Advertisment

ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಕ್ಕೆ ಪರಿಶೀಲನೆ -ಸಿದ್ದರಾಮಯ್ಯರಿಂದ ಮಹತ್ವದ ಹೇಳಿಕೆ

author-image
Ganesh
Updated On
ಬೆಂಗಳೂರಲ್ಲಿ ಇಂದು ಪಾಕ್​-ನ್ಯೂಜಿಲೆಂಡ್ ಮ್ಯಾಚ್​.. ನಗರದ ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ..!
Advertisment
  • ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ
  • ಮೈದಾನವನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಹಲವರಿಂದ ಆಗ್ರಹ
  • ಇಂಥ ಘಟನೆ ಯಾವ್ದೇ ಸರ್ಕಾರದ ಅವಧಿಯಲ್ಲೂ ನಡೆಯಬಾರದು-ಸಿಎಂ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಸಿದ್ದರಾಮಯ್ಯರ ಈ ಹೇಳಿಕೆ ತುಂಬಾನೇ ಮಹತ್ವ ಪಡೆದುಕೊಂಡಿದೆ.

Advertisment

ಕಾಲ್ತುಳಿತದ ಸಮಸ್ಯೆಗೆ ದೀರ್ಘಕಾಲದ ಪರಿಹಾರ ಕಂಡುಕೊಳ್ಳಲು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಇಂಥ ಅಹಿತಕರ ಘಟನೆಗಳು ಯಾವುದೇ ಸರ್ಕಾರದ ಅವಧಿಯಲ್ಲಾಗಲೀ ನಡೆಯಬಾರದು. ವೈಯಕ್ತಿಕವಾಗಿ ಇದು ನನಗೆ , ನನ್ನ ಸರ್ಕಾರಕ್ಕೆ ನೋವು ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಸ್ಥಾನ ತುಂಬೋದೇ ಚಿಂತೆ.. ನಾಲ್ವರು ಸ್ಟಾರ್​​ಗಳ ಶಾರ್ಟ್​ಲಿಸ್ಟ್ ಮಾಡಿದ ಮ್ಯಾನೇಜ್ಮೆಂಟ್..!

ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಕ್ಕೆ ಆಗ್ರಹ

ಮತ್ತೊಂದು ಕಡೆ ಕಬ್ಬನ್ ಪಾರ್ಕ್​ ವಾಕರ್ಸ್​ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆಲು ಮುಂದಾಗಿದ್ದಾರೆ. ನಗರದ ಮಧ್ಯೆ ಸ್ಟೇಡಿಯಂ ಇರೋದ್ರಿಂದ ಹಲವು ರೀತಿಯ ಸಮಸ್ಯೆ ಆಗ್ತಿದೆ. ಈ ಚಿನ್ನಸ್ವಾಮಿ ಕ್ರೀಡಾಂಗಣವನ್ನು ವಶಪಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಪತ್ರ ಬರೆಯಲು ಮುಂದಾಗಿದ್ದಾರೆ.

Advertisment

ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರವಲ್ಲ, ಕಂಠೀರವ ಸ್ಟೇಡಿಯಂ ಅನ್ನೂ ಶಿಫ್ಟ್​ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ. ಇದು ಮೂಲತಃ ಆರ್ಮಿಗೆ ಸೇರಿದ ಜಾಗ. ಸರ್ಕಾರದಿಂದ ಕೆಎಸ್​ಸಿಎ ಲೀಸ್​ಗೆ ಪಡೆದುಕೊಂಡಿದೆ. ಗಿಡ-ಮರಗಳು ಹಾಳಾಗಿದ್ದು, ಪಂದ್ಯಗಳು ನಡೆದರೆ ಟ್ರಾಫಿಕ್ ಹಾಗೂ ಈ ಹಿಂದೆ ಬಾಂಬ್ ಬ್ಲಾಸ್ಟ್ ಸಹ ಆಗಿದೆ. ಇದೀಗ 11 ಜನರು ಜೀವ ಕಳೆದುಕೊಂಡಿದ್ದಾರೆ. ಸಿಟಿ ಸೆಂಟರ್ ಒಳಗೆ ಮೈದಾನ ಬೇಕಾಗಿಲ್ಲ. ಏರ್​ಪೋರ್ಟ್ ಪಕ್ಕದಲ್ಲಿ KSCAಗೆ ಸೇರಿದ 100 ಎಕರೆ ಜಾಗ ಇದೆ. ಅಲ್ಲಿಗೆ ಸ್ಟೇಡಿಯಂ ಸ್ಥಳಾಂತರ ಮಾಡಿ ಎಂದು ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹೊಸ ಕೋಚ್ ನೇಮಿಸಿಕೊಂಡ ಟೀಂ ಇಂಡಿಯಾ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment