ಚೆನ್ನೈ-ಬೆಂಗಳೂರು ಹೈವೇಯಲ್ಲಿ ಭಯಾನಕ ಅಪಘಾತ.. ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಕಂಟೈನರ್

author-image
Bheemappa
Updated On
ಚೆನ್ನೈ-ಬೆಂಗಳೂರು ಹೈವೇಯಲ್ಲಿ ಭಯಾನಕ ಅಪಘಾತ.. ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಕಂಟೈನರ್
Advertisment
  • ಕಂಟೈನರ್ ಡಿಕ್ಕಿ ಹೊಡೆದ ರಭಸಕ್ಕೆ ಪುಟಿದು ಬಿದ್ದಿರುವ ಬಸ್
  • ಬಸ್​ ಪ್ರಯಾಣಿಕರು ಗಂಭೀರ, ಕೆಲವರ ಸ್ಥಿತಿ ಚಿಂತಾಜನಕ
  • ಬೆಳಗಿನ ಜಾವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಘಟನೆ

ಚೆನ್ನೈ: ಬೆಳಗಿನ ಜಾವ ಖಾಸಗಿ ಬಸ್​ವೊಂದಕ್ಕೆ ಕಂಟೈನರ್ ಲಾರಿ ಭಯಾನಕವಾಗಿ ಡಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಸರ್ಕಲ್​​ನಲ್ಲಿ​ ರಸ್ತೆಯನ್ನು ಬಸ್ ಕ್ರಾಸ್ ಮಾಡುತ್ತಿರುವಾಗ ವೇಗವಾಗಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದು 20 ಮೀಟರ್​ನಷ್ಟು ದೂರ ಹಾಗೇ ಮುಂದೆ ಹೋಗಿದೆ. ಈ ವೇಳೆ ಚೆಂಡು ಪುಟಿದಂತೆ ಬಸ್ ಒಮ್ಮೆ ಪುಟಿದಿದ್ದು ರಸ್ತೆ ಮಧ್ಯೆದಲ್ಲಿ ಕರೆಂಟ್ ಕಂಬ ಇದ್ದಿದ್ದರಿಂದ ಬಸ್ ಅನ್ನು ತಡೆದಿದೆ. ಗುದ್ದುವಾಗ ಬಸ್​ ಪಕ್ಕ ಓರ್ವ ವ್ಯಕ್ತಿ ನಡೆದು ಹೋಗುತ್ತಿರುತ್ತಾರೆ. ಅವರು ಜೀವ ಸಹಿತ ಇಲ್ಲ ಎಂದು ಹೇಳಲಾಗುತ್ತಿದೆ. ಲಾರಿ ಗುದ್ದಿದ ರಭಸಕ್ಕೆ ಬಸ್ ಪಲ್ಟಿಯಾಗಿ ಬಿದ್ದಿದ್ದರಿಂದ ಒಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಖಾಲಿ ಹುದ್ದೆಗಳು

publive-image

ಸದ್ಯ ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಕೆಲವರ ಸ್ಥತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಈ ಸಂಬಂಧ ಕೇಸ್ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಕಂಟೈನರ್ ಲಾರಿ, ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುಗರನ್ನು ಭಯ ಭೀತರನ್ನಾಗಿಸುವಂತೆ ಇದೆ. ಲಾರಿ ಗುದ್ದಿದ ರಭಸಕ್ಕೆ ಬಸ್​ ಒಂದು ಬಾರಿ ಪುಟಿದು ವಿದ್ಯುತ್ ಕಂಬಕ್ಕೆ ಬಿಳುತ್ತದೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


">December 10, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment