ಕಾಂಗ್ರೆಸ್ ನಾಯಕರು ಮತದಾರರಿಗೆ ಆಮಿಷವೊಡುತ್ತಿರುವ ಆರೋಪ
ಜಿಲ್ಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಾಂಗ್ರೆಸ್ನ ಸ್ಮಾರ್ಟ್ ಕಾರ್ಡ್ಗಳು ಪತ್ತೆ
ಸ್ಮಾರ್ಟ್ ಕಾರ್ಡ್ ಮೇಲೆ ಸಿಎಂ ಸೇರಿ ಹಲವರ ಫೋಟೋ ಇದೆ
ರಾಮನಗರ: ಕಾಂಗ್ರೆಸ್ ನಾಯಕರು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಮತದಾರರಿಗೆ ಆಮಿಷವೊಡ್ಡಲು ಸ್ಮಾರ್ಟ್ ಕಾರ್ಡ್ಗಳನ್ನು ವಿತರಣೆ ಮಾಡ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ನ ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಏನಿದು ಆರೋಪ..?
ಕಾಂಗ್ರೆಸ್ ಮುಖಂಡರ ವಿರುದ್ಧ ಮೈತ್ರಿ ಕಾರ್ಯಕರ್ತರು ಗಂಭೀರವಾದ ಆರೋಪ ಮಾಡಿದ್ದು, ಜಿಲ್ಲೆಯ ಸಾಕಷ್ಟು ಕಡೆ ಸ್ಮಾರ್ಟ್ ಕಾರ್ಡ್ಗಳು ಪತ್ತೆಯಾಗಿವೆ. ರಾಮನಗರದ 31 ವಾರ್ಡ್ಗಳಲ್ಲೂ ಹಂಚಿಕೆ ಮಾಡುತ್ತಿರುವ ಕಾರ್ಡ್ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಫೋಟೋ ಇವೆ. ಮಾಗಡಿ ಕ್ಷೇತ್ರದ ಕಾರ್ಡ್ಗಳ ಮೇಲೆ ಶಾಸಕ ಹೆಚ್.ಸಿ ಬಾಲಕೃಷ್ಣ ಅವರ ಫೋಟೋ ಇದ್ದರೇ ಇತ್ತ ಕನಕಪುರ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಫೋಟೋ ಪತ್ತೆಯಾಗಿದೆ ಎಂದು ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ. ಚನ್ನಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಅವರ ಫೋಟೋ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?
ಗೂಂಡಾಗಿರಿಗೆ ಜನರು ಬಗ್ಗುವುದಿಲ್ಲ ಎಂದು ಗೊತ್ತಾದ ಮೇಲೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಕಾರ್ಡ್ ಹಂಚುತ್ತಿದ್ದಾರೆ.
ಹೋದಲ್ಲಿ ಬಂದಲ್ಲಿ @DKShivakumar ಅವರು ಮತದಾರರಿಗೆ ಬೆದರಿಕೆ, ಧಮ್ಕಿ ಹಾಕಿ ಬಂದಿದ್ದರು. ಆದರೆ, ಆ ದಿನಗಳಂತೆ ಈ ದಿನಗಳಲ್ಲಿ ವರ್ಕೌಟ್ ಆಗುವುದಿಲ್ಲವೆಂದು ಮತದಾರರಲ್ಲಿ ಹಣದ ದುರಾಸೆ ಹುಟ್ಟಿಸುತ್ತಿದ್ದಾರೆ.
ಅಂದರೆ,… pic.twitter.com/AD6MrKkSqn
— BJP Karnataka (@BJP4Karnataka) April 26, 2024
ಕಾಂಗ್ರೆಸ್ ಮುಖಂಡರು ರಾತ್ರಿ ಮನೆಮನೆಗೆ ತೆರಳಿ ಕಾರ್ಡ್ ಹಂಚಿದ್ದಾರೆ ಎಂದು ಆರೋಪ ಮಾಡಲಾದೆ. ಇದನ್ನು ಮೈತ್ರಿ ನಾಯಕರು ರೆಡ್ ಆ್ಯಂಡ್ ಆಗಿ ಹಿಡಿದು ಪ್ರಶ್ನೆ ಮಾಡಿದ್ದಾರೆ. ಇಂದು ಎಲ್ಲೆಡೆ ಮತದಾನ ಆರಂಭವಾಗಿದ್ದು, ಜನರು ಸ್ವ-ಇಚ್ಛೆಯಿಂದ ಬಂದು ವೋಟ್ ಮಾಡುತ್ತಿದ್ದಾರೆ. ಮತದಾನ ಮಾಡುವಾಗಲೂ ಬೂತ್ ಬಳಿಯೇ ಸ್ಮಾರ್ಟ್ ಕಾರ್ಡ್ಗಳನ್ನು ಮತದಾರರಿಗೆ ನೀಡುತ್ತಿರುವ ದೃಶ್ಯ ಕಂಡು ಬಂದ ಹಿನ್ನೆಲೆಯಲ್ಲಿ ಕೈಮುಖಂಡರಿಗೆ ಮೈತ್ರಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾಂಗ್ರೆಸ್ ನಾಯಕರು ಮತದಾರರಿಗೆ ಆಮಿಷವೊಡುತ್ತಿರುವ ಆರೋಪ
ಜಿಲ್ಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಾಂಗ್ರೆಸ್ನ ಸ್ಮಾರ್ಟ್ ಕಾರ್ಡ್ಗಳು ಪತ್ತೆ
ಸ್ಮಾರ್ಟ್ ಕಾರ್ಡ್ ಮೇಲೆ ಸಿಎಂ ಸೇರಿ ಹಲವರ ಫೋಟೋ ಇದೆ
ರಾಮನಗರ: ಕಾಂಗ್ರೆಸ್ ನಾಯಕರು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಮತದಾರರಿಗೆ ಆಮಿಷವೊಡ್ಡಲು ಸ್ಮಾರ್ಟ್ ಕಾರ್ಡ್ಗಳನ್ನು ವಿತರಣೆ ಮಾಡ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್ನ ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಏನಿದು ಆರೋಪ..?
ಕಾಂಗ್ರೆಸ್ ಮುಖಂಡರ ವಿರುದ್ಧ ಮೈತ್ರಿ ಕಾರ್ಯಕರ್ತರು ಗಂಭೀರವಾದ ಆರೋಪ ಮಾಡಿದ್ದು, ಜಿಲ್ಲೆಯ ಸಾಕಷ್ಟು ಕಡೆ ಸ್ಮಾರ್ಟ್ ಕಾರ್ಡ್ಗಳು ಪತ್ತೆಯಾಗಿವೆ. ರಾಮನಗರದ 31 ವಾರ್ಡ್ಗಳಲ್ಲೂ ಹಂಚಿಕೆ ಮಾಡುತ್ತಿರುವ ಕಾರ್ಡ್ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಫೋಟೋ ಇವೆ. ಮಾಗಡಿ ಕ್ಷೇತ್ರದ ಕಾರ್ಡ್ಗಳ ಮೇಲೆ ಶಾಸಕ ಹೆಚ್.ಸಿ ಬಾಲಕೃಷ್ಣ ಅವರ ಫೋಟೋ ಇದ್ದರೇ ಇತ್ತ ಕನಕಪುರ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಫೋಟೋ ಪತ್ತೆಯಾಗಿದೆ ಎಂದು ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ. ಚನ್ನಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಅವರ ಫೋಟೋ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?
ಗೂಂಡಾಗಿರಿಗೆ ಜನರು ಬಗ್ಗುವುದಿಲ್ಲ ಎಂದು ಗೊತ್ತಾದ ಮೇಲೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಕಾರ್ಡ್ ಹಂಚುತ್ತಿದ್ದಾರೆ.
ಹೋದಲ್ಲಿ ಬಂದಲ್ಲಿ @DKShivakumar ಅವರು ಮತದಾರರಿಗೆ ಬೆದರಿಕೆ, ಧಮ್ಕಿ ಹಾಕಿ ಬಂದಿದ್ದರು. ಆದರೆ, ಆ ದಿನಗಳಂತೆ ಈ ದಿನಗಳಲ್ಲಿ ವರ್ಕೌಟ್ ಆಗುವುದಿಲ್ಲವೆಂದು ಮತದಾರರಲ್ಲಿ ಹಣದ ದುರಾಸೆ ಹುಟ್ಟಿಸುತ್ತಿದ್ದಾರೆ.
ಅಂದರೆ,… pic.twitter.com/AD6MrKkSqn
— BJP Karnataka (@BJP4Karnataka) April 26, 2024
ಕಾಂಗ್ರೆಸ್ ಮುಖಂಡರು ರಾತ್ರಿ ಮನೆಮನೆಗೆ ತೆರಳಿ ಕಾರ್ಡ್ ಹಂಚಿದ್ದಾರೆ ಎಂದು ಆರೋಪ ಮಾಡಲಾದೆ. ಇದನ್ನು ಮೈತ್ರಿ ನಾಯಕರು ರೆಡ್ ಆ್ಯಂಡ್ ಆಗಿ ಹಿಡಿದು ಪ್ರಶ್ನೆ ಮಾಡಿದ್ದಾರೆ. ಇಂದು ಎಲ್ಲೆಡೆ ಮತದಾನ ಆರಂಭವಾಗಿದ್ದು, ಜನರು ಸ್ವ-ಇಚ್ಛೆಯಿಂದ ಬಂದು ವೋಟ್ ಮಾಡುತ್ತಿದ್ದಾರೆ. ಮತದಾನ ಮಾಡುವಾಗಲೂ ಬೂತ್ ಬಳಿಯೇ ಸ್ಮಾರ್ಟ್ ಕಾರ್ಡ್ಗಳನ್ನು ಮತದಾರರಿಗೆ ನೀಡುತ್ತಿರುವ ದೃಶ್ಯ ಕಂಡು ಬಂದ ಹಿನ್ನೆಲೆಯಲ್ಲಿ ಕೈಮುಖಂಡರಿಗೆ ಮೈತ್ರಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ