/newsfirstlive-kannada/media/post_attachments/wp-content/uploads/2024/06/pavitra-gowda-1-1.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಜಾ ಮಾಡಿದೆ. ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲನೇಯವರಾಗಿ ಬೇಲ್ಗೆ ಅಪ್ಲೇ ಮಾಡಿದ್ದರು. ಆದರೆ ಕೋರ್ಟ್ ವಜಾ ಮಾಡಿ ಆದೇಶ ನೀಡಿದೆ. ಇದಕ್ಕೆ ಕಾರಣಗಳು ಈ ಕೆಳಕಂಡಂತೆ ಇವೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ ಶಾಕ್.. ಕೋರ್ಟ್ನಿಂದ ಜಾಮೀನು ಅರ್ಜಿ ವಜಾ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾಗೌಡ ಇನ್ನು ಹಲವು ದಿನಗಳು ಇರಬೇಕಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬೇಲ್ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಿಚಾರಣೆ ಮಾಡಿದೆ. ಈ ವೇಳೆ ಅರ್ಜಿಯನ್ನು ಪರಿಶೀಲನೆ ಮಾಡಿದ ಕೋರ್ಟ್ ಬೇಲ್ ನೀಡಲು ನಿರಾಕರಿಸಿದೆ. ಇದಕ್ಕೆ ಕೆಲವು ಕಾರಣಗಳನ್ನ ನೀಡಲಾಗಿದೆ.
ಇದನ್ನೂ ಓದಿ: ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?
- ಮಹಿಳೆಯಾಗಿದ್ದರಿಂದ ಜಾಮೀನು ನೀಡಿಲ್ಲ
- ಮಾಡಿರುವಂತ ಪ್ರಕರಣ ಅತ್ಯಂತ ಭೀಕರ ಮತ್ತು ಘೋರವಾಗಿದೆ
- ರೇಣುಕಾಸ್ವಾಮಿಯನ್ನು ಭಯಾನಕವಾಗಿ ಚಿತ್ರಹಿಂಸೆ ಮಾಡಲಾಗಿದೆ
- ಇಬ್ಬರು ಪ್ರತ್ಯಕ್ಷದರ್ಶಿ ಪವಿತ್ರಾಗೌಡರನ್ನು ಐಡೈಂಟಿಫೈ ಮಾಡಿದ್ದಾರೆ
- ಪ್ರಕರಣದ ವೇಳೆ ಆರೋಪಿಗಳ ಬಟ್ಟೆಯಲ್ಲಿ ಡಿಎನ್ಎ ಪತ್ತೆಯಾಗಿದೆ
- ಕೃತ್ಯ ನಡೆಸಲು ಬಳಿಸಿದ ಕಾರು ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ