/newsfirstlive-kannada/media/post_attachments/wp-content/uploads/2025/03/CSK_Nitish_Rana.jpg)
ಸೋಲು.. ಸೋಲು.. ಈ ಸೀಸನ್​ ಐಪಿಎಲ್​ನಲ್ಲಿ ಚಾಂಪಿಯನ್​ ಸೋಲಿನ ಸುಳಿಗೆ ಸಿಲುಕಿ ಒದ್ದಾಡ್ತಿದೆ. ಸತತ 4 ಸೋಲುಗಳು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಸೋಲಿನ ಹತಾಶೆಯಲ್ಲಿದ ಫ್ಯಾನ್ಸ್​ಗೆ ಗುಡ್​​ನ್ಯೂಸ್ ಹೊರ ಬಿದ್ದಿದೆ. ಐಪಿಎಲ್​ ಮಧ್ಯೆ ಚೆನ್ನೈ ಸೂಪರ್​​ ಕಿಂಗ್ಸ್​ ನಾಯಕತ್ವದಲ್ಲಿ ಬದಲಾವಣೆ ಆಗಿದೆ. ಥಲಾ ಧೋನಿ ಮತ್ತೆ ಸಿಂಹಾಸನವೇರಿದ್ದಾರೆ.
ಐಪಿಎಲ್​ ಸೀಸನ್​ 18ರ 25ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಚೆನ್ನೈನ ಚೆಪಾಕ್​ನಲ್ಲಿ ಬಿಗ್​ ಬ್ಯಾಟಲ್​ ನಡೆಯಲಿದೆ. ಕೊಲ್ಕತ್ತಾ ನೈಟ್​ ರೈಡರ್ಸ್​- ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ. ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಚೆನ್ನೈ, ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿರೋ ಕೆಕೆಆರ್​​ ಎರಡೂ ತಂಡಗಳಿಗೆ ಗೆಲುವೊಂದೇ ಗುರಿಯಾಗಿದೆ.
ಋತುರಾಜ್​ ಔಟ್​.. ಚಾಣಾಕ್ಷ ಧೋನಿ ಬ್ಯಾಕ್​..!
ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡವನ್ನ ಬಗ್ಗು ಬಡಿದು ಐಪಿಎಲ್​ ಸೀಸನ್​ 18ರಲ್ಲಿ ಶುಭಾರಂಭ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​​ ಬಳಿಕ ಸತತ ಸೋಲುಂಡಿದೆ. ಸತತ 4 ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಚೆನ್ನೈ ಡ್ರೆಸ್ಸಿಂಗ್​​ ರೂಮ್​, ಆಟಗಾರರು ಹಾಗೂ ಅಭಿಮಾನಿಗಳ ವಲಯವನ್ನ ಹತಾಶೆ ಆವರಿಸಿದೆ. ಆ ಬೇಸರದ ನಡುವೆಯೂ ಇಂದಿನ ಪಂದ್ಯಕ್ಕೂ ಮುನ್ನ ಹೊಸ ಹುರುಪು ಬಂದಿದೆ. ಚಾಣಕ್ಷ ಧೋನಿ ಮತ್ತೆ ಚೆನ್ನೈ ಸೂಪರ್​ ಕಿಂಗ್ಸ್​ ಸಾರಥ್ಯ ವಹಿಸಿಕೊಂಡಿದ್ದಾರೆ.
ಎಲ್ಬೋ ಇಂಜುರಿಗೆ ತುತ್ತಾಗಿರುವ ಋತುರಾಜ್​ ಗಾಯಕ್ವಾಡ್​​ ಈ ಐಪಿಎಲ್​ನಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ಎಮ್​.ಎಸ್​ ಧೋನಿ ಮತ್ತೆ ಸಿಎಸ್​ಕೆ ತಂಡದ ನಾಯಕನ ಪಟ್ಟವೇರಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಧೋನಿ ಚೆನ್ನೈ ತಂಡವನ್ನ ಮುನ್ನಡೆಸಲಿದ್ದಾರೆ. 5 ಬಾರಿ ತಂಡವನ್ನ ಚಾಂಪಿಯನ್​ ಮಾಡಿದ ಧೋನಿ ಮತ್ತೆ ನಾಯಕನ ಗಾದಿಗೇರಿರೋದು ಇಡೀ ತಂಡದಲ್ಲಿ ಹೊಸ ಹುರುಪು ತಂದಿದೆ. ಗೆಲುವಿನ ಟ್ರ್ಯಾಕ್​​​​ಗೆ ಮರಳೋ ವಿಶ್ವಾಸಮೂಡಿದೆ.
1 ಗೆಲುವು, 4 ಸೋಲು.. ಪ್ಲೇ ಆಫ್​ ಹಾದಿ ಕಠಿಣ.!
ಸಿಎಸ್​ಕೆ ಸಿಂಹಾಸನ ಏರಿರುವ ಕೂಲ್​ ಕ್ಯಾಪ್ಟನ್​ ಮುಂದೆ ಸದ್ಯ ಸಾಲು ಸಾಲು ಸವಾಲುಗಳಿವೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೋ ಇನ್​ಕನ್ಸಿಸ್ಟೆನ್ಸಿ ಚೆನ್ನೈ ತಂಡವನ್ನ ಕಾಡ್ತಿದೆ. ಫೀಲ್ಡಿಂಗ್​ ಅಂತೂ ಅಧೋಗತಿಗೆ ತಲುಪಿದೆ. ಆಟಗಾರರಲ್ಲಿ ಆತ್ಮವಿಶ್ವಾಸ ಕಳೆದುಹೋಗಿದೆ. ಈ ಎಲ್ಲವನ್ನೂ ರೈಟ್​​ ಟ್ರ್ಯಾಕ್​​​ಗೆ ತರೋ ದೊಡ್ಡ ಸವಾಲು ಧೋನಿಯ ಮುಂದಿದೆ. ಆಡಿದ 1 ಪಂದ್ಯದಲ್ಲಿ ಮಾತ್ರ ಗೆದ್ದು 4 ಪಂದ್ಯ ಸೋತಿರುವ ಚೆನ್ನೈ ತಂಡದ ಪ್ಲೇ ಆಫ್​ ಹಾದಿ ಸುಲಭದ್ದಂತೂ ಅಲ್ಲ. ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲುವು ಬೇಕಿದೆ. ಗೆಲುವಿನ ಜೊತೆಗೆ ಮೈನಸ್ ಆಗಿರೋ ರನ್​ರೇಟ್​ನೂ ಪ್ಲಸ್​​ ಮಾಡಿಕೊಳ್ಳಬೇಕಿದೆ.
ಫಿನಿಕ್ಸ್​ನಂತೆ ಕಮ್​ಬ್ಯಾಕ್​ ಮಾಡುತ್ತಾ ಸಿಎಸ್​ಕೆ.?
ಆಟಗಾರರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದು, ಫಾರ್ಮ್​​ನಲ್ಲಿ ಇಲ್ಲದಿರೋ ಆಟಗಾರರಿಂದ ಪರ್ಫಾಮೆನ್ಸ್​ ಹೊರ ತೆಗೆಯೋದ್ರಲ್ಲಿ ಧೋನಿ ಚಾಣಕ್ಯ ಅನ್ನೋದು ಇಡೀ ಕ್ರಿಕೆಟ್​ ಲೋಕಕ್ಕೆ ಗೊತ್ತಿರೋ ವಿಚಾರ. ಹೀಗಾಗಿ ಪಾಯಿಂಟ್ಸ್​ ಟೇಬಲ್​​ನಲ್ಲಿ 9ನೇ ಸ್ಥಾನದಲ್ಲಿರೋ ಚೆನ್ನೈ ಫಿನಿಕ್ಸ್​ನಂತೆ ಎದ್ದು ಬಂದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ಗೆರೆ ಎಳೆದು ಬ್ಯಾಟ್ ಕುಟ್ಟಿ ಅಗ್ರೆಸನ್.. ಕಾಂತಾರ ಸ್ಟೈಲ್​ ಸಂಭ್ರಮದ ಬಗ್ಗೆ ರಾಹುಲ್ ಏನಂದ್ರು..?
ಚೆನ್ನೈನ ಎದುರಾಳಿ ಕೆಕೆಆರ್​​ ಪರಿಸ್ಥಿತಿ ಏನು ತುಂಬಾ ಭಿನ್ನವಾಗಿಲ್ಲ. ಹಾಲಿ ಚಾಂಪಿಯನ್​ ತಂಡವನ್ನ ಇನ್​​ಕನ್ಸಿಸ್ಟೆನ್ಸಿ ಆವರಿಸಿದೆ. ಆಡಿದ 5 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಗೆದ್ದಿರುವ ಕೆಕೆಆರ್​​ 3 ಪಂದ್ಯಗಳನ್ನ ಸೋತಿದೆ. ಆಟಗಾರರು ಹೇಳಿಕೊಳ್ಳುವಂತಾ ಪರ್ಫಾಮೆನ್ಸ್​ ನೀಡಿಲ್ಲ. ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ ಸ್ಥಾನಿಯಾಗಿರೋ ಕೆಕೆಆರ್​ ಪಾಲಿಗೂ ಇಂದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಒಂದೊಳ್ಳೆ ಬ್ಯಾಟಲ್​ನ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಸತತ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್​ಕೆ ಇಂದು ಹೊಸ ಹುರುಪಿನಲ್ಲಿ ಕಣಕ್ಕಿಳಿಯಲಿದೆ. ಬೇಸರಗೊಂಡ ಸಿಎಸ್​ಕೆ ಫ್ಯಾನ್ಸ್​​ ಕೂಡ​ ಸ್ಟೇಡಿಯಂಗೆ ಹೊಸ ಕನಸಿನೊಂದಿಗೆ ಬರಲಿದ್ದಾರೆ. ಚೆಪಾಕ್​ ಸ್ಟೇಡಿಯಂ ಸಂಪೂರ್ಣ ಯೆಲ್ಲೋಮಯ ಆಗೋದ್ರಲ್ಲಿ ನೋ ಡೌಟ್​. ಆದ್ರೆ, ಚೆನ್ನೈ ಗೆಲುವಿನ ಹಳಿಗೆ ಮರಳುತ್ತಾ ಅನ್ನೋದೆ ಬಿಗ್​ ಕೊಶ್ಚನ್​​.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ