ಸಮಾಜದಲ್ಲಿ ಹೆಸರನ್ನು ಮಾಡಲು ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
ಅನುಪಯುಕ್ತವಾದ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
ಬಹಳ ಗಹನವಾದ, ಕುತೂಹಲವಾದ ವಿಚಾರದಲ್ಲಿ ಆಸಕ್ತಿಯನ್ನು ತೋರುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ಒತ್ತಡದಿಂದ ವ್ಯಾವಹಾರಿಕ ವಿಚಾರದಿಂದ, ಸಾರ್ವಜನಿಕ ಕೆಲಸದಿಂದ ಸಮಯಾಭಾವವನ್ನು ಎದುರಿಸುತ್ತೀರಿ
- ದಾಯಾದಿಗಳ ಜೊತೆ ಜಗಳವನ್ನು ಮಾಡುತ್ತೀರಿ
- ವಿದ್ಯಾರ್ಥಿಗಳು ತಮ್ಮ ಪರಿಶ್ರಮವನ್ನು ಮರೆತು ಕೇವಲ ತನ್ನಿಂದಲೇ ಎಲ್ಲವೂ ಆಗಲಿದೆ ಎನ್ನುವುದು ಹಿನ್ನಡೆಯಾಗಬಹುದು
- ಅಹಿತಕರವಾದ ವಾತಾವರಣದಿಂದ ದೂರವಿರಿ
- ಹಣದ ವಿಚಾರವಾಗಿ ಗಮನಿಸಿ
- ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜವಾಬ್ದಾರಿಯ ಬಗ್ಗೆ ಗಮನವಿರಲಿ
- ನಿಂತು ಹೋದ ಕೆಲಸಗಳು ಆರಂಭವಾಗಲಿದೆ
- ಸಮಾಜದಲ್ಲಿ ಹೆಸರನ್ನು ಮಾಡಲು ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
- ನಿರೀಕ್ಷಿತವಾದ ಲಾಭ ಗಳಿಸುತ್ತೀರಿ
- ಪುನಃ ಮದುವೆ ಮಾಡಿಕೊಂಡಿರುವವರಿಗೆ ಸಮಸ್ಯೆಯಾಗಬಹುದು
- ಪ್ರೇಮಿಗಳಿಗೆ ಶುಭದಿನ
- ಶ್ರೀರಾಮ ಚಂದ್ರರನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ನಿಮ್ಮಷ್ಟಕ್ಕೆ ಒಂದಷ್ಟು ನಿರ್ಧಾರ ಮಾಡುತ್ತೀರಿ
- ಆರೋಗ್ಯ ಸಮಸ್ಯೆ ಕಾಡಬಹುದು
- ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮ ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
- ಜನರ ನಿರೀಕ್ಷೆ ಸುಳ್ಳಾಗಬಹುದು
- ಕೆಲಸದ ಒತ್ತಡದಿಂದ ಹೀಗೆ ಆಗಬಹುದು ಬೇರೆ ಒತ್ತಡಗಳು ಬೇರೆ ಮಾರ್ಗಕ್ಕೆ ಕರೆದುಕೊಂಡು ಹೋಗಬಹುದು
- ಜವಾಬ್ದಾರಿಯಿಂದ ವರ್ತಿಸಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವೈಯಕ್ತಿಕವಾದ ಕೆಲಸ, ವ್ಯಾವಹಾರಿಕವಾದಂತಹ ದೃಷ್ಟಿಯಿಂದಲೂ ಪ್ರಯಾಣವನ್ನು ಮಾಡಬೇಕಾಗಲಿದೆ
- ಮನೆಯವರ ಸಹಕಾರವಿದ್ದರೆ ಮಾತ್ರ ಯಶಸ್ಸನ್ನು ಪಡೆಯುತ್ತೀರಿ
- ಚಿತ್ರರಂಗದವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ
- ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ
- ಮಕ್ಕಳಿಂದ ಸಮಾಧಾನ ಸಿಗಲಿದೆ
- ಪ್ರೇಮಿಗಳಿಗೆ ಶುಭದಿನ
- ಸಪ್ತ ಮಾತೆಯರನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಾಭಾವಿಕವಾಗಿ ಎಲ್ಲ ವಿಚಾರದಲ್ಲೂ ತಾತ್ಸಾರ ತೋರುವ ನೀವು ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ಮಾಡುತ್ತೀರಿ
- ಮನಸ್ಸಿಗೆ ಸಮಾಧಾನ ಕೊಡುವಂತಹ ಕೆಲಸವನ್ನು ಮಾತ್ರ ಮಾಡಿ
- ವ್ಯವಹಾರದಲ್ಲಿ ಕೆಲವು ಕಹಿಯ ಘಟನೆಗಳನ್ನು ನಡೆಯಬಹುದು
- ಬೇರೆ ಉದ್ಯೋಗಕ್ಕೆ ಅವಕಾಶವಿದೆ
- ಬೇರೆಯವರಿಂದ ಮಾತಿನಿಂದ ಕೆಲಸ ಹಾಳಾಗಲಿದೆ
- ಮನಸ್ಸು ಚಂಚಲವಾಗದೆ ಇರೋ ಹಾಗೆ ನೋಡಿಕೊಳ್ಳಿ
- ಶಿವಾರಾಧನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ದಂಪತಿಗಳಲ್ಲಿ ವೈಮನಸ್ಯ ನಡೆಯಲಿದೆ
- ನಿಮ್ಮ ಕೆಲಸದಿಂದ ನಿಮಗೆ ಅನುಕೂಲವಿದೆ
- ಮಕ್ಕಳ ವಿಚಾರಕ್ಕೆ ಸಮಯ ಕೊಡಿ
- ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
- ಅನುಪಯುಕ್ತವಾದ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
- ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
- ನಾಗಾದೇವತೆಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಹಳ ಗಹನವಾದ, ಕುತೂಹಲವಾದ ವಿಚಾರದಲ್ಲಿ ಆಸಕ್ತಿಯನ್ನು ತೋರುತ್ತೀರಿ
- ಅತಿಯಾದ ನಂಬಿಕೆ ಒಳ್ಳೆಯದಲ್ಲ
- ಆಹಾರದ ಬಗ್ಗೆ ಗಮನಕೊಡಿ
- ಬೇರೆಯವರಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
- ಹೊಸ ಕೆಲಸದ ಆರಂಭವನ್ನು ಮುಂದಕ್ಕೆ ಹಾಕಿ
- ನಿಮ್ಮ ಪ್ರಯತ್ನ ನಿರಂತರವಾಗಿರಲಿ
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಇಟ್ಟುಕೊಂಡಿರುವ ಅಭಿಮಾನ, ಪ್ರೀತಿ,ಸಹಾಯ, ಬೆಂಬಲ ಒಳ್ಳೆಯದನ್ನು ಮಾಡಲಿದೆ
- ವ್ಯಾಹಾರಿಕವಾಗಿ, ವ್ಯಾಪಾರದಲ್ಲಿ, ಉದ್ಯೋಗದಲ್ಲಿ ಅನುಕೂಲ ಲಾಭವಿದೆ
- ಸೋಂಕು, ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು ಎಚ್ಚರಿಕೆವಹಿಸಿ
- ಮನೆಯಲ್ಲಿ ವಿವಾದಗಳನ್ನು ಮಾಡಿಕೊಳ್ಳಬೇಡಿ
- ತ್ರಿಮೂರ್ತಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಪ್ರತಿನಿತ್ಯದ ಕೆಲಸ ಮಾಡಲು ಶಿಸ್ತನ್ನು ಅಳವಡಿಸಿಕೊಳ್ಳಿ
- ಬೇರೆಯವರನ್ನು ದೂಷಿಸಬೇಡಿ
- ಕುಟುಂಬದ, ವೈಯಕ್ತಿಕವಾದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
- ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
- ಮಕ್ಕಳ ಭವಿಷ್ಯಕ್ಕೆ ದಾರಿಯನ್ನು ಮಾಡಿಕೊಡಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಆದಾಯ ಸ್ಥಿರವಾಗಿದೆ, ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆಯಿಲ್ಲ
- ಮನೆಯಲ್ಲಿ, ಸಾಂಸಾರಿಕವಾಗಿ,ಕೌಟುಂಬಿಕ, ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೆ ಇರುವುದು
- ಮನಸ್ಸು ಶಾಂತವಾಗಿಲ್ಲ, ಎನೋ ಕಳವಳ ಇರಲಿದೆ
- ನಿಮ್ಮ ವಿರೋಧಿಗಳಿಂದ ನಿಮಗೆ ತೊಂದರೆಯಾಗಬಹುದು
- ಬೇರೆಯವರ ಅಭಿಪ್ರಾಯಕ್ಕೆ ಅವಕಾಶ ಕೊಡಿ
- ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನದಲ್ಲಿ ಹೋರಾಟ ಮಾಡುವವರಿಗೆ ತನ್ನದೇ ಆದ ಸಮಸ್ಯೆ ಅಡ್ಡಿ-ಅತಂಕಗಳು ಇರಲಿದೆ
- ತಾಯಿಯವರ ಆರೋಗ್ಯದ ಬಗ್ಗೆ ಗಮನಕೊಡಿ
- ಬೇರೆಯವರಿಂದ ನಿರೀಕ್ಷೆ ಮಾಡಬೇಡಿ
- ನಿಮ್ಮ ಗೌರಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆವಹಿಸಿ
- ಮನೆಗೆ ಅತಿಥಿಗಳು ಬರುವುದರಿಂದ ಸಂತೋಷವಾಗಲಿದೆ
- ಸ್ಥಿರಾಸ್ತಿಯ ವಿವಾದಗಳು ಹೆಚ್ಚಾಗಬಹುದು
- ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮಗೆ ಲಾಭದ ದಿನ
- ಮಕ್ಕಳ ಸಾಧನೆ ನಿಮಗೆ ಗೌರವವನ್ನು ತಂದು ಕೊಡಲಿದೆ
- ಸಂಬಂಧಿಕರ ಜೊತೆ ಮಾಡುವ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಲಿದೆ
- ಸಹೋದ್ಯೋಗಿಗಳಿಗೆ ನಿಮ್ಮಿಂದ ಒಂದಷ್ಟು ಅನುಕೂಲವಾಗಲಿದೆ
- ಮನೆಯವರ ಸಹಕಾರದಿಂದ ಜಯ ಸಿಗಲಿದೆ
- ಕಾನೂನಾತ್ಮಕ ಹೋರಾಟದಲ್ಲಿ ಯಶಸ್ಸು ಸಿಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ