/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಸ್ನೇಹಿತರಿಂದ ಸಹಾಯ ಅಥವಾ ಅನುಕೂಲವಾಗಲಿದೆ
- ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ
- ವಿಶೇಷ ಸ್ಥಾನಮಾನ ಲಭ್ಯವಾಗಲಿದೆ
- ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
- ಈ ದಿನ ವ್ಯಾಪಾರಾನುಕೂಲವಿದೆ
- ಹಿರಿಯರ ಮಾತಿಗೆ ಗೌರವವಿರಲಿ
- ಇಷ್ಟ ದೇವತಾ ಆರಾಧನೆಯನ್ನು ಮಾಡಿ
ವೃಷಭ
- ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ
- ವಿವಾಹ ವಿಚಾರ ಚರ್ಚೆಯಾಗಬಹುದು
- ದಾನ-ಧರ್ಮ ವಿಚಾರದಲ್ಲಿ ಆಸಕ್ತಿ ಇದೆ
- ಇಂದು ವಕೀಲರಿಗೆ ಶುಭವಿದೆ
- ಸಂಶೋಧಕರಿಗೆ ವಿಶೇಷ ಗೌರವ ಸಿಗಲಿದೆ
- ಈ ದಿನ ಬದಲಾವಣೆಗೆ ಆಲೋಚನೆ ಮಾಡುತ್ತೀರಿ
- ಕುಲ ದೇವತಾ ಆರಾಧನೆ ಮಾಡಿ
ಮಿಥುನ
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ಹಿತ ಶತ್ರುಗಳಿಂದ ತೊಂದರೆಯಾಗುವ ಸಂಭವವಿದೆ
- ಈ ದಿನ ಅನಿರೀಕ್ಷಿತ ಪ್ರಯಾಣ ಮಾಡುತ್ತೀರಿ
- ಮಹಿಳೆಯರಿಗೆ ವಂಚನೆಯಾಗುವ ಸಾದ್ಯತೆ
- ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಅಂತ್ಯ
- ತಾಯಿಯವರ ಆರೋಗ್ಯದ ಕಡೆ ಗಮನಕೊಡಿ
- ಮೃತ್ಯುಂಜಯ ಜಪ ಮಾಡಿ
ಕಟಕ
- ಅನಾವಶ್ಯಕ ದ್ವೇಷ ಸಾಧಿಸುತ್ತೀರಿ
- ಮಿತ್ರರಲ್ಲಿ ಕಲಹ ಮನಸ್ತಾಪ ಉಂಟಾಗಬಹುದು
- ಉದ್ಯೋಗದಲ್ಲಿ ಕಿರಿಕಿರಿಯಾಗಲಿದೆ
- ಇಂದು ಕೃಷಿಕರಿಗೆ ಲಾಭವಿದೆ
- ಮಕ್ಕಳಿಂದ ನೋವು ಬೇಸರವಾಗಬಹುದು
- ಕೆಲಸ ಕಾರ್ಯಗಳು ನಿಧಾನವಾಗಿ ಆಗುವುದರಿಂದ ಬೇಸರವಾಗಲಿದೆ
- ದುರ್ಗಾರಾಧನೆ ಮಾಡಿ
ಸಿಂಹ
- ಯತ್ನ ಕಾರ್ಯದಲ್ಲಿ ಜಯವಿದೆ
- ಅತಿಯಾದ ಒತ್ತಡವಿರುವ ದಿನ
- ಅಪಮಾನಕ್ಕೆ ಅವಕಾಶ ಕೊಡಬೇಡಿ
- ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧರಿಸಿ
- ಕಠಿಣ ನಿರ್ಧಾರಗಳಿಂದ ಉತ್ತಮ ಫಲವಿಲ್ಲ
- ನಿರ್ಲಕ್ಷ್ಯದಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು
- ಶರಭೇಶ್ವರನನ್ನು ಆರಾಧಿಸಿ
ಕನ್ಯಾ
- ಮನೆಯಲ್ಲಿ ಶುಭಕಾರ್ಯದ ಚರ್ಚೆಯಾಗಲಿದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
- ಇಂದು ಆರ್ಥಿಕವಾಗಿ ತೊಂದರೆಯಿಲ್ಲ
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ
- ಹೊಸ ಸಂಬಂಧದಲ್ಲಿ ಕಿರಿಕಿರಿಯಾಗಬಹುದು
- ಮಾನಸಿಕ ದುರಾಲೋಚನೆಯಿಂದ ಹೊರ ಬರಬೇಕು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಪ್ರೀತಿ ಪಾತ್ರರ ಅಥವಾ ಗೆಳೆಯರ ಭೇಟಿ ಮಾಡುತ್ತೀರಿ
- ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸುವಿರಿ
- ಮನಃಶಾಂತಿ ನೆಮ್ಮದಿಯ ವಾತಾವರಣ ಇರಲಿದೆ
- ಆದಾಯದಷ್ಟೇ ಖರ್ಚು ಆಗಲಿದೆ
- ಆರೋಗ್ಯದಲ್ಲಿ ವ್ಯತ್ಯಯದ ಸೂಚನೆ ಇದೆ
- ದೊಡ್ಡವರ ಸಲಹೆ ಮುಖ್ಯವಾಗುತ್ತದೆ
- ಧನ್ವಂತರಿ ಪ್ರಾರ್ಥನೆಯನ್ನು ಮಾಡಿ
ವೃಶ್ಚಿಕ
- ಅತಿಯಾದ ಮಾನಸಿಕ ಒತ್ತಡ ಕಾಡಬಹುದು
- ವಿರೋಧಿಗಳಿಂದ ತೊಂದರೆಯಾಗಬಹುದು
- ಅಕಾಲ ಭೋಜನ ಆಲಸ್ಯವಾಗಲಿದೆ
- ಹೊಸ ವಿಷಯಗಳು ಅನುಭವಕ್ಕೆ ಬರುತ್ತದೆ
- ಅಪರಿಚಿತರಿಂದ ಮೋಸದ ಸಾಧ್ಯತೆ
- ನಿಮ್ಮ ಜೀವನ ಶೈಲಿ ಬದಲಾಗುವ ದಿನ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಹಣಕಾಸಿನ ಸಮಸ್ಯೆ ಉಂಟಾಗಬಹುದು
- ಕ್ಷೇತ್ರ ದರ್ಶನದ ಬಗ್ಗೆ ಚಿಂತೆ ಮಾಡುತ್ತೀರಿ
- ಅವಿವಾಹಿತರಿಗೆ ಮದುವೆ ವಿಚಾರ ಬರಬಹುದು
- ಮಾನಸಿಕ ದೌರ್ಬಲ್ಯದಿಂದ ಕೊರಗಬೇಡಿ
- ಇಂದು ಮಕ್ಕಳಿಂದ ಸಮಾಧಾನವಿದೆ
- ನಿಮ್ಮನ್ನು ನೀವೇ ಹೊಗಳಿಕೊಳ್ಳಬೇಡಿ
- ಆತ್ಮ ಪ್ರಶಂಸೆ ಬೇಕು
- ವಿಘ್ನೇಶ್ವರನ ಮಂತ್ರ ಪಠಿಸಿ
ಮಕರ
- ಸ್ಥಳ ಬದಲಾವಣೆಯಾಗಬಹುದು
- ಸಾಲದ ವಿಚಾರದಲ್ಲಿ ಬೇಸರ ಉಂಟಾಗಬಹುದು
- ವಿವಾದಗಳಿಗೆ ಆಸ್ಪದ ಬೇಡ
- ಸಹನೆ ಅಥವಾ ತಾಳ್ಮೆ ಕಳೆದುಕೊಳ್ಳಬೇಡಿ
- ಕೈ ಹಾಕಿದ ಕೆಲಸಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು
- ಈ ದಿನ ಮಾನಸಿಕ ಸ್ಥಿರತೆ ಇರಲಿ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಕುಂಭ
- ಅನಗತ್ಯ ಖರ್ಚಿಗೆ ನೂರಾರು ದಾರಿ
- ಅಪರಿಚಿತರಿಗೆ ಸಹಾಯ ಮಾಡುತ್ತೀರಿ
- ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಇಂದು ದೂರ ಪ್ರಯಾಣ ಮಾಡುತ್ತೀರಿ
- ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು
- ವಿಲಾಸಿ ಜೀವನಕ್ಕೆ ದುಂಡು ವೆಚ್ಚ ಮಾಡುತ್ತೀರಿ
- ಲಕ್ಷ್ಮೀದೇವಿಯನ್ನು ಪ್ರಾರ್ಥಿಸಿ
ಮೀನ
- ಹಣ ಬಂದರೂ ಉಳಿಯುವುದಿಲ್ಲ ಎಂಬ ಕೊರಗು ಇರಲಿದೆ
- ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
- ಸಹೋದರರ ಬಗ್ಗೆ ವಿಶ್ವಾಸವಿರಲಿ
- ದೊಡ್ಡ ಯೋಜನೆಗಳಿಗೆ ಅಡ್ಡಿಯಾಗಬಹುದು
- ಸಂಬಂಧದಲ್ಲಿ ಬಿರುಕು ಉಂಟಾಗಬಹುದು
- ಇಂದು ನಿಮಗೆ ಮಾನಸಿಕವಾಗಿ ನೋವಾಗಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ