/newsfirstlive-kannada/media/post_attachments/wp-content/uploads/2024/06/pavitra-gowda-1-1.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಜಾ ಮಾಡಿದೆ. ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲನೇಯವರಾಗಿ ಬೇಲ್​ಗೆ ಅಪ್ಲೇ ಮಾಡಿದ್ದರು. ಆದರೆ ಕೋರ್ಟ್​ ವಜಾ ಮಾಡಿ ಆದೇಶ ನೀಡಿದೆ. ಇದಕ್ಕೆ ಕಾರಣಗಳು ಈ ಕೆಳಕಂಡಂತೆ ಇವೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾಗೌಡ ಇನ್ನು ಹಲವು ದಿನಗಳು ಇರಬೇಕಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬೇಲ್ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ​ ವಿಚಾರಣೆ ಮಾಡಿದೆ. ಈ ವೇಳೆ ಅರ್ಜಿಯನ್ನು ಪರಿಶೀಲನೆ ಮಾಡಿದ ಕೋರ್ಟ್ ಬೇಲ್ ನೀಡಲು ನಿರಾಕರಿಸಿದೆ. ಇದಕ್ಕೆ ಕೆಲವು ಕಾರಣಗಳನ್ನ ನೀಡಲಾಗಿದೆ.
ಇದನ್ನೂ ಓದಿ: ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?
- ಮಹಿಳೆಯಾಗಿದ್ದರಿಂದ ಜಾಮೀನು ನೀಡಿಲ್ಲ
- ​ಮಾಡಿರುವಂತ ಪ್ರಕರಣ ಅತ್ಯಂತ ಭೀಕರ ಮತ್ತು ಘೋರವಾಗಿದೆ
- ರೇಣುಕಾಸ್ವಾಮಿಯನ್ನು ಭಯಾನಕವಾಗಿ ಚಿತ್ರಹಿಂಸೆ ಮಾಡಲಾಗಿದೆ
- ಇಬ್ಬರು ಪ್ರತ್ಯಕ್ಷದರ್ಶಿ ಪವಿತ್ರಾಗೌಡರನ್ನು ಐಡೈಂಟಿಫೈ ಮಾಡಿದ್ದಾರೆ
- ಪ್ರಕರಣದ ವೇಳೆ ಆರೋಪಿಗಳ ಬಟ್ಟೆಯಲ್ಲಿ ಡಿಎನ್​ಎ ಪತ್ತೆಯಾಗಿದೆ
- ಕೃತ್ಯ ನಡೆಸಲು ಬಳಿಸಿದ ಕಾರು ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ