ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ
ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು
ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ನೀವು ಮಾಡುವ ಎಲ್ಲ ವ್ಯವಹಾರಗಳನ್ನು ಆದಷ್ಟು ಮನೆಯಲ್ಲಿ ತಿಳಿಸಿ
- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ
- ಇಂದು ಯಾರ ಜೊತೆಯಲ್ಲೂ ಕೂಡ ಜಗಳವನ್ನು ಮಾಡಿಕೊಳ್ಳಬೇಡಿ, ನಿಷ್ಠೂರವಾಗುತ್ತೀರಿ
- ವಿದ್ಯಾರ್ಥಿಗಳು ತುಂಬಾ ಕಷ್ಟ ಪಡಬೇಕಾದ ದಿನ
- ಇಂದು ಯಾರಿಗೂ ಕೂಡ ನೋವಾಗುವ, ಬೇಸರವಾಗುವ ಮಾತುಗಳನ್ನಾಡಬೇಡಿ
- ಹಣದ ವಿಚಾರದಲ್ಲಿ ಯಾವುದೇ ರೀತಿಯ ಗಲಾಟೆ, ಭಿನ್ನಾಭಿಪ್ರಾಯಗಳಿದ್ರೆ ತಾಳ್ಮೆಯಿಂದ ವ್ಯವಹಾರದ ಬಗ್ಗೆ ತಿಳಿಸಿ ಹೇಳಿ
- ವೆಂಕಟೇಶ್ವರನನ್ನ ಪ್ರಾರ್ಥನೆ ಮಾಡಿ
ವೃಷಭ
- ಇಂದು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತೀರಿ ತುಂಬಾ ಒದ್ದಾಟವನ್ನು ಮಾಡಿಕೊಳ್ಳಬಹುದು
- ನಿಂತು ಹೋದ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಕೊಡಬಹುದು
- ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ವರ್ತಿಸಿ ಗೌರವ ಹೆಚ್ಚುತ್ತದೆ
- ನಿರೀಕ್ಷಿತವಾದ ಕೆಲ ಲಾಭವನ್ನು ಇಂದು ನೋಡಬಹುದು
- ಸಣ್ಣಪುಟ್ಟ ವಿಚಾರಕ್ಕೆ ಹಳೆಯ ವಿಷಯ ಮತ್ತೆ ಮುನ್ನೆಲೆಗೆ ಬಂದು ತೊಂದರೆಯಾಗಬಹುದು
- ಪ್ರೇಮಿಗಳು ಬಹಳ ಆಲೋಚನೆ ಮಾಡಿ ಮಾತುಗಳನ್ನು ಆಡಬೇಕು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಮಿಥುನ
- ಯಾರು ನಿಮ್ಮ ಮಾತನ್ನು ಕೇಳ್ತಾರೆ, ನೀವು ಹೇಳಿದ್ದನ್ನು ಅನುಸರಿಸುತ್ತಾರೆ ಅವರ ಮೇಲೆ ಕೋಪ ತೀರಿಸ್ತೀರಿ
- ಆರೋಗ್ಯ ಸಮಸ್ಯೆ ಕಾಡಬಹುದು ಆದರೆ ಒಂದು ರೀತಿಯ ಧೈರ್ಯಕ್ಕೆ ಕಾರಣವಾಗುತ್ತದೆ
- ವೃತ್ತಿ, ನೌಕರಿ, ಉದ್ಯೋಗ ಸ್ಥಳದಲ್ಲಿ ನಿಮ್ಮ ಮಾತಿನಿಂದ ತೊಂದರೆ ಮಾಡಿಕೊಳ್ಳಬಹುದು
- ಜನ ನಿಮ್ಮ ಬಗ್ಗೆ ಒಳ್ಳೆಯ ಬೆಲೆ, ಗೌರವ ಇಟ್ಕೊಂಡಿರ್ತಾರೆ ಆದರೆ ಸಮಾಜದಲ್ಲಿ ಅವಮಾನಿತರಾಗಬಹದು
- ಇಂದು ಸಮಾಜದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ
- ಶರಬೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
- ಮನಸ್ಸಿಗೆ ಖುಷಿ ಇಲ್ಲದಿದ್ದರೂ ಪ್ರಯಾಣ ಮಾಡುವ ಸಂದರ್ಭ ಬರಬಹುದು
- ಇಂದು ಮನೆಯವರ ಸಂಪೂರ್ಣ ಸಹಕಾರ, ಬೆಂಬಲವನ್ನು ಪಡೆದುಕೊಳ್ಳಿ
- ಕಲಾಕ್ಷೇತ್ರ, ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನ
- ಮನೆಯ ಸಂತೋಷದ ವಾತಾವರಣ ನಿಮಗೆ ಇನ್ನೂ ಹೆಚ್ಚು ಕೆಲಸ ಮಾಡಲು ಉತ್ಸುಕರನ್ನಾಗಿ ಮಾಡಬಹುದು
- ಇಂದು ಮಕ್ಕಳಿಂದ ಸಮಾಧಾನ ಸಿಗಬಹುದು
- ಇಂದು ಪ್ರೇಮಿಗಳಿಗೆ ಶುಭವಾದ ದಿನ
- ದೇವಿಯನ್ನ ಪ್ರಾರ್ಥನೆ ಮಾಡಿ
ಸಿಂಹ
- ದೇಹಬಲ ಇದೇ ಎಂದು ಕಷ್ಟದ ಕೆಲಸಕ್ಕೆ ಸಿಕ್ಕಾಕಿಕೊಂಡು ಕಷ್ಟ ಅನುಭವಿಸಬಹುದು
- ನಿಮ್ಮ ಮನಸಿಗೆ ಹಿತವಾದ ಕೆಲಸವನ್ನು ನಿಮ್ಮ ಚೌಕಟ್ಟಿನಲ್ಲಿ ಮಾಡಿ ಯಶಸ್ಸಿದೆ
- ವ್ಯವಹಾರದಲ್ಲಿ ಕೆಲ ಸವಾಲುಗಳು, ಸಮಸ್ಯೆಗಳನ್ನು, ಅಡ್ಡಿ-ಆತಂಕಗಳನ್ನು ಎದುರಿಸಬಹುದು
- ನಿಮ್ಮ ಉದ್ಯೋಗಕ್ಕೆ ಧಕ್ಕೆ ಆಗುವಂತಹ ಸವಾಲುಗಳು ಎದುರಾಗಬಹುದು
- ಬೇರೆಯವರ ಮಾತಿನಿಂದ ಒಂದಿಷ್ಟು ತೊಂದರೆಗಳನ್ನ ಮಾಡಿಕೊಳ್ಳಬಹುದು
- ಮಾನಸಿಕವಾಗಿ ಗಟ್ಟಿತನವನ್ನು ತೋರಿಸಬೇಕಾದ ದಿನ
- ಈಶ್ವರನನ್ನು ಆರಾಧನೆ ಮಾಡಿ
ಕನ್ಯಾ
- ದಂಪತಿಗಳ ಜಗಳದಿಂದ ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯಕ್ಕೆ ಅಡ್ಡಿಯಾಗಬಹುದು
- ನಿಮ್ಮ ಕೆಲಸ, ಕಾರ್ಯಗಳ ಬಗ್ಗೆ ಆಲೋಚನೆಯಿಲ್ಲದೆ ಹಲವಾರು ತೊಂದರೆ, ಅವಮಾನ ಎದುರಿಸಬಹುದು
- ನಿಮ್ಮ ವೈಯಕ್ತಿಕ, ದೈಹಿಕ, ಮಾನಸಿಕ ಸಮಸ್ಯೆಗಳನ್ನು ತಿಳಿದು ಸರಿಪಡಿಸಿಕೊಳ್ಳಿ
- ಬೇಡದೆ ಇರುವ, ಬೇರೆಯವರ ವಿಚಾರದಲ್ಲಿ ಆಸಕ್ತಿ ಹೆಚ್ಚು ಅದು ಒಳ್ಳೆಯದಲ್ಲ ಸರಿಪಡಿಸಿಕೊಳ್ಳಿ
- ಯಾವುದೇ ತೀರ್ಮಾನ ಮಾಡಿದರು ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
- ನಾಗದೇವತೆಗಳನ್ನು ಪ್ರಾರ್ಥನೆ ಮಾಡಿ
ತುಲಾ
- ಹಲವಾರು ದಿನಗಳಿಂದ ಬಹಳ ಗೌಪ್ಯವಾಗಿ ಇಟ್ಟಿರುವ ವಿಚಾರವನ್ನು ಹೊರಹಾಕಬಹುದು
- ಅತಿಯಾದ ನಂಬಿಕೆಯಿಂದ ಮಾಡುವ ಎಲ್ಲ ಕೆಲಸಗಳು ಇಂದು ನಿಮ್ಮ ಕೈ ಹಿಡಿಯುತ್ತವೆ
- ಇಂದು ನಿಮ್ಮ ಆಹಾರದ ಬಗ್ಗೆ ಸ್ವಲ್ಪ ಗಮನಹರಿಸಿ
- ಹೊಸ ಕೆಲಸಗಳನ್ನು ಆಲೋಚನೆ ಮಾಡದೇ ಪ್ರಾರಂಭಿಸಬೇಡಿ
- ನಿಮ್ಮ ಪ್ರಯತ್ನವನ್ನು ನಿರಂತರವಾಗಿ ನಡೆಸಿ ಸಫಲತೆ ಸಿಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸ್ನೇಹಿತರೇ ಇಲ್ಲ, ಬೇರೆಯವರ ಜೊತೆ ಉತ್ತಮ ಒಡನಾಟ ಇಲ್ಲ ಎಂಬ ವಿಚಾರದಿಂದ ಬೇಸರವಾಗಬಹುದು
- ವ್ಯವಹಾರಿಕ, ವ್ಯಾಪಾರ, ಉದ್ಯೋಗ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ
- ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಬಹಳ ತಾಳ್ಮೆಯಿಂದ ವರ್ತಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ
- ಮನೆಯಲ್ಲಿ ಯಾವುದೇ ರೀತಿ ವಿವಾದಗಳನ್ನು ಮಾಡಿಕೊಳ್ಳಬೇಡಿ
- ಇಂದು ವಿದ್ಯಾರ್ಥಿಗಳಿಗೆ ಉತ್ತಮವಾದ ಪ್ರೋತ್ಸಾಹ ಸಿಗುತ್ತದೆ
- ನಿಮ್ಮ ಪ್ರಯತ್ನಗಳನ್ನ ಇಂದು ಪ್ರಾಮಾಣಿಕವಾಗಿ ಮಾಡಿ ಶುಭವಾಗುತ್ತದೆ
ಧನುಸ್ಸು
- ವ್ಯವಹಾರ, ಉದ್ಯೋಗದಲ್ಲಿ ಸಮಸ್ಯೆಗಳು ಕಾಣಬಹುದು, ಅದರಿಂದ ಮನೆಯವರಿಗೆ ಆತಂಕ ಉಂಟಾಗಬಹುದು
- ಇಂದು ಸ್ನೇಹಿತರಿಂದ ನಿಮಗೆ ಸಹಾಯ, ಸಹಕಾರ ಸಿಗಬಹುದು
- ಬಂಧುತ್ವವನ್ನ, ಸ್ನೇಹತ್ವವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು
- ಇಂದು ಯಾರನ್ನು ಕೂಡ ದ್ವೇಷ ಅಥವಾ ಟೀಕೆ ಮಾಡಲು ಮುಂದಾಗಬೇಡಿ
- ಕುಟುಂಬದ ವಿಚಾರ, ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರಿಗೆ ಹೇಳಿದ್ರೆ ಅವಮಾನವಾಗಬಹುದು
- ನಿಮ್ಮ ಕೆಲಸದ ಬಗ್ಗೆ ನಿಮಗೆ ಅಭಿಮಾನವಿರಲಿ, ನಿಮ್ಮ ಕೆಲಸವನ್ನು ಗೌರವಿಸಿ
- ಮಕ್ಕಳಿಗೆ ಸರಿಯಾದ ತಿಳುವಳಿಕೆ ಮಾತುಗಳನ್ನ ಹೇಳಿ
- ದುರ್ಗಾ ಆರಾಧನೆ ಮಾಡಿ
ಮಕರ
- ಹಣ ಗಳಿಸುವ ವಿಚಾರದಲ್ಲಿ ನಿಮ್ಮ ವಿಚಾರಗಳು ಶುದ್ಧವಾಗಿರಲಿ ಯಾವುದೇ ರೀತಿಯ ಅನಾಚಾರ ಬೇಡ
- ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ
- ಇಂದು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ
- ನಿಮ್ಮ ವಿರೋಧಿಗಳು ನಿಮ್ಮ ಸಮಸ್ಯೆಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬಹುದು ಎಚ್ಚರ
- ಪ್ರೇಮಿಗಳು ಬೇರೆಯವರು ಹೇಳುವ ಒಳ್ಳೆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ, ಸ್ವಂತ ಬುದ್ಧಿಯು ಕೆಲಸ ಮಾಡುವುದಿಲ್ಲ
- ಬೇರೆಯವರು ನೀಡುವ ಅಭಿಪ್ರಾಯ, ಸಲಹೆಗಳನ್ನು ಶಾಂತ ರೀತಿಯಲ್ಲಿ ಕೇಳಿ
- ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ವಿನಾಕಾರಣ ತಾಯಿ ಜೊತೆ ಅಥವಾ ತಾಯಿಯ ಮನೆಯವರ ಜೊತೆ ಸಮಸ್ಯೆಗಳನ್ನು ಮಾಡಿಕೊಳ್ಳಬಹುದು ಅದು ಬೇಡ
- ತಾಯಿ ಆರೋಗ್ಯದಲ್ಲಿ ಗಣನೀಯವಾದ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
- ಗೌರವಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ ಒರಟುತನ ಬಿಡುವುದಿಲ್ಲ ಎಂಬ ನಿಮ್ಮ ಭಾವನೆ ಬದಲಾಯಿಸಿಕೊಳ್ಳಿ
- ಮನೆಗೆ ಅತಿಥಿಗಳ ಆಗಮನವಾಗಬಹುದು, ಚರ್ಚೆಗಳು ನಡೆಯಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ವ್ಯವಹಾರಿಕವಾಗಿ ಆರ್ಥಿಕ ಲಾಭ ಪಡೆಯಲು ಅವಕಾಶವಿದೆ
- ಸಂಬಂಧಿಕರ ಜೊತೆ ಮನಸ್ತಾಪ ಉಂಟಾಗಬಹುದು
- ಇಂದು ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗುವ ದಿನ
- ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
- ನಿಮ್ಮ ಮನೆಯವರ ಸಹಕಾರದಿಂದಲೇ ಎಲ್ಲ ವಿಚಾರಗಳಲ್ಲಿ ಜಯ, ಲಾಭ ಸಿಗುತ್ತದೆ
- ಆಂಜನೇಯನನ್ನು ಪ್ರಾರ್ಥನೆ, ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ