/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಬ್ಬಾ ನಕ್ಷತ್ರ ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.
ಮೇಷ ರಾಶಿ
- ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
- ಕಿರಿಯರು ಮಾರ್ಗದರ್ಶಕರಿಗೆ ಗೌರವ ಕೊಡಬೇಕು
- ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
- ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
- ಹಳೆಯ ಕೆಲಸಗಳಲ್ಲಿ ಪ್ರಗತಿ ಹೊಂದುತ್ತೀರಿ
- ಸಂಜೆಯ ವೇಳೆ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಡಬಹುದು
- ಕುಲದೇವತಾರಾಧನೆ ಮಾಡಿ
ವೃಷಭ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ
- ಪ್ರೇಮಿಗಳಿಗೆ ಅನುಕೂಲವಿದೆ
- ಭೂ ಸಂಬಂಧವಾದ ಲಾಭ ಸಿಗಲಿದೆ
- ಇಂದು ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ದೇಹದಲ್ಲಿ ದೌರ್ಬಲ್ಯ ಕಾಡಬಹುದು
- ಶಿಕ್ಷಣದಲ್ಲಿ ಗಮನಾರ್ಹ ಪ್ರಗತಿ ಹೊಂದುತ್ತೀರಿ
- ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಸಿಗಲಿದೆ
- ಪ್ರೇಮಿಗಳಿಗೆ ಆತಂಕ ಭಯ ಕಾಡಬಹುದು
- ಇಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
- ಮದುವೆಯ ವಿಚಾರ ಪ್ರಸ್ತಾಪ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ಹೊಸದಾಗಿ ಮದುವೆಯಾದವರಲ್ಲಿ ಕಿರಿಕಿರಿಯಾಗಬಹುದು
- ನಿಮ್ಮ ಜವಾಬ್ದಾರಿಯನ್ನು ಇಂದು ಪೂರ್ಣ ಮಾಡಿ
- ಪ್ರಿಯರೊಂದಿಗೆ ಜಗಳವಾಗಬಹುದು
- ಇಂದು ಆರ್ಥಿಕ ಲಾಭವಿದೆ
- ಆರೋಗ್ಯವನ್ನು ಕಾಪಾಡಿಕೊಳ್ಳಿ
- ಮನೆಯಲ್ಲಿ ಸಂಜೆಯ ಹೊತ್ತಿಗೆ ಸಮಸ್ಯೆಯಾಗಬಹುದು
- ಈಶ್ವರನ ಆರಾಧನೆ ಮಾಡಿ
ಸಿಂಹ
- ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
- ಸ್ವಾಭಿಮಾನಕ್ಕೆ ಧಕ್ಕೆ ಬೇಡ
- ಶಿಕ್ಷಣ ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
- ನಿಮ್ಮ ಅನಿಸಿಕೆ ಈಡೇರುವ ದಿನ
- ಇಂದು ಉತ್ತಮ ಸಮಯ ಶುಭಲಾಭಗಳಿದೆ
- ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
- ನಾರಾಯಣ ಸ್ತೋತ್ರ ಪಠಿಸಿ
ಕನ್ಯಾ
- ಕುಟುಂಬದಲ್ಲಿ ಕಿರಿಕಿರಿಯಾಗಬಹುದು
- ಧಾರ್ಮಿಕ ವಿಚಾರಕ್ಕೆ ಗಲಾಟೆಯಾಗಬಹುದು
- ವ್ಯಾಪಾರ ವೃದ್ದಿಗೆ ಹೊಸ ಮಾರ್ಗ
- ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಲಿದೆ
- ಆರೋಗ್ಯ ಸಮಸ್ಯೆ ಅದರಲ್ಲೂ ಗಂಟಲು ನೋವು ಕಾಣಬಹುದು
- ಹಣದ ವಿಚಾರದಲ್ಲಿ ಮನಸ್ತಾಪ
- ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಭಾರಿ ಜಪಿಸಿ
ತುಲಾ
- ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
- ಇಂದು ಬಡ್ತಿಗೆ ಅವಕಾಶಗಳಿವೆ
- ಸಮಾಜಮುಖಿ ಕಾರ್ಯಗಳಲ್ಲಿ ಸಹಕರಿಸುತ್ತೀರಿ
- ಎರಡನೇ ಮದುವೆಯಾದವರಿಗೆ ಸಮಸ್ಯೆಯಾಗಬಹುದು
- ಅತಿಯಾದ ಶ್ರಮ ದೇಹಾಲಸ್ಯ ಉಂಟಾಗಲಿದೆ
- ಆರ್ಥಿಕವಾಗಿ ಸಮಾಧಾನ ಸಿಗಬಹುದು
- ವಿಷ್ಣು ಸಹಸ್ರನಾಮವನ್ನು ಕೇಳಿ
ವೃಶ್ಚಿಕ
- ಉದ್ಯೋಗ ಅಥವಾ ವ್ಯವಹಾರದ ಬಗ್ಗೆ ಚರ್ಚೆ ಮಾಡಿ
- ಸರಿಯಾದ ಆಹಾರವನ್ನು ಸೇವಿಸಿ
- ಅಜೀರ್ಣದಂತಹ ಸಮಸ್ಯೆ ಕಾಡಬಹುದು
- ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗೃತಿಯಿರಲಿ
- ಮನೆಯವರ ಸಲಹೆ ಸಹಕಾರ ಅಗತ್ಯವಾದದ್ದು
- ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
ಧನುಸ್ಸು
- ಮನೆಯಲ್ಲಿ ಮಾತಿಗೆ ಬೆಲೆ ಬರುತ್ತದೆ
- ನಿಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆ ಉಪಯೋಗವಾಗಲಿದೆ
- ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
- ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
- ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
- ಖರ್ಚು ಅಧಿಕವಾಗುವುದರಿಂದ ಬೇಸರವಾಗುತ್ತೀರಿ
- ದುರ್ಗಾರಾಧನೆಯನ್ನು ಮಾಡಿ
ಮಕರ
- ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ
- ನಿಮ್ಮ ಆರೋಗ್ಯವು ಬಹಳ ಮುಖ್ಯವಾಗಲಿದೆ
- ಅಪರಿಚಿತರೊಂದಿಗೆ ಚರ್ಚೆ ಮಾಡುವುದರಿಂದ ಉಪಯೋಗವಿಲ್ಲ
- ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
- ಹೊಸ ವ್ಯಾಪಾರಕ್ಕೆ ಅನುಕೂಲವಿದೆ
- ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
- ಶ್ರೀರಾಮನನ್ನು ಪೂಜಿಸಿ
ಕುಂಭ
- ಕಾನೂನು ವಿಚಾರಗಳಲ್ಲಿ ಜಯವಿದೆ
- ಇಂದು ವ್ಯವಹಾರದಲ್ಲಿ ಲಾಭವಿದೆ
- ಅತಿಥಿಗಳ ಆಗಮನದಿಂದ ಸಂತೋಷ ಪಡುತ್ತೀರಿ
- ಮಕ್ಕಳಿಗೆ ಶುಭ ಸಮಯ
- ವ್ಯವಹಾರ ಅಥವಾ ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
- ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
- ಇಷ್ಟ ದೇವತಾರಾಧನೆಯನ್ನು ಮಾಡಿ
ಮೀನ
- ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟ ಪಡಬೇಕಾಗುತ್ತದೆ
- ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
- ನಿಮ್ಮ ಯೋಜನೆಗಳಿಗೆ ಗಮನಹರಿಸಿ
- ಕುಟುಂಬದ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ್ಯಬೇಡ
- ಅತಿಥಿಗಳಿಗಾಗಿ ಅಥವಾ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ
- ವ್ಯವಹಾರಾನುಕೂಲವಿದೆ ಭವಿಷ್ಯವಿದೆ
- ನವಗ್ರಹರ ಆರಾಧನೆಯನ್ನು ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ