ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಫೂರ್ತಿ
ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ
ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ಹೊಂದಿದವರಿಗೆ ಲಾಭದ ದಿನ
- ವೈಯಕ್ತಿಕ ಯಶಸ್ಸಿಗೆ, ಪ್ರಗತಿಗೆ ಉತ್ತಮ ದಿನ
- ಇಂದು ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ದಿನ
- ಆರ್ಥಿಕವಾಗಿ ಅನುಕೂಲ ಇರುವ ದಿನ
- ನಿಮ್ಮ ವೃತ್ತಿಯ ನಿಮಿತ್ಯವಾಗಿ ದೂರದೂರಿಗೆ ಪ್ರಯಾಣ ಮಾಡುವ ಯೋಗವಿದೆ
- ಸಂಬಂಧಿಕರಿಂದ ಶುಭವಾರ್ತೆ ಬರಬಹುದು
- ಇಂದು ಪಶು-ಪಕ್ಷಿಗಳಿಗೆ ಆಹಾರ, ನೀರು ನೀಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು
- ಸ್ನೇಹಿತರ, ಬಂಧುಗಳ ವಿವಾಹ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟಕ್ಕೆ ಸಿಲುಕಬಹುದು
- ಬೇರೆಯವರ ಸಹಾಯ ಮಾಡುವ ವಿಚಾರದಲ್ಲಿ ಕಷ್ಟಕ್ಕೆ ಸಿಲುಕಬಹುದು
- ಇಂದು ಅವಮಾನವಾಗುವ ಸಾಧ್ಯತೆ ಹೆಚ್ಚಾಗಿದೆ
- ಇಂದು ಕೆಟ್ಟ ಭಾಷೆಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ
- ಕುಟುಂಬದ ಸೌಖ್ಯ, ಆನಂದ ಎಲ್ಲವೂ ಇಂದು ನಿಮ್ಮ ಕೈಯಲ್ಲಿದೆ
- ಇಂದು ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ವರ್ತಿಸಿ
- ವಿಕಲಚೇತನರಿಗೆ ರಸಪೂರಿತ ಹಣ್ಣುಗಳನ್ನು ನೀಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಾವುದೇ ಶುಭ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ
- ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ
- ಇಂದು ತುಂಬಾ ಒತ್ತಡದಿಂದ ಕೂಡಿರುವಂತಹ ದಿನ ಆದರೆ ಅಷ್ಟೇ ಅನುಕೂಲವಿದೆ
- ನಿಮ್ಮ ಬಿಡುವಿಲ್ಲದ ಕೆಲಸ, ಕಾರ್ಯಗಳಿಂದ ಸ್ನೇಹಿತರು, ಕುಟುಂಬದವರು ಸಂತೋಷ ಪಡುತ್ತಾರೆ
- ಪರಶುರಾಮನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊಳ್ಳಿ ಉದ್ವಿಗ್ನ, ಉದ್ವೇಗಕ್ಕೆ ಒಳಗಾಗಬೇಡಿ
- ಪ್ರತಿನಿತ್ಯದ ಖರ್ಚಿಗೆ ಹಣದ ಅಡಚಣೆಯಾಗುವ ಸಾಧ್ಯತೆಯಿದೆ
- ಸ್ವಾರ್ಥಿಗಳು ನಿಮ್ಮ ಹಿಂದೆ ಬಿದ್ದು ತೊಂದರೆ ಮಾಡಬಹುದು ಎಚ್ಚರ
- ಸ್ವಾರ್ಥಿಗಳ ಮಾತಿಗೆ ಸಿಕ್ಕು ಹಣವನ್ನು ಕಳೆದುಕೊಳ್ಳಬಹುದು
- ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ
- ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಒಳ್ಳೆ ವಿಚಾರ, ಶುಭಸುದ್ದಿಗಳಿಂದ ದಿನ ಆರಂಭವಾಗುತ್ತದೆ
- ಇಂದು ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ
- ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಪೂರ್ತಿ ನೀಡುತ್ತದೆ
- ಇಂದು ಬಹಳ ಸಂತೋಷದಿಂದ ಎಲ್ಲ ಕೆಲಸಗಳನ್ನ ಮಾಡುತ್ತೀರಿ
- ಇಂದು ಹಣ ಹೆಚ್ಚಾಗಿ ಖರ್ಚಾಗಬಹುದು
- ಸದಾ ಆನಂದವಾಗಿರಿ ಶುಭವಾಗುತ್ತದೆ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಆರೋಗ್ಯ ಸಮಸ್ಯೆ ತುಂಬಾ ಕಾಡಬಹುದಾದ ದಿನ
- ಆಹಾರದ ವ್ಯತ್ಯಾಸದಿಂದ ಶರೀರದ ಆರೋಗ್ಯದ ದುಸ್ಥಿತಿಗೆ ಕಾರಣ
- ಅನಾರೋಗ್ಯ ಮನೆಯಲ್ಲಿಯ ಔಷಧಿಗಳಿಂದ ಗುಣವಾಗಬಹುದು ಆದರೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ
- ಇಂದು ಅಗತ್ಯವಾಗಿ ವಿಶ್ರಾಂತಿ ಮಾಡಿ
- ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ
- ಮೂಕಾಂಬಿಕಾ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರಿಕ, ಸಂಸಾರಿಕವಾಗಿ ಮನೆಯವರು ತೆಗೆದುಕೊಳ್ಳುವ ನಿರ್ಧಾರ ಇಡೀ ನಿಮ್ಮ ವ್ಯವಹಾರವನ್ನ ಅಲ್ಲೋಲ-ಕಲ್ಲೋಲ ಮಾಡಬಹುದು
- ಇಂದು ಜಗಳ, ವಾದ-ವಿವಾದಗಳಿಗೆ ಅವಕಾಶ ಮಾಡಿ ಕೊಡಬೇಡಿ
- ಇಂದು ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ತಾಳ್ಮೆಯಿಂದ ವರ್ತಿಸಿ
- ಇಂದು ಯಾವುದೋ ವಿಚಾರಕ್ಕೆ ನೀವಿರುವ ಸ್ಥಳ, ವಾತಾವರಣ ರಣರಂಗವಾಗುವ ಸೂಚನೆಯಿದೆ
- ಕೆಂಪು ಹೂವಿನಿಂದ ಕಾಳಿಕಾ ದೇವಿಯನ್ನು ಅರ್ಚನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅತೀ ಮುಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗಿ ತೊಂದರೆಯಾಗಬಹುದು
- ಅಗೌರವ, ಹಣದ ನಷ್ಟ ಎಲ್ಲಾ ರೀತಿಯಿಂದ ಅವಮಾನ ಇಂದು ನೋಡಬಹುದು
- ಅನಗತ್ಯವಾದ, ಸಂಬಂಧಪಡದ ಗೊಂದಲಗಳಿಗೆ ಭಾಜನರಾಗಬಹುದು
- ಮಹಿಳೆಯರು ನಿಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಳ್ಳದೆ ಇರುವುದು ಒಳ್ಳೆಯದು
- ಹಿಂದಿನ ಯಾವುದೋ ಒಂದು ವಿಚಾರ ಕುಟುಂಬದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಬಹುದು
- ಮನೆಯಲ್ಲಿ ನಿಮಗೆ ಅಥವಾ ಮನೆಯವರಿಗೆ ನೆಮ್ಮದಿ ಇಲ್ಲದಂತಹ ದಿನ ಗಮನಿಸಿ
- ಈಶ್ವರನಿಗೆ ತುಂಬೆ ಹೂವಿನಿಂದ ಅರ್ಚನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಹಲವಾರು ದಿನದ ಕನಸು ಇಂದು ನೆರವೇರಬಹುದು
- ಇಂದು ವಿಶೇಷವಾದ ಸಾಧನೆ ಮಾಡಿ ಗೌರವ, ಪ್ರಶಸ್ತಿಗಳಿಗೆ ಭಾಜನರಾಗುವ ಸೂಚನೆಯಿದೆ
- ಕಣ್ಣು ಮತ್ತು ತಲೆನೋವಿನ ಸಮಸ್ಯೆ ಕಾಡಬಹುದು ಸ್ವಲ್ಪ ಜಾಗ್ರತೆವಹಿಸಿ
- ತಾಂತ್ರಿಕವಾಗಿ ಬಳಸುವ ವಸ್ತುಗಳನ್ನು ಅಗತ್ಯಕ್ಕೆ ಅನುಸಾರ ಬಳಸಿ
- ವಿನಾಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ
- ಅಶ್ವಿನಿ ದೇವತೆಗಳನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮನೆಯ ವಾತಾವರಣ ಚೆನ್ನಾಗಿರುತ್ತದೆ
- ವ್ಯವಹಾರದಲ್ಲಿ ಅನುಕೂಲವಾಗುವ ಸಾಧ್ಯತೆಯಿದೆ
- ಸರ್ಕಾರಿ ಹರಾಜಿನ ಪ್ರಕ್ರಿಯೆಗಳಲ್ಲಿ ನೀವು ಭಾಗವಹಿಸುವ ಯೋಗವಿದೆ
- ಇಂದು ವಾಹನ ಖರೀದಿ ಮಾಡುವ ಯೋಜನೆಯಿದ್ದರೆ ಬೇಡ, ನಷ್ಟವಾಗಬಹುದು
- ಭೂಮಿಗೆ ಸಂಬಂಧಪಟ್ಟ ವಿಚಾರದಲ್ಲಿ ಲಾಭವಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಿ
- ವಿದ್ಯಾರ್ಥಿಗಳು ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದ ಹಿನ್ನಡೆ ಉಂಟಾಗಬಹುದು
- ತಪ್ಪನ್ನೇ ಸರಿ ಅಂತ ಹೇಳಿ ವಾದ ಮಾಡುವ ಸ್ಥಿತಿಗೆ ಹೋಗಬಹುದು
- ತಪ್ಪು ತಿಳುವಳಿಕೆ ಬಗ್ಗೆ ಗೊತ್ತಾದ ಮೇಲೆ ಪಶ್ಚಾತಾಪ ಪಡಬಹುದು
- ಯಾವುದೇ ಕಾರಣಕ್ಕೂ ನಾನು ತಿಳಿದಿರುವುದೇ ಸರಿ ಎಂಬ ಬುದ್ಧಿ ಬೇಡ
- ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ನಡತೆ, ವರ್ತನೆಗಳಿಂದ ಬಂಧುಗಳು, ಸ್ನೇಹಿತರು ದೂರವಾಗಬಹುದು
- ಅಧಿಕಾರಿಗಳು, ರಾಜಕಾರಣಿಗಳ ಜೊತೆ ಸೌಮ್ಯವಾಗಿ ಉತ್ತಮ ರೀತಿಯಲ್ಲಿ ವ್ಯವಹರಿಸಿ
- ವಿನಾಕಾರಣ ಯಾವುದೇ ತೊಂದರೆಗೆ ಆಹ್ವಾನ ಕೊಡಬೇಡಿ
- ನಿಮಗೆ ಆಗುವಂತ ಕಷ್ಟ ನಷ್ಟಗಳನ್ನು ನೀವೇ ಪರಿಹಾರ ಮಾಡಿಕೊಳ್ಳಿ
- ಪ್ರಾಣಿಗಳಿಂದ ಗಾಯಗಳಾಗುವ ಸಾಧ್ಯತೆಯಿದೆ ಪ್ರಾಣಿಗಳಿಂದ ದೂರವಿರಿ
- ಕಾಲಭೈರವನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ