/newsfirstlive-kannada/media/post_attachments/wp-content/uploads/2025/05/RCB_IPL_WIN.jpg)
ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್- 18 ಕೊನೆ ಹಂತಕ್ಕೆ ಬಂದಿದೆ. ಇನ್ನೇನು ಲೀಗ್ ಮ್ಯಾಚ್ಗಳು ಮುಗಿಯುವ ಹಂತಕ್ಕೆ ಬಂದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇನ್ನೆರಡು ಪಂದ್ಯಗಳು ಇವೆ. ಪ್ಲೇ ಆಫ್ಗೆ ಎಂಟ್ರಿಕೊಟ್ಟಿರುವ ಆರ್ಸಿಬಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಭರವಸೆಯಲ್ಲಿದೆ. ಅದರಂತೆ ಈ ಸಲ ಆರ್ಸಿಬಿ ಕಪ್ ಗೆಲ್ಲಲೇಬೇಕು ಅಂತ ಅಭಿಮಾನಿಯೊಬ್ಬರು ಬೆಂಗಳೂರಿನಿಂದ ಸೈಕಲ್ ಯಾತ್ರೆಯಲ್ಲಿ ತೆರಳಿದ್ದಾರೆ.
ಈ ಕುರಿತು ಮಾತನಾಡಿದ ಸೈಕಲ್ ಯಾತ್ರೆ ಮಾಡುತ್ತಿರುವ ಆರ್ಸಿಬಿಯ ಅಭಿಮಾನಿ, ಈ ಸಲ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂದು ಬೆಂಗಳೂರಿನಿಂದ ಅಂಜಾನಾದ್ರಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. 18ನೇ ಸೀಸನ್ನಲ್ಲಿ ಕಪ್ ಗೆಲ್ಲಲಿ ಎಂದು ದೇವಾಸ್ಥಾನಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಿಂದ 260 ಕಿಲೋ ಮೀಟರ್ ದೂರ ಬಂದಿದ್ದೇನೆ. ಇನ್ನೂ 176 ಕಿಲೋ ಮೀಟರ್ ದೂರ ಸೈಕಲ್ನಲ್ಲಿ ಹೋಗಿ ಅಂಜನಾದ್ರಿ ಬೆಟ್ಟ ತಲುಪುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:RCB ಟೀಮ್ಗೆ ರಣಬೇಟೆಗಾರ ಎಂಟ್ರಿ.. ಸ್ಪೀಡ್ಸ್ಟರ್ ಮಾರಕಕ್ಕೆ ಎದುರಾಳಿ ಉಡೀಸ್ ಪಕ್ಕಾ!
ಅಂಜನಾದ್ರಿ ಬೆಟ್ಟ ತಲುಪಿದ ಮೇಲೆ ಆರ್ಸಿಬಿ ಟ್ರೋಫಿ ಗೆಲ್ಲಲಿ ಎಂದು ವಿಶೇಷವಾದ ಪೂಜೆ ಮಾಡಿಸುತ್ತೇನೆ. ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಈಗಾಗಲೇ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಯಾಗಿದೆ. ಕಪ್ ಗೆಲ್ಲುವುದೊಂದೆ ಬಾಕಿ ಇದೆ. ಈ ಸಲ ಕಪ್ ಹೊಡೆದೇ ಹೊಡೆಯುತ್ತೆ. ನನ್ನ ಫೇವರಿಟ್ ಪ್ಲೇಯರ್ ವಿರಾಟ್ ಕೊಹ್ಲಿ. ಅವರ ಅಗ್ರೆಸ್ಸೀವ್ ಎಂದರೆ ತುಂಬಾ ಇಷ್ಟ. ಸ್ಟೇಡಿಯಂಗೆ ಹೋದಾಗ ವಿರಾಟ್ ಕೊಹ್ಲಿ ಅವರನ್ನೇ ಹೆಚ್ಚು ನೋಡುತ್ತೇನೆ. ಅವರು ಪ್ರತಿಯೊಂದು ಬಾಲ್ಗೂ ಇಂಪಾರ್ಟೆಂಟ್ ಕೊಡುತ್ತಾರೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಗಳಿಸಿದ್ದಾರೆ. ಇಲ್ಲಿವರೆಗೆ ನಡೆದ ಪಂದ್ಯಗಳಿಂದ 505 ರನ್ ಗಳಿಸಿದ್ದಾರೆ. ಅದರಂತೆ ತಂಡದಲ್ಲಿ ಜೋಶ್ ಹ್ಯಾಜಲ್ವುಡ್ ಅವರು 18 ವಿಕೆಟ್ ಕಬಳಿಸಿ ಉತ್ತಮ ಕೊಡುಗೆ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ