/newsfirstlive-kannada/media/post_attachments/wp-content/uploads/2025/06/CRIMINAL.jpg)
ಹೆಸರು ಅಭಿಷೇಕ್ ಅಲಿಯಾಸ್ ಶೂಟರ್. ಈತ ಮೋಸ್ಟ್ ವಾಟೆಂಡ್ ಕ್ರಿಮಿನಲ್. ಶೂಟರ್ ಎಂದೇ ಫೇಮಸ್.. ದರೋಡೆ, ಸುಲಿಗೆ.. ಕಳ್ಳತನ ಹೀಗೆ ಹತ್ತಾರು ಕೇಸ್ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಕಣ್ತಪ್ಪಿಸಿಕೊಂಡು ಓಡಾಡ್ತಿದ್ದ.. ಪೊಲೀಸರು ಆತನನ್ನು ಬಂಧಿಸಲು ಹೋದಾಗ ದೊಡ್ಡ ಹೈಡ್ರಾಮಾವೇ ಸೃಷ್ಟಿಸಿದ್ದಾನೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ಪಾಪದ ಕೆಲಸ.. ಪತ್ನಿಯ ರುಂಡ ಕಡಿದು ಠಾಣೆಗೆ ಬಂದ ಪತಿ, ಕಂದಮ್ಮ ಅನಾಥ
ಕ್ರಿಮಿನಲ್ ಹೈಡ್ರಾಮಾ!
ಕೊಲೆ, ದರೋಡೆ, ಕಿಡ್ನಾಪ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅಭಿಷೇಕ್ ಅಲಿಯಾಸ್ ಶೂಟರ್, ಬಂಧನದ ಭೀತಿಯಿಂದ ತಲೆ ಮರಿಸಿಕೊಂಡಿದ್ದ, ಕೆಲ ದಿನಗಳಿಂದ ಆರೋಪಿಯನ್ನ ಹುಡುಕುತ್ತಿದ್ದ ಪೊಲೀಸರು ಆತನ ಮನೆ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಜೊತೆಗೆ ಆರೋಪಿ ತಪ್ಪಿಸಿಕೊಳ್ಳಬಾರದು ಎಂದು ಇಡೀ ಅಪಾರ್ಟ್ಮೆಂಟ್ ಸುತ್ತ ನಾಕಬಂದಿ ವಿಧಿಸಿದ್ದರು.. ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದಾರೆ ತಿಳಿಯುತ್ತಿದ್ದಂತೆ ಆರೋಪಿ ಹೈಡ್ರಾಮಾ ಮಾಡಲು ಶುರುಮಾಡಿದ್ದಾನೆ.. ಫ್ಲಾಟ್ನ ಬಿದ್ದು ಸಾಯಿಯುವುದಾಗಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..
ಸತತ ಮೂರು ಗಂಟೆಗಳ ಕಾಲ ಆರೋಪಿ ಅಭಿಷೇಕ್, ಪೊಲೀಸರಿಗೆ ಸತಾಯಿಸಿದ್ದಾನೆ.. ಇಷ್ಟೇಲ್ಲಾ ಅಲ್ಲದೇ ನನಗೆ ಅನ್ಯಾಯ ಆಗ್ತಿದೆ ಅಂತ ಹೇಳಿ ಇನ್ಸ್ಟ್ರಾಗ್ರಾಂನಲ್ಲೂ ಲೈವ್ಗೆ ಹೋಗಿದ್ದಾನೆ.. ಅಂತಿಮವಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆತನ ಮನವೊಲಿಸಿ ಕೆಳಗಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ..
ಒಟ್ಟಿನಲ್ಲಿ.. ಇಷ್ಟು ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ತಲೆ ಮರಿಸಿಕೊಂಡು ಓಡಾಡ್ತಿದ್ದ ಆರೋಪಿ ಶೂಟರ್ ಕೊನೆಗೂ ಸಿಕ್ಕಿಬಿದಿದ್ದಾನೆ.. ಆದ್ರೆ, ಅರೆಸ್ಟ್ ಆಗ್ತೀನಿ ಅನ್ನೋ ಭಯಕ್ಕೆ ಆತ ತೆಗೆದುಕೊಂಡಿದ್ದ ನಿರ್ಧಾರ ನಿಜಕ್ಕೂ ಭಯಾನಕ.
ಇದನ್ನೂ ಓದಿ: ₹500 ನೋಟುಗಳು 2026ಕ್ಕೆ ಬ್ಯಾನ್ ಆಗುತ್ತಾ? ವೈರಲ್ ಸುದ್ದಿಗೆ ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ