/newsfirstlive-kannada/media/post_attachments/wp-content/uploads/2025/03/TANISHKA-JEWELLERY.jpg)
ದರೋಡೆಕೋರರ ಗುಂಪೊಂದು ತನಿಷ್ಕಾ ಶೋರೂಂಗೆ ನುಗ್ಗಿ ಸಿಬ್ಬಂದಿ ಹಾಗೂ ಗ್ರಾಹಕರನ್ನು ಗನ್​ ಪಾಯಿಂಟ್​ನಲ್ಲಿಟ್ಟು 25 ಲಕ್ಷದ ಚಿನ್ನಾಭರವಣವನ್ನು ದೋಚಿ ಸಿನಿಮಿಯ ರೀತಿಯಲ್ಲಿ ಎಸ್ಕೇಪ್ ಆದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಒಂದು ಘಟನೆ ಬಿಹಾರದ ಅರಾ ಎಂಬಲ್ಲಿ ನಡೆದಿದೆ. ಹೀಗೆ ಚಿನ್ನಾಭರಣ ದೋಚಿಕೊಂಡು ದರೋಡೆಕೋರರು ಅವರನ್ನು ಹಿಡಿಯಲು ಹಿಂದೆ ಬಿದ್ದ ಪೊಲೀಸರೊಂದಿಗೆ ಗುಂಡಿನ ಚಕಮಕಿ ಮಾಡಿದ್ದಾರೆ. ಈ ಎನ್​ಕೌಂಟರ್​ನಲ್ಲಿ ಇಬ್ಬರು ಕ್ರಿಮಿನಲ್​ಗಳು ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ಶೋರೂಂ ಓಪನ್ ಆದ ವೇಳೆ ಕೆಲವು ಗ್ರಾಹಕರು ಹಾಗೂ ಒಂದಿಷ್ಟು ಸಿಬ್ಬಂದಿಗಳು ಸೇರಿದ್ದರು. ಐದರಿಂದ ಆರು ಜನರು ಮುಖಕ್ಕೆ ಮಾಸ್ಕ್ ಮತ್ತು ಹೆಲ್ಮೆಟ್​ ಹಾಕಿಕೊಂಡು ಶೋರೂಂಗೆ ನುಗ್ಗಿದ್ದಾರೆ. ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಗುಂಪು. ಅಲ್ಲಿರುವ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಕೈ ಮೇಲೆತ್ತಿಕೊಂಡು ಇರಲು ಧಮ್ಕಿ ಹಾಕಿದ್ದಾರೆ.
25 करोड़ की लूट।
बिहार के आरा के "तनिष्क " शोरूम में इस बड़ी लूट को अंजाम दिया गया।#तनिष्क#tanishqpic.twitter.com/0tjOGxgIOD— Ravindra Singh Sheoran (@TellingRavindra)
25 करोड़ की लूट।
बिहार के आरा के "तनिष्क " शोरूम में इस बड़ी लूट को अंजाम दिया गया।#तनिष्क#tanishqpic.twitter.com/0tjOGxgIOD— Ravindra Singh Sheoran (@TellingRavindra) March 10, 2025
">March 10, 2025
ದರೋಡೆಕೋರರರು ಶೋಕೇಸ್​ನಲ್ಲಿರುವ ಚಿನ್ನಾಭರಣದ ಬಾಕ್ಸ್​ಗಳನ್ನು ತಮ್ಮ ಬ್ಯಾಗ್​​ಗೆ ತುಂಬಿಕೊಳ್ಳುತ್ತಿರುವಾಗ. ಶೋರೂಂನ ಸಿಬ್ಬಂದಿಯೊಬ್ಬರು ಆ ಸುಮ್ಮನೆ ನೆಡದುಕೊಂಡು ಹೋಗಿದ್ದಾರೆ. ಹಾಗೆ ಬಂದ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದೆ ದರೋಡೆಕೋರರರ ಗ್ಯಾಂಗ್. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇನ್ನು ಶೋರೂಂ ಸೆಕ್ಯೂರಿಟಿ ಗಾರ್ಡ್​​ನ ಕೈಯಲ್ಲಿದ್ದ ಗನ್​ನ್ನು ಕೂಡ ಕಿರಾತಕರು ತಮ್ಮ ವಶಕ್ಕೆ ಪಡೆದುಕೊಂಡು ಅಲ್ಲಿದ್ದವರನ್ನೆಲ್ಲಾ ಗನ್​ ಪಾಯಿಂಟ್​​ನಲ್ಲಿಟ್ಟು ಹೆದರಿಸಿ 25 ಲಕ್ಷದ ಚಿನ್ನಾಭರಣ ದೋಚಿದ್ದಾರೆ.
ಇದನ್ನೂ ಓದಿ:ಓಪನ್ ಪ್ಲೇಸ್ನಲ್ಲಿ ಮಾಡೆಲ್​ಗಳ ವಯ್ಯಾರಕ್ಕೆ ಬೆಚ್ಚಿ ಬಿದ್ದ ಕಾಶ್ಮೀರ! ಫ್ಯಾಷನ್ ಶೋಗೆ ವಿರೋಧ ಯಾಕೆ?
ತನಿಷ್ಕಾ ಶೋರೂಂನಿಂದ ಪೊಲೀಸ್ ಠಾಣೆ ಕೇವಲ 600 ಮೀಟರ್ ದೂರದಲ್ಲಿದೆ. 20 ರಿಂದ 30 ಬಾರಿ ಕಾಲ್ ಮಾಡಿದರು ಅವರು ಈ ಕಡೆ ಸುಳಿಯಲಿಲ್ಲ. ಅರ್ಧ ಗಂಟೆಯ ಮೇಲೆ ಶೋರೂಂಗೆ ಬಂದರು. ಅಷ್ಟರಲ್ಲಿ ರಾಬರ್ಸ್​ ಎಸ್ಕೇಪ್ ಆಗಿದ್ದರು ಎಂದು ಶೋರೂಂನ ಸಿಬ್ಬಂದಿ ಸಿಮ್ರನ್ ಹೇಳಿದ್ದಾರೆ.
ಇದನ್ನೂ ಓದಿ: Gold rate: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ ಆಗಿವೆ.. ಇತ್ತೀಚೆಗಿನ ದರ ಎಷ್ಟಿದೆ..?
ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಕಿರಾತಕರು ಅರಾ ಪೊಲೀಸರ ಎನ್​ಕೌಂಟರ್​ನಲ್ಲಿ ಗಾಯಗೊಡಿದ್ದಾರೆ. ಇನ್ನುಳಿದವರನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಂಡು ಹಿಡಿಯಲಾಗುವುದು ಸದ್ಯದಲ್ಲಿಯೇ ಅವರನ್ನು ಕೂಡ ಬಂಧಿಸಲಾಗುವುದು ಎಂದು ಭೋಜಪುರ್​ದ ಎಸ್​ಪಿ ರಾಜ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us