ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಜಯ
ಸ್ನೇಹಿತರು, ಸಂಬಂಧಿಕರು, ಆತ್ಮಿಯರ ಜೊತೆ ಮಾತಿನ ಘರ್ಷಣೆ ನಡೆಯಬಹುದು
ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವರಿಗೆ ಗೊಂದಲ, ಆತಂಕ ಉಂಟಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದಲ್ಲಿ, ಉದ್ಯೋಗದಲ್ಲಿ ಗುರಿ ಸಾಧಿಸುತ್ತೀರಿ
- ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗಲಿದೆ
- ಕೆಲಸ ಕಾರ್ಯಗಳಲ್ಲಿ ಉತ್ಸಾಹ ಇರುತ್ತದೆ
- ಹಿರಿಯ ಸಹೋದರರು, ಬಂಧುಗಳ ಮಧ್ಯೆ ವೈಮನಸ್ಯ ಕಾಣಬಹುದು
- ಜನರಿಗೆ ಉತ್ತಮವಾದ ಅಭಿಪ್ರಾಯವಿರಲಿದೆ
- ನಿಮ್ಮ ಖುಷಿಗೋಸ್ಕರ ಹಣವನ್ನು ಖರ್ಚು ಮಾಡುತ್ತೀರಿ
- ಕುಲದೇವರನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದಿಂದ ಲಾಭ ಪಡೆಯುತ್ತೀರಿ
- ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದ ಮನೋಭಾವ ಇರಲಿದೆ
- ನಿಮ್ಮ ತತ್ವ ಸಿದ್ದಾಂತಗಳಿಂದ ಜನ ಪ್ರಭಾವಿತರಾಗುತ್ತಾರೆ
- ವ್ಯವಹಾರದಲ್ಲಿ ಬದಲಾವಣೆ ಕಾಣುತ್ತೀರಿ
- ಆಸ್ತಿ ವಿವಾದವಿದ್ದರೂ ಇಂದೂ ಬಗೆಹರೆಯಲಿದೆ
- ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಅಗ್ನಿಯಿಂದ ಅನಾಹುತವಾಗಬಹುದು ಎಚ್ಚರಿಕೆವಹಿಸಿ
- ಜಾತವೇದಾಗ್ನಿ ದೇವರನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚು ಶ್ರಮ ಪಡಬೇಕಾದ ದಿನ
- ಇಂದು ಖರ್ಚು ಹೆಚ್ಚಾಗುವ ದಿನ
- ಸ್ವಲ್ಪ ಮಟ್ಟಿಗೆ ದುರಾಸೆಯನ್ನು ದೂರ ಮಾಡೋದು ಉತ್ತಮವಾಗಿರುತ್ತದೆ
- ಸಂಬಂಧಗಳು ಚೆನ್ನಾಗಿದ್ದರೂ ಕೂಡ ಬೆಂಬಲ ಸಿಗುವುದು ಕಷ್ಟ
- ಪ್ರೇಮಿಗಳಿಗೆ ಉತ್ತಮವಾದ ದಿನ
- ನಿಮ್ಮ ಸಹೋದರರಿಗೆ ತೊಂದರೆಯಾಗಬಹುದು
- ಮೂಲ ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗಿರುವ ಸ್ಥಾನಮಾನ, ಹೆಸರು ದುರುಪಯೋಗವಾಗಬಹುದು
- ಯಾವುದಾದರೂ ಪ್ರಮುಖ ನಿರ್ಧಾರ ಮಾಡಲು ಹಿಂಜರಿಕೆಯಾಗಬಹುದು
- ಬೆಲೆ ಬಾಳುವ ಪದಾರ್ಥ ನಷ್ಟವಾಗಬಹುದು
- ಮಾತೆಯರು ಸಭ್ಯವಾಗಿ ವರ್ತಿಸಬೇಕು, ಅವಮಾನವಾಗಬಹುದು
- ದೀರ್ಘಕಾಲದ ಅನಾರೋಗ್ಯ ಕಾಡಬಹುದು
- ಭಗವತೀ ದುರ್ಗೆಯನ್ನು ನೀಲಿ ಹೂವಿನಿಂದ ಅರ್ಚನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭೂಮಿ ಅಥವಾ ಆಸ್ತಿಗೆ ಸಂಬಂಧಪಟ್ಟಂತೆ ಶುಭವಾರ್ತೆ ಕೇಳುತ್ತೀರಿ
- ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಸಂತೋಷವನ್ನು ಕಾಣುತ್ತೀರಿ
- ಸ್ನೇಹಿತರ ಸಂಬಂಧಗಳು ಹೆಚ್ಚಾಗಲಿದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ
- ಅತಿಯಾದ ಉತ್ಸಾಹ ಕೆಲವು ಕೆಲಸಗಳನ್ನು ಹಾಳು ಮಾಡಲಿದೆ
- ನಾನು ಎಂಬ ಅಹಂಕಾರ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ
- ಸಂಜೆಯ ಹೊತ್ತಿಗೆ ಹೊಸ ಸಂಬಂಧದಲ್ಲಿ ಕಿರಿಕಿರಿಯಾಗಬಹುದು
- ಶಾಂತಿಪ್ರದ ದುರ್ಗೆಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸದಾದ ಲಾಭಕ್ಕೆ ಹಣ ಹೂಡಿಕೆ ಮಾಡುತ್ತೀರಿ
- ನಿಮ್ಮ ವಿರೋಧಿಗಳು, ಶತ್ರುಗಳು ನಿಮಗೆ ಅವಮಾನ ಮಾಡಲು ಕಾಯ್ತಾ ಇರ್ತಾರೆ
- ಗಮನವಿಲ್ಲದಂತಹ ಕೆಲಸಗಳಿಂದ ತಪ್ಪಿಗೆ ಸಿಲುಕಿ ಹಾಕಿಕೊಳ್ಳುತ್ತೀರಿ
- ವಿಮಾನದಲ್ಲಿ ಹೋಗುವುದು ತೊಂದರೆಯಾಗಬಹುದು
- ಸೋದರ ಮಾವನಿಗೆ ತೊಂದರೆಯಾಗಬಹುದು
- ನಿಮ್ಮ ಆಶ್ರಯದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಿರೀಕ್ಷೆ ಮಾಡುತ್ತಿರುತ್ತಾರೆ ನಿಮ್ಮ ಸಹಾಯಕ್ಕೆ ಕಾಯ್ತಾ ಇರ್ತಾರೆ
- ವೈರೋಚಿನಿ ದುರ್ಗೆಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊಂದಲ, ಆತಂಕ, ಭೀತಿ ಉಂಟಾಗಬಹುದು
- ಅಜೀರ್ಣ ಸಮಸ್ಯೆ ಉಂಟಾಗಬಹುದು
- ಕೆಟ್ಟ ಅಭ್ಯಾಸಗಳನ್ನು ಬಿಡಿ
- ರಹಸ್ಯ ಶತ್ರುಗಳ ಬಗ್ಗೆ ಎಚ್ಚರಿಕೆವಹಿಸಿ
- ಇಂದು ವಾಹನ ಚಾಲನೆ, ಪ್ರಯಾಣ ಬೇಡ
- ವಾಯುವ್ಯಾಸ್ತ್ರ ಮಂತ್ರವನ್ನು ಶ್ರವಣ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗದ ಹಾಗೆ ನೋಡಿಕೊಳ್ಳಿ
- ಆಡಳಿತ ವರ್ಗ, ಪ್ರಬಲ ವ್ಯಕ್ತಿಗಳ ಮಾತು ನಿಮ್ಮ ಮನಸ್ಸಿಗೆ ಬೇಸರವನ್ನುಂಟು ಮಾಡಲಿದೆ
- ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಹೊಸ ಸಹಕಾರ ಸಿಗಲಿದೆ
- ಶೀತ ಸಂಬಂಧೀ ಸಮಸ್ಯೆ ಕಾಡಬಹುದು
- ಇಂದು ಕೋಪ ಕಡಿಮೆಯಿರಲಿ
- ಸ್ನೇಹಿತರ ಜೊತೆ ಜಗಳ ಮಾಡಿಕೊಳ್ಳಬೇಡಿ
- ನಾರಾಯಣಿ ದುರ್ಗಾಶಕ್ತಿ ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಗಲಿದೆ
- ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಜಯ ಸಿಗಬಹುದು
- ಪರಿಶ್ರಮಕ್ಕೆ ಪ್ರತಿಫಲ ವಸ್ತು ರೂಪದಲ್ಲಿ ಸಿಗಲಿದೆ
- ಹಳದಿ ಬಟ್ಟೆಯನ್ನು ಧರಿಸಿ ಶುಭವಿದೆ
- ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
- ಅಲುಪ್ತ ಶಕ್ತಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರು, ಸಂಬಂಧಿಕರು, ಆತ್ಮಿಯರ ಜೊತೆ ಮಾತಿನ ಘರ್ಷಣೆ ನಡೆಯಬಹುದು
- ರಾಜಕಾರಣಿಗಳಿಗೆ ಹಿನ್ನಡೆಯಾಗಬಹುದು
- ಮಾನಸಿಕ ಉದ್ವೇಗ ನಿಮೆಲ್ಲ ಕೆಲಸಗಳನ್ನು ಹಾಳು ಮಾಡಬಹುದು
- ಮಹಿಳೆಯರಿಗೆ ಸಿಹಿಸುದ್ದಿ ಸಿಗಲಿದೆ
- ಮರಣ ವಾರ್ತೆ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ
- ಅನಾರೋಗ ಪೀಡಿತರಿಗೆ ಸಹಾಯ ಮಾಡಿ
- ಶುಭವಾಗಲಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವ್ಯಕ್ತಿಗಳಿಗೆ ಈ ದಿನ ಸುಸಮಯ
- ಶಿಕ್ಷಕರು ಅಪವಾಧವನ್ನು ಎದುರಿಸುತ್ತೀರಿ
- ಮನಸ್ಸಿಗೆ ಕಿರಿಕಿರಿಯಾಗಬಹುದು ತಾಳ್ಮೆಯಿರಲಿ
- ರಸ್ತೆ ಬದಿಯ ವ್ಯಾಪಾರಿಗೆ ಲಾಭ ಸಿಗಬಹುದು
- ಮನೆಯ ಹೊರಗಡೆ ನೆಮ್ಮದಿ ಇಲ್ಲದೆ ಇರುವುದು
- ಮಹಾಶೂಲಿನಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಎಲ್ಲಾ ವಿಚಾರಗಳು ಈ ದಿನ ಚೆನ್ನಾಗಿದೆ ಅಂದುಕೊಳ್ಳುವಷ್ಟಕ್ಕೆ ಇನ್ನೊಂದು ಸಮಸ್ಯೆ ಕಾಡಬಹುದು
- ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರಲಿದೆ
- ಸಮಯ, ಶಕ್ತಿಮೀರಿ ಕೆಲಸ ಮಾಡಬೇಕಾಗಲಿದೆ
- ಈ ದಿನ ಕುಟುಂಬದಲ್ಲಿ ವಾಗ್ವಾದ ಬೇಡ
- ಮಾತಿನ ಸರಮಾಲೆಯಲ್ಲಿ ನಂಬಿಕೆ ಹಾಳಾಗಬಹುದು
- ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಿ
- ಸಂತಾನಾಪೇಕ್ಷಿಗಳಿಗೆ ಶುಭವಿದೆ
- ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ