ಮನೆಯಲ್ಲಿ ಒಂದಷ್ಟು ವಿಚಾರಕ್ಕೆ ಪರಸ್ಪರ ವಿವಾದಗಳು ಆಗಬಹುದು
ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಬಹುದು
ವಿದೇಶಕ್ಕೆ ಹೋಗುವ ವಿಚಾರ ಮನಸ್ಸಿನಲ್ಲಿದ್ದರೆ ಧನಾತ್ಮಕ ಸೂಚನೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ವಿಶೇಷ ಕೆಲಸ ಮಾಡಬೇಕೆಂದರೆ ಹಿರಿಯರ ಆಶೀರ್ವಾದ ಪಡೆದರೆ ಶುಭದಿನ
- ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಹೊಸದನ್ನು ಮಾಡುವ ಉತ್ಸಾಹ ಹೆಚ್ಚಾಗುವ ದಿನ
- ನಿಮ್ಮ ಖರ್ಚನ್ನು ಸರಿಯಾಗಿ ಗಮನಿಸಿ
- ಅನಗತ್ಯವಾದ ಖರ್ಚಿಗೆ ಕಡಿವಾಣ ಹಾಕಿ
- ಮನೆಯಲ್ಲಿ ಒಂದಷ್ಟು ವಿಚಾರಕ್ಕೆ ಪರಸ್ಪರ ವಿವಾದಗಳಾಗಬಹುದು
- ಮನೆಯವರ ಸಲಹೆ, ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಿ
- ಯಾವುದೇ ಕಾರಣಕ್ಕೂ ಸಾಲವನ್ನು ಮಾಡಬೇಡಿ
- ಕೆಂಪು ವಸ್ತ್ರವನ್ನು ಧಾರಣೆ ಮಾಡಿ
- ಕುಲದೇವತಾ ಆರಾಧನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾವಹಾರಿಕ ದೃಷ್ಟಿಯಿಂದ ಉತ್ತಮವಾದ ದಿನ
- ಅಲ್ಪ ಶ್ರಮದಿಂದ ಹೆಚ್ಚು ಗಳಿಕೆ ಮಾಡುತ್ತೀರಿ
- ನಿಮ್ಮ ಸಾಮರ್ಥ್ಯವನ್ನು ಗಮನಿಸಿ ಮನೆಯಲ್ಲಿ, ಉದ್ಯೋಗದಲ್ಲಿ, ವ್ಯಾವಹಾರಿಕವಾಗಿ ಜವಾಬ್ದಾರಿ ಹೆಚ್ಚಾಗಲಿದೆ
- ಕಾರ್ಯನಿಮಿತ್ತವಾಗಿ ಪ್ರಯಾಣ ಮಾಡುತ್ತೀರಿ
- ವಿದ್ಯಾರ್ಥಿಗಳಿಗೆ ಗಂಭೀರವಾದ ವಿಚಾರಗಳನ್ನು ಅಧ್ಯಯನ ಮಾಡುವ ಆಸಕ್ತಿ ಬರಲಿದೆ
- ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
- ವಿನಾಕಾರಣ ಮಾತನಾಡಿ ನಿಷ್ಠೂರ ಆಗುವುದರಿಂದ ಬೇಸರವನ್ನು ವ್ಯಕ್ತಪಡಿಸುತ್ತೀರಿ
- ಮನೆಯಲ್ಲಿ ಕೆಲಸಗಾರರು, ಸೇವಕರಿದ್ದರೆ ಎಚ್ಚರಿಕೆಯಿಂದಿರಿ
- ಶಿಂಶುಮಾರ ಮಂತ್ರವನ್ನು ಶ್ರವಣ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಬಹುದು
- ಕಾರ್ಯಕ್ಷೇತ್ರದಲ್ಲಿ ಕೆಲವೇ ವಿಚಾರಗಳಲ್ಲಿ ನಿಮ್ಮ ಅರಿವಿಲ್ಲದೆ ಸಮಸ್ಯೆ ಉಂಟಾಗಬಹುದು
- ಕುಟುಂಬದ ಸದಸ್ಯರ ಸ್ವಭಾವ ನಿಮಗೆ ಬೇಸರ ತರಬಹುದು
- ಪೂರ್ವಿಕರ ಆಸ್ತಿಯ ವಿಚಾರದಲ್ಲಿ ತಿರುವು ಬರಬಹುದು
- ಸಮಾಜದಲ್ಲಿ ನಿಮ್ಮನ್ನ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ
- ವೈದಕೀಯ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೆ ಶುಭಫಲವಿದೆ
- ಕಾಮಧೇನುವನ್ನು ಸ್ಮರಣೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾಭ್ಯಾಸದ ದೃಷ್ಟಿಯಿಂದ ಅಥವಾ ಮನೋರಂಜನೆಗಾಗಿ, ಬಂಧುಗಳಿಗಾಗಿ, ವಿದೇಶಗಳಿಗೆ ಹೋಗಬೇಕೆನ್ನುವ ಯೋಚನೆ ಇದ್ದರೆ ಪೂರ್ಣವಾಗಲಿದೆ
- ವಿದೇಶಕ್ಕೆ ಹೋಗುವ ವಿಚಾರ ಮನಸ್ಸಿನಲ್ಲಿದ್ದರೆ ಧನಾತ್ಮಕ ಸೂಚನೆ ಇದೆ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಮನಸ್ಸು ಹೆಚ್ಚಾಗಬಹುದು
- ಕೈ ಹಾಕಿದ ಎಲ್ಲಾ ಕೆಲಸಗಳು ಪೂರ್ಣವಾಗುವ ಸೂಚನೆ ಇದೆ
- ಇಂದು ಚಿಕ್ಕ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸಿ
- ಅಶ್ವಥ ವೃಕ್ಷಕ್ಕೆ 12 ಪ್ರದಕ್ಷಣೆ ಹಾಕಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಪರಿಚಿತ ವ್ಯಕ್ತಿಯಿಂದ ಭಯ ಕಾಡಬಹುದು
- ಮಾಟ-ಮಂತ್ರ ಇತ್ಯಾದಿ ಸಮಸ್ಯೆಗಳಿವೆ ಎಂಬ ಆಲೋಚನೆ ಬರಬಹುದು
- ಹಣ ಅಥವಾ ದ್ರವ್ಯ ಕಳೆದುಕೊಳ್ಳುವ ಸೂಚನೆ ಇದೆ
- ವಿನಾಕಾರಣ ವಾದ-ವಿವಾದಗಳು ಇಂದು ಬೇಡ
- ನಿಮ್ಮ ಧೈರ್ಯ ಮತ್ತು ನಿಮ್ಮ ಸಾಧನೆಯ ಅಹಂಭಾವಕ್ಕೆ ಭಂಗವಾಗಬಹುದು
- ಪ್ರತ್ಯಂಗಿರಾ ದೇವಿಯ ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಂಸಾರಿಕವಾಗಿ ಮಕ್ಕಳ ಬಗ್ಗೆ ಇರುವ ಚಿಂತೆ ದೂರವಾಗುತ್ತದೆ
- ನಿಮ್ಮ ಕೌಶಲ್ಯ ನಿಮಗೆ ಸಹಕಾರ ನೀಡಬಹುದು
- ಸ್ನೇಹಿತರ ಜೊತೆ ಸೇರಿಕೊಂಡು ಹೊಸ ಯೋಜನೆಗಳನ್ನು ಮಾಡಲು ಯೋಚನೆ ಆರಂಭಿಸಬಹುದು
- ಬದಲಾವಣೆಯ ಪರ್ವ ಯಶಸ್ಸಿನ ಗುಟ್ಟು ಅನುಭವಕ್ಕೆ ತೆಗೆದುಕೊಳ್ಳುವ ದಿನ
- ಕುಲದೇವತಾರಾಧನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದಲ್ಲಿ ಒಂದಷ್ಟು ಜನ ಸಾತ್ವಿಕವಾಗಿರುವವರಿಗೆ ತೊಂದರೆ ಮಾಡಬೇಕೆಂದು ಕಾಯುತ್ತಿರುತ್ತಾರೆ
- ಈ ದಿನ ನಯವಂಚಕರಿಂದ ದೂರವಿರಿ
- ಮೇಲಾಧಿಕಾರಿಗಳ ಜೊತೆ ಅಥವಾ ಕುಟುಂಬದ ಹಿರಿಯರ ಜೊತೆ ವಾದ-ವಿವಾದ ಮಾಡಬೇಡಿ
- ಈ ದಿನ ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಿ
- ದುರ್ಗಾದೇವಿಯ ಆರಾಧನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆ ಕಾಡಬಹುದು
- ಇಂದು ನಯವಂಚಕರಿಂದ ದೂರವಿರಿ
- ವಿವಾಹಿತರಿಗೆ ಸಿಹಿಸುದ್ದಿ, ಮದುವೆ ವಿಚಾರ ಪ್ರಸ್ತಾಪವಾಗಬಹುದು
- ನಿಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಿ
- ದೇವರ ಬಗ್ಗೆ ಹಿರಿಯರ ಬಗ್ಗೆ ನಿಮ್ಮ ಕೆಲಸದ ಬಗ್ಗೆ ಪರಿಪೂರ್ಣ ಗೌರವ ಇರಲಿ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಸ್ವಭಾವ ನೋಡಿದ ತಕ್ಷಣ ಕೆಲವು ಜನರು ನಿಮ್ಮಿಂದ ಏನಾದರೂ ಪಡೆದುಕೊಳ್ಳಬೇಕೆಂಬ ಭಾವನೆ ಬರಬಹುದು
- ಪುಸ್ತಕ ಪ್ರೇಮಿಗಳಿಗೆ, ವ್ಯಾಪಾರಿಗಳಿಗೆ ಲಾಭದ ದಿನ
- ಸಹೋದರರ ವೈಮನಸ್ಯ ನಿಮಗೆ ತೊಂದರೆ ಉಂಟು ಮಾಡಬಹುದು
- ಆದಾಯದ ಮೂಲವನ್ನು ಗಮನಿಸಿಕೊಂಡು ಹಣದ ವಿಚಾರಕ್ಕೆ ತೊಂದರೆಯಾಗಬಹುದು
- ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು ಆದರೆ ಅದು ಬೇಡ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ವಾತಾವರಣ, ವ್ಯಾಪಾರ, ವ್ಯವಹಾರ, ಉದ್ಯೋಗ ಎಲ್ಲವೂ ಈ ದಿನ ಚೆನ್ನಾಗಿರುತ್ತದೆ
- ವಿರೋಧಿಗಳು ನಿಮ್ಮ ಸಂತೋಷವನ್ನು ಭಂಗ ಮಾಡಬಹುದು
- ಧಾರ್ಮಿಕ ಮುಖಂಡರಿಗೆ ಅವಮಾನ, ಹಿನ್ನಡೆಯಾಗುವ ಸಾಧ್ಯತೆ ಇದೆ
- ಹಿತ ಶತ್ರುಗಳ ಕಾಟ ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು
- ವ್ಯಾಪಾರವನ್ನು ವಿಸ್ತಾರ ಮಾಡಲು ಹೋಗಿ ನಷ್ಟ ಉಂಟಾಗಬಹುದು
- ಪ್ರೇಮಿಗಳಿಗೆ ಅಶುಭವಾದ ದಿನ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಿಕೊಳ್ಳುವ ದಿನ
- ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸೆ ಮಾಡುತ್ತಾರೆ
- ಬೇರೆಯವರ ನಿರ್ಲಕ್ಷ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು
- ನಿಮ್ಮ ಜವಾಬ್ದಾರಿಯ ಬಗ್ಗೆ ಅಗತ್ಯವಾಗಿ ಗಮನಹರಿಸಿ
- ಅತಿ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
- ಇಂದು ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡಬಹುದು
- ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
- ಇಂದು ನಿಮ್ಮ ಆರೋಗ್ಯ ಕೂಡ ಕೈಕೊಡುವ ಸಾಧ್ಯತೆಯಿದೆ
- ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆ ಮಾಡಬಹುದು
- ಉನ್ನತ ಹುದ್ದೆಯಲ್ಲಿದ್ದರೂ ಕೂಡ ನಿರಾಸೆ ಹೊಂದಬಹುದು
- ಪ್ರೇಮಿಗಳಿಗೆ ಹಿನ್ನಡೆ, ಉದ್ವಿಗ್ನತೆ ಕಾಡಬಹುದು
- ಕುಟುಂಬದ ಹಿರಿಯರ ಪ್ರೀತಿ, ವಿಶ್ವಾಸದ ಜೊತೆ ಅವರ ಮನಸ್ಸನ್ನು ಗೆಲ್ಲಬೇಕು
- ಇಷ್ಟದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ