newsfirstkannada.com

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಗೆಲುವಿಗೆ ಕಾಂಗ್ರೆಸ್‌ ಘಟಾನುಘಟಿ ನಾಯಕರ ಮಾಸ್ಟರ್ ಪ್ಲಾನ್; ಏನದು?

Share :

Published April 12, 2024 at 6:06pm

    ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘದ ಸಭೆ ನಡೆಸಿದ ಕೆ.ಎನ್.ರಾಜಣ್ಣ

    ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯ ಗೆಲ್ಲಿಸಲು ಪಣತೊಟ್ಟ ಕೈ ನಾಯಕರು

    ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಜೋರಾಗಿದೆ. ರಕ್ಷಾ ರಾಮಯ್ಯ ಅವರನ್ನ ಗೆಲ್ಲಿಸಲು ಕೈ ನಾಯಕರೆಲ್ಲಾ ಪಣತೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಾಮಾಣಿಕ, ನಿಷ್ಕಲ್ಮಷ ಮನಸ್ಸಿನವರು. ಅವರನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಗುರಿಯಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ ಅವರು ಈ ಸಭೆಯ ನೇತೃತ್ವ ವಹಿಸಿದ್ದರು. ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್. ಪುಟ್ಟಸ್ವಾಮಿ ಗೌಡ, ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಎನ್. ಸಂಪಂಗಿ, ಕೆ.ಪಿ. ಬಚ್ಚೇಗೌಡ, ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್, ಪಕ್ಷದ ಧುರೀಣರಾದ ಯಳುವಳ್ಳಿ ರಮೇಶ್, ಆಂಜಿನಪ್ಪ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಗುಡುಗಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರಿಗೆ ಆಶಿರ್ವಾದ ಮಾಡಿ. ಅವರು ಯುವ ಸಮೂಹದ ಕಣ್ಮಣಿ. ಗೌರವಯುತ ಕುಟುಂಬದವರು. ಅವರು ಸುಳ್ಳು ಹೇಳುವುದಿಲ್ಲ. ಕಷ್ಟಕ್ಕೆ ಮಿಡಿಯುವ ವ್ಯಕ್ತಿ ರಕ್ಷಾ ರಾಮಯ್ಯ. ಇದು ಲೋಕಸಭಾ ಚುನಾವಣೆಯಾಗಿದ್ದು, ಎಷ್ಟೋ ಹಳ್ಳಿಗಳಿಗೆ ನಾವು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಹಾಗೆಂದು ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮ ಊರಿಗೆ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಪಕ್ಷದ ಪರವಾಗಿ ಪ್ರಚಾರ ಮಾಡಬೇಕು. ಕೆಲಸ ಮಾಡುವ ಅಪಾರ ಕಳಕಳಿ ಹೊಂದಿದ್ದು, ಇಂತಹ ಯುವಕರು ಆರಿಸಿ ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ನಾನು ಶಾಸಕನಾಗಲು ಎಂ.ಎಸ್. ರಾಮಯ್ಯ ಅವರ ಪುತ್ರರಾದ ಎಂ.ಆರ್. ಜಯರಾಂ ಮತ್ತು ಎಂ.ಆರ್. ಸೀತಾರಾಂ ಅವರು ಅವರ ಕೊಡುಗೆಯೂ ಇದೆ. ತಮ್ಮ ಮಧುಗಿರಿ ಕ್ಷೇತ್ರದಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅವರು ಸಮುದಾಯದ ಭವನ ನಿರ್ಮಿಸಿಕೊಟ್ಟಿದ್ದಾರೆ. ಅವರ ಪ್ರೀತಿ, ವಿಶ್ವಾಸ ನಮ್ಮ ಕ್ಷೇತ್ರದಾದ್ಯಂತ ಹರಡಿಕೊಂಡಿದೆ. ನಾನೂ ಕೂಡ ಎಂ.ಎಸ್. ರಾಮಯ್ಯ ಅವರ ಕುಟುಂಬದ ಸದಸ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಸುಳ್ಳು ಹೇಳಬಾರದು, ಸತ್ಯ ನುಡಿಯಬೇಕು. ನಾವು ಎಲ್ಲಾ ದೇವರ ಭಕ್ತರು. ಆದರೆ ಕೆಲವರು ಶ್ರೀರಾಮನ ಹೆಸರಿನಲ್ಲಿ ಮತಯಾಚಿಸುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ರಾಜಣ್ಣ ಹೇಳಿದರು.

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮಾತನಾಡಿ, ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ದೊರೆಯಲಿದೆ. ಎಸ್.ಸಿ, ಎಸ್.ಟಿ. ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಏರಿಕೆ ಮಾಡುತ್ತೇವೆ. ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿ ಗೃಹಲಕ್ಷ್ಮೀ ಯೋಜನೆಯಿಂದ ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದ್ದಾನೆ. ಇದಕ್ಕಿಂತ ನಿದರ್ಶನ ಬೇಕೇ? ಬಡವರ ಹಣ ಬಡವರಿಗೆ ನೀಡಿದರೆ ತಪ್ಪೇ? ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಇದನ್ನೂ ಓದಿ: ಅಬ್ಬಾ! ಇವರ ಆಸ್ತಿನೇ.. ಒಬ್ಬೊಬ್ಬರು ಕೋಟಿ ಕುಬೇರರು.. ಯದುವೀರ್, ರಕ್ಷಾ ರಾಮಯ್ಯ, ಡಾ ಸುಧಾಕರ್​ ಆಸ್ತಿ ಎಷ್ಟು ಗೊತ್ತಾ?

ಬಿಜೆಪಿಯವರು ಹೇಗೆ ಅಷ್ಟು ಸ್ಥಾನ ಗೆಲ್ಲುತ್ತಾರೋ ಗೊತ್ತಿಲ್ಲ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನನಗೆ ದೈವ ಬಲ ಇದೆ. ನಾನು 9 ತಿಂಗಳಲ್ಲಿ ಟೀಕೆ ಮಾಡಿದ ಬಿಜೆಪಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಮುನಿಸ್ವಾಮಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಈಶ್ವರಪ್ಪ ಇದಕ್ಕೆ ಉದಾಹರಣೆ. ನಮ್ಮ ಮುಖ್ಯಮಂತ್ರಿಗಳು 13 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇಲ್ಲ ಎಂದರೆ ಗ್ಯಾರೆಂಟಿ ನಿಲ್ಲಿಸುತ್ತಾರೆ ಎಂಬುದು ಮತದಾರರಿಗೆ ತಿಳಿದಿರಬೇಕು.

 

ನಾನು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಬಗ್ಗೆ ಮಾತನಾಡಬಾರದು ಎಂದುಕೊಂಡಿರುತ್ತೇನೆ. ನನ್ನ ಮೇಲೆ ಅವರು 22 ಪ್ರಕರಣಗಳನ್ನು ದಾಖಲಿಸಿದಾಗ ನಾನು ಹತ್ತು ತಿಂಗಳು ಅಜ್ಞಾತವಾಸದಲ್ಲಿದ್ದೆ. ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ 185 ಕೋಟಿ ರೂ ಮೊತ್ತದ ಯೋಜನೆಗಳನ್ನು ತಂದಿರುವುದಾಗಿ ಹೇಳಿದ್ದಾರೆ. ಇವೆಲ್ಲವೂ ಸುಳ್ಳು. ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಯಾಗ್ನಾಸ್ಟಿಕ್ ಸೆಂಟರ್ ಗೆ ನಮ್ಮ ಸರ್ಕಾರ 8.5 ಕೋಟಿ ರೂ ನೀಡಿದೆ. ಕಂದವಾರ ಕೆರೆ ಪುನಶ್ಚೇತನಕ್ಕಾಗಿ 200 ಕೋಟಿ ರೂ ಹಣ ದೊರೆತಿದೆ. ನನ್ನ ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಅಬಾಧಿತವಾಗಿ ದೊರೆಯುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಇದನ್ನೂ ಓದಿ: ಗೆಲ್ಲಿಸಮ್ಮ ಚೌಡೇಶ್ವರಿ.. ಕೊಂಡ ಹಾಯ್ದು ಪ್ರಾರ್ಥಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ!

ಬಿಜೆಪಿಯವರು ರಾಮನ ಹೆಸರು ಹೇಳುತ್ತಿದ್ದಾರೆ. ನನ್ನ ಎದೆ ಸೀಳಿದರೆ ಶ್ರೀರಾಮ, ಸಿದ್ದರಾಮಯ್ಯ ಇಬ್ಬರೂ ಇದ್ದಾರೆ. ನಮ್ಮ ಜೊತೆ ಸಾಕ್ಷತ್ ರಕ್ಷಾ ರಾಮಯ್ಯನವರೇ ಇದ್ದಾರೆ. ಬೋಗ ನಂದೀಶ್ವರ – ಈ ಈಶ್ವರ ಚಿಕ್ಕಬಳ್ಳಾಪುರದಲ್ಲೇ ಇದ್ದೇವೆ. ಎಂ.ಎಸ್. ರಾಮಯ್ಯ ಅವರ ಕುಟುಂಬದ ವಿದ್ಯಾರ್ಥಿ ವೇತನ ಪಡೆದು ಓದಿದವರಲ್ಲಿ ನಾನೂ ಒಬ್ಬ. ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಕ್ರಮ ಸಂಖ್ಯೆ 3. ಫಲಿತಾಂಶ ದಿನ ಬಿಜೆಪಿಗೆ ಮೂರು ನಾಮ ಖಚಿತ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕರಾದ ಎನ್. ಸಂಪಂಗಿ ಮಾತನಾಡಿ, ಯುವ ಕಾಂಗ್ರೆಸ್ ನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಿ, ಜನಪರ, ರಚನಾತ್ಮಕ ಕೆಲಸ ಮಾಡಿದ ರಕ್ಷಾ ರಾಮಯ್ಯ ಲೋಕಸಭಾ ಸದಸ್ಯರಾಗಲು ಸೂಕ್ತ ವ್ಯಕ್ತಿ. ಕಾಂಗ್ರೆಸ್ ದೊಡ್ಡ ಆಲದ ಮರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಲು ನಾವೆಲ್ಲಾ ಹೋರಾಟಕ್ಕೆ ಅಣಿಯಾಗಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಗೆಲುವಿಗೆ ಕಾಂಗ್ರೆಸ್‌ ಘಟಾನುಘಟಿ ನಾಯಕರ ಮಾಸ್ಟರ್ ಪ್ಲಾನ್; ಏನದು?

https://newsfirstlive.com/wp-content/uploads/2024/04/Ramksha-Ramaiah-Chikkaballapura.jpg

    ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘದ ಸಭೆ ನಡೆಸಿದ ಕೆ.ಎನ್.ರಾಜಣ್ಣ

    ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯ ಗೆಲ್ಲಿಸಲು ಪಣತೊಟ್ಟ ಕೈ ನಾಯಕರು

    ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಜೋರಾಗಿದೆ. ರಕ್ಷಾ ರಾಮಯ್ಯ ಅವರನ್ನ ಗೆಲ್ಲಿಸಲು ಕೈ ನಾಯಕರೆಲ್ಲಾ ಪಣತೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಾಮಾಣಿಕ, ನಿಷ್ಕಲ್ಮಷ ಮನಸ್ಸಿನವರು. ಅವರನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಗುರಿಯಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ ಅವರು ಈ ಸಭೆಯ ನೇತೃತ್ವ ವಹಿಸಿದ್ದರು. ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್. ಪುಟ್ಟಸ್ವಾಮಿ ಗೌಡ, ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಎನ್. ಸಂಪಂಗಿ, ಕೆ.ಪಿ. ಬಚ್ಚೇಗೌಡ, ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್, ಪಕ್ಷದ ಧುರೀಣರಾದ ಯಳುವಳ್ಳಿ ರಮೇಶ್, ಆಂಜಿನಪ್ಪ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಗುಡುಗಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರಿಗೆ ಆಶಿರ್ವಾದ ಮಾಡಿ. ಅವರು ಯುವ ಸಮೂಹದ ಕಣ್ಮಣಿ. ಗೌರವಯುತ ಕುಟುಂಬದವರು. ಅವರು ಸುಳ್ಳು ಹೇಳುವುದಿಲ್ಲ. ಕಷ್ಟಕ್ಕೆ ಮಿಡಿಯುವ ವ್ಯಕ್ತಿ ರಕ್ಷಾ ರಾಮಯ್ಯ. ಇದು ಲೋಕಸಭಾ ಚುನಾವಣೆಯಾಗಿದ್ದು, ಎಷ್ಟೋ ಹಳ್ಳಿಗಳಿಗೆ ನಾವು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಹಾಗೆಂದು ನಮ್ಮನ್ನು ಭೇಟಿ ಮಾಡಿಲ್ಲ. ನಮ್ಮ ಊರಿಗೆ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಪಕ್ಷದ ಪರವಾಗಿ ಪ್ರಚಾರ ಮಾಡಬೇಕು. ಕೆಲಸ ಮಾಡುವ ಅಪಾರ ಕಳಕಳಿ ಹೊಂದಿದ್ದು, ಇಂತಹ ಯುವಕರು ಆರಿಸಿ ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ನಾನು ಶಾಸಕನಾಗಲು ಎಂ.ಎಸ್. ರಾಮಯ್ಯ ಅವರ ಪುತ್ರರಾದ ಎಂ.ಆರ್. ಜಯರಾಂ ಮತ್ತು ಎಂ.ಆರ್. ಸೀತಾರಾಂ ಅವರು ಅವರ ಕೊಡುಗೆಯೂ ಇದೆ. ತಮ್ಮ ಮಧುಗಿರಿ ಕ್ಷೇತ್ರದಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅವರು ಸಮುದಾಯದ ಭವನ ನಿರ್ಮಿಸಿಕೊಟ್ಟಿದ್ದಾರೆ. ಅವರ ಪ್ರೀತಿ, ವಿಶ್ವಾಸ ನಮ್ಮ ಕ್ಷೇತ್ರದಾದ್ಯಂತ ಹರಡಿಕೊಂಡಿದೆ. ನಾನೂ ಕೂಡ ಎಂ.ಎಸ್. ರಾಮಯ್ಯ ಅವರ ಕುಟುಂಬದ ಸದಸ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಸುಳ್ಳು ಹೇಳಬಾರದು, ಸತ್ಯ ನುಡಿಯಬೇಕು. ನಾವು ಎಲ್ಲಾ ದೇವರ ಭಕ್ತರು. ಆದರೆ ಕೆಲವರು ಶ್ರೀರಾಮನ ಹೆಸರಿನಲ್ಲಿ ಮತಯಾಚಿಸುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ರಾಜಣ್ಣ ಹೇಳಿದರು.

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮಾತನಾಡಿ, ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ದೊರೆಯಲಿದೆ. ಎಸ್.ಸಿ, ಎಸ್.ಟಿ. ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಏರಿಕೆ ಮಾಡುತ್ತೇವೆ. ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿ ಗೃಹಲಕ್ಷ್ಮೀ ಯೋಜನೆಯಿಂದ ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದ್ದಾನೆ. ಇದಕ್ಕಿಂತ ನಿದರ್ಶನ ಬೇಕೇ? ಬಡವರ ಹಣ ಬಡವರಿಗೆ ನೀಡಿದರೆ ತಪ್ಪೇ? ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಇದನ್ನೂ ಓದಿ: ಅಬ್ಬಾ! ಇವರ ಆಸ್ತಿನೇ.. ಒಬ್ಬೊಬ್ಬರು ಕೋಟಿ ಕುಬೇರರು.. ಯದುವೀರ್, ರಕ್ಷಾ ರಾಮಯ್ಯ, ಡಾ ಸುಧಾಕರ್​ ಆಸ್ತಿ ಎಷ್ಟು ಗೊತ್ತಾ?

ಬಿಜೆಪಿಯವರು ಹೇಗೆ ಅಷ್ಟು ಸ್ಥಾನ ಗೆಲ್ಲುತ್ತಾರೋ ಗೊತ್ತಿಲ್ಲ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ನನಗೆ ದೈವ ಬಲ ಇದೆ. ನಾನು 9 ತಿಂಗಳಲ್ಲಿ ಟೀಕೆ ಮಾಡಿದ ಬಿಜೆಪಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಮುನಿಸ್ವಾಮಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಈಶ್ವರಪ್ಪ ಇದಕ್ಕೆ ಉದಾಹರಣೆ. ನಮ್ಮ ಮುಖ್ಯಮಂತ್ರಿಗಳು 13 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇಲ್ಲ ಎಂದರೆ ಗ್ಯಾರೆಂಟಿ ನಿಲ್ಲಿಸುತ್ತಾರೆ ಎಂಬುದು ಮತದಾರರಿಗೆ ತಿಳಿದಿರಬೇಕು.

 

ನಾನು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಬಗ್ಗೆ ಮಾತನಾಡಬಾರದು ಎಂದುಕೊಂಡಿರುತ್ತೇನೆ. ನನ್ನ ಮೇಲೆ ಅವರು 22 ಪ್ರಕರಣಗಳನ್ನು ದಾಖಲಿಸಿದಾಗ ನಾನು ಹತ್ತು ತಿಂಗಳು ಅಜ್ಞಾತವಾಸದಲ್ಲಿದ್ದೆ. ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ 185 ಕೋಟಿ ರೂ ಮೊತ್ತದ ಯೋಜನೆಗಳನ್ನು ತಂದಿರುವುದಾಗಿ ಹೇಳಿದ್ದಾರೆ. ಇವೆಲ್ಲವೂ ಸುಳ್ಳು. ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಯಾಗ್ನಾಸ್ಟಿಕ್ ಸೆಂಟರ್ ಗೆ ನಮ್ಮ ಸರ್ಕಾರ 8.5 ಕೋಟಿ ರೂ ನೀಡಿದೆ. ಕಂದವಾರ ಕೆರೆ ಪುನಶ್ಚೇತನಕ್ಕಾಗಿ 200 ಕೋಟಿ ರೂ ಹಣ ದೊರೆತಿದೆ. ನನ್ನ ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಅಬಾಧಿತವಾಗಿ ದೊರೆಯುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಇದನ್ನೂ ಓದಿ: ಗೆಲ್ಲಿಸಮ್ಮ ಚೌಡೇಶ್ವರಿ.. ಕೊಂಡ ಹಾಯ್ದು ಪ್ರಾರ್ಥಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ!

ಬಿಜೆಪಿಯವರು ರಾಮನ ಹೆಸರು ಹೇಳುತ್ತಿದ್ದಾರೆ. ನನ್ನ ಎದೆ ಸೀಳಿದರೆ ಶ್ರೀರಾಮ, ಸಿದ್ದರಾಮಯ್ಯ ಇಬ್ಬರೂ ಇದ್ದಾರೆ. ನಮ್ಮ ಜೊತೆ ಸಾಕ್ಷತ್ ರಕ್ಷಾ ರಾಮಯ್ಯನವರೇ ಇದ್ದಾರೆ. ಬೋಗ ನಂದೀಶ್ವರ – ಈ ಈಶ್ವರ ಚಿಕ್ಕಬಳ್ಳಾಪುರದಲ್ಲೇ ಇದ್ದೇವೆ. ಎಂ.ಎಸ್. ರಾಮಯ್ಯ ಅವರ ಕುಟುಂಬದ ವಿದ್ಯಾರ್ಥಿ ವೇತನ ಪಡೆದು ಓದಿದವರಲ್ಲಿ ನಾನೂ ಒಬ್ಬ. ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಕ್ರಮ ಸಂಖ್ಯೆ 3. ಫಲಿತಾಂಶ ದಿನ ಬಿಜೆಪಿಗೆ ಮೂರು ನಾಮ ಖಚಿತ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕರಾದ ಎನ್. ಸಂಪಂಗಿ ಮಾತನಾಡಿ, ಯುವ ಕಾಂಗ್ರೆಸ್ ನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಿ, ಜನಪರ, ರಚನಾತ್ಮಕ ಕೆಲಸ ಮಾಡಿದ ರಕ್ಷಾ ರಾಮಯ್ಯ ಲೋಕಸಭಾ ಸದಸ್ಯರಾಗಲು ಸೂಕ್ತ ವ್ಯಕ್ತಿ. ಕಾಂಗ್ರೆಸ್ ದೊಡ್ಡ ಆಲದ ಮರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈ ಬಲಪಡಿಸಲು ನಾವೆಲ್ಲಾ ಹೋರಾಟಕ್ಕೆ ಅಣಿಯಾಗಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More