ತಾತ್ಸಾರವನ್ನು ಮಾಡಬೇಡಿ, ಹಳೆಯ ನೋವು ಕಾಡಬಹುದು
ಕಾನೂನಿನ ಚೌಕಟ್ಟಿನ ಒಳಗೆ ನಿಮ್ಮ ವ್ಯವಹಾರವನ್ನು ಮಾಡಿ
ಸಂಬಂಧಿಕರಲ್ಲಿ ವಿಶೇಷವಾದ ಒಲವು ಮೂಡಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದಲ್ಲಿ ಅತಿಯಾದ ಬುದ್ಧಿವಂತಿಕೆ,ಜಾಣ್ಮೆ ನಿಮಗೆ ಅನುಕೂಲವಾಗಲಿದೆ
- ಸ್ವಾಭಾವಿಕವಾಗಿ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
- ಎರೆಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಬೇಡಿ
- ಸಂಬಂಧಿಕರಲ್ಲಿ ವಿಶೇಷವಾದ ಒಲವು ಮೂಡಬಹುದು
- ಹೆಚ್ಚು ರಕ್ತದೊತ್ತಡವಿರುವ ವ್ಯಕ್ತಿಗಳಿಗೆ ತೊಂದರೆಯಾಗಬಹುದು ಜಾಗ್ರತೆ
- ದೇವಿಯನ್ನು ಆರಾಧನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಸ್ತಿಯ ಖರೀದಿ ಅಥವಾ ಮಾರಾಟದಿಂದ ಲಾಭವಿದೆ
- ಕಾನೂನಿನ ಚೌಕಟ್ಟಿನ ಒಳಗೆ ನಿಮ್ಮ ವ್ಯವಹಾರವನ್ನು ಮಾಡಿ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತೀರಿ
- ಎಲ್ಲೂ ಕೂಡ ನಾಸ್ತಿಕತೆ ಬೇಡ
- ಸತ್ಯ ಶೋಧನೆಗೆ ಮುಂದಾಗಿ
- ನಿಮ್ಮ ಜೀವನದಲ್ಲಿ ಸತ್ಯ ಸಾಧನ, ಸತ್ಯ ಶೋಧನ ಮುಖ್ಯವಾಗಲಿದೆ
- ಜೀವನದಲ್ಲಿ ಸಾಧಕರ ಜೀವನ ಚರಿತ್ರೆಯನ್ನು ಓದಿ ತಿಳಿಯಿರಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದಲ್ಲಿ ಬಣ್ಣ ಬಣ್ಣವಾಗಿ ಕಾಣುವುದು ಅನುಕೂಲವಾಗತ್ತೆ ಅನ್ನೋ ಭ್ರಮೆ ಕೆಲವು ಸಂದರ್ಭದಲ್ಲಿ ತೊಂದರೆ ಮಾಡಬಹುದು
- ನಿಮ್ಮ ಜೀವನ ಶೈಲಿಯ ಬದಲಾವಣೆಗೆ ಮುಂದಾಗಿ
- ನೀವು ನಿಮ್ಮ ತನವನ್ನು ಬಿಟ್ಟು ನಡೆದುಕೊಳ್ಳಬೇಡಿ
- ನಿಮ್ಮ ವ್ಯವಹಾರವನ್ನು ಬೇರೆಯವರ ವ್ಯವಹಾರಕ್ಕೆ ಹೋಲಿಸಬೇಡಿ
- ದುರ್ಗಾದೇವಿಯನ್ನು ಪೂಜಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಗಮನಹರಿಸಿ
- ತಾತ್ಸಾರವನ್ನು ಮಾಡಬೇಡಿ, ಹಳೆಯ ನೋವು ಕಾಡಬಹುದು
- ಕಾನೂನಾತ್ಮಕವಾದ ವಿಚಾರಗಳು ಎದುರಾದರೆ ನೀವು ಸುಮ್ಮನಿದ್ದರೆ ಒಳ್ಳೆಯದು
- ಆತುರವಾಗಿ ಏನಾದರೂ ಮಾಡಿದರೆ ತಪ್ಪು ಫಲಿತಾಂಶ ಬರಬಹುದು
- ಖರೀದಿ ಮಾಡುವ ಯೋಚನೆಯಿದ್ದರೆ ಮಾರ್ಗದರ್ಶನ ಪಡೆಯಿರಿ
- ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆಲಸ್ಯ ಭಾವನೆಯಿಂದ ಇಂದು ಮಾಡುವ ಕೆಲಸವನ್ನು ಮುಂದೂಡುವ ಸಂದರ್ಭ ಬರಬಹುದು
- ನಷ್ಟವನ್ನು ಅನುಭವಿಸುವುದರಿಂದ ಹೊರ ಬರುತ್ತೀರಿ
- ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಳ್ಳುತ್ತೀರಿ
- ಉದ್ಯೋಗದಲ್ಲಿ ನಿಮ್ಮ ಹಕ್ಕು, ಜವಾಬ್ದಾರಿ ಹೆಚ್ಚಾಗುವ ದಿನ
- ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರಲಿದೆ
- ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ
- ಅನ್ನಪೂಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
- ಹೃದ್ರೋಗಕ್ಕೆ ಒಳಗಾಗಿರುವಂತವರು ಜಾಗ್ರತೆವಹಿಸಿ
- ಇಂದು ಕೆಲವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ವೈದ್ಯರನ್ನು ಸಂಪರ್ಕಿಸಿ
- ಔಷೋದೋಪಚಾರಗಳ ಅಗತ್ಯತೆ ಏನಿದೆ ಅದಕ್ಕೆ ಚ್ಯುತಿ ಮಾಡಬೇಡಿ
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಬುದ್ಧಿವಂತಿಕೆಯಿಂದ ನೀವು ಕೆಲಸ ಮಾಡುತ್ತೀರಿ
- ನಿಮ್ಮ ಜೊತೆ ಭಿನ್ನಾಭಿಪ್ರಾಯ ಇರುವವರು ಸುಮ್ಮನಿರುತ್ತಾರೆ
- ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ
- ಮಕ್ಕಳ ಬಗ್ಗೆ ಯೋಚನೆ ಇರುವುದಿಲ್ಲ
- ಮನೆಯ ನವೀಕರಣ, ಆಭರಣಗಳ ಖರೀದಿಗೆ ಚರ್ಚೆ ಮಾಡುತ್ತೀರಿ
- ನವಗ್ರಹರನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನದಲ್ಲಿ ಬದಲಾವಣೆ ಸಹಜ
- ನಿಮ್ಮ ಸ್ವಭಾವವನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು
- ಕುಟುಂಬದ ದೃಷ್ಟಿಯಿಂದ ಈ ರೀತಿಯ ಮನುಷ್ಯನನ್ನು ಯಾರು ತಿದ್ದಲು ಆಗುವುದಿಲ್ಲವೆಂಬ ನಿರ್ಧಾರ ಮಾಡುತ್ತೀರಿ
- ಸ್ವಲ್ಪವಾದರೂ ಧನಾತ್ಮಕವಾದ ಬದಲಾವಣೆಯಾದರೆ ಅನುಕೂಲ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಆರ್ಥಿಕ ಸ್ಥಿತಿಗತಿ ಸರಿಯಿರಲಿದೆ
- ನೌಕರಿ, ವೃತ್ತಿಯ ಬಗ್ಗೆ ಎಚ್ಚರವಿರಲಿ
- ಕುಟುಂಬದವರಿಂದ ಖರ್ಚಿಗೆ ಪಡೆಯುತ್ತಿರುವ ಹಣ ನಿಂತು ಹೋಗುವ ಸಾಧ್ಯತೆ
- ಹಣದ ವಿಚಾರದಲ್ಲಿ ಒತ್ತಡ ಉಂಟಾಗಬಹುದು
- ವಿದ್ಯಾರ್ಥಿಗಳಿಗೆ ಸಿಗುವ ಹಣ ತಪ್ಪು ಹೋಗಬಹುದು
- ಲಕ್ಷ್ಮಿ ನಾರಾಯಣರನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಅತಿಯಾದ ಕೆಲಸದ ಒತ್ತಡದಿಂದ ಕುಟುಂಬದವರನ್ನು ನಿರ್ಲಕ್ಷ್ಯ ಮಾಡಬೇಡಿ
- ಬೇಸರದಿಂದಿರುವ ಮನೆಯವರು ನಿಮ್ಮ ಯಾವುದೇ ವಿಚಾರಕ್ಕೆ ಪ್ರತಿಕ್ರಿಯಿಸುವುದಿಲ್ಲ
- ನಿರೀಕ್ಷೆ ಮೀರಿದಂತಹ ಆದಾಯ ಬರುವ ದಿನ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನಮಾನ ಸಿಗಲಿದೆ
- ಸಮಾಜ ಸೇವೆಗೆ, ಜನ ಸೇವೆಗೆ ಬಳಸಿಕೊಂಡರೆ ನಿಮ್ಮ ಹೆಸರು ಶಾಶ್ವತವಾಗಿರಲಿದೆ
- ನಿಮ್ಮ ಸರಿಯಾದ ನಿಲುವು ಅವಲಂಬಿಸಿರುತ್ತದೆ
- ಸಂಪರ್ಕವಾಗಿ ನಿರ್ವಹಣೆ ಮಾಡುವ ಕೆಲಸದ ಬಗ್ಗೆ ಗಮನಕೊಡಿ
- ಭವಾನಿ ದೇವಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗೆ ಇರುವ ಶಕ್ತಿ, ಸಾಮರ್ಥ್ಯ ಸಮಾಜಮುಖಿಯಾಗಿ ಮಾಡುವ ಕೆಲಸಕ್ಕೆ ಜನ ಬೆಂಬಲವಿರುವುದು ನಿಮಗೆ ಸರಿಯಾಗಿ ಗೊತ್ತಿರುವುದಿಲ್ಲ
- ಆಪತ್ತಿನಲ್ಲಿರುವವರು ನಿಮ್ಮ ಕಡೆ ಸಹಾಯ ಹಸ್ತ ಚಾಚಿ ನಿಮ್ಮ ಹತ್ತಿರ ಬರುತ್ತಾರೆ
- ಅನುಭವಕ್ಕೆ ಬರುವ ದಿನವಾಗಿರತ್ತೆ
- ಅಪರಿಚಿತರಿಂದ ಹಲ್ಲೆಗೆ ಒಳಗಾಗುತ್ತೀರಿ
- ಗೊತ್ತಿಲ್ಲದೆ ಇರುವವರು ನಿಮ್ಮ ರಕ್ಷಣೆಗೆ ಬರುತ್ತಾರೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವ ವಿಚಾರದಲ್ಲೂ ಮನಸ್ಸಿಗೆ ಸಮಾಧಾನವಿಲ್ಲ
- ದೂರ ಪ್ರಯಾಣ ಮಾಡುವ ಸಂದರ್ಭ ಬರಬಹುದು
- ಮಾನಸಿಕವಾದ ಸಿದ್ಧತೆಯಿರದೆ ತೊಂದರೆ ಪಡುತ್ತೀರಿ
- ಉದ್ಯೋಗದ ದೃಷ್ಟಿಯಿಂದಲೂ ತಾಂತ್ರಿಕವಾದ ವಿಚಾರವನ್ನು ಬದಲಾವಣೆ ಮಾಡುವುದರಿಂದ ನಿಮಗೆ ಸದಾವಕಾಶವನ್ನು
- ಬಳಸಿಕೊಳ್ಳಲು ಯೋಗ್ಯವಾದ ಸಮಯ
- ದುಬಾರಿ ವಸ್ತಗಳ ಬಗ್ಗೆ ಚರ್ಚೆ ಮಾಡುತ್ತೀರಿ
- ಕೆಲವು ಸಂಘ-ಸಂಸ್ಥೆಗಳು ಅವಮಾನಕ್ಕೆ ಗುರಿ ಮಾಡಬಹುದು
- ಇಂದು ನಿಮ್ಮ ಮನಸ್ಸು ಸ್ಥಿರವಾಗಿರಬೇಕು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ