/newsfirstlive-kannada/media/post_attachments/wp-content/uploads/2024/05/VIRAT_KOHLI-5.jpg)
IPLನ 68ನೇ ಹಾಗೂ ಕೊನೆ ಪಂದ್ಯ ಆರ್ಸಿಬಿ ಮತ್ತು ಸಿಎಸ್ಕೆ ಮಧ್ಯೆ ನಡೆಯುತ್ತಿದ್ದು ಅಭಿಮಾನಿಗಳೆಲ್ಲ ಕುತೂಹಲದಿಂದ ಇದ್ದಾರೆ. ಈ ಪಂದ್ಯ ಯಾವ ಟೀಮ್ ಗೆಲ್ಲೋತ್ತೋ ಅದು ಕೆಕೆಆರ್, ಆರ್ಆರ್ ಹಾಗೂ ಹೈದ್ರಾಬಾದ್ ಜೊತೆ ಪಾಯಿಂಟ್ ಟೇಬಲ್ನಲ್ಲಿ ಸ್ಥಾನ ಪಡೆದುಕೊಳ್ಳಲಿದೆ. ಆದರೆ ಬೆಂಗಳೂರು ವಿರುದ್ಧ ಚೆನ್ನೈ ಗೆದ್ದರೇ ದಾಖಲೆ ಆಗುತ್ತದೆ ಎಂದು ಹೇಳಲಾಗುತ್ತದೆ. ಅದು ಏನೆಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ
ಒಂದು ವೇಳೆ ವರುಣಾರ್ಭಟದಿಂದ ಫ್ಲೇ ಆಪ್ ಮ್ಯಾಚ್ ವಾಶ್ಔಟ್ ಆದರೆ ಸಿಎಸ್ಕೆ ಹಾಗೂ ಆರ್ಸಿಬಿಗೆ ತಲಾ ಒಂದೊಂದು ಪಾಯಿಂಟ್ ನೀಡಲಾಗುತ್ತದೆ. ಈ ರೀತಿ ಪಾಯಿಂಟ್ ನೀಡಿದರೆ ಚೆನ್ನೈಗೆ ಭಾರೀ ಲಾಭವಾಗಿ ಪ್ಲೇ ಆಫ್ಗೆ ಹೋಗುತ್ತದೆ. ಏಕೆಂದರೆ ರನ್ರೇಟ್ನಲ್ಲಿ ಬೆಂಗಳೂರಿಗಿಂತ ಚೆನ್ನೈ ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಮಳೆ ಬರಬಾರದು ಎನ್ನುವುದು ಆರ್ಸಿಬಿ ಫ್ಯಾನ್ಸ್ ಪ್ರಾರ್ಥನೆ ಆಗಿದೆ. ಜೊತೆಗೆ ಇಲ್ಲಿ ಎಂ ಚಿನ್ನಸ್ವಾಮಿಯಲ್ಲಿ ರುತುರಾಜ್ ಗಾಯಕ್ವಾಡ್ ಪಡೆ ಮ್ಯಾಚ್ ಗೆದ್ದುಕೊಂಡರೆ ಚೆನ್ನೈ ಟೀಮ್ ದಾಖಲೆ ಮಾಡಿದಂತೆ ಆಗುತ್ತದೆ.
ಇದನ್ನೂ ಓದಿ:RCB ಫ್ಯಾನ್ಸ್ಗೆ ಗುಡ್ನ್ಯೂಸ್, ಭಯ ಬೇಡ.. ಮಳೆ ಬಂದ್ರು ಚಿನ್ನಸ್ವಾಮಿಯಲ್ಲಿದೆ ಈ ಅತ್ಯುನ್ನತ ತಂತ್ರಜ್ಞಾನ; ಏನದು?
ಚೆನ್ನೈ ತಂಡದ ದಾಖಲೆ ಹೇಗೆ ಆಗುತ್ತದೆ ಎಂದರೆ, ಸಿಲಿಕಾನ್ ಸಿಟಿಯ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಲ್ಲಿವರೆಗೆ ಆರ್ಸಿಬಿ- ಚೆನ್ನೈ 10 ಪಂದ್ಯಗಳನ್ನು ಆಡಿವೆ. ಈ 10 ಪಂದ್ಯಗಳಲ್ಲಿ ಆರ್ಸಿಬಿ 4 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ರದ್ದು ಆಗಿದ್ದರೇ, ಉಳಿದ 5 ಮ್ಯಾಚ್ಗಳನ್ನು ಚೆನ್ನೈ ಟೀಮ್ ಗೆದ್ದುಕೊಂಡಿದೆ. ಹೀಗಾಗಿ ನಾಳೆ ನಡೆಯುವ ಪ್ಲೇ ಆಫ್ ಮ್ಯಾಚ್ನಲ್ಲಿ ಚಿನ್ನಸ್ವಾಮಿಯಲ್ಲಿ ಚೆನ್ನೈ ಗೆದ್ರೆ ಒಟ್ಟು ಬೆಂಗಳೂರು ವಿರುದ್ಧ 6 ಪಂದ್ಯಗಳನ್ನು ಗೆದ್ದಂತೆ ಆಗುತ್ತದೆ. ಹೀಗಾಗಿ ಇದು ಚೆನ್ನೈ ತಂಡ ರೆಕಾರ್ಡ್ ಮಾಡಿದಂತೆ ಆಗುತ್ತದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ