/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ರವಿವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ಯಾವುದೇ ಕೆಲಸವನ್ನು ಮಾಡಲು ಮನಸ್ಸು ಇರುವುದಿಲ್ಲ
- ಹುಳ ಅಥವಾ ಕೀಟ ಕಚ್ಚಬಹುದು ಅದರಿಂದ ಅಲರ್ಜಿ ಕೂಡ ಉಂಟಾಗಬಹುದು
- ಅನಿರೀಕ್ಷಿತವಾಗಿ ಸಾಯಂಕಾಲ ಹಣ ಸಿಗಬಹುದು
- ಇಂದು ಬಹಳ ಸಂತೋಷದಲ್ಲಿರುತ್ತೀರಿ ಆದರೆ ನಿಮ್ಮ ಬೇರೆ ಎಲ್ಲ ಜವಾಬ್ದಾರಿಗಳನ್ನು ಮರೆಯಬಹುದು
- ಆಲಸ್ಯದಿಂದ ಈ ದಿನ ಪೂರ್ತಿ ಕಳೆಯಬಹುದು
- ಪಂಚಮುಖಿ ಆಂಜನೇಯನನ್ನು ಸ್ಮರಣೆ ಮಾಡಿ
ವೃಷಭ
- ಬಹಳ ದಿನದಿಂದ ಮನೆ ಕಟ್ಟಬೇಕೆಂಬ ಆಸೆಯ ಬಗ್ಗೆ ಚರ್ಚೆ,ವ್ಯವಸ್ಥೆಯನ್ನು ಮಾಡುತ್ತೀರಿ
- ಹಲವಾರು ವಿಚಾರಗಳಲ್ಲಿ ಸಾಧನೆ ಮಾಡಲು ಮಹತ್ವದಾಗಿರುತ್ತದೆ
- ಇಡೀ ದಿನ ಮನೆಯ ವಿಚಾರದ ಬಗ್ಗೆ ಚರ್ಚೆಯಲ್ಲೇ ಕಳೆಯುತ್ತೀರಿ
- ಮನೆಯನ್ನು ಕೊಳ್ಳುವ ಯೋಗ ನಿಮಗಿದೆ
- ಮಧ್ಯಾಹ್ನದ ವೇಳೆಗೆ ಆ ವಿಚಾರಕ್ಕೆ ಸಂಬಂಧಪಟ್ಟಂತೆ ಶುಭ ಸೂಚನೆ ಸಿಗಲಿದೆ
- ಭೂದೇವಿಯನ್ನು ಪ್ರಾರ್ಥನೆಯನ್ನು ಮಾಡಿ
ಮಿಥುನ
- ನಿಮ್ಮ ಜೀವನದಲ್ಲಿ ಹಾಸ್ಯಮಯ ಪ್ರಸಂಗಗಳು, ಸಂತೋಷ,ನಗು ಇರುವುದು ಕಷ್ಟ
- ಯಾವುದೇ ಕಾರಣಕ್ಕೂ ನಿಮ್ಮ ಕುಟುಂಬದಲ್ಲಿ ನಗು ಇರುವುದಿಲ್ಲ
- ನಿಮ್ಮ ಪೂರ್ವಜರು ಮಾಡಿದ ಆರಾಧನೆ ನಿಮಗೆ ಲಭ್ಯವಾಗಲಿದೆ
- ಯೋಗ ನಿಮಗೆ ಸಂತೋಷವನ್ನು ನೀಡಲಿದೆ
- ಹಾಸ್ಯ ಕಲಾವಿದರು, ಮಿಮಿಕ್ರಿ ಮಾಡುವವರಿಗೆ ಶುಭದಿನ
- ನಂದಿಯನ್ನು ಪ್ರಾರ್ಥನೆ ಮಾಡಿ
ಕಟಕ
- ವೃತ್ತಿ ಜೀವನದಲ್ಲಿ ಹಲವಾರು ರೀತಿಯಲ್ಲಿ ಬದಲಾವಣೆ ಕಾಣುತ್ತೀರಿ
- ಉದ್ಯೋಗದಲ್ಲಿ, ಬಡ್ತಿ ಸಿಗಬಹುದು
- ಸಂಭಳವೂ ಹೆಚ್ಚಾಗುವ ಸಾಧ್ಯತೆ ಇದೆ
- ಪೂರ್ವಜರು ಮಾಡಿದ ಪುಣ್ಯ ಇರಲಿದೆ
- ಪಿತೃದೇವತೆಗಳಿಗೆ ಕಾರ್ಯವನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿ
- ಶುಭವಾಗಲಿ
ಸಿಂಹ
- ಆರೋಗ್ಯದ ದೃಷ್ಟಿಯಲ್ಲಿ ಸಮಸ್ಯೆಯನ್ನು ಅನುಭವಿಸುತ್ತೀರಿ
- ನಿದ್ರಾಹೀನತೆ ಹಾಗೂ ನರಕ್ಕೆ ಸಂಬಂಧಪಟ್ಟಂತಹ ನೋವು ನಿಮ್ಮನ್ನು ಕಾಡಬಹುದು
- ವೈದ್ಯರ ಸಲಹೆ ಮುಖ್ಯವಾದದ್ದು
- ಪ್ರೇಮಿಗಳು ಪರಸ್ಪರವಾಗಿ ನಿಂದನೆ ಮಾಡುವುದರಿಂದ ಜಗಳಕ್ಕೆ ಅವಕಾಶವಾಗಲಿದೆ
- ಪ್ರೇಮಿಗಳು ದೂರವಾಗುವ ಸಾಧ್ಯತೆ ಇದೆ
- ವೇಣುಗೋಪಾಲನನ್ನು ಪ್ರಾರ್ಥನೆಯನ್ನು ಮಾಡಿ
ಕನ್ಯಾ
- ಗೊಂದಲವಿರುವುದರಿಂದ ತೀರ್ಮಾನವನ್ನು ತೆಗೆದುಕೊಳ್ಳಲು ಗೊತ್ತಾಗುವುದಿಲ್ಲ
- ಸ್ತ್ರೀಯರು ದುಬಾರಿ ವಸ್ತುಗಳನ್ನು ಕೊಳ್ಳುವುದರಿಂದ ಮೋಸ ಹೋಗುತ್ತಾರೆ
- ನಿಮ್ಮ ಕೋಪ ಮನಸ್ತಾಪಕ್ಕೆ ಕಾರಣವಾಗಲಿದೆ
- ತಾಳ್ಮೆಯಿದ್ದರೆ ಯಾವುದೇ ಅವಕಾಶಗಳಿಗೆ ಅವಕಾಶವಿರುವುದಿಲ್ಲ
- ಭಗವಂತನನ್ನು ಸ್ಮರಣೆ ಮಾಡಿ
ತುಲಾ
- ರಾಜಕಾರಣಿಗಳಿಗೆ ವಿಶೇಷವಾಗಿ ಸವಲತ್ತುಗಳು ಸಿಗುವ ದಿನ
- ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
- ನಿಜವಾದ ಪ್ರಾಮಾಣಿಕವಾದ ವ್ಯಕ್ತಿಗೆ ಸ್ಥಾನ, ಗೌರವ ಸಿಗಲಿದೆ
- ಎಲ್ಲಾ ಕಾರ್ಯಗಳಲ್ಲೂ ಸರಳವಾದ ಮಾರ್ಗ ಸಿಗಬೇಕೆಂದರೆ ನಿಮ್ಮ ಆಲೋಚನೆಗಳು ಸರಿ ಇರಬೇಕು
- ಎಲ್ಲಾ ಕಾರ್ಯಗಳೂ ಸುಗಮವಾಗಿ ನಡೆಯುವ ಹಾಗೆ ಮಾನಸಿಕವಾಗಿ ಸಿದ್ಧರಾಗಿರಬೇಕು
- ಮನಸ್ಸಿನಲ್ಲಿ ಸಮಸ್ಥಿತಿಯನ್ನು ಕಾಪಾಡಿಕೊಳ್ಳಬೇಕು
- ಮೇದಾ ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಾರ್ವಜನಿಕ ಕ್ಷೇತ್ರದಲ್ಲಿ, ಉದ್ಯೋಗದಲ್ಲಿ ನಿಮಗೆ ಅವಶ್ಯಕತೆಯಿರುವ ವ್ಯವಸ್ಥೆ ಈ ದಿನ ಸಿಗುವುದಿಲ್ಲ
- ವಿಷಯವನ್ನು ಚರ್ಚೆ ಮಾಡುವ ಸಮಯ ನಿಮ್ಮ ಹತ್ತಿರ ಇರುವುದಿಲ್ಲ
- ವಿದೇಶ ವಾಸಿಗಳಿಗೂ ನಿಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಲಿದೆ
- ಮಾತಿನ ಮೇಲೆ ನಿಗಾ ಇರಲಿ
- ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ಧನುಸ್ಸು
- ಸ್ನೇಹಿತರ ಜೊತೆಯಲ್ಲಿ ಭಿನ್ನಾಭಿಪ್ರಾಯವನ್ನು ಹೊಂದುತ್ತೀರಿ
- ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭವಿದೆ
- ಕಷ್ಟಪಟ್ಟು ಕಲೆ ಹಾಕಿದ ವಿಚಾರವನ್ನು ಹೊರ ಹಾಕಿದರೆ ಗೌರವ ಸಿಗಲಿದೆ
- ವಾಹನ ಅಪಘಾತವಾಗಬಹುದು ಎಚ್ಚರಿಕೆವಹಿಸಿ
- ಮೃತ್ಯಂಜಯನನ್ನು ಪ್ರಾರ್ಥನೆ ಮಾಡಿ
ಮಕರ
- ಹಣಕಾಸಿನ ವಿಚಾರವನ್ನು ಈ ದಿನ ಚರ್ಚೆ ಮಾಡುತ್ತೀರಿ
- ಇಂದು ಕುಟುಂಬದಲ್ಲಿ ಸಂತೋಷವಾಗಿರುತ್ತೀರಿ
- ವೈವಾಹಿಕ ಜೀವನವು ಸಮಾಧಾನ ನೀಡುತ್ತದೆ
- ನಿಮ್ಮ ಆಲೋಚನೆಗಳು ಮನೆಯವರಿಗೆ ಸ್ಫೂರ್ತಿ ಬರಲಿದೆ
- ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಳ್ಳಬಹುದು ವೈದ್ಯರ ಸಲಹೆ ಪಡೆಯಿರಿ
- ಜೀವನಕ್ಕಿಂತ ಜೀವನ ಮುಖ್ಯ
- ತ್ವರಿತ ರುದ್ರನನ್ನು ಪ್ರಾರ್ಥನೆ ಮಾಡಿ
ಕುಂಭ
- ಈ ದಿನದ ದಿನಚರಿ ಶಿಸ್ತುಬದ್ಧವಾಗಿರುತ್ತದೆ
- ಆಕಸ್ಮಿಕವಾಗಿ ಮಹಾತ್ಮರ, ಅನುಭವಿಗಳ ಭೇಟಿ ಆಗಬಹುದು
- ಹಣದ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸಿಗಬಹುದು
- ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡುವ ದಿನ
- ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲವಿದೆ
- ಶನಿ ನಿಮ್ಮ ಕಷ್ಟವನ್ನು ನಿವಾರಣೆ ಮಾಡುತ್ತಾರೆ
- ಪಾರಿಜಾತ ಸರಸ್ವತಿಯ ಪ್ರಾರ್ಥನೆ ಮಾಡಿ
ಮೀನ
- ಸರಿಯಾದ ಶುದ್ದವಾದ ಆಹಾರವನ್ನು ಸೇವನೆ ಮಾಡಿ
- ಅಧಿಕವಾಗಿ ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಿ
- ಆರೋಗ್ಯದಲ್ಲಾಗುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ
- ಹಲವಾರು ಜನರ ಟೀಕೆಗೆ ಗುರಿಯಾಗುತ್ತೀರಿ
- ನಿಮ್ಮ ತನ ನಿಮ್ಮನ್ನು ಕಾಪಾಡುತ್ತದೆ
- ವ್ಯವಹಾರದಲ್ಲಿ ಸ್ಥಿರತೆ, ಹಣಕಾಸಿನ ವ್ಯವಹಾರಕ್ಕೆ ಆದ್ಯತೆ ನೀಡಿ
- ನೀವು ಧರ್ಮಕಾರ್ಯವನ್ನು ಮಾಡುವುದನ್ನು ತೋರಿಸಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆಯನ್ನು ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ