ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ
ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆ ಮಾಡುತ್ತಾರೆ
ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಹಳ ಅಗತ್ಯವಾಗಿ ಮನೆಯ ಸದಸ್ಯರ ಯೋಗಕ್ಷೇಮವನ್ನು ವಿಚಾರಣೆ ಮಾಡಿ
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
- ದಾಯಾದಿಗಳಲ್ಲಿ ವೈಮನಸ್ಯ ಇರಲಿದೆ
- ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮ ಮಾತ್ರ ಕೆಲಸ ಮಾಡುತ್ತದೆ
- ಕಹಿಯಾದ ಮಾತುಗಳಿಂದ ದೂರವಿರಿ
- ಹಣದ ವಿಚಾರದಲ್ಲಿ ಗಮನವಿರಲಿ
- ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ತುಂಬಾ ಜವಾಬ್ದಾರಿಯಿರುವ ದಿನ
- ನಿಂತು ಹೋದ ಕೆಲಸಗಳು ಆರಂಭವಾಗಲಿದೆ
- ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
- ನಿರೀಕ್ಷಿತವಾದ ಲಾಭವನ್ನು ಕಾಣುತ್ತೀರಿ
- ಎರಡನೇ ಅಥವಾ ಮೂರನೇ ಮದುವೆ ಮಾಡಿಕೊಳ್ಳುವವರಿಗೆ ಶುಭವಿದೆ
- ಪ್ರೇಮಿಗಳಿಗೆ ಶುಭವಾದ ದಿನ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲವು ನಡವಳಿಕೆ, ಮಾತು, ಕೆಲಸ ಇತ್ಯಾದಿಗಳಿಗೆ ನಿಮ್ಮ ಕುಟುಂಬದವರೆ ನಿಮ್ಮನ್ನು ಟೀಕೆ ಮಾಡುತ್ತಾರೆ
- ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು
- ವೃತ್ತಿ ಅಥವಾ ನೌಕರಿಯಲ್ಲಿ ತೊಂದರೆಯನ್ನು ಮಾಡಿಕೊಳ್ಳುತ್ತೀರಿ
- ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು
- ಕೆಲಸದ ಒತ್ತಡ ಹೆಚ್ಚಾಗಲಿದೆ ಸಣ್ಣ ಬುದ್ದಿ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ
- ಜವಾಬ್ದಾರಿಯಿಂದ ಚರ್ತಿಸಬೇಕಾಗುತ್ತದೆ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತೀರಿ
- ಮನೆಯವರ ಸಹಕಾರ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ
- ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಲಿದೆ
- ಮನೆಯಲ್ಲಿ ಸಂತೋಷದ ವಾತಾವರಣ
- ಮಕ್ಕಳಿಂದ ಸಮಾಧಾನ ಸಿಗಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಸಪ್ತ ಮಾತೃಕೆಯರನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಗಮನಹರಿಸಿ
- ಮನಸ್ಸಿಗೆ ಹಿಡಿಸುವ ಕೆಲಸ ಮಾಡಿ
- ವ್ಯವಹಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯಲಿದೆ ಮಾನಸಿಕವಾಗಿ ಸಿದ್ದರಾಗಿರಬೇಕು
- ಈ ದಿನ ಉದ್ಯೋಗ ಅವಕಾಶಗಳಿವೆ
- ಬೇರೆಯವರ ಮಾತಿನಿಂದ ಕೆಲವು ಕೆಲಸಗಳನ್ನು ಹಾಳು ಮಾಡಿಕೊಳ್ಳುತ್ತೀರಿ
- ಮನಸ್ಸು ಚಂಚಲವಾಗದೆ ಇರೋ ಹಾಗೆ ನೋಡಿಕೊಳ್ಳಿ
- ಶಿವಾರಾಧನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ದಂಪತಿಗಳ ಮಧ್ಯೆ ಸಮಸ್ಯೆಯಿದ್ದರೆ ದೂರ ಮಾಡಿಕೊಳ್ಳಿ
- ನಿಮ್ಮ ಕೆಲಸದಿಂದ ನಿಮಗೆ ಅನುಕೂಲವಿದೆ
- ಮಕ್ಕಳ ವಿಚಾರಕ್ಕಾಗಿ ಸಮಯವನ್ನು ಕೊಡಿ
- ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
- ಅನುಪಯುಕ್ತವಾದ ವಿಚಾರದಲ್ಲಿ ಸಮಯ ಹಾಳು ಮಾಡಿಕೊಳ್ಳಬೇಡಿ
- ನಿಮ್ಮ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳಿ
- ನಾಗದೇವತೆಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಗುಪ್ತ ವಿಚಾರಗಳು, ಗಹನವಾದ ವಿಚಾರಗಳ ಬಗ್ಗೆ ನಿಮಗೆ ಹೆಚ್ಚು ಕುತೂಹಲವಿರಲಿದೆ
- ಅತಿಯಾದ ನಂಬಿಕೆ ಒಳ್ಳೆಯದಲ್ಲ
- ಆಹಾರದ ಬಗ್ಗೆ ಗಮನವಿರಲಿ
- ಬೇರೆಯವರು ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯನ್ನು ಮಾಡುತ್ತಾರೆ
- ಹೊಸ ಕೆಲಸದ ಆರಂಭ ಬೇಡ
- ನಿಮ್ಮ ಪ್ರಯತ್ನ ಮಾತ್ರ ನಿರಂತರವಾಗಿರಲಿ
- ಸತ್ಯ ನಾರಾಯಣನನ್ನು ಪೂಜೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರ ಒಲವು ಅವರ ಬೆಂಬಲ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ
- ಇಂದು ವ್ಯಾಪಾರದಲ್ಲಿ ಅನುಕೂಲವಾಗಲಿದೆ
- ಪ್ರವಾಸದಿಂದ ಸಂತೋಷವಾಗಲಿದೆ
- ಯಾವುದೇ ಸೋಂಕು ತಗುಲದಂತೆ ಗಮನಿಸಿ
- ಮನೆಯಲ್ಲಿ ವಿವಾದಗಳು ಬೇಡ
- ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
- ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ದಿನಚರಿಯನ್ನು ಶಿಸ್ತುಬದ್ದವಾಗಿಟ್ಟುಕೊಳ್ಳಿ
- ಸ್ನೇಹಿತರ ಆಹ್ವಾನದಿಂದ ಸಂತೋಷವಾಗಲಿದೆ
- ಯಾರನ್ನೂ ಕೂಡ ದ್ವೇಷ, ದೂಷಣೆ ಮಾಡಬೇಡಿ
- ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
- ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
- ಮಕ್ಕಳ ಭವಿಷ್ಯಕ್ಕೆ ದಾರಿಯನ್ನು ಮಾಡಿ
- ದುರ್ಗಾರಾಧನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆದಾಯ ಸ್ಥಿರವಾಗಿರುವ ದಿನ
- ವೈವಾಹಿಕ ಜೀವನದಲ್ಲಿ ಗೊಂದಲದ ಮಾತು ಬರಲಿದೆ
- ಮನಸ್ಸು ಪ್ರಶಾಂತವಾಗಿರುವುದಿಲ್ಲ, ಶಾಸ್ತ್ರೀಯ ಸಂಗೀತವನ್ನು ಕೇಳಿ
- ನಿಮ್ಮ ವಿರೋಧಿಗಳಿಂದ ತೊಂದರೆಯಾಗಬಹುದು
- ಇಂದು ಪ್ರೇಮಿಗಳಿಗೆ ತೊಂದರೆಯಿರುವ ದಿನ
- ಬೇರೆಯವರ ಅಭಿಪ್ರಾಯಕ್ಕೆ ಅವಕಾಶ ಮಾಡಿಕೊಡಿ
- ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಪರಿಹಾರ ಮಾಡಿಕೊಳ್ಳಿ
- ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ
- ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
- ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆವಹಿಸಿ
- ಅತಿಥಿಗಳ ಆಗಮನದ ಬಗ್ಗೆ ಚರ್ಚೆ ಮಾಡುತ್ತೀರಿ
- ಸ್ಥಿರಾಸ್ತಿಗಳ ವಿವಾದಗಳು ಉದ್ಭವವಾಗಲಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಬಹಳ ಲಾಭದ ದಿನ
- ಮಕ್ಕಳ ಸಾಧನೆ ನಿಮಗೆ ಗೌರವ ತರಲಿದೆ
- ಸಂಬಂಧಿಕರ ಜೊತೆ ಮನಸ್ತಾಪಕ್ಕೆ ಕಾರಣವಾಗಲಿದೆ
- ಸಹೋದ್ಯೋಗಿಗಳಿಗೆ ಅನುಕೂಲವಿದೆ
- ಈ ದಿನ ಆರೋಗ್ಯ ಸುಧಾರಣೆಯಾಗಲಿದೆ
- ಮನೆಯವರ ಸಹಕಾರ ಎಲ್ಲದರಲ್ಲೂ ಜಯ ಸಾಧಿಸಲು ಅವಕಾಶವಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ