newsfirstkannada.com

ಹಲವು ದಿನಗಳ ಕನಸು ಇಂದು ನನಸು, ಸಂಬಂಧಿಕರಿಂದ ಶುಭವಾರ್ತೆ- ಇಲ್ಲಿದೆ ಇಂದಿನ ಭವಿಷ್ಯ

Share :

Published April 5, 2024 at 6:04am

    ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಫೂರ್ತಿ

    ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ

    ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ಹೊಂದಿದವರಿಗೆ ಲಾಭದ ದಿನ
  • ವೈಯಕ್ತಿಕ ಯಶಸ್ಸಿಗೆ, ಪ್ರಗತಿಗೆ ಉತ್ತಮ ದಿನ
  • ಇಂದು ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ದಿನ
  • ಆರ್ಥಿಕವಾಗಿ ಅನುಕೂಲ ಇರುವ ದಿನ
  • ನಿಮ್ಮ ವೃತ್ತಿಯ ನಿಮಿತ್ಯವಾಗಿ ದೂರದೂರಿಗೆ ಪ್ರಯಾಣ ಮಾಡುವ ಯೋಗವಿದೆ
  • ಸಂಬಂಧಿಕರಿಂದ ಶುಭವಾರ್ತೆ ಬರಬಹುದು
  • ಇಂದು ಪಶು-ಪಕ್ಷಿಗಳಿಗೆ ಆಹಾರ, ನೀರು ನೀಡಿ

ವೃಷಭ

  • ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು
  • ಸ್ನೇಹಿತರ, ಬಂಧುಗಳ ವಿವಾಹ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟಕ್ಕೆ ಸಿಲುಕಬಹುದು
  • ಬೇರೆಯವರ ಸಹಾಯ ಮಾಡುವ ವಿಚಾರದಲ್ಲಿ ಕಷ್ಟಕ್ಕೆ ಸಿಲುಕಬಹುದು
  • ಇಂದು ಅವಮಾನವಾಗುವ ಸಾಧ್ಯತೆ ಹೆಚ್ಚಾಗಿದೆ
  • ಇಂದು ಕೆಟ್ಟ ಭಾಷೆಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ
  • ಕುಟುಂಬದ ಸೌಖ್ಯ, ಆನಂದ ಎಲ್ಲವೂ ಇಂದು ನಿಮ್ಮ ಕೈಯಲ್ಲಿದೆ
  • ಇಂದು ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ವರ್ತಿಸಿ
  • ವಿಕಲಚೇತನರಿಗೆ ರಸಪೂರಿತ ಹಣ್ಣುಗಳನ್ನು ನೀಡಿ

ಮಿಥುನ

  • ಇಂದು ಯಾವುದೇ ಶುಭ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ
  • ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ
  • ಇಂದು ತುಂಬಾ ಒತ್ತಡದಿಂದ ಕೂಡಿರುವಂತಹ ದಿನ ಆದರೆ ಅಷ್ಟೇ ಅನುಕೂಲವಿದೆ
  • ನಿಮ್ಮ ಬಿಡುವಿಲ್ಲದ ಕೆಲಸ, ಕಾರ್ಯಗಳಿಂದ ಸ್ನೇಹಿತರು, ಕುಟುಂಬದವರು ಸಂತೋಷ ಪಡುತ್ತಾರೆ
  • ಪರಶುರಾಮನನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊಳ್ಳಿ ಉದ್ವಿಗ್ನ, ಉದ್ವೇಗಕ್ಕೆ ಒಳಗಾಗಬೇಡಿ
  • ಪ್ರತಿನಿತ್ಯದ ಖರ್ಚಿಗೆ ಹಣದ ಅಡಚಣೆಯಾಗುವ ಸಾಧ್ಯತೆಯಿದೆ
  • ಸ್ವಾರ್ಥಿಗಳು ನಿಮ್ಮ ಹಿಂದೆ ಬಿದ್ದು ತೊಂದರೆ ಮಾಡಬಹುದು ಎಚ್ಚರ
  • ಸ್ವಾರ್ಥಿಗಳ ಮಾತಿಗೆ ಸಿಕ್ಕು ಹಣವನ್ನು ಕಳೆದುಕೊಳ್ಳಬಹುದು
  • ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ
  • ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಇಂದು ಒಳ್ಳೆ ವಿಚಾರ, ಶುಭಸುದ್ದಿಗಳಿಂದ ದಿನ ಆರಂಭವಾಗುತ್ತದೆ
  • ಇಂದು ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ
  • ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಪೂರ್ತಿ ನೀಡುತ್ತದೆ
  • ಇಂದು ಬಹಳ ಸಂತೋಷದಿಂದ ಎಲ್ಲ ಕೆಲಸಗಳನ್ನ ಮಾಡುತ್ತೀರಿ
  • ಇಂದು ಹಣ ಹೆಚ್ಚಾಗಿ ಖರ್ಚಾಗಬಹುದು
  • ಸದಾ ಆನಂದವಾಗಿರಿ ಶುಭವಾಗುತ್ತದೆ

ಕನ್ಯಾ

  • ಇಂದು ಆರೋಗ್ಯ ಸಮಸ್ಯೆ ತುಂಬಾ ಕಾಡಬಹುದಾದ ದಿನ
  • ಆಹಾರದ ವ್ಯತ್ಯಾಸದಿಂದ ಶರೀರದ ಆರೋಗ್ಯದ ದುಸ್ಥಿತಿಗೆ ಕಾರಣ
  • ಅನಾರೋಗ್ಯ ಮನೆಯಲ್ಲಿಯ ಔಷಧಿಗಳಿಂದ ಗುಣವಾಗಬಹುದು ಆದರೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ
  • ಇಂದು ಅಗತ್ಯವಾಗಿ ವಿಶ್ರಾಂತಿ ಮಾಡಿ
  • ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ
  • ಮೂಕಾಂಬಿಕಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರಿಕ, ಸಂಸಾರಿಕವಾಗಿ ಮನೆಯವರು ತೆಗೆದುಕೊಳ್ಳುವ ನಿರ್ಧಾರ ಇಡೀ ನಿಮ್ಮ ವ್ಯವಹಾರವನ್ನ ಅಲ್ಲೋಲ-ಕಲ್ಲೋಲ ಮಾಡಬಹುದು
  • ಇಂದು ಜಗಳ, ವಾದ-ವಿವಾದಗಳಿಗೆ ಅವಕಾಶ ಮಾಡಿ ಕೊಡಬೇಡಿ
  • ಇಂದು ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ತಾಳ್ಮೆಯಿಂದ ವರ್ತಿಸಿ
  • ಇಂದು ಯಾವುದೋ ವಿಚಾರಕ್ಕೆ ನೀವಿರುವ ಸ್ಥಳ, ವಾತಾವರಣ ರಣರಂಗವಾಗುವ ಸೂಚನೆಯಿದೆ
  • ಕೆಂಪು ಹೂವಿನಿಂದ ಕಾಳಿಕಾ ದೇವಿಯನ್ನು ಅರ್ಚನೆ ಮಾಡಿ

ವೃಶ್ಚಿಕ

  • ಅತೀ ಮುಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗಿ ತೊಂದರೆಯಾಗಬಹುದು
  • ಅಗೌರವ, ಹಣದ ನಷ್ಟ ಎಲ್ಲಾ ರೀತಿಯಿಂದ ಅವಮಾನ ಇಂದು ನೋಡಬಹುದು
  • ಅನಗತ್ಯವಾದ, ಸಂಬಂಧಪಡದ ಗೊಂದಲಗಳಿಗೆ ಭಾಜನರಾಗಬಹುದು
  • ಮಹಿಳೆಯರು ನಿಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಳ್ಳದೆ ಇರುವುದು ಒಳ್ಳೆಯದು
  • ಹಿಂದಿನ ಯಾವುದೋ ಒಂದು ವಿಚಾರ ಕುಟುಂಬದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಬಹುದು
  • ಮನೆಯಲ್ಲಿ ನಿಮಗೆ ಅಥವಾ ಮನೆಯವರಿಗೆ ನೆಮ್ಮದಿ ಇಲ್ಲದಂತಹ ದಿನ ಗಮನಿಸಿ
  • ಈಶ್ವರನಿಗೆ ತುಂಬೆ ಹೂವಿನಿಂದ ಅರ್ಚನೆ ಮಾಡಿ

ಧನುಸ್ಸು

  • ಹಲವಾರು ದಿನದ ಕನಸು ಇಂದು ನೆರವೇರಬಹುದು
  • ಇಂದು ವಿಶೇಷವಾದ ಸಾಧನೆ ಮಾಡಿ ಗೌರವ, ಪ್ರಶಸ್ತಿಗಳಿಗೆ ಭಾಜನರಾಗುವ ಸೂಚನೆಯಿದೆ
  • ಕಣ್ಣು ಮತ್ತು ತಲೆನೋವಿನ ಸಮಸ್ಯೆ ಕಾಡಬಹುದು ಸ್ವಲ್ಪ ಜಾಗ್ರತೆವಹಿಸಿ
  • ತಾಂತ್ರಿಕವಾಗಿ ಬಳಸುವ ವಸ್ತುಗಳನ್ನು ಅಗತ್ಯಕ್ಕೆ ಅನುಸಾರ ಬಳಸಿ
  • ವಿನಾಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ
  • ಅಶ್ವಿನಿ ದೇವತೆಗಳನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ವ್ಯವಹಾರದಲ್ಲಿ ಅನುಕೂಲವಾಗುವ ಸಾಧ್ಯತೆಯಿದೆ
  • ಸರ್ಕಾರಿ ಹರಾಜಿನ ಪ್ರಕ್ರಿಯೆಗಳಲ್ಲಿ ನೀವು ಭಾಗವಹಿಸುವ ಯೋಗವಿದೆ
  • ಇಂದು ವಾಹನ ಖರೀದಿ ಮಾಡುವ ಯೋಜನೆಯಿದ್ದರೆ ಬೇಡ, ನಷ್ಟವಾಗಬಹುದು
  • ಭೂಮಿಗೆ ಸಂಬಂಧಪಟ್ಟ ವಿಚಾರದಲ್ಲಿ ಲಾಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಿ
  • ವಿದ್ಯಾರ್ಥಿಗಳು ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದ ಹಿನ್ನಡೆ ಉಂಟಾಗಬಹುದು
  • ತಪ್ಪನ್ನೇ ಸರಿ ಅಂತ ಹೇಳಿ ವಾದ ಮಾಡುವ ಸ್ಥಿತಿಗೆ ಹೋಗಬಹುದು
  • ತಪ್ಪು ತಿಳುವಳಿಕೆ ಬಗ್ಗೆ ಗೊತ್ತಾದ ಮೇಲೆ ಪಶ್ಚಾತಾಪ ಪಡಬಹುದು
  • ಯಾವುದೇ ಕಾರಣಕ್ಕೂ ನಾನು ತಿಳಿದಿರುವುದೇ ಸರಿ ಎಂಬ ಬುದ್ಧಿ ಬೇಡ
  • ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ನಡತೆ, ವರ್ತನೆಗಳಿಂದ ಬಂಧುಗಳು, ಸ್ನೇಹಿತರು ದೂರವಾಗಬಹುದು
  • ಅಧಿಕಾರಿಗಳು, ರಾಜಕಾರಣಿಗಳ ಜೊತೆ ಸೌಮ್ಯವಾಗಿ ಉತ್ತಮ ರೀತಿಯಲ್ಲಿ ವ್ಯವಹರಿಸಿ
  • ವಿನಾಕಾರಣ ಯಾವುದೇ ತೊಂದರೆಗೆ ಆಹ್ವಾನ ಕೊಡಬೇಡಿ
  • ನಿಮಗೆ ಆಗುವಂತ ಕಷ್ಟ ನಷ್ಟಗಳನ್ನು ನೀವೇ ಪರಿಹಾರ ಮಾಡಿಕೊಳ್ಳಿ
  • ಪ್ರಾಣಿಗಳಿಂದ ಗಾಯಗಳಾಗುವ ಸಾಧ್ಯತೆಯಿದೆ ಪ್ರಾಣಿಗಳಿಂದ ದೂರವಿರಿ
  • ಕಾಲಭೈರವನನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಲವು ದಿನಗಳ ಕನಸು ಇಂದು ನನಸು, ಸಂಬಂಧಿಕರಿಂದ ಶುಭವಾರ್ತೆ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಫೂರ್ತಿ

    ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ

    ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ಹೊಂದಿದವರಿಗೆ ಲಾಭದ ದಿನ
  • ವೈಯಕ್ತಿಕ ಯಶಸ್ಸಿಗೆ, ಪ್ರಗತಿಗೆ ಉತ್ತಮ ದಿನ
  • ಇಂದು ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ದಿನ
  • ಆರ್ಥಿಕವಾಗಿ ಅನುಕೂಲ ಇರುವ ದಿನ
  • ನಿಮ್ಮ ವೃತ್ತಿಯ ನಿಮಿತ್ಯವಾಗಿ ದೂರದೂರಿಗೆ ಪ್ರಯಾಣ ಮಾಡುವ ಯೋಗವಿದೆ
  • ಸಂಬಂಧಿಕರಿಂದ ಶುಭವಾರ್ತೆ ಬರಬಹುದು
  • ಇಂದು ಪಶು-ಪಕ್ಷಿಗಳಿಗೆ ಆಹಾರ, ನೀರು ನೀಡಿ

ವೃಷಭ

  • ಇಂದು ಕೋಪಕ್ಕೆ ಕಡಿವಾಣ ಹಾಕಿ ಇಲ್ಲದಿದ್ದರೆ ತೊಂದರೆಯಾಗಬಹುದು
  • ಸ್ನೇಹಿತರ, ಬಂಧುಗಳ ವಿವಾಹ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟಕ್ಕೆ ಸಿಲುಕಬಹುದು
  • ಬೇರೆಯವರ ಸಹಾಯ ಮಾಡುವ ವಿಚಾರದಲ್ಲಿ ಕಷ್ಟಕ್ಕೆ ಸಿಲುಕಬಹುದು
  • ಇಂದು ಅವಮಾನವಾಗುವ ಸಾಧ್ಯತೆ ಹೆಚ್ಚಾಗಿದೆ
  • ಇಂದು ಕೆಟ್ಟ ಭಾಷೆಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ
  • ಕುಟುಂಬದ ಸೌಖ್ಯ, ಆನಂದ ಎಲ್ಲವೂ ಇಂದು ನಿಮ್ಮ ಕೈಯಲ್ಲಿದೆ
  • ಇಂದು ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ವರ್ತಿಸಿ
  • ವಿಕಲಚೇತನರಿಗೆ ರಸಪೂರಿತ ಹಣ್ಣುಗಳನ್ನು ನೀಡಿ

ಮಿಥುನ

  • ಇಂದು ಯಾವುದೇ ಶುಭ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ
  • ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ
  • ಇಂದು ತುಂಬಾ ಒತ್ತಡದಿಂದ ಕೂಡಿರುವಂತಹ ದಿನ ಆದರೆ ಅಷ್ಟೇ ಅನುಕೂಲವಿದೆ
  • ನಿಮ್ಮ ಬಿಡುವಿಲ್ಲದ ಕೆಲಸ, ಕಾರ್ಯಗಳಿಂದ ಸ್ನೇಹಿತರು, ಕುಟುಂಬದವರು ಸಂತೋಷ ಪಡುತ್ತಾರೆ
  • ಪರಶುರಾಮನನ್ನು ಪ್ರಾರ್ಥನೆ ಮಾಡಿ

ಕಟಕ

  • ನಿಮ್ಮ ಮನಸ್ಸಿನ ಶಾಂತತೆಯನ್ನು ಕಾಪಾಡಿಕೊಳ್ಳಿ ಉದ್ವಿಗ್ನ, ಉದ್ವೇಗಕ್ಕೆ ಒಳಗಾಗಬೇಡಿ
  • ಪ್ರತಿನಿತ್ಯದ ಖರ್ಚಿಗೆ ಹಣದ ಅಡಚಣೆಯಾಗುವ ಸಾಧ್ಯತೆಯಿದೆ
  • ಸ್ವಾರ್ಥಿಗಳು ನಿಮ್ಮ ಹಿಂದೆ ಬಿದ್ದು ತೊಂದರೆ ಮಾಡಬಹುದು ಎಚ್ಚರ
  • ಸ್ವಾರ್ಥಿಗಳ ಮಾತಿಗೆ ಸಿಕ್ಕು ಹಣವನ್ನು ಕಳೆದುಕೊಳ್ಳಬಹುದು
  • ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ
  • ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಇಂದು ಒಳ್ಳೆ ವಿಚಾರ, ಶುಭಸುದ್ದಿಗಳಿಂದ ದಿನ ಆರಂಭವಾಗುತ್ತದೆ
  • ಇಂದು ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ
  • ಮನೆಯವರ ಪ್ರೀತಿ ಸಂತೋಷ, ದೊಡ್ಡವರ ಹಾರೈಕೆ ನಿಮ್ಮ ಕೆಲಸಕ್ಕೆ ಸ್ಪೂರ್ತಿ ನೀಡುತ್ತದೆ
  • ಇಂದು ಬಹಳ ಸಂತೋಷದಿಂದ ಎಲ್ಲ ಕೆಲಸಗಳನ್ನ ಮಾಡುತ್ತೀರಿ
  • ಇಂದು ಹಣ ಹೆಚ್ಚಾಗಿ ಖರ್ಚಾಗಬಹುದು
  • ಸದಾ ಆನಂದವಾಗಿರಿ ಶುಭವಾಗುತ್ತದೆ

ಕನ್ಯಾ

  • ಇಂದು ಆರೋಗ್ಯ ಸಮಸ್ಯೆ ತುಂಬಾ ಕಾಡಬಹುದಾದ ದಿನ
  • ಆಹಾರದ ವ್ಯತ್ಯಾಸದಿಂದ ಶರೀರದ ಆರೋಗ್ಯದ ದುಸ್ಥಿತಿಗೆ ಕಾರಣ
  • ಅನಾರೋಗ್ಯ ಮನೆಯಲ್ಲಿಯ ಔಷಧಿಗಳಿಂದ ಗುಣವಾಗಬಹುದು ಆದರೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ
  • ಇಂದು ಅಗತ್ಯವಾಗಿ ವಿಶ್ರಾಂತಿ ಮಾಡಿ
  • ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ
  • ಮೂಕಾಂಬಿಕಾ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ವ್ಯವಹಾರಿಕ, ಸಂಸಾರಿಕವಾಗಿ ಮನೆಯವರು ತೆಗೆದುಕೊಳ್ಳುವ ನಿರ್ಧಾರ ಇಡೀ ನಿಮ್ಮ ವ್ಯವಹಾರವನ್ನ ಅಲ್ಲೋಲ-ಕಲ್ಲೋಲ ಮಾಡಬಹುದು
  • ಇಂದು ಜಗಳ, ವಾದ-ವಿವಾದಗಳಿಗೆ ಅವಕಾಶ ಮಾಡಿ ಕೊಡಬೇಡಿ
  • ಇಂದು ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ತಾಳ್ಮೆಯಿಂದ ವರ್ತಿಸಿ
  • ಇಂದು ಯಾವುದೋ ವಿಚಾರಕ್ಕೆ ನೀವಿರುವ ಸ್ಥಳ, ವಾತಾವರಣ ರಣರಂಗವಾಗುವ ಸೂಚನೆಯಿದೆ
  • ಕೆಂಪು ಹೂವಿನಿಂದ ಕಾಳಿಕಾ ದೇವಿಯನ್ನು ಅರ್ಚನೆ ಮಾಡಿ

ವೃಶ್ಚಿಕ

  • ಅತೀ ಮುಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗಿ ತೊಂದರೆಯಾಗಬಹುದು
  • ಅಗೌರವ, ಹಣದ ನಷ್ಟ ಎಲ್ಲಾ ರೀತಿಯಿಂದ ಅವಮಾನ ಇಂದು ನೋಡಬಹುದು
  • ಅನಗತ್ಯವಾದ, ಸಂಬಂಧಪಡದ ಗೊಂದಲಗಳಿಗೆ ಭಾಜನರಾಗಬಹುದು
  • ಮಹಿಳೆಯರು ನಿಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಳ್ಳದೆ ಇರುವುದು ಒಳ್ಳೆಯದು
  • ಹಿಂದಿನ ಯಾವುದೋ ಒಂದು ವಿಚಾರ ಕುಟುಂಬದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಬಹುದು
  • ಮನೆಯಲ್ಲಿ ನಿಮಗೆ ಅಥವಾ ಮನೆಯವರಿಗೆ ನೆಮ್ಮದಿ ಇಲ್ಲದಂತಹ ದಿನ ಗಮನಿಸಿ
  • ಈಶ್ವರನಿಗೆ ತುಂಬೆ ಹೂವಿನಿಂದ ಅರ್ಚನೆ ಮಾಡಿ

ಧನುಸ್ಸು

  • ಹಲವಾರು ದಿನದ ಕನಸು ಇಂದು ನೆರವೇರಬಹುದು
  • ಇಂದು ವಿಶೇಷವಾದ ಸಾಧನೆ ಮಾಡಿ ಗೌರವ, ಪ್ರಶಸ್ತಿಗಳಿಗೆ ಭಾಜನರಾಗುವ ಸೂಚನೆಯಿದೆ
  • ಕಣ್ಣು ಮತ್ತು ತಲೆನೋವಿನ ಸಮಸ್ಯೆ ಕಾಡಬಹುದು ಸ್ವಲ್ಪ ಜಾಗ್ರತೆವಹಿಸಿ
  • ತಾಂತ್ರಿಕವಾಗಿ ಬಳಸುವ ವಸ್ತುಗಳನ್ನು ಅಗತ್ಯಕ್ಕೆ ಅನುಸಾರ ಬಳಸಿ
  • ವಿನಾಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ
  • ಅಶ್ವಿನಿ ದೇವತೆಗಳನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ವ್ಯವಹಾರದಲ್ಲಿ ಅನುಕೂಲವಾಗುವ ಸಾಧ್ಯತೆಯಿದೆ
  • ಸರ್ಕಾರಿ ಹರಾಜಿನ ಪ್ರಕ್ರಿಯೆಗಳಲ್ಲಿ ನೀವು ಭಾಗವಹಿಸುವ ಯೋಗವಿದೆ
  • ಇಂದು ವಾಹನ ಖರೀದಿ ಮಾಡುವ ಯೋಜನೆಯಿದ್ದರೆ ಬೇಡ, ನಷ್ಟವಾಗಬಹುದು
  • ಭೂಮಿಗೆ ಸಂಬಂಧಪಟ್ಟ ವಿಚಾರದಲ್ಲಿ ಲಾಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಿ
  • ವಿದ್ಯಾರ್ಥಿಗಳು ನಿಮ್ಮ ಅತಿಯಾದ ಬುದ್ಧಿವಂತಿಕೆಯಿಂದ ಹಿನ್ನಡೆ ಉಂಟಾಗಬಹುದು
  • ತಪ್ಪನ್ನೇ ಸರಿ ಅಂತ ಹೇಳಿ ವಾದ ಮಾಡುವ ಸ್ಥಿತಿಗೆ ಹೋಗಬಹುದು
  • ತಪ್ಪು ತಿಳುವಳಿಕೆ ಬಗ್ಗೆ ಗೊತ್ತಾದ ಮೇಲೆ ಪಶ್ಚಾತಾಪ ಪಡಬಹುದು
  • ಯಾವುದೇ ಕಾರಣಕ್ಕೂ ನಾನು ತಿಳಿದಿರುವುದೇ ಸರಿ ಎಂಬ ಬುದ್ಧಿ ಬೇಡ
  • ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ನಡತೆ, ವರ್ತನೆಗಳಿಂದ ಬಂಧುಗಳು, ಸ್ನೇಹಿತರು ದೂರವಾಗಬಹುದು
  • ಅಧಿಕಾರಿಗಳು, ರಾಜಕಾರಣಿಗಳ ಜೊತೆ ಸೌಮ್ಯವಾಗಿ ಉತ್ತಮ ರೀತಿಯಲ್ಲಿ ವ್ಯವಹರಿಸಿ
  • ವಿನಾಕಾರಣ ಯಾವುದೇ ತೊಂದರೆಗೆ ಆಹ್ವಾನ ಕೊಡಬೇಡಿ
  • ನಿಮಗೆ ಆಗುವಂತ ಕಷ್ಟ ನಷ್ಟಗಳನ್ನು ನೀವೇ ಪರಿಹಾರ ಮಾಡಿಕೊಳ್ಳಿ
  • ಪ್ರಾಣಿಗಳಿಂದ ಗಾಯಗಳಾಗುವ ಸಾಧ್ಯತೆಯಿದೆ ಪ್ರಾಣಿಗಳಿಂದ ದೂರವಿರಿ
  • ಕಾಲಭೈರವನನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More