ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು
ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು
ಆತ್ಮಗೌರವ ಹೆಚ್ಚಿಸಿಕೊಳ್ಳಿ, ರಾಜಿಯಾದರೆ ಅವಮಾನ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
- ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
- ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
- ಪುರಸ್ಕಾರ – ಬಹುಮಾನ ಪಡೆಯಲು ಅವಕಾಶವಿದೆ
- ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
- ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
- ಕುಲದೇವತಾ ಸ್ಮರಣೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ತೋರಿಸುತ್ತಾ ತೊಂದರೆಗೆ ಕಾರಣವಾಗಬಹುದು
- ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ
- ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ
- ಮಾನಸಿಕ ಚಂಚಲತೆ ನಿಯಂತ್ರಿಸಿ
- ಆತ್ಮಗೌರವ ಹೆಚ್ಚಿಸಿಕೊಳ್ಳಿ ರಾಜಿಯಾದರೆ ಅವಮಾನ
- ಪ್ರೇಮಿಗಳಿಗೆ ಅನುಮಾನ – ಭಿನ್ನಾಭಿಪ್ರಾಯ ಏರ್ಪಡಬಹುದು
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಅಸಮಾಧಾನ
- ಪ್ರಯತ್ನ ಕಡಿಮೆ ಮಾಡಿ ಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
- ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಬೇಡ
- ಕೆಲವು ಕಾರಣಗಳಿಂದ ಕೆಲಸಗಳು ಸ್ಥಗಿತಗೊಳ್ಳಬಹುದು
- ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
- ಕುಟುಂಬದಲ್ಲಿ ಸಮಸ್ಯೆ ಬೇಸರ, ನಿಮ್ಮ ಜವಾಬ್ದಾರಿ ಪೂರ್ಣ ಮಾಡುವುದಿಲ್ಲ
- ಧರ್ಮಸ್ಥಳ ಶ್ರೀಮಂಜುನಾಥನನ್ನ ಆರಾಧನೆ ಮಾಡಿ, ಸಾಧ್ಯವಾದರೆ ದರ್ಶನ ಪಡೆಯಿರಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮಕ್ಕಳ ಜೊತೆಯಲ್ಲಿ ಚೆನ್ನಾಗಿರುತ್ತೀರಿ
- ಅಧ್ಯಾಪನ ವೃತ್ತಿಯಲ್ಲಿಯ ಕೆಲವರಿಗೆ ಅಪರಾಧ ಭಾವನೆ ಕಾಡಬಹುದು
- ಹಿರಿಯರ, ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಪರಿಹಾರ ದೊರಕಬಹುದು
- ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರ ಇರುತ್ತದೆ
- ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು
- ಸರಸ್ವತಿಯನ್ನು ಆರಾಧನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಪರಸ್ಪರ ವಾದ ಮಾಡಬಾರದು
- ರಕ್ತದೊತ್ತಡ ರೋಗಿಗಳಿಗೆ ತೊಂದರೆಯ ಸಂಭವ ಜಾಗ್ರತೆಯಿರಲಿ
- ಅನಗತ್ಯ ಓಡಾಟ, ಪ್ರಯಾಣ, ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
- ತುಂಬಾ ಆತಂಕ ಪಡುವ ವಿಷಯಗಳಿಂದ ದೂರವಿರಬೇಕು
- ಇಂದು ಆದಷ್ಟು ಧ್ಯಾನದಲ್ಲಿ ತೊಡಗಿಸಿಕೊಳ್ಳಿ
- ಆಹಾರ ಮಿತವಾಗಿರಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಚಿಂತೆ ಬೇಡ
- ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ, ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ಇಲ್ಲವಾದರೆ ತೊಂದರೆ ಆಗಬಹುದು
- ನಿಮ್ಮ ಆಲೋಚನೆಗಳನ್ನ ಹೇಗೆ ವ್ಯಕ್ತಪಡಿಸಬೇಕೆಂದು ಇಂದು ತಿಳಿಯುವುದಿಲ್ಲ
- ಸಂಶೋಧನಾ ಕಾರ್ಯದಲ್ಲಿ ಯಶಸ್ಸಿದೆ
- ಪ್ರೀತಿ -ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಕುಪಿತರಾಗುತ್ತೀರಿ, ನಂಬುವುದಿಲ್ಲ
- ಮನೆಯಲ್ಲಿಯ ಕೆಲಸದಲ್ಲಿ ನಿರತರಾಗುತ್ತೀರಿ
- ಹಳೆಯ ಘಟನೆ ನೆನೆದು ತುಂಬಾ ಭಾವುಕರಾಗುತ್ತಿರಿ
- ಬೆಳಗ್ಗೆ ಮತ್ತು ಸಂಜೆ ಸೂರ್ಯದೇವರನ್ನ ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿನ್ನೆ ದಿನದ ತಪ್ಪಿನಿಂದಾಗಿ ಈ ದಿನ ಕೆಲಸದಲ್ಲಿ ಸಮಸ್ಯೆಗಳು ಕಾಣುತ್ತವೆ
- ಸರಿಯಾದ ಲೆಕ್ಕಾಚಾರ ಇರದೆ ನಷ್ಟ ಉಂಟಾಗಬಹುದು
- ಪ್ರಯಾಣ ಮಾಡಲು ಕಷ್ಟವಾಗಬಹುದು, ಬೆನ್ನು ನೋವು ಕಾಡಬಹುದು
- ಬಹಳ ಉತ್ತೇಜನಕಾರಿ ಕೆಲಸಗಳು ಹಿಂದೆ ಬೀಳುತ್ತವೆ
- ತಾಯಿಯವರ ಆರೋಗ್ಯದಲ್ಲಿ ತೊಂದರೆ ಆಗಬಹುದು
- ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
- ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿಬೇಡ
- ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ ನಿಮಗೆ ಬೆಲೆ ಇರುವುದಿಲ್ಲ
- ಕಾನೂನು ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ ಶುಭವಿದೆ
- ಆದಾಯ ಚೆನ್ನಾಗಿರುತ್ತದೆ ಕೂತು ಜಾಗಕ್ಕೆ ಅದೃಷ್ಟಲಕ್ಷ್ಮಿ ಆಗಮನ
- ಉತ್ತಮವಾದ ಹಣವಾದ ಸ್ವೀಕರಿಸಿ ಇಲ್ಲದಿದ್ದರೆ ನಿರಾಕರಿಸಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ವಿನಾಕಾರಣ ಕೋಪಗೊಳ್ಳುತ್ತೀರಿ, ಯಾರಿಗೂ ಸಮಾಧಾನ ಇರುವುದಿಲ್ಲ
- ಕರ್ತವ್ಯ ಲೋಪ ನಿಮ್ಮ ಮೇಲೆ ಆಪಾದನೆಯಾಗಬಹುದು ಎಚ್ಚರ
- ಮನೆಯ ನವೀಕರಣ ಅಥವಾ ಅಲಂಕಾರಕ್ಕೆ ಹಣ ಖರ್ಚಾಗಬಹುದು
- ದಾಂಪತ್ಯ ಜೀವನ ಸುಖಮಯವಾಗಿದ್ದರು ನೀವು ಅದಕ್ಕೆ ಆಸ್ಪದ ಕೊಡುವುದಿಲ್ಲ
- ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ ಹಣದ ವಿಚಾರದಲ್ಲಿ ತೊಂದರೆ
- ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಜಗಳ ಆದರೆ ಪ್ರಯೋಜನವಿಲ್ಲ
- ಇಂದು ಕೆಲಸದ ಒತ್ತಡ ತುಂಬಾ ಇರುತ್ತದೆ
- ಇಂದು ತುಂಬಾ ತಿರುಗಾಟ ಆದಾಯ ಮಾತ್ರ ಇರುವುದಿಲ್ಲ
- ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
- ಎಲ್ಲಾ ಆದಮೇಲೆ ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ ಆದರೆ ಪ್ರಯೋಜನವೇನು.?
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದ ದೃಷ್ಟಿಯಿಂದ ಸಾಧಾರಣವಾದ ದಿನ, ಆದರೆ ಮನೆಯಲ್ಲಿ ಸಂತೋಷ
- ನಿಮ್ಮ ಒಳ್ಳೆಯ ಸ್ವಭಾವ ಲಾಭ ಪಡೆಯಲು ಜನ ಕಾಯುತ್ತಿರುತ್ತಾರೆ
- ಕಿರಿಯರು ನಿಮ್ಮನ್ನು ತುಂಬಾ ಆಧಾರಿಸುತ್ತಾರೆ
- ಬೇರೆಯವರ ಸಮಸ್ಯೆ ಬಗೆಹರಿಸುವುದರಲ್ಲಿ ನೀವು ಚತುರರಾಗಿ ಕೆಲಸ ಮಾಡುತ್ತೀರಿ
- ವೈವಾಹಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು
- ಸಂಬಂಧಿಕರು ಹಣಕ್ಕಾಗಿ ಹಿಂಸಿಸಬಹುದು
- ಈಶ್ವರನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ದಿನ ವ್ಯರ್ಥವಾಗಬಹುದು
- ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಅದರಿಂದ ಸಂತೋಷ
- ಕೈ ಹಿಡಿದ ಕೆಲಸಗಳಲ್ಲಿ ಹಿನ್ನೆಡೆ ಆದರೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ
- ಒಳ್ಳೆಯ ಕೆಲಸ ಆರಂಭಿಸಲು ದಿನ ಉತ್ತಮವಾಗಿದೆ ಆದರೆ ನೀವು ಮಾಡುವುದಿಲ್ಲ
- ಅನಿರೀಕ್ಷಿತ ಧನಾಗಮನವಾಗಬಹುದು
- ಇಂದು ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗಿರುತ್ತದೆ
- ಶ್ರೀರಾಮಪರಿವಾರ ದೇವತೆಗಳನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ