿದೆ.
ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಹೌದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ರಾಹುಲ್ ಗಾಂಧಿ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ನಾಯಕರು ಆಗಮಿಸಿದ್ದರು.
ಏನ್ ಹೇಳ್ತಿದ್ದಾರೆ, ಮಾಡ್ತಿದ್ದಾರೆ ಇವರಿಬ್ಬರು? pic.twitter.com/CxjPoGppF0
— Nishkama_Karma (ಮೋದಿಯವರ ಕುಟುಂಬ) (@Nishkama_Karma1) April 27, 2024
ಚುನಾವಣಾ ಱಲಿಯಲ್ಲಿ ರಾಹುಲ್ ಗಾಂಧಿ ಅವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಈ ಕಡೆ ಮತದಾರರಿಗೆ ಅರ್ಥವಾಗಲಿ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಕನ್ನಡದಲ್ಲಿ ಅನುವಾದ ಮಾಡುತ್ತಿದ್ದರು. ಇದೇ ವೇಳೆ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ. ರಾಹುಲ್ ಗಾಂಧಿ ಅವರು, ನಾನು ನಿಮಗೆ ಹೃದಯಪೂರ್ವಕವಾಗಿ ಧನ್ಯವಾದವನ್ನು ತಿಳಿಸುತ್ತೇನೆ. ವಿಶೇಷವಾಗಿ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಬ್ಬರ್ ಶೇರ್ ರೀತಿ ಇದ್ದೀರಿ ಅಂತಾ ಹೇಳುತ್ತಾರೆ. ಆಗ ಎಮ್.ಬಿ ಪಾಟೀಲ್ ಅವರು ಸ್ವಲ್ಪ ಸಮಯವನ್ನು ತೆಗೆದುಕೊಂಡು ಕಾರ್ಯಕರ್ತರನ್ನ ಹುಲಿ ಸಿಎಂಗಳ ಹಾಗೇ ಎಂದು ಹೇಳುತ್ತಾರೆ. ಅದಕ್ಕೆ ಮತ್ತೆ ರಾಹುಲ್ ಗಾಂಧಿ ಅವರು ಕೇಳಿ ಹುಲಿ ಸಿಂಹ ಅಂತ ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಇದೇ ವಿಡಿಯೋವನ್ನು ಇಟ್ಟುಕೊಂಡು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಇದು ಸ್ಟಾಂಡ್ ಅಪ್ ಕಾಮಿಡಿ ಶೋನ ಎಂದು ವ್ಯಂಗ್ಯವಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಮಾವೇಶದಲ್ಲಿ MB ಪಾಟೀಲ್ ಹಾಗೂ ರಾಹುಲ್ ಗಾಂಧಿ ನಡೆದ ಸಂಭಾಷಣೆ
BJP ಭದ್ರಕೋಟೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ರಾಹುಲ್ ಗಾಂಧಿ ವಿಡಿಯೋ
ಕರ್ನಾಟಕ ಲೋಕಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಈಗಾಗಲೇ ರಾಜ್ಯದಲ್ಲಿ ಮೊದಲು ಹಂತದ 14 ಕ್ಷೇತ್ರದ ಮತದಾನ ಮುಗಿದಿದ್ದು, ಎರಡನೇ ಹಂತದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತಯಾಚನೆ ಜೋರಾಗಿದೆ.
ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಹೌದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ರಾಹುಲ್ ಗಾಂಧಿ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ನಾಯಕರು ಆಗಮಿಸಿದ್ದರು.
ಏನ್ ಹೇಳ್ತಿದ್ದಾರೆ, ಮಾಡ್ತಿದ್ದಾರೆ ಇವರಿಬ್ಬರು? pic.twitter.com/CxjPoGppF0
— Nishkama_Karma (ಮೋದಿಯವರ ಕುಟುಂಬ) (@Nishkama_Karma1) April 27, 2024
ಚುನಾವಣಾ ಱಲಿಯಲ್ಲಿ ರಾಹುಲ್ ಗಾಂಧಿ ಅವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಈ ಕಡೆ ಮತದಾರರಿಗೆ ಅರ್ಥವಾಗಲಿ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಕನ್ನಡದಲ್ಲಿ ಅನುವಾದ ಮಾಡುತ್ತಿದ್ದರು. ಇದೇ ವೇಳೆ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ. ರಾಹುಲ್ ಗಾಂಧಿ ಅವರು, ನಾನು ನಿಮಗೆ ಹೃದಯಪೂರ್ವಕವಾಗಿ ಧನ್ಯವಾದವನ್ನು ತಿಳಿಸುತ್ತೇನೆ. ವಿಶೇಷವಾಗಿ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಬ್ಬರ್ ಶೇರ್ ರೀತಿ ಇದ್ದೀರಿ ಅಂತಾ ಹೇಳುತ್ತಾರೆ. ಆಗ ಎಮ್.ಬಿ ಪಾಟೀಲ್ ಅವರು ಸ್ವಲ್ಪ ಸಮಯವನ್ನು ತೆಗೆದುಕೊಂಡು ಕಾರ್ಯಕರ್ತರನ್ನ ಹುಲಿ ಸಿಎಂಗಳ ಹಾಗೇ ಎಂದು ಹೇಳುತ್ತಾರೆ. ಅದಕ್ಕೆ ಮತ್ತೆ ರಾಹುಲ್ ಗಾಂಧಿ ಅವರು ಕೇಳಿ ಹುಲಿ ಸಿಂಹ ಅಂತ ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಇದೇ ವಿಡಿಯೋವನ್ನು ಇಟ್ಟುಕೊಂಡು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಇದು ಸ್ಟಾಂಡ್ ಅಪ್ ಕಾಮಿಡಿ ಶೋನ ಎಂದು ವ್ಯಂಗ್ಯವಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ