/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರವನ್ನು ಚರ್ಚಿಸಬಹುದು
- ಅಣ್ಣ-ತಮ್ಮಂದಿರು ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
- ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
- ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿವೆ
- ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಲಿದೆ
- ಕಲಾಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೊಸ ಅವಕಾಶಗಳು ಸಿಗಲಿದೆ
- ಮನೆ ದೇವರನ್ನು ಆರಾಧಿಸಿ
ವೃಷಭ
- ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆ ಆಗಲಿದೆ
- ಅಧಿಕಾರಿ ವರ್ಗದವರಿಂದ ಮೆಚ್ಚುಗೆ ಸಿಗಲಿದೆ
- ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ
- ಇಂದು ಸತಿ, ಪತಿಗಳಲ್ಲಿ ಜಗಳ ಬೇಡ
- ವ್ಯಾಪಾರಿಗಳಿಗೆ ಅಲ್ಪ ಲಾಭ, ನಷ್ಟದ ಭಯ ದೂರವಾಗಲಿದೆ
- ಕೆಲಸ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ
- ವಿಷ್ಣು ಸಹಸ್ರನಾಮವನ್ನು ಪಠಿಸಿ
ಮಿಥುನ
- ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
- ಇಂದು ಅನಾವಶ್ಯಕ ಪ್ರಯಾಣ ಬೇಡ
- ಉಚಿತ ಸಮಯವನ್ನು ಅಧ್ಯಯನಕ್ಕೆ ಅಥವಾ ವಿಚಾರ ತಿಳಿಯಲು ವಿನಿಯೋಗಿಸಿ
- ನಕಲಿ ಖರೀದಿಯಿಂದ ಮೋಸ ಆಗಬಹುದು
- ಉದ್ಯೋಗದಲ್ಲಿ ಹಕ್ಕು ಕಡಿಮೆಯಾಗಬಹುದು
- ಹಣದ ವಿಚಾರಕ್ಕೆ ಜಗಳದ ಸಾಧ್ಯತೆ ಇದೆ
- ಗಣಪತಿ ಅಷ್ಟೋತ್ತರ ಶತನಾಮ ಪಠಿಸಿ
ಕಟಕ
- ಕಮಿಷನ್ ಏಜೆಂಟ್ಸ್ ಗಳಿಗೆ ಲಾಭವಿದೆ
- ಮನೆಯವರಿಗೆ ಸಂತೋಷ ಮತ್ತು ತೃಪ್ತಿ ಸಿಗಲಿದೆ
- ತುಂಬಾ ಕೆಲಸದ ಒತ್ತಡ, ತಕ್ಕ ಆದಾಯ ಸಿಗಲಿದೆ
- ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯವಿದೆ
- ಮಕ್ಕಳಿಗಾಗಿ ಹಣ ವ್ಯಯವಾಗಲಿದೆ
- ಶಿವಾರಾಧನೆ ಮಾಡಿ
ಸಿಂಹ
- ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
- ಜವಾಬ್ದಾರಿ ಹೊತ್ತು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ರಾಜಕಾರಣಿಗಳಿಂದ ಅನುಕೂಲವಿದೆ
- ಕುಟುಂಬದವರ ಸಹಕಾರ ಸಿಗಬಹುದು
- ತುಂಬಾ ತಾಳ್ಮೆಯಿಂದ ಕೆಲಸ ಮಾಡಿದ ನೀವು ಜನ ಮೆಚ್ಚುಗೆಯನ್ನು ಪಡೆಯುತ್ತೀರಿ
- ಹಣದ ಲಾಭ ಹೆಸರು ಎಲ್ಲವೂ ನಿಮ್ಮದಾಗಲಿದೆ
- ಗಣಪತಿಗೆ ಗರಿಕೆಯನ್ನು ಅರ್ಪಿಸಿ
ಕನ್ಯಾ
- ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
- ಕುಟುಂಬ ಸದಸ್ಯರ ಜೊತೆ ವೈಮನಸ್ಸು ಬೇಡ
- ವ್ಯಾಪಾರ ಅಥವಾ ವ್ಯವಹಾರದ ಸಮಸ್ಯೆಯನ್ನು ಬೇರೆಯವರಿಗೆ ಹೇಳಬೇಡಿ
- ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ
- ಈ ದಿನ ಹೆಚ್ಚಿನ ದುಃಖವಾಗಬಹುದು
- ಇಂದು ನಿಮಗೆ ಏಕಾಂಗಿತನ ಕಾಡಬಹುದು
- ಪ್ರತ್ಯಂಗಿರಾದೇವಿಯನ್ನು ಪೂಜಿಸಿ
ತುಲಾ
- ತುಂಬಾ ಶ್ರಮ ಪಡಬೇಕಾದ ದಿನ
- ಮಕ್ಕಳಿಗೆ ಹಾರೈಕೆ ಮಾಡುವುದು ನಿಮಗೆ ಸಂತೋಷ ನೀಡಲಿದೆ
- ಇಂದು ಸಾಲದ ವಿಚಾರ ಬೇಡ
- ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
- ವೈವಾಹಿಕ ಜೀವನದಲ್ಲಿ ಅತೃಪ್ತಿ
- ಲಕ್ಷ್ಮಿನಾರಾಯಣ ಪಾರಾಯಣ ಮಾಡಿ
ವೃಶ್ಚಿಕ
- ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
- ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುತ್ತೀರಿ
- ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
- ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
- ಮನೆಯಲ್ಲಿ ಸಂತೋಷ ಸಿಗಲಿದೆ
- ಸಾಲದ ಹಣ ಪಡೆದು ಹೊಸ ಯೋಜನೆ ಮಾಡುವುದರಿಂದ ಶುಭವಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
ಧನುಸ್ಸು
- ಯಾವುದೇ ಬಾಕಿ ಕೆಲಸಗಳನ್ನು ಪೂರ್ಣ ಮಾಡಿ
- ಸ್ವಚ್ಛತೆಗೆ ಆದ್ಯತೆ ನೀಡಿ
- ಇಂದು ಜಗಳ ಮನಸ್ತಾಪ ಬೇಡ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಹೊಂದಬಹುದು
- ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
- ಯುವಕ ಅಥವಾ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಿಗಲಿದೆ
- ದುರ್ಗಾರಾಧನೆ ಮಾಡಿ
ಮಕರ
- ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ
- ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
- ಮನೆಯಲ್ಲಿ ಶುಭ ಕಾರ್ಯಕ್ರಮಗಳ ಚರ್ಚೆ ಆಗಲಿದೆ
- ದೈನಂದಿನ ಕಾರ್ಯಗಳಿಗೆ ಮಹತ್ವ ಸಿಗಲಿದೆ
- ಧಾರ್ಮಿಕ ಚಿಂತನೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
- ವಿಶ್ರಾಂತಿಯಿಲ್ಲದೆ ದುಡಿಮೆಯ ಚಿಂತನೆ ಮಾಡುತ್ತೀರಿ
- ಶಾರದಾ ಪರಮೇಶ್ವರಿಯನ್ನು ಆರಾಧಿಸಿ
ಕುಂಭ
- ಆತ್ಮಾವಲೋಕನದ ದಿನ ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ ಮಾಡುತ್ತೀರಿ
- ಆರೋಗ್ಯದ ಕಡೆ ಗಮನಹರಿಸಿ
- ಮನೆಯವರ ಸಲಹೆ ಮುಖ್ಯವಾಗಿರುತ್ತದೆ
- ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
- ಶಾಂತಿ ಅಥವಾ ತಾಳ್ಮೆಯು ನಿಮಗೆ ಸಹಕರಿಸುತ್ತದೆ
- ನರಸಿಂಹ ಕರಾವಲಂಬ ಸ್ತೋತ್ರವನ್ನು ಪಠಿಸಿ
ಮೀನ
- ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
- ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಂಭೀರದ ವಿಚಾರವಾಗಬಹುದು
- ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯವಾಗಬಹುದು
- ಈ ದಿನ ಮಾತನಾಡುವಾಗ ಹಿಡಿತವಿರಲಿ
- ಮಕ್ಕಳ ಜೊತೆಯಲ್ಲಿ ಸಂತೋಷವಾಗುತ್ತೀರಿ
- ಶಾರದಾ ಪರಮೇಶ್ವರಿಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ