ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ
ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ ಅನರ್ಥವಾಗಬಾರದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿರಿಯರೊಂದಿಗೆ ಚರ್ಚೆ ಮಾಡುತ್ತೀರಿ ಶುಭವಿದೆ
- ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
- ಮನೆ ಅಥವಾ ಮಡದಿ ಅಥವಾ ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
- ಮಹಿಳೆಯರಿಗೆ ಒತ್ತಡ ಉಂಟಾಗಬಹುದು ಆದರೆ ಖರೀದಿ ಮಾಡುವುದರಿಂದ ಸಂತೋಷವಾಗಲಿದೆ
- ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
- ಮನೆಯವರೆಲ್ಲ ಹೆಚ್ಚಾಗಿ ಹೊರಗೆ ಇರುತ್ತೀರಿ
- ದುರ್ಗಾಮಾತೆಯನ್ನು ಆರಾಧಿಸಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
- ಹೊಸ ಸಂಶೋಧನೆ ಅಥವಾ ಪ್ರಯತ್ನಕ್ಕೆ ಅವಕಾಶವಿದೆ
- ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿ
- ಹಣದ ಆಲೋಚನೆ ಬರುತ್ತದೆ ಮುಂದೆ ಅನುಕೂಲವಿದೆ
- ಮನೆ ಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ
- ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಸಿ
- ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ ಇದೆ
- ಸಣ್ಣ ವಿಚಾರ ವಿವಾದವಾಗಬಹುದು
- ನಿಮ್ಮ ಸಾಧನೆ ನಿಮಗೆ ಮುಖ್ಯವಾಗಿರುತ್ತದೆ ಬೇರೆಯವರಿಗೆ ಒತ್ತಡ ಹಾಕಬಾರದು
- ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
- ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
- ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
- ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ ಅಥವಾ ಉದ್ಯೋಗದಲ್ಲಿ ಆದಾಯ ಹೆಚ್ಚು
- ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
- ಬುದ್ಧಿವಂತಿಕೆಯು ಕೆಲಸ ಮಾಡುವುದಿಲ್ಲ
- ಹಣದ ಚಿಂತೆಯಿಂದ ಹೊರ ಬರುತ್ತೀರಿ
- ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲವಿದೆ
- ಪ್ರಯತ್ನ ಪೂರ್ವಕವಾಗಿ ಸಮಾಧಾನವಿದೆ
- ದುಡ್ಡು ಹೊರತಾಗಿ ಬೇರೆ ಯಾವುದೂ ಕೆಲಸ ಮಾಡಲಾರದ ದಿನ
- ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅಥವಾ ಬಿಳಿ ಹೂಗಳಿಂದ ಅರ್ಚಿಸಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ವ್ಯವಸ್ಥಿತವಾದ ದಿನ
- ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
- ಮಕ್ಕಳು ಪೋಷಕರಿಗೆ ದುಃಖದಾಯಕರಾಗಿರುತ್ತಾರೆ
- ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
- ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
- ಅತ್ಯುನ್ನತ ಚಿಂತನೆ ಬೇರೆಯವರಿಗೆ ಅರ್ಥವಾಗುವುದಿಲ್ಲ ಬೇಸರವಾಗಬಹುದು
- ಹಿರಿಯರ ಮಾರ್ಗದರ್ಶನ ಅಥವಾ ಆಶೀರ್ವಾದವನ್ನು ಪಡೆಯಿರಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
- ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ ಅಥವಾ ಬೇಸರವಾಗಬಹುದು
- ಸ್ವಂತ ಕಾರ್ಯಕ್ಕಾಗಿ ಧಾರಾಳ ಖರ್ಚು ಮಾಡುತ್ತೀರಿ
- ದಂಪತಿಗಳಲ್ಲಿ ಪರಸ್ಪರ ಶೀತಲ ಸಮರವಾಗಬಹುದು
- ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
- ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
- ಧ್ಯಾನವನ್ನು ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥವಾಗಬಹುದು
- ಬರಹಗಾರರಿಗೆ ಶುಭವಿದೆ
- ಕಲೆ-ಸಾಹಿತ್ಯ ವಿಚಾರಧಾರೆಗಳಿಗೆ ಸಮಸ್ಯೆ ಉಂಟಾಗಬಹುದು
- ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟವಾಗಲಿದೆ
- ಸಾಲ ಪ್ರಕ್ರಿಯೆ ಈ ದಿನ ಬೇಡ
- ಪರಿಶ್ರಮದ ಫಲ ನಿಮ್ಮನ್ನು ಕಾಪಾಡಬಹುದು
- ಕುಲದೇವತಾ ಆರಾಧನೆಯನ್ನು ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ದೈನಂದಿನ ಕೆಲಸಗಳಲ್ಲಿ ಅಡ್ಡಿ ಅಥವಾ ಸಮಸ್ಯೆಯಾಗಬಹುದು
- ಧರ್ಮ ಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
- ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಆರೋಗ್ಯ ಹಾಳುಮಾಡಿಕೊಳ್ಳಬೇಡಿ
- ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
- ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
- ನಿಮ್ಮ ತ್ಯಾಗ ಬುದ್ಧಿ ಮನೆಯವರಿಗೆ ಸಂತೋಷ ತರಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಹಿರಿಯರಿಂದ ಒಳ್ಳೆಯ ಸುದ್ದಿ ಸಂತೋಷ ಸಿಗಲಿದೆ
- ಅಪೂರ್ಣ ಕಾರ್ಯಗಳಿಗೆ ಒತ್ತು ಹಣ ಸಹಾಯವಾಗುತ್ತದೆ
- ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ ಎಚ್ಚರವಿರಲಿ
- ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡವಿರಬಹುದು
- ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲವಿರುತ್ತದೆ
- ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
- ಇಷ್ಟದೇವತಾ ಆರಾಧನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪ್ರಿಯರು ಅಥವಾ ಸಂಬಂಧಿಕರು ನಿಮ್ಮನ್ನು ಹೊಗಳದೆ ಇರುವುದರಿಂದ ಬೇಸರವಾಗಬಹುದು
- ಶಾಂತಿಯುತವಾಗಿ ದಿನ ಕಳೆಯಿರಿ
- ನಿಮ್ಮ ತಪ್ಪುಗಳ ಅರಿವಾಗುತ್ತದೆ ಸರಿಪಡಿಸಿಕೊಳ್ಳಿ
- ವಿದ್ಯಾವಂತರಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
- ಸ್ವಂತ ಬುದ್ಧಿ ಕೆಲಸಕ್ಕೆ ಬರಲಿ
- ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ ಭಯ ಬೇಡ
- ಈಶ್ವರನನ್ನು ಬಿಲ್ವಪತ್ರೆಯಿಂದ ಅರ್ಚಿಸಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
- ಅನುಪಯುಕ್ತ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
- ಯಾವುದೊ ಅಹಂಭಾವ ಎಲ್ಲರಿಂದ ದೂರವಿರುವಂತೆ ಮಾಡಬಹುದು
- ಆತುರದ ನಿರ್ಧಾರ ಬೇಡ
- ನಿಮ್ಮ ಕೈಯಲ್ಲಿ ಹಣವಿದೆ, ಜನರಿಲ್ಲ ಬಂಧುಗಳಲ್ಲಿ ಬೇಸರ ಉಂಟಾಗಬಹುದು
- ಕಾನೂನು ರೀತಿಯ ಕೆಲಸಕ್ಕೆ ಜಯವಿದೆ ಅಭಿಮಾನವಿಲ್ಲ
- ತಾಪಸಮನ್ಯುವನ್ನು ಪ್ರಾರ್ಥಿಸಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ತುಂಬಾ ಧನಾತ್ಮಕವಾದ ದಿನ
- ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
- ಆರೋಗ್ಯದ ಬಗ್ಗೆ ಚಿಂತೆ ಬೇಡ
- ಈ ದಿನ ಕೋಪ ಕಡಿಮೆ ಇರಲಿ
- ಹಣ ಅಥವಾ ಕೋಪ ಒಟ್ಟಿಗೆ ಸೇರುವುದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
- ಮನೆಯಲ್ಲಿ ಮನೆಯವರಾಗಿರಿ ವ್ಯವಹಾರ ಬೇಡ
- ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ ಅನರ್ಥವಾಗಬಾರದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ