ಚೆನ್ನೈ ತಂಡದಲ್ಲಿ ಹೊಂಚು ಹಾಕಿ ಕುಳಿತ ಬಾಂಬೆ ಬಾಯ್ಸ್​​.. ಪಂದ್ಯದ ವೇಳೆ ಆರ್​ಸಿಬಿಗೆ ವಿಲನ್ ಆಗ್ತಾರಾ..!

author-image
Bheemappa
Updated On
ಚೆನ್ನೈ ತಂಡದಲ್ಲಿ ಹೊಂಚು ಹಾಕಿ ಕುಳಿತ ಬಾಂಬೆ ಬಾಯ್ಸ್​​.. ಪಂದ್ಯದ ವೇಳೆ ಆರ್​ಸಿಬಿಗೆ ವಿಲನ್ ಆಗ್ತಾರಾ..!
Advertisment
  • RCB ಪಾಲಿಗೆ ಮುಳ್ಳಾಗಲು ಚೆನ್ನೈ ಸೂಪರ್ ಕಿಂಗ್ಸ್ ರಣತಂತ್ರ
  • ಸಿಎಸ್​ಕೆಯಲ್ಲಿರೋ ಬಾಂಬೆ ಬಾಯ್ಸ್​ ಮ್ಯಾಚ್ ಗೆಲ್ಸಿ ಕೊಡ್ತಾರಾ?
  • ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿ ರಾಯಲ್ ಚಾಲೆಂಜರ್ಸ್​

ಒಂದು ಸ್ಲಾಟ್​.. ಎರಡು ತಂಡಗಳ ಹಣಾಹಣಿ.. ಇಲ್ಲಿ ಗೆದ್ದೋನೆ ಬಾಸ್.. ಇಲ್ಲಿ ಆರ್​ಸಿಬಿ ಬಾಸ್ ಆಗೋ ಕನಸು ಕಾಣ್ತಿದೆ. ಆದ್ರೆ, ಹೊಂಚು ಹಾಕಿ ಕುಳಿತಿರುವ ಆ ಬಾಂಬೆ ಬಾಯ್ಸ್, ಆರ್​ಸಿಬಿ ಪಾಲಿಗೆ ವಿಲನ್ ಆಗೋಕೆ ಹೊರಟ್ಟಿದ್ದಾರೆ. ಶತಕ ಗತಾಯ ಆರ್​ಸಿಬಿ ಕನಸು ಭಗ್ನಗೊಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅವಱರು?

ಆರ್​ಸಿಬಿ, ಚೆನ್ನೈ ಬ್ಯಾಟಲ್​​ಗೆ ಕ್ಷಣಗಣನೆ ಆರಂಭವಾಗಿದೆ. ಶತಯಾ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಉಭಯ ತಂಡಗಳು, ರನ್​ಭೂಮಿಯ ರನ್ ಬ್ಯಾಟಲ್​ಗೆ ಧುಮುಕುತ್ತಿವೆ. ಆದ್ರೆ, ಈ ರನ್ ಬ್ಯಾಟಲ್​ನಲ್ಲಿ ರಾಯಲ್​ ಚಾಲೆಂಜರ್ಸ್ ಪಾಲಿಗೆ ಮುಳ್ಳಾಗಲು ಚೆನ್ನೈ ಸೂಪರ್ ಕಿಂಗ್ಸ್ ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲೇ ಹೋಮ್​ ವರ್ಕ್​ ಮುಗಿಸಿರೋ ಚೆನ್ನೈ, ಇಂದು ಚಿನ್ನಸ್ವಾಮಿಯ ಅಖಾಡದಲ್ಲಿ ಆರ್​​ಸಿಬಿ ಎದುರು ಗೆಲ್ಲೋ ಭರವಸೆಯಲ್ಲಿದೆ. ಇದಕ್ಕೆಲ್ಲ ಕಾರಣ ಬಾಂಬೆ ಬಾಯ್ಸ್​.

ಇದನ್ನೂ ಓದಿ:RCB vs CSK ಫ್ಯಾನ್ಸ್​ಗೆ ಭಾರೀ ನಿರಾಸೆ.. ಶಾಕಿಂಗ್ ನ್ಯೂಸ್ ಕೊಟ್ಟ ಭಾರತದ ಹವಾಮಾನ ಇಲಾಖೆ

publive-image

ಇಂದಿನ ಡು ಆರ್​ ಡೈ ಮ್ಯಾಚ್​ನಲ್ಲಿ ಆರ್​ಸಿಬಿ ಪ್ರತೀಕಾರಕ್ಕೆ ತೀರಿಸಿಕೊಳ್ಳುವ ತವಕದಲ್ಲಿದೆ. ಭಾರೀ ಅಂತರದ ಗೆಲುವಿನೊಂದಿಗೆ ಪ್ಲೇ ಆಫ್​​ಗೆ ಎಂಟ್ರಿ ನೀಡುವ ಕನಸು ಕಾಣ್ತಿದೆ. ಆದ್ರೆ, ಆರ್​ಸಿಬಿಯ ಈ ಕನಸಿಗೆ ಕೊಳ್ಳಿ ಇಡಲು ಐವರು ಬಾಂಬೆ ಬಾಯ್ಸ್​ ಹೊಂಚು ಹಾಕಿದ್ದಾರೆ.

ನಂಬರ್- 1:
ಋತುರಾಜ್ ರನ್ ಭರಾಟೆ.. ಆರ್​ಸಿಬಿಗೆ ತಪ್ಪಿಲ್ಲ ಅಪಾಯ ..!

ಇವತ್ತಿನ ಬಿಗ್ ಮ್ಯಾಚ್​ನಲ್ಲಿ ಆರ್​ಸಿಬಿಗೆ ಮೊದಲು​ ಥ್ರೆಟ್ ಆಗೋದೆ ಋತುರಾಜ್ ಗಾಯಕ್ವಾಡ್.. ಪ್ರಸಕ್ತ ಸೀಸನ್​ನಲ್ಲಿ ರನ್​ ಹೊಳೆ ಅರಿಸುತ್ತಿರುವ ಋತುರಾಜ್, ಪರಿಸ್ಥಿತಿಗೆ ತಕ್ಕಂತೆ ಇನ್ನಿಂಗ್ಸ್ ಬಿಲ್ಡ್​ ಮಾಡೋದ್ರಲ್ಲಿ ನಿಸ್ಸೀಮ. ಚಿನ್ನಸ್ವಾಮಿಯಂತ ಬ್ಯಾಟಿಂಗ್ ಟ್ರ್ಯಾಕ್ ಸಿಕ್ಕಿದ್ರೆ, ಬೌಲರ್​ಗಳ ಮೇಲೆ ದಂಡೆಯಾತ್ರೆ ನಡೆಸ್ತಾರೆ. ಹೀಗಾಗಿ ಇಂದು ಋತುರಾಜ್​ಗೆ ಬ್ರೇಕ್​ ಹಾಕಬೇಕಾಗಿದೆ.

ನಂಬರ್​- 2:
ಆರ್​ಸಿಬಿಯ ಮಾಜಿ ಪ್ಲೇಯರ್​​​​​​​​​​​​​​​​​​​​​​​​​ ಶಿವಂ ದುಬೆ ಥ್ರೆಟ್​?

ಆರ್​ಸಿಬಿ ಪಾಲಿನ 2ನೇ ವಿಲನ್​​​ ಶಿವಂ ದುಬೆ. ಆರ್​ಸಿಬಿಯಲ್ಲಿದ್ದಾಗ ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್​ ನೀಡದೆ ಖಳನಾಯಕನಾಗಿದ್ದ ಶಿವಂ ದುಬೆ. ಇಂದು ಆರ್​ಸಿಬಿ ಪಾಳಯದಲ್ಲಿ ಆತಂಕ ಸೃಷ್ಟಿಸಿದರು ಅಚ್ಚರಿ ಇಲ್ಲ. ಯಾಕಂದ್ರೆ, ಜಬರ್ದಸ್ತ್ ಫಾರ್ಮ್​ನಲ್ಲಿರುವ ಶಿವಂ ದುಬೆ, ಕಳೆದ 4 ಪಂದ್ಯಗಳಿಂದ ರನ್​​ ಗಳಿಸಲು ಪರದಾಡ್ತಿದ್ದಾರೆ. ಆದ್ರೆ, ಚಿನ್ನಸ್ವಾಮಿ ಪಿಚ್​ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ದುಬೆ, ಶಾರ್ಟ್​ ಬೌಂಡರಿಯ ಚಿನ್ನಸ್ವಾಮಿಯಲ್ಲಿ ಬಿಗ್ ಮ್ಯಾಚ್​ ವಿನ್ನರ್ ಅನ್ನೋದನ್ನ ಮರೆಯುವಂತಿಲ್ಲ.

ನಂಬರ್- 3:
ಸ್ಲಾಗ್ ಆ್ಯಂಡ್ ಡೆತ್​​ನಲ್ಲಿ ಶಾರ್ದೂಲ್ ಕಂಟಕ

ಬೌಲಿಂಗ್​ ಡಿಪಾರ್ಟ್​ಮೆಂಟ್​ನಲ್ಲಿ ಪ್ರಮುಖರ ಅಲಭ್ಯತೆ ಚೆನ್ನೈಗೆ ಕಾಡ್ತಿದೆ ನಿಜ. ಆದ್ರೆ, ಶಾರ್ದೂಲ್ ಠಾಕೂರ್ ಎಂಬ ಮಲ್ಟಿ ಸ್ಪೆಷಾಲಿಟಿ ಪ್ಲೇಯರ್, ಚಿನ್ನಸ್ವಾಮಿಯಲ್ಲಿ ಬಿಗ್ ಮ್ಯಾಚ್​ ವಿನ್ನರ್ ಆಗಬಲ್ಲರು. ಸ್ಲೋವರ್ ಬಾಲ್​ಗಳ ಮೂಲಕ ಬೌಲಿಂಗ್​​ನಲ್ಲಿ ಬ್ರೇಕ್ ಥ್ರೂ ನೀಡಬಲ್ಲ ಶಾರ್ದೂಲ್, ಸಂಕಷ್ಟದ ವೇಳೆ ಬ್ಯಾಟಿಂಗ್​ನಲ್ಲಿ ಗೇಮ್ ಚೇಜಿಂಗ್ ಪರ್ಫಾಮೆನ್ಸ್ ನೀಡಬಲ್ಲರು ಅನ್ನೋದು ಮರೆಯುವಂತಿಲ್ಲ.

ನಂಬರ್- 4:
ಕ್ಯಾಮಿಯೋ ರೋಲ್​ ರಹಾನೆ..!

ಪ್ರಸಕ್ತ ಆವೃತ್ತಿಯಲ್ಲಿ ಮುಂಬೈಕರ್​ ರಹಾನೆ, ಬ್ಯಾಟ್ ಝಳಪಿಲ್ಲ ನಿಜ. ಹೀಗಂತ ರಹಾನೆಯನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ, ಇಂಪ್ಯಾಕ್ಟ್​ ಪ್ಲೇಯರ್ ಆಗಿ ರಹಾನೆ ಎಂಟ್ರಿ ನೀಡಿದ್ರೂ, ಬಿಗ್ ಇಂಪ್ಯಾಕ್ಟ್​ ಮಾಡಬಲ್ಲರು. ಇದಿಷ್ಟೇ ಅಲ್ಲ, ಫೀಲ್ಡರ್ ಆಗಿ ಕಷ್ಟಕರ ಕ್ಯಾಚ್ ಜೊತೆಗೆ ಬೌಂಡರಿಗಳನ್ನ ತಡೆಯುವ ರಹಾನೆ, ಎದುರಾಳಿ ತಂಡದ ಮೇಲೆ ಪರೋಕ್ಷ ಒತ್ತಡ ಹೇರಬಲ್ಲರು.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್.. ಸಿಎಸ್​ಕೆ ವಿರುದ್ಧ ಪಂದ್ಯ ನಡೆಯುವ ಮೊದಲೇ ವಿಘ್ನ.. ವಿಘ್ನ..!

publive-image

ನಂಬರ್- 5:
ಪವರ್ ಪ್ಲೇನಲ್ಲಿ ತುಷಾರ ದೇಶಪಾಂಡೆ ಥ್ರೆಟ್..!

ತುಷಾರ ದೇಶಪಾಂಡೆ.. ಚೆನ್ನೈ ತಂಡದ ಬೌಲಿಂಗ್ ಶಕ್ತಿ. ಪ್ರಸಕ್ತ ಸೀಸನ್​ನಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿರುವ ದೇಶಪಾಂಡೆ, 12 ಪಂದ್ಯಗಳಿಂದ 16 ವಿಕೆಟ್ ಉರುಳಿದ್ದಾರೆ. ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಹಾಕೋ ತುಷಾರ, ಡೆತ್ ಓವರ್​ಗಳಲ್ಲೂ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಚೆನ್ನೈ ತಂಡದ ಲೀಡಿಂಗ್ ವಿಕೆಟ್ ಟೇಕರ್ ಆಗಿರೋ ತುಷಾರ, ಆರ್​ಸಿಬಿ ದಿಕ್ಕು ತಪ್ಪಿಸಬೇಕಿದೆ. ಇಲ್ಲ ಗೆಲುವು ಕಬ್ಬಿಣದ ಕಡಲೇಯೇ ಆಗಿದೆ.  ಮಹಾರಾಷ್ಟ್ರ ಮೂಲದ ಈ ಐವರೇ, ಸದ್ಯ ಚೆನ್ನೈ ತಂಡದ ಶಕ್ತಿಯಾಗಿದ್ದಾರೆ. ಇವ್ರನ್ನ ಆರ್​ಸಿಬಿ ಟ್ಯಾಕಲ್ ಮಾಡಿದ್ರೆ, ಇಂದು ಗೆಲುವಿನ ದಡ ಸೇರೋದ್ರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment