ಪವಿತ್ರಾ ಗೌಡಗೆ ಬಿಗ್ ಶಾಕ್​.. ಕೋರ್ಟ್​​​ನಿಂದ ಜಾಮೀನು ಅರ್ಜಿ ವಜಾ ​

author-image
Bheemappa
Updated On
ಪರಪ್ಪನ ಅಗ್ರಹಾರ ಜೈಲು ಸೇರಿದ ಪವಿತ್ರಾ ಗೌಡ.. ಆಕೆಗೆ ನೀಡಿರೋ ಫೆಸಿಲಿಟಿ ಮಾತ್ರ..
Advertisment
  • ಪ್ರಕರಣದಲ್ಲಿ ಮೊದಲು ಜಾಮೀನು ಅರ್ಜಿ ಕೋರಿದ್ದ ಪವಿತ್ರಾಗೌಡ
  • ಕೇಸ್​ನಲ್ಲಿ ದರ್ಶನ್​ಕ್ಕಿಂತ ಮೊದಲೇ ಜಾಮೀನು ಅರ್ಜಿ ಸಲ್ಲಿಸಿದ್ರು
  • ರೇಣುಕಾಸ್ವಾಮಿ ಕೇಸ್​ನಲ್ಲಿ ಎ1 ಆರೋಪಿಯಾದ ಪವಿತ್ರಾಗೌಡ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಜಾ ಮಾಡಿದೆ.

ಪ್ರಕರಣದ ಸಂಬಂಧ ಎಲ್ಲ ಆರೋಪಿಗಳಿಗಿಂತ ಮೊದಲೇ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಕೋರ್ಟ್​ಗೆ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್​ ವಜಾ ಮಾಡಿದೆ. ಇದರಿಂದ ಪವಿತ್ರಾಗೌಡ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಬೇಕಾಗಿದೆ. ಇನ್ನು ಪವಿತ್ರಾಗೌಡ ಜೊತೆ ಅನುಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಕೂಡ ಕೋರ್ಟ್​ ವಜಾ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment