newsfirstkannada.com

ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿಂದ ಕಿರಾತಕ.. ಸುಲಿಗೆ ಮಾಡ್ತಿದ್ದವನಿಂದ ಇದೆಂತ ಭಯಾನಕ ಕೃತ್ಯ!

Share :

Published July 9, 2024 at 9:32am

Update July 9, 2024 at 10:19am

    ನದಿಯ ಬಳಿ ಹೋಗಿದ್ದಾಗ ಹಾವನ್ನು ಹಿಡಿದುಕೊಂಡ ಭೂಪ

    ಒಂದು ಟೈಮ್​ನಲ್ಲಿ ಜನರನ್ನ ಸುಲಿಗೆ ಮಾಡುತ್ತಿದ್ದ ಡಕಾಯಿತ

    ಶಂಕರ್ ಗ್ಯಾಂಗ್ ಎಂದ್ರೆ ಆ ಪ್ರದೇಶದಲ್ಲಿ ಈಗಲೂ ಭಯವಿದೆ

ಲಕ್ನೋ: ನದಿಯಲ್ಲಿ ಜೀವಂತ ಹಾವನ್ನು ಹಿಡಿದು ವ್ಯಕ್ತಿಯೊಬ್ಬ ತಿಂದಿರುವ ಘಟನೆ ಉತ್ತರ ಪ್ರದೇಶದ ಫತೇಪುರದ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್‌ ಬಳಿ ನಡೆದಿದೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ಹಾವನ್ನು ತಿಂದ ವ್ಯಕ್ತಿಯನ್ನು ಡಕಾಯಿತ ಗಂಗಾ ಪ್ರಸಾದ್ ಅಲಿಯಾಸ್ ಫೌಜಿ (55) ಎಂದು ಗುರುತಿಸಲಾಗಿದೆ. ಇವನು ಒಂದು ಟೈಮ್​​ನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್​ ಗ್ಯಾಂಗ್​ಗೆ ಸೇರಿಕೊಂಡಿದ್ದವನು ಎಂದು ಹೇಳಲಾಗುತ್ತಿದೆ. ಈ ಗ್ಯಾಂಗ್​ ಜನರನ್ನು ಬೆದರಿಕೆ ಹಾಕಿ ಲೂಟಿ ಮಾಡುವ ಕೃತ್ಯಗಳಿಗೆ ಕುಖ್ಯಾತವಾಗಿತ್ತು. ಶಂಕರ್ ಗ್ಯಾಂಗ್ ಎಂದರೆ ಜನರಿಗೆ ಫುಲ್ ಭಯವಿತ್ತು. ಸದ್ಯ ಈ ಗ್ಯಾಂಗ್​ ಅನ್ನು ಬಿಟ್ಟು ಬಂಡಾ ಜಿಲ್ಲೆಯ ಕಮಾಸಿನ್‌ನ ಕಾಗರ್ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ಈತ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದು ಏನು ಮಾಡಬೇಕೆಂದು ಗೊತ್ತಾಗದೇ ಹಾವು ತಿನ್ನುವಂಥ ಕೃತ್ಯ ಮಾಡಿದ್ದಾನೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ನದಿಯಿಂದ ಹಾವನ್ನು ಹಿಡಿದುಕೊಂಡು ಬರೋ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ಎಲ್ಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ವಿಡಿಯೋದಲ್ಲಿ ಸೆರೆಯಾಗಿವೆ. ಇದಕ್ಕೆ ಸಾಕಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿಂದ ಕಿರಾತಕ.. ಸುಲಿಗೆ ಮಾಡ್ತಿದ್ದವನಿಂದ ಇದೆಂತ ಭಯಾನಕ ಕೃತ್ಯ!

https://newsfirstlive.com/wp-content/uploads/2024/07/SNAKE-2.jpg

    ನದಿಯ ಬಳಿ ಹೋಗಿದ್ದಾಗ ಹಾವನ್ನು ಹಿಡಿದುಕೊಂಡ ಭೂಪ

    ಒಂದು ಟೈಮ್​ನಲ್ಲಿ ಜನರನ್ನ ಸುಲಿಗೆ ಮಾಡುತ್ತಿದ್ದ ಡಕಾಯಿತ

    ಶಂಕರ್ ಗ್ಯಾಂಗ್ ಎಂದ್ರೆ ಆ ಪ್ರದೇಶದಲ್ಲಿ ಈಗಲೂ ಭಯವಿದೆ

ಲಕ್ನೋ: ನದಿಯಲ್ಲಿ ಜೀವಂತ ಹಾವನ್ನು ಹಿಡಿದು ವ್ಯಕ್ತಿಯೊಬ್ಬ ತಿಂದಿರುವ ಘಟನೆ ಉತ್ತರ ಪ್ರದೇಶದ ಫತೇಪುರದ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್‌ ಬಳಿ ನಡೆದಿದೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ಹಾವನ್ನು ತಿಂದ ವ್ಯಕ್ತಿಯನ್ನು ಡಕಾಯಿತ ಗಂಗಾ ಪ್ರಸಾದ್ ಅಲಿಯಾಸ್ ಫೌಜಿ (55) ಎಂದು ಗುರುತಿಸಲಾಗಿದೆ. ಇವನು ಒಂದು ಟೈಮ್​​ನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್​ ಗ್ಯಾಂಗ್​ಗೆ ಸೇರಿಕೊಂಡಿದ್ದವನು ಎಂದು ಹೇಳಲಾಗುತ್ತಿದೆ. ಈ ಗ್ಯಾಂಗ್​ ಜನರನ್ನು ಬೆದರಿಕೆ ಹಾಕಿ ಲೂಟಿ ಮಾಡುವ ಕೃತ್ಯಗಳಿಗೆ ಕುಖ್ಯಾತವಾಗಿತ್ತು. ಶಂಕರ್ ಗ್ಯಾಂಗ್ ಎಂದರೆ ಜನರಿಗೆ ಫುಲ್ ಭಯವಿತ್ತು. ಸದ್ಯ ಈ ಗ್ಯಾಂಗ್​ ಅನ್ನು ಬಿಟ್ಟು ಬಂಡಾ ಜಿಲ್ಲೆಯ ಕಮಾಸಿನ್‌ನ ಕಾಗರ್ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ಈತ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದು ಏನು ಮಾಡಬೇಕೆಂದು ಗೊತ್ತಾಗದೇ ಹಾವು ತಿನ್ನುವಂಥ ಕೃತ್ಯ ಮಾಡಿದ್ದಾನೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ನದಿಯಿಂದ ಹಾವನ್ನು ಹಿಡಿದುಕೊಂಡು ಬರೋ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ಎಲ್ಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರು ವಿಡಿಯೋದಲ್ಲಿ ಸೆರೆಯಾಗಿವೆ. ಇದಕ್ಕೆ ಸಾಕಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More