ವೈದ್ಯಕೀಯ ರಂಗದಲ್ಲಿರುವವರಿಗೆ ಗೊಂದಲಗಳು ಸವಾಲುಗಳು ಕಾಡಲಿದೆ
ಮಧ್ಯಾಹ್ನದ ಹೊತ್ತಿಗೆ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾಗಲಿದೆ
ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಗುರಿ ತಲುಪುವುದಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆ ಅನುಕೂಲವಿದ್ದರೂ ಮಾನಸಿಕವಾಗಿ ಸಮಾಧಾನದ ಕೊರತೆ ಹೆಚ್ಚಾಗಿ ಕಾಣುತ್ತದೆ
- ಪ್ರೇಮಿಗಳಲ್ಲಿ ಜಗಳ ಉಂಟಾಗಬಹುದು
- ಇಂದು ಪ್ರಯಾಣವನ್ನು ಮಾಡಬೇಡಿ
- ಕೆಲಸದಲ್ಲಿ ಬೇಜವಾಬ್ದಾರಿ ತನವನ್ನು ತೋರಿಸಬೇಡಿ
- ಆಹಾರದ ಬಗ್ಗೆ ಎಚ್ಚರವಹಿಸಿ
- ಅಪಶಕುನದ ಬಗ್ಗೆ ಗಮನವಿರಲಿ
- ಕುಲದೇವರನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಂಪು ಬಣ್ಣದ ವಸ್ತ್ರದಿಂದ ತೊಂದರೆಯಾಗುವ ಸೂಚನೆ ಇದೆ
- ಆದಾಯ ಅಥವಾ ಹಣದ ಹಿಂದೆ ಹೋಗಿ ಗೌರವವನ್ನು ಕಳೆದುಕೊಳ್ಳುತ್ತೀರಿ
- ದೈಹಿಕವಾಗಿ ಮಾನಸಿಕವಾಗಿ ಒತ್ತಡಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
- ಈ ದಿನ ಆಲಸ್ಯ ತೊಂದರೆಯನ್ನು ಮಾಡಲಿದೆ
- ಬೇರೆಯವರ ಆಶ್ರಯದಲ್ಲಿರುವವರೆಗೆ ಅದರ ಬೆಲೆ ಗೊತ್ತಾಗುವುದಿಲ್ಲ
- ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಗುರಿ ತಲುಪುವುದಿಲ್ಲ
- ಮಕ್ಕಳ ಯಶಸ್ಸಿನ ಬಗ್ಗೆ ಗಮನವಿರಲಿ
- ಮೃತ್ಯುಂಜಯನನ್ನು ಅರ್ಚನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬ ಸದಸ್ಯರ ಬಂಧುತ್ವ ಅನ್ಯೋನ್ಯವಾಗಿರುತ್ತದೆ
- ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಬಹುದು
- ಮಕ್ಕಳ ಸಲಹೆ ದೊಡ್ಡವರಿಗೆ, ದೊಡ್ಡವರ ಮಾರ್ಗದರ್ಶನ ಮಕ್ಕಳಿಗೆ ಅಗತ್ಯವಾಗಿ ಬೇಕಾಗಲಿದೆ
- ವಿದ್ಯಾಭ್ಯಾಸಕ್ಕೆ, ವಿವಾಹದ ವಿಷಯಕ್ಕೆ ಮನೆಯಲ್ಲಿದ್ದ ಅಡ್ಡಿ ಆತಂಕಗಳು, ಸಮಸ್ಯೆಗಳು ದೂರವಾಗಲಿದೆ
- ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ
- ಮನಸ್ಸನ್ನು ಶುದ್ಧ ಮಾಡಿಕೊಳ್ಳಿ
- ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾವಹಾರಿಕವಾಗಿ ಮಾಡಿದ ತಪ್ಪು ನಿಮ್ಮ ಗಮನಕ್ಕೆ ಬಂದರೂ ಅದರ ಬಗ್ಗೆ ತಾತ್ಸಾರ ಮಾಡಿದ ಪರಿಣಾಮ
- ತೊಂದರೆಯನ್ನು ಅನುಭವಿಸಬೇಕಾಗಲಿದೆ
- ನಿಮ್ಮ ತಪ್ಪು ಮಾಹಿತಿಯಿಂದ ಅನರ್ಥವಾಗಿ ಸಮಾಜಕ್ಕೆ ತಪ್ಪು ಸಂದೇಶ ಹೋಗಲಿದೆ
- ನಿಮ್ಮ ಮೇಲಿನವರ ಹಾಗೂ ಪ್ರಭಾವಿ ವ್ಯಕ್ತಿಗಳ ಸಹಕಾರವಿದ್ದರೂ ತೊಂದರೆ ತಪ್ಪಿದಲ್ಲ
- ಇಂದು ಪ್ರೇಮಿಗಳಿಗೆ ಶುಭದಿನ
- ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
- ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಋಣಾತ್ಮಕವಾದಂತಹ ಸಮಸ್ಯೆಗಳು ನಿಮ್ಮನ್ನು ಕಾಡುವಂತಹದ್ದು
- ಹಿಂದೆ ಮಾಡಿದ ತಪ್ಪಿಗೆ ಇಂದು ವಿಷಾದವನ್ನು ವ್ಯಕ್ತಪಡಿಸುತ್ತೀರಿ
- ಆರೋಗ್ಯದ ವಿಚಾರದಲ್ಲಿ ಏರುಪೇರಾಗಬಹುದು
- ಮಧ್ಯಾಹ್ನದ ಹೊತ್ತಿಗೆ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾಗಲಿದೆ
- ಅನಗತ್ಯವಾದ ವಿಚಾರದಲ್ಲಿ ಚರ್ಚೆ ಮಾಡಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ
- ವೈದ್ಯಕೀಯ ರಂಗದಲ್ಲಿರುವವರಿಗೆ ಗೊಂದಲಗಳು ಸವಾಲುಗಳು ಕಾಡಲಿದೆ
- ಕೆಲವು ವಿಚಾರಕ್ಕೆ ಪರಿಹಾರಕ್ಕಿಂತ ಪಶ್ಚಾತ್ತಾಪವೇ ಪರಿಹಾರ ಅಂತ ಹೇಳಬೇಕಾಗಲಿದೆ
- ಶುಭವಾಗಲಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ಪ್ರಗತಿ, ಸಲಹೆ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
- ನಿಮ್ಮ ಅಭಿವೃದ್ದಿಯ ಬಗ್ಗೆ ಪ್ರಾಮಾಣಿಕವಾದ ನಿಷ್ಕಲ್ಮಶವಾದ ಪ್ರಯತ್ನವಿರಲಿ
- ಪ್ರಜ್ಞಾವಂತರು ನಿಮ್ಮ ಸುತ್ತಮುತ್ತಲು ಇದ್ದರೂ ಉಪಯೋಗವಿಲ್ಲ
- ಅವಿವಾಹಿತರ ಕಷ್ಟಗಳನ್ನು ಕೇಳಲು ಯಾರು ಇರುವುದಿಲ್ಲ
- ಸಮಯಕ್ಕೆ ಮಹತ್ವವನ್ನು ನೀಡಬೇಕು
- ನಿಮ್ಮ ಗಟ್ಟಿಯಾದ ಮನಸ್ಥಿತಿ ಸಡಿಲವಾಗಲಿ
- ಆರ್ಥಿಕ ಲಾಭವಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ಗುರು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಗ್ರಹಗತಿ ಚೆನ್ನಾಗಿರುವಾಗ ನಾನೇ ಎಲ್ಲಾ ಸಾಧನೆ ಮಾಡಿದ್ದು ಅಂತ ಹೇಳುವ ನೀವು ಗ್ರಹಗತಿ ಕೆಟ್ಟಾಗ ಬೇರೆಯವರ
- ಮೇಲೆ ನಿಮ್ಮ ತಪ್ಪನ್ನು ಹೊರಿಸುವುದರಿಂದ ತೊಂದರೆಯಾಗಲಿದೆ
- ಸ್ನೇಹಿತರ ನಿಧನದ ವಾರ್ತೆ ಬರಲಿದೆ
- ನಿಮ್ಮ ನಿರೀಕ್ಷೆಗಳು ತುಂಬಾ ಇರಲಿದೆ ಆದರೆ ಕೈಗೂಡುವುದಿಲ್ಲ
- ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಲಿದೆ
- ಅನೇಕ ಜನ ತಮ್ಮ ನೌಕರಿಯನ್ನು ದೂಷಿಸುತ್ತಾ ರಾಜಿನಾಮೆ ಕೊಡಬೇಕೆಂಬ ನೋವಿನಲ್ಲಿರುತ್ತಾರೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೌಟುಂಬಿಕವಾಗಿ ಮನಸ್ತಾಪಗಳು ಬರಲಿದೆ
- ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಶಾಲೆಯಲ್ಲಿ ವಿರುದ್ದವಾದ ಮನಸ್ಥಿತಿ
- ಮಕ್ಕಳು ಅಗತ್ಯವಾಗಿ ಪೋಷಕರ ಶಿಕ್ಷಕರ ಆದೇಶವನ್ನು ಪಾಲಿಸಬೇಕಾಗಲಿದೆ
- ಸುಳ್ಳು ಹೇಳುವವರಿಗೆ ಹಿನ್ನಡೆಯಾಗಬಹುದು
- ಬುದ್ದಿವಂತಿಕೆ ಒಳ್ಳೆಯದು ಅತಿಯಾದ ಬುದ್ದಿವಂತಿಕೆ ತೋರಿಸಿ ಸಿಕ್ಕಿ ಹಾಕಿಕೊಳ್ಳಬೇಡಿ
- ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡ ಸಂಭವಿಸಬಹುದು
- ವಿಷ್ಣು ಸಹಸ್ರನಾಮ ಪಠಣೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮುಂಚಿತವಾಗಿ ನಿರ್ಧಾರವಾದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವುದರಿಂದ ತೊಂದರೆಯಾಗಬಹುದು
- ನಿಮಗಿಂತ ಗಟ್ಟಿಯಾಗಿರುವವರು, ಎಲ್ಲದರಲ್ಲೂ ಮೇಲೆ ಇರುವವರ ಜೊತೆ ಸ್ಪರ್ಧೆ ಮಾಡಲು ಹೋಗಬೇಡಿ
- ನಿಮ್ಮ ಸಮಸ್ಯೆ, ದೌರ್ಬಲ್ಯ ಇದರ ಬಗ್ಗೆ ಸರಿಯಾದ ಅಧ್ಯಯನ ನಡೆಸಿ
- ಆತುರವಾದ ನಿರ್ಧಾರ ಒಳ್ಳೆಯದಲ್ಲ
- ಮನೆಯಲ್ಲಿ ಕಳ್ಳತನಕ್ಕೆ ಅವಕಾಶವಿದೆ
- ದೂರದ ಸಂಬಂಧಿಕರಲ್ಲಿ ಜಗಳ ಮಾಡಿಕೊಳ್ಳುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಎಲ್ಲವೂ ಚೆನ್ನಾಗಿದೆ ಅಂದುಕೊಂಡಾಗ ದುರಂಕಾರದಿಂದ ಅಧಿಕಾರವನ್ನು ಚಲಾಯಿಸುತ್ತೀರಿ
- ಬೇರೆಯವರಿಗೆ ಸಲಹೆ, ಸೂಚನೆ ಕೊಡಲು ಮುಂದಾಗುತ್ತೀರಿ
- ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
- ಉತ್ತಮವಾದ ಭೋಜನ,ಲೌಕಿಕವಾದ ಆನಂದ ನೋಡುತ್ತೀರಿ
- ನೀವು ನಿರೀಕ್ಷೆ ಮಾಡಿದ ಲಾಭವಾಗಲಿ, ಅಥವಾ ಹಣವಾಗಲಿ ನಿಮ್ಮ ಕೈ ಸೇರುವುದಿಲ್ಲ
- ವ್ಯವಹಾರದಲ್ಲಿ ಬದಲಾವಣೆಗೆ ಪ್ರಯತ್ನ ಮಾಡಬೇಕಾದ ಮನಸ್ಥಿತಿ ಇರಲಿದೆ
- ಸುಖವನ್ನು ಸಂತೋಷವನ್ನು ಅನುಭವಿಸುವುದೇ ಭಾಗ್ಯವೆಂದು ಭಾವಿಸಬೇಕಾದ ದಿನ
- ಶುಭವಾಗಲಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಗೌಪ್ಯವಾದ ವಿಚಾರವನ್ನು ಬಹಿರಂಗ ಪಡಿಸದೆ ಇರುವುದು ಒಳ್ಳೆಯದು
- ಲೇಖಕರಿಗೆ ಸಂಶೋಧಕರಿಗೆ ಸ್ಥಾನಮಾನ ಸಿಕ್ಕಿದರೂ ಹಣದ ವಿಚಾರದಲ್ಲಿ ಸಮಾಧಾನವಾಗುವುದಿಲ್ಲ
- ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
- ಅನಗತ್ಯವಾಗಿ ಆಭರಣ ಧರಿಸಿ ಓಡಾಡುವುದು ಶೋಭೆ ಅಲ್ಲ
- ಮಕ್ಕಳಲ್ಲಿ ಸಿಟ್ಟು, ವೈರತ್ವ, ದ್ವೇಷ ಹೆಚ್ಚಾಗಿ ಮನೆಗೆ ಕಂಟಕವಾಗಬಹುದು
- ಮಕ್ಕಳನ್ನ ಸ್ವತಂತ್ರವಾಗಿರಲು ಬಿಡಿ
- ಹೆಚ್ಚು ನಿಯಮವನ್ನು ಮಾಡಿದರೆ ದಾರಿ ತಪ್ಪಬಹುದು ಅನ್ನೊ ಅರಿವು ನಿಮಗಿರಲಿ
- ಸತ್ಯಶೋಧನೆಯನ್ನು ಮಾಡಿ
- ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮ ಅನುಭವಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ
- ನಿಮ್ಮ ಮನಸ್ಸಿನಲ್ಲಿರುವ ಕೆಲವು ನಿರ್ಧಾರಗಳನ್ನು ಬದಲಿಸಿ ಗಟ್ಟಿಯಾದ ನಿರ್ಧಾರ ಮಾಡಿ
- ಮೊಂಡುತನ, ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ
- ವೈಯಕ್ತಿಕವಾದ ಪ್ರತಿಷ್ಟೆಗೋಸ್ಕರ ಹಣ, ಗೌರವವನ್ನು ಕಳೆದುಕೊಳ್ಳುತ್ತೀರಿ
- ಇಂಜಿನಿಯರ್ಸ್ಗೆ, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಬೇಕಾಗಬಹುದು
- ಬೇರೆಯವರ ಮಾತನ್ನು ಗೌರವಿಸಿ
- ಇಷ್ಟದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ