ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ
ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆ ಆಗಬಹುದು
ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವನಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕ ಒತ್ತಡದಿಂದ, ಬೇಸರದಿಂದ ಕೆಲಸಗಳು ಹಾಳಾಗಬಹುದು
- ಪ್ರೇಮಿಗಳಲ್ಲಿ ಪರಸ್ಪರ ಕಾದಾಟವಾಗಲಿದೆ
- ಪ್ರಯಾಣ ಬೇಡ, ಕೆಲಸದಲ್ಲಿ ಯಾವುದೇ ಜವಾಬ್ದಾರಿ ಬೇಡ
- ಆಹಾರದ ಬಗ್ಗೆ ಎಚ್ಚರಿಕೆವಹಿಸಿ
- ಅಪಶಕುನದಿಂದ ತೊಂದರೆಯಾಗಬಹುದು
- ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಂಪು ವಸ್ತ್ರಧಾರಣೆ ಈ ದಿನ ಒಳ್ಳೆಯದಲ್ಲ
- ಆದಾಯ, ಲಾಭದ ಹಿಂದೆ ಹೋಗಿ ಮರ್ಯಾದೆಯನ್ನು ಕಳೆದುಕೊಳ್ಳಬಹುದು
- ದೈಹಿಕ ಮತ್ತು ಮಾನಸಿಕ ಒತ್ತಡಗಳು ಕೆಲಸಗಳಿಗೆ ತೊಂದರೆಯನ್ನು ಮಾಡಬಹುದು
- ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಕೈಗೂಡುವುದಿಲ್ಲ
- ಮಕ್ಕಳ ಯಶಸ್ಸಿನ ಬಗ್ಗೆ ಯೋಚನೆ ಮಾಡಿ
- ಮೃತ್ಯುಂಜಯನನ್ನು ಬಿಲ್ಪಪತ್ರೆ, ತುಂಬೆ ಹೂವಿನಿಂದ ಅರ್ಚನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆ ಮಕ್ಕಳ ಸಂಬಂಧ ಚೆನ್ನಾಗಿರುವ ಹಾಗೆ ಪ್ರಯತ್ನಿಸಿ
- ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸುವ ಸೂಚನೆ ಇದೆ
- ಮನೆಯ ಹಿರಿಯರ ಸಲಹೆ ಮಕ್ಕಳಿಗೆ ಅನ್ವಯವಾಗಲಿದೆ
- ವಿದ್ಯೆ ವಿವಾಹಕ್ಕಿರುವ ಸಮಸ್ಯೆ ದೂರವಾಗಲಿದೆ
- ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ಸಹಕಾರ ಇರುವುದಿಲ್ಲ
- ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು ಗೊಂದಲದಿಂದ ಹೊರ ಬರಬೇಕು
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಔಷಧ ವ್ಯಾಪಾರ ಮಾಡುವವರು ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗಬಹುದು
- ನಿಮ್ಮ ತಪ್ಪು ಮಾಹಿತಿ ಅನರ್ಥವಾಗಿ ತೊಂದರೆಗೆ ಕಾರಣವಾಗಲಿದೆ
- ನಿಮ್ಮ ಮೇಲಿನವರ ಸಹಕಾರವಿದ್ದರೂ ನಿಮಗೆ ತೊಂದರೆಯಾಗಬಹುದು
- ಪ್ರೇಮಿಗಳಿಗೆ ಶುಭ ದಿನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು
- ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
- ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಋಣಾತ್ಮಕವಾದ ಚಿಂತೆಗಳೇ ನಿಮ್ಮನ್ನು ಕಾಡಲಿದೆ
- ಹಿಂದೆ ಮಾಡಿದ ತಪ್ಪಿಗೆ ಇವತ್ತು ವಿಷಾದ ವ್ಯಕ್ತ ಪಡಿಸುತ್ತೀರಿ
- ಇಂದು ಆರೋಗ್ಯದಲ್ಲಿ ಏರು-ಪೇರಾಗಬಹುದು
- ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು ಎಚ್ಚರಿಕೆವಹಿಸಿ
- ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡುತ್ತೀರಿ ಆದರೆ ಪ್ರಯೋಜನವಿಲ್ಲ
- ವೈದ್ಯಕೀಯ ಕ್ಷೇತ್ರದಲ್ಲಿ ಸವಾಲುಗಳು, ಗೊಂದಲಗಳು, ಹೆಚ್ಚು ಕಾಡಬಹುದು
- ಪಶ್ಚಾತ್ತಾಪವೆ ಪರಿಹಾರ ಎಂಬ ಭಾವನೆ ಇದ್ದರೆ ಆಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆಲೋಚನೆ, ಒಳ್ಳೆಯ ವಾತಾವರಣ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಲಿದೆ
- ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರೂ ನೀವು ಅವರನ್ನು ಉಪಯೋಗಿಸಿ ಕೊಳ್ಳುವುದಿಲ್ಲ
- ಅವಿವಾಹಿತರ ಕಷ್ಟವನ್ನು ಕೇಳಲು ಯಾರಿಲ್ಲ ಅನ್ನುವವರು ನಿರ್ಧಾರವನ್ನು ಬದಲಾಯಿಸುತ್ತಾರೆ
- ನೀವು ಸಮಯಕ್ಕೆ ಮಹತ್ವ ನೀಡಿ
- ನಿಮ್ಮ ದೃಢವಾದ ನಿರ್ಧಾರವು ಸಡಿಲವಾಗಬೇಕು
- ಆರ್ಥಿಕವಾದ ಲಾಭವಿದ್ದರೂ ಲೆಕ್ಕ ಸಿಗದೆ ಇರಲಿದೆ
- ಗುರು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ಜೊತೆ ಸೇರಿ ಲಾಭವನ್ನು ಪಡೆಯುತ್ತೀರಿ
- ಸ್ನೇಹಿತರ ನಿಧನದ ವಾರ್ತೆ ಮನಸ್ಸಿಗೆ ಪರಿಣಾಮ ಬೀರಲಿದೆ
- ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತದೆ ಆದರೆ ಎಲ್ಲವೂ ಈಡೇರುವುದಿಲ್ಲ
- ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಿರುತ್ತದೆ
- ಅನೇಕರು ತಮ್ಮ ನೌಕರಿಯನ್ನು ಧೂಷಣೆ ಮಾಡುತ್ತಾ ರಾಜೀನಾಮೆ ಮಾಡಲು ನೋಡುತ್ತಾರೆ
- ಮಹಾ ವಿಷ್ಣುವನ್ನು ಸ್ಮರಣೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆ-ಮಕ್ಕಳಿಗೆ, ಗುರು-ಶಿಷ್ಯರಿಗೆ ಮಾತುಕತೆ ಬರಲಿದೆ
- ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
- ಮಕ್ಕಳು ಅನಗತ್ಯವಾಗಿ ಶಿಕ್ಷಕರ ಆದೇಶವನ್ನು ಪಾಲಿಸದೆ ತೊಂದರೆಯಾಗಬಹುದು
- ಸುಳ್ಳು ಹೇಳುವವರಿಗೆ ಹಿನ್ನಡೆಯಾಗಲಿದೆ
- ಬುದ್ಧಿವಂತಿಕೆಯಿರಲಿ ಆದರೆ ಅತಿಯಾದ ಬುದ್ಧಿವಂತಿಕೆ ಬೇಡ
- ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡಗಳಾಗಬಹುದು
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆಯಾಗಬಹುದು
- ನಿಮಗಿಂತ ಶಕ್ತಿಶಾಲಿಗಳಾಗಿರುವವರ ಜೊತೆಯಲ್ಲಿ ಸ್ಪರ್ಧೆ ಮಾಡಲು ಹೋಗಬೇಡಿ
- ನಿಮ್ಮ ಸಮಸ್ಯೆ, ನಿಮ್ಮ ದೌರ್ಬಲ್ಯದ ಅರಿವು ನಿಮಗಿರಬೇಕು
- ಆತುರವಾದ ನಿರ್ಧಾರಗಳು ಒಳ್ಳೆಯದಲ್ಲ
- ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆವಹಿಸಿ
- ದೂರದ ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಿಕೊಳ್ಳುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ
- ಬೇರೆಯವರ ಸಲಹೆ, ಸೂಚನೆ ಕೊಡುವ ಕಾಲವಾಗಿರುತ್ತದೆ
- ಸಂಗೀತ, ಮನೋರಂಜನೆಯಲ್ಲಿ ಕಾಲ ಕಳೆಯುವ ಅವಕಾಶವಿದೆ
- ಉತ್ತಮವಾದ ಭೋಜನ, ಲೌಕಿಕವಾದ ಸಂತೋಷವನ್ನು ಪಡೆಯುತ್ತೀರಿ
- ನೀವು ನಿರೀಕ್ಷೆ ಮಾಡಿದ ಲಾಭವು, ಹಣವು ನಿಮ್ಮ ಕೈ ಸೇರುವುದಿಲ್ಲ
- ಅನುಭವಿಸಿದ ಸಂತೋಷವೇ ಭಾಗ್ಯ ಅಂತ ತಿಳಿಯಬೇಕಾಗುತ್ತದೆ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗೆ ವ್ಯಾವಹಾರಿಕವಾದ ಜ್ಞಾನ, ಆಲೋಚನೆ ಬಹಳ ವಿಶೇಷವಾಗಿ ಕೆಲಸ ಮಾಡಲಿದೆ
- ಲೇಖಕರಿಗೆ, ಸಂಶೋಧಕರಿಗೆ ಹಿನ್ನಡೆಯಾಗುವ ದಿನ
- ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರಬಹುದು
- ಮಕ್ಕಳಲ್ಲಿ ಸಿಟ್ಟು, ವೈರತ್ವ, ಪ್ರಾರಂಭವಾಗಿ ಕಂಟಕಕ್ಕೆ ಕಾರಣವಾಗಬಹುದು
- ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
- ಸತ್ಯಸಂಶೋಧನೆ ಮಾಡಿ ಸತ್ಯಶೋಧನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮ ಕುಟುಂಬದ ಸದಸ್ಯರು ನಿಮಗೆ ಮಾರ್ಗದರ್ಶಕರಾಗುತ್ತಾರೆ
- ನಿಮ್ಮ ಮನಸ್ಸಿಗೆ ಬರುವ ಸ್ಥಿರವಾದ ನಿರ್ಧಾರಗಳನ್ನು ಬದಲಾವಣೆ ಮಾಡಿ ರಾಜಿಯನ್ನು ಮಾಡಿಕೊಳ್ಳಿ
- ಮೊಂಡುತನ, ಹಟ ಇವೆಲ್ಲಾ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ
- ವೈಯಕ್ತಿಕವಾದ ಪ್ರತಿಷ್ಠೆಯಿಂದ ಹಣ, ದ್ರವ್ಯ, ಸ್ಥಾನಮಾನ, ಸ್ನೇಹ, ಬಂಧುತ್ವವನ್ನು ಕಳೆದುಕೊಳ್ಳಬಹುದು
- ಇಂಜಿನಿಯರ್ಸ್ ಅಥವಾ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇರಲಿದೆ
- ಬೇರೆಯವರ ಮಾತನ್ನು ಗೌರವಿಸಿ ಸ್ವಂತ ಬುದ್ಧಿಯಿಂದ ಆಲೋಚಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ