ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ
ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದಲ್ಲಿ ಖಡಕ್ ನಿರ್ಧಾರ ಮಾಡಬಹುದು
- ಈ ದಿನ ಹಣದ ಲಾಭವಿದೆ
- ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
- ಕುಟುಂಬದ ಬಗ್ಗೆ ಜವಾಬ್ದಾರಿ ತೋರಬೇಕು
- ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ
- ಜನರು ಮನೆಯವರನ್ನ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು
- ಕುಲದೇವತಾ ಆರಾಧನೆಯನ್ನು ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಕೆಲಸಕ್ಕೆ ಶುಭವಲ್ಲ
- ಕಾರ್ಯದ ಒತ್ತಡ ಹೆಚ್ಚಿರುತ್ತದೆ
- ಧಾರ್ಮಿಕ ವಿಚಾರದಲ್ಲಿ ತಾತ್ಸಾರ ಬರಬಹುದು
- ದೈಹಿಕ ಹಾಗೂ ಮಾನಸಿಕ ಒತ್ತಡ ಉಂಟಾಗಬಹುದು
- ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
- ಅನಪೇಕ್ಷಿತ ಕೆಲಸ ಪ್ರಯಾಣ ಇರಬಹುದು
- ಹನುಮಂತನ ಸೇವೆ ಹನುಮಾನ್ ಚಾಲೀಸವನ್ನು ಪಠಿಸಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಭಾವಿಗಳ ಪರಿಚಯ ಉಪಯೋಗವಾಗಲಿದೆ
- ಕಾರ್ಯಗಳ ಒತ್ತಡದ ಮಧ್ಯೆ ಸಾಮಾಜಿಕ ಸೇವೆಯನ್ನು ಮಾಡುತ್ತೀರಿ
- ಕುಟುಂಬದವರೊಂದಿಗೆ ಕಳೆಯಲು ಸಮಯಾಭಾವ
- ಶಾಂತಿಯ ವಾತಾವರಣ ಇರುತ್ತದೆ
- ಮಕ್ಕಳ ಬಗ್ಗೆ ಚಿಂತಿಸ ಬೇಕಾಗಬಹುದು ಅಪಕೀರ್ತಿಯಾಗಲಿದೆ
- ಸಾಯಂಕಾಲದ ಹೊತ್ತಿಗೆ ಬೇಸರ ಉಂಟಾಗಬಹುದು
- ದುರ್ಗಾ ಸಪ್ತಶತೀ ಪಾರಾಯಣವನ್ನು ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದಾರತೆ,ದಾನಶೀಲತೆ ನಿಮಗೆ ಹೆಸರು ಬರಬಹುದು
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭವಿದೆ
- ವಿಚಾರಗಳು ಅಥವಾ ಸಂದರ್ಭಗಳು ಕ್ರಮೇಣ ನಿಮ್ಮ ಪರವಾಗಬಹುದು
- ದಾಂಪತ್ಯದಲ್ಲಿ ವಾದ ಸರಿಯಾಗುತ್ತದೆ
- ಇಂದು ಆಧ್ಯಾತ್ಮಿಕವಾಗಿ ಚಿಂತಿಸಿ
- ತಂದೆಯವರೊಂದಿಗೆ ವ್ಯಾವಹಾರಿಕ ಚರ್ಚೆ ಬೇಡ
- ಮಹಾಲಕ್ಷ್ಮಿಯ ಪ್ರಾರ್ಥನೆಯನ್ನು ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿರಿಯರ ಸಲಹೆ ಅಗತ್ಯವಿದೆ
- ಮಾನಸಿಕ ಸ್ಥಿಮಿತತೆ ಇರುವುದಿಲ್ಲ
- ನಿರ್ಲಕ್ಷದಿಂದ ಕೆಲಸದ ಗುಣಮಟ್ಟ ತಗ್ಗಬಹುದು
- ಆತ್ಮವಿಶ್ವಾಸದ ಕೊರತೆಯೂ ಇರಬಹುದು
- ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಬಾರದು
- ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
- ಅಶ್ವಥ ಪ್ರದಕ್ಷಣೆ 12 ಬಾರಿ ಮಾಡಿ
- ಗಣಪತಿಯನ್ನು ಗರಿಕೆಯಿಂದ ಅರ್ಚಿಸಿ, 21 ಗರಿಕೆಯನ್ನು ದೇವಾಲಯಕ್ಕೆ ನೀಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಪ್ರೇಮಿಗಳಿಗೆ ಶುಭವಲ್ಲ
- ಏಕ ನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆಯಾಗಬಹುದು
- ಕೆಲಸದಲ್ಲಿ ಸವಾಲುಗಳು ಹೆಚ್ಚಾಗಲಿದೆ
- ಮಕ್ಕಳಿಗೆ ನಿರಾಸಕ್ತಿ ಉಂಟಾಗಬಹುದು
- ವಿದ್ಯಾರ್ಥಿಗಳಿಗೆ ಬೇರೆಡೆ ಮನಸ್ಸು ಸಂಚಲವಾಗಬಹುದು
- ಇಂದು ನಿಮಗೆ ಅನಾರೋಗ್ಯ ಕಾಡಬಹುದು
- ಅಸಭ್ಯ ಮಾತುಗಳಿಂದ ಜನರು ದೂರವಾಗಬಹುದು
- ಏಕ ನಕ್ಷತ್ರ ಶಾಂತಿ ಮಾಡಿಸಿ
- ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ವ್ಯವಹಾರದಿಂದ ಲಾಭವಿದೆ
- ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ, ಹಾಸ್ಯ, ಸಂತೋಷವಿರಲಿದೆ
- ಕುಟುಂಬದಲ್ಲಿ ಸಂತೋಷದ ವಾತಾವರಣ
- ಇಂದು ಸಕಾಲಕ್ಕೆ ಕೆಲಸಗಳಾಗಲಿದೆ
- ಈ ದಿನ ನಿಮಗೆ ಆತ್ಮ ವಿಶ್ವಾಸವಿರುತ್ತದೆ
- ಸ್ನೇಹಿತರಿಂದ ಬೇಸರದ ವಿಷಯ
- ಇಷ್ಟ ದೇವತಾ ಆರಾಧನೆಯನ್ನು ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನ್ಯಾಯಾಲಯದ ವಿಚಾರದಲ್ಲಿದೆ ಯಶಸ್ಸಿದೆ
- ನಿಮ್ಮ ತಾರ್ಕಿಕ ಶಕ್ತಿ ಜನರಿಗೆ ಮೆಚ್ಚುಗೆ ಸಿಗಲಿದೆ
- ಹಳೆಯ ಸಮಸ್ಯೆಗಳು ಇತ್ಯರ್ಥವಾಗುತ್ತದೆ
- ತುಂಬಾ ಮಾನಸಿಕ ಆರ್ಥಿಕ ಸಾಮಾಜಿಕ ಶಕ್ತಿ ಕಾಣುತ್ತದೆ
- ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು
- ಹಣ ಖರ್ಚಿನಿಂದ ಬೇಸರವೂ ಕಾಡಬಹುದು
- ಈಶ್ವರನ ಆರಾಧನೆಯನ್ನು ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮಕ್ಕಳಿಂದ ಉತ್ತಮ ವಾತಾವರಣ ಸಿಹಿ ಸುದ್ದಿ
- ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ
- ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಇರಲಿದೆ
- ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶದಿಂದ ಸಂತಸ
- ಭವಿಷ್ಯದ ಬಗ್ಗೆ ಹಲವಾರು ಕನಸುಗಳಿರುತ್ತದೆ
- ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಹುದು
- ಮಹಾ ವಿಷ್ಣುವನ್ನು ಸ್ಮರಣೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸ್ವಭಾವದವರಿಗೆ ತೊಂದರೆಯಾಗಬಹುದು
- ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
- ಸರ್ಕಾರಿ ಕೆಲಸಕ್ಕೆ ತೆರಳಿ ಹಿಂದಿರುಗುವ ಸಾಧ್ಯತೆಯಿಂದ ಬೇಸರವಾಗಬಹುದು
- ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು
- ಹಣ ಮತ್ತು ದಾಖಲಾತಿಗಳ ನಷ್ಟದ ಸೂಚನೆ
- ಅಧಿಕಾರ, ಅಹಂಭಾವ ಕುತ್ತು ತರಬಹುದು
- ಇಂದ್ರಾಕ್ಷಿ ದೇವಿಯ ಪ್ರಾರ್ಥನೆಯನ್ನು ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ನಿಮಗೆ ಚೆನ್ನಾಗಿದೆ ಆದರೆ ಖರ್ಚು ನಿಯಂತ್ರಿಸಿ
- ಹಳೆಯ ಸಮಸ್ಯೆಗೆ ಮಂಗಳ
- ಹಳೆಯ ನೆನಪು ಕಾಡುವುದರಿಂದ ಬೇಸರವಾಗಬಹುದು
- ಸಂಶೋಧನೆ ಅಥವಾ ಆತ್ಮಾವಲೋಕನಕ್ಕೆ ಸುಸಮಯ
- ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು
- ಮನೆಯಲ್ಲಿ ಒಂಟಿತನ ಕಾಡುತ್ತದೆ
- ಸಾಲಿಗ್ರಾಮ ಮಹಾ ವಿಷ್ಣುವನ್ನು ಸ್ಮರಣೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರಳ ಕೆಲಸಗಳು ಪ್ರಯಾಸವನ್ನುಂಟು ಮಾಡಬಹುದು
- ಆರೋಗ್ಯದ ವಿಚಾರದಲ್ಲಿ ಸಮಾಧಾನ
- ಆರ್ಥಿಕವಾಗಿ ತೊಂದರೆಯಿಲ್ಲ, ಹಣ ಉಳಿಸುವಿಕೆಯ ಬಗ್ಗೆ ಚಿಂತೆ
- ನೆರೆಹೊರೆಯವರಿಂದ ಸಹಾಯ ಸಿಗಬಹುದು
- ಸಾಧನೆ ಅಥವಾ ಅನುಭವದ ಬಗ್ಗೆ ಹೆಮ್ಮೆ
- ಎಲ್ಲರೂ ನನ್ನ ಅಂಕೆಯಲ್ಲಿ ಇರಬೇಕೆಂಬುದು ಹೆಚ್ಚಿರುತ್ತದೆ
- ದುರ್ಗಾರಾಧನೆಯನ್ನು ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ