/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಪೂರ್ವಭಾಧ್ರ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30ರವರೆಗೆ
ಇರಲಿದೆ.
ಮೇಷ ರಾಶಿ
- ಬಂಧುಗಳಲ್ಲಿ ಜಗಳದ ಸಾಧ್ಯತೆಯಿದೆ
- ಶತ್ರು ಭಾದೆ ಅತಿಯಾಗಿ ಕಾಡಬಹುದು
- ತಾಯಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ಸಹೋದರರ ಜೊತೆ ಗಹನವಾದ ಚರ್ಚೆ ನಡೆಯಬಹುದು
- ವ್ಯವಹಾರದಲ್ಲಿ ನಂಬಿದವರಿಂದ ವಂಚನೆಯಾಗಬಹುದು
- ಅವಿವಾಹಿತರಿಗೆ ಸಿಹಿ ಸುದ್ದಿ
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ವೃಷಭ
- ಹಿತ ಶತ್ರುಗಳಿಂದ ಅವಕಾಶ ತಪ್ಪಬಹುದು
- ಮನೆಯಲ್ಲಿ ತಾಳ್ಮೆಯಿಂದಿರಿ
- ಪರಿಸ್ಥಿತಿಗಳು ನಿಮ್ಮ ಪರವಾಗಿ ಕೆಲಸ ಮಾಡಬಹುದು
- ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಿದೆ
- ವಸ್ತ್ರಾಭರಣ ಖರೀದಿಯಿಂದ ಖುಷಿ
- ಮಹಿಳಾ ಉದ್ಯೋಗಿಗಳಿಗೆ ಅನುಕೂಲವಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಉದ್ಯೋಗ ಅಥವಾ ಸ್ಥಳ ಬದಲಾವಣೆಗೆ ಅವಕಾಶವಿದೆ
- ತಂದೆಯವರ ಆರೋಗ್ಯ ಗಮನಿಸಿ
- ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ
- ಇಲ್ಲಸಲ್ಲದ ಅಪವಾದಕ್ಕೆ ಒಳಗಾಗಬಹುದು
- ಮನೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
- ಮಕ್ಕಳ ವಿಚಾರದಲ್ಲಿ ಎಚ್ಚರಿಕೆವಹಿಸಿ
- ಮೃತ್ಯುಂಜಯ ಜಪ ಮಾಡಿಸಿ
ಕಟಕ
- ವೈಯಕ್ತಿಕ ಆಪಾದನೆಗಳು ಹೆಚ್ಚಾಗುತ್ತವೆ
- ಸೋಮಾರಿತನದಿಂದ ಧನ ನಷ್ಟವಾಗಬಹುದು
- ಕಾಲು, ಕೈಗೆ ಎಟಾಗುವ ಸಾಧ್ಯತೆಯಿದೆ ಎಚ್ಚರಿಕೆವಹಿಸಿ
- ಹಳೆಯ ಸ್ನೇಹಿತರ ಭೇಟಿ ಅದರಿಂದ ಸಂತೋಷ
- ಕಾರ್ಯ ಸಾಧನೆಗಾಗಿ ತಿರುಗಾಟ
- ಸಾರ್ವಜನಿಕ ರಂಗದಲ್ಲಿ ಹೊಸ ಅನುಭವ ಸಿಗಬಹುದು
- ದುರ್ಗಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಸಿಂಹ
- ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನ ಲಭ್ಯವಾಗಬಹುದು
- ಆದಾಯಕ್ಕಿಂತ ಖರ್ಚು ಹೆಚ್ಚು
- ಕುಟುಂಬದಲ್ಲಿ ಮನಶಾಂತಿ ಇರುವುದಿಲ್ಲ ಬೇಸರ
- ಸಹೋದರಿಯಿಂದ ಅನುಕೂಲ
- ಪ್ರಯಾಣ ಮತ್ತು ಜಾಣ್ಮೆಯಿಂದ ಲಾಭವಿದೆ
- ನವಗ್ರಹರ ಆರಾಧನೆ ಮಾಡಿ
ಕನ್ಯಾ
- ಸಮಾಜದಲ್ಲಿ ಗೌರವ ಸಿಗದ ಪರಿಸ್ಥಿತಿ
- ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ
- ದಂಪತಿಗಳಲ್ಲಿ ವೈಮನಸ್ಸು ಹೆಚ್ಚಾಗಬಹುದು
- ಕಚೇರಿಯ ಕೆಲಸದಲ್ಲಿ ವಿಳಂಬ
- ಆರೋಗ್ಯ ವ್ಯತ್ಯಾಸ ಅದರಿಂದ ಮನೋವ್ಯಥೆ
- ಹಣವಿದ್ದರೂ ಸಮಾಧಾನವಿಲ್ಲ
- ಧ್ಯಾನದ ಮೊರೆ ಹೋಗಿ
ತುಲಾ
- ಉದ್ಯೋಗ ಅಥವಾ ವೃತ್ತಿಯಲ್ಲಿ ಗಣನೀಯ ಸಾಧನೆ ಮಾಡಬಹುದು
- ಕುಟುಂಬದಲ್ಲಿ ಹೊಸ ಯೋಜನೆಯ ಚಿಂತನೆ
- ಆರ್ಥಿಕ ಅನುಕೂಲವಿದೆ
- ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಂಕಷ್ಟ
- ಬಂಧುಗಳಲ್ಲಿ ನಿಮ್ಮ ಬಗ್ಗೆ ಚರ್ಚೆ ನಡೆಯಬಹುದು
- ಮಕ್ಕಳಿಂದ ಉತ್ತಮ ಸ್ಪಂದನೆ ಅದರಿಂದ ಸಂತಸ
- ಇಷ್ಟದೇವತಾ ಆರಾಧನೆ ಮಾಡಿ
ವೃಶ್ಚಿಕ
- ನಂಬಿಕೆ ಇಲ್ಲದ ಜನರು ನಿಮಗೆ ತಿಳುವಳಿಕೆ ಹೇಳಬಹುದು
- ಚಲನಚಿತ್ರರಂಗದವರಿಗೆ ಸಂಕಷ್ಟ
- ಆತ್ಮೀಯರಿಂದ ಕೆಲವು ಸಲಹೆ ಅದರಿಂದ ಕೋಪ
- ಕುಟುಂಬದ ಜಗಳ ತಾರಕಕ್ಕೆರಬಹುದು
- ಮಹಿಳೆಯರಿಗೆ ಶುಭ ಸಮಯ
- ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಶುಕ್ರಗ್ರಹ ಪ್ರಾರ್ಥನೆ ಮಾಡಿ
ಧನುಸ್ಸು
- ನಿಧಾನದ ನಿರ್ಧಾರಗಳು ಬೇಡ
- ಬೇರೆಯವರ ವಿಷಯದಿಂದ ನಿಮಗೆ ಸಹಾಯ
- ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಜಗಳ ಉಂಟಾಗಬಹುದು
- ರಾಜಕೀಯ ವಿಚಾರದಲ್ಲಿ ಗೊಂದಲ
- ಚಿನ್ನಾಭರಣ ಅಥವಾ ಹಣ ಕಾಳವು ಸಾಧ್ಯತೆಯಿದೆ
- ಚಂಡಿಕಾ ಪಾರಾಯಣ ಮಾಡಿಸಿ
ಮಕರ
- ಉನ್ನತ ವಿದ್ಯಾಭ್ಯಾಸದ ಆಸೆಯಿರುವ ವಿದ್ಯಾರ್ಥಿಗಳಿಗೆ ಶುಭವಿದೆ
- ಗಣ್ಯ ವ್ಯಕ್ತಿಗಳ ಭೇಟಿ ಅವರಿಂದ ಸಲಹೆ ಸ್ವೀಕಾರ
- ಸಾಲಬಾಧೆ, ಹಣದ ಸಂಕಷ್ಟ ಎದುರಾಗಬಹುದು
- ಮನೆಯಲ್ಲಿರುವ ಪದಾರ್ಥ ಅಥವಾ ವಾಹನ ಮಾರಾಟ ಸಾಧ್ಯತೆಯಿದೆ
- ಕೆಲವು ಗಟ್ಟಿ ನಿರ್ಧಾರಗಳಿಂದ ನಷ್ಟ ಉಂಟಾಗಬಹುದು
- ವಕೀಲರಿಂದ ಹಣಕ್ಕಾಗಿ ಒತ್ತಡ ಬರಬಹುದು
- ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ
ಕುಂಭ
- ಶೀಘ್ರ ಕೋಪದಿಂದ ಕೆಲಸಕ್ಕೆ ತೊಂದರೆ
- ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಅದರಿಂದ ಕಂಟಕದ ಸೂಚನೆ ಇದೆ
- ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನ ಬೇಕಾಗಬಹುದು
- ಹಿತ ಶತ್ರುಗಳ ಕಾಟದಿಂದ ಬೇಸತ್ತು ಹೋಗಬಹುದು
- ಸಂತಾನಾಪೇಕ್ಷಿಗಳಿಗೆ ಸಿಹಿ ಸುದ್ದಿ ಸಿಗಬಹುದು
- ಮಕ್ಕಳಿಗೆ ಹಣದ ಸೌಲಭ್ಯ ಮಾಡುವಲ್ಲಿ ಯಶಸ್ಸು
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ಮೀನ
- ರಕ್ತದ ಒತ್ತಡ ಇರುವವರಿಗೆ ಸಮಸ್ಯೆ
- ಔಷಧೋಪಚಾರದಲ್ಲಿ ನಿಮ್ಮ ತೀರ್ಮಾನ ಬೇಡ
- ಹಳೆಯ ವ್ಯವಹಾರದಲ್ಲಿ ಹಿನ್ನಡೆ
- ಬೇರೆಯವರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
- ಖರೀದಿಯಲ್ಲಿ ಮೋಸವಾದೀತು ಜಾಗ್ರತೆವಹಿಸಿ
- ನ್ಯಾಯಾಲಯ ಅಥವಾ ಕಾನೂನಿನ ಹೋರಾಟದಲ್ಲಿ ಹಿನ್ನಡೆ
- ವನದುರ್ಗಾದೇವಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ