/newsfirstlive-kannada/media/post_attachments/wp-content/uploads/2025/06/SIRAJ-1.jpg)
ಲೀಡ್ಸ್ ಟೆಸ್ಟ್ ಮುಗಿದಿದ್ದಾಯ್ತ. 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಮರಾಭ್ಯಾವೂ ಆರಂಭಿಸಿದ್ದಾಯ್ತು. ಟೀಮ್ ಇಂಡಿಯಾದ ಬ್ಯಾಟಿಂಗ್ ಕೊಲ್ಯಾಪ್ಸ್, ಟೀಮ್ ಮ್ಯಾನೇಜ್ಮೆಂಟ್ಗೆ ಮಾತ್ರವಲ್ಲ. ಕ್ರಿಕೆಟ್ ಅಭಿಮಾನಿಗಳ ಕನಸಲ್ಲೂ ಬೆಚ್ಚಿ ಬೀಳಿಸುತ್ತೆ.
ಬ್ಯಾಟಿಂಗ್ ವೈಫಲ್ಯದ ಬೆನ್ನಲ್ಲೇ ಜ್ಞಾನೋದಯ
ಲೀಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಆಕ್ಷರಶಃ ಗೆಲ್ಲೋ ಚಾನ್ಸ್ ಇತ್ತು. ಆ ಸುವರ್ಣಾವಕಾಶ ಕೈತಪ್ಪಲು ಕಾರಣ ಕ್ಯಾಚ್ ಡ್ರಾಪ್ ಮಾತ್ರವೇ ಅಲ್ಲ. ಟೀಮ್ ಇಂಡಿಯಾದ ಮಿಡಲ್ ಆರ್ಡರ್, ಲೋವರ್ ಆರ್ಡರ್ ಬ್ಯಾಟಿಂಗ್ ಕೊಲ್ಯಾಪ್ಸ್ ಕೂಡ ಒಂದು.
ಮೊದಲ ಇನ್ನಿಂಗ್ಸ್ನಲ್ಲಿ 41 ರನ್ ಅಂತರಕ್ಕೆ 7 ವಿಕೆಟ್, 2ನೇ ಇನ್ನಿಂಗ್ಸ್ನಲ್ಲಿ 31 ರನ್ ಅಂತರಕ್ಕೆ 6 ವಿಕೆಟ್ ಕಳೆದುಕೊಳ್ತು. ಪರಿಣಾಮ ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಎಡವಿ ಸೋಲೋಪ್ಪಿಕೊಳ್ಳಬೇಕಾಯ್ತು. ಈ ಸೋಲಿನ ಬಳಿಕ ಟೀಮ್ ಇಂಡಿಯಾಗೆ ಜ್ಞಾನೋದಯವಾಗಿದೆ.
ಇದನ್ನೂ ಓದಿ: ಸಾಲು ಸಾಲು ಸೋಲು.. ಹೆಡ್ ಕೋಚ್ ಗೌತಮ್ ಗಂಭೀರ್ ಸಹಾಯಕ ಸಿಬ್ಬಂದಿ ಏನ್ ಮಾಡ್ತಿದ್ದಾರೆ?
ಎಡ್ಜ್ ಬಾಸ್ಟನ್ನಲ್ಲಿ ಸಿರಾಜ್ ಬ್ಯಾಟಿಂಗ್ ಅಭ್ಯಾಸ
ಎಡ್ಜ್ ಬಾಸ್ಟನ್ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಈ ನಿಟ್ಟಿನಲ್ಲಿ ಆಟಗಾರರು ಎಲ್ಲಾ ಅಭ್ಯಾಸದ ಅಖಾಡಕ್ಕಿಳಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ಮಾತ್ರ, ಬಾಲ್ ಬದಲಿಗೆ ಬ್ಯಾಟ್ ಹಿಡಿದು ಬ್ಯಾಟಿಂಗ್ ಅಭ್ಯಾಸದತ್ತ ದೃಷ್ಟಿ ನೆಟ್ಟಿದ್ದಾರೆ.
ಬೌನ್ಸರ್ಗಳ ಮೇಲೆ ಮೊಹಮ್ಮದ್ ಸಿರಾಜ್ ದೃಷ್ಟಿ
ಬ್ಯಾಟ್ ಹಿಡಿದು ಅಭ್ಯಾಸ ನಡೆಸ್ತಿದ್ದ ಸಿರಾಜ್ಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಸಹಾಯಕ ಕೋಚ್ ರಿಯಾನ್ ಟೆನ್ ಡೆಸ್ಕೋಟ್ ಸಾಥ್ ನೀಡಿದ್ರು. ಪ್ರಮುಖವಾಗಿ ಬೌನ್ಸರ್ ಎಸೆತಗಳ ಮೇಲೆಯೇ ಫೋಕಸ್ ಮಾಡಿದರು. ಇಂಗ್ಲೆಂಡ್ ಕಂಡೀಷನ್ಸ್ಗೆ ಹೊಂದಿಕೊಳ್ಳುವ ನಿಟ್ಟಿನಲ್ಲೇ ಅಭ್ಯಾಸ ನಡೆಸಿದ್ದಾರೆ.
ಸ್ಪೆಷಲ್ ಪ್ರಾಕ್ಟೀಸ್.. ಸಿತಾಂಶು ಕೊಟಕ್ ಟಿಪ್ಸ್
ಅಭ್ಯಾಸದ ವೇಳೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಮಹತ್ವದ ಟಿಪ್ಸ್ ನೀಡಿದ್ರು. ಪ್ರಮುಖವಾಗಿ ಬಾಲ್ ಡಿಫೆನ್ಸ್ ಜೊತೆಗೆ ದೇಹದತ್ತ ಮುನ್ನುಗ್ಗಿಬರುವ ಚೆಂಡುಗಳನ್ನು ಎದುರಿಸುವ ಕುರಿತು ಮಹತ್ವದ ಸಲಹೆ ನೀಡಿದ್ರು. ನಂತರ ಸಿರಾಜ್ ದೇಹದತ್ತಲೇ ಚೆಂಡನ್ನು ಎಸೆಯುವ ಮೂಲಕ ಸ್ಪೆಷಲ್ ಟ್ರೈನಿಂಗ್ ನೀಡಿದ್ರು. ಆ ಮೂಲಕ 2ನೇ ಟೆಸ್ಟ್ನಲ್ಲಿ ಬ್ಯಾಟ್ನಿಂದ ಕಾಣಿಕೆ ನೀಡುವ ನಿಟ್ಟಿನಲ್ಲಿ ಸಿರಾಜ್ ಸಜ್ಜಾಗ್ತಿದ್ದಾರೆ.
ಇದನ್ನೂ ಓದಿ: 27 ಶತಕ, 31 ಅರ್ಧಶತಕ.. ಅವಕಾಶಕ್ಕಾಗಿ ಕಾಯುತ್ತಿರೋ ಯಂಗ್ ಬ್ಯಾಟರ್ ಅಭಿಮನ್ಯು!
ಸ್ಪೆಷಲ್ ಟ್ರೈನಿಂಗ್ ಹಿಂದಿದೆ ಮಾಸ್ಟರ್ ಪ್ಲಾನ್
ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಅಭ್ಯಾಸದ ಹಿಂದೆ ಮಾಸ್ಟರ್ ಪ್ಲಾನ್ ಅಡಗಿದೆ. ಯಾಕಂದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಟೈಲೆಂಡರ್ಗಳ ಆಟ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತೆ. ಕನಿಷ್ಠ 20ರಿಂದ 30 ಎಸೆತ ಎದುರಿಸಿ, 10 ರನ್ ಗಳಿಸಿದ್ರೆ ಪಂದ್ಯದ ಫಲಿತಾಂಶವೇ ಬದಲಾಗುತ್ತೆ. ಅಷ್ಟೇ ಅಲ್ಲ.! ಮತ್ತೊಂದು ಎಂಡ್ನಲ್ಲಿ ಬ್ಯಾಟರ್ ರನ್ ಗಳಿಸಲು ಸಹಾಯವಾಗುತ್ತೆ. ಆದ್ರೆ, ಮೊದಲ ಟೆಸ್ಟ್ನಲ್ಲಿ ಇದೆಲ್ಲವೂ ಹುಸಿಯಾಗಿತ್ತು. ಹೀಗಾಗಿ 2ನೇ ಟೆಸ್ಟ್ನಲ್ಲಿ ಪುನರಾವರ್ತನೆ ಆಗಬಾರದು ಎಂಬ ಕಾರಣಕ್ಕೆ ಈ ಸ್ಪೆಷಲ್ ಪ್ರ್ಯಾಕ್ಟೀಸ್ ನಡೆಸಲಾಗ್ತಿದೆ.
ಇದನ್ನೂ ಓದಿ: ಬ್ಯುಸಿನೆಸ್ ಲೋಕಕ್ಕೆ ಕೊಹ್ಲಿ ಗ್ರ್ಯಾಂಡ್ ಎಂಟ್ರಿ.. 40 ಕೋಟಿಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ