/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ವಾಹನ ಖರೀದಿಸುವ ಯೋಗವಿದೆ ಆದರೆ ಉಪಯೋಗಿಸಿದ ವಾಹನಕ್ಕೆ ಹೋಗಬಾರದು
- ಕೋಪ ಮತ್ತು ಉತ್ಸಾಹ ಎರಡು ನಿಯಂತ್ರಿಸಬೇಕಾದ ದಿನ
- ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
- ಪುರಸ್ಕಾರ - ಬಹುಮಾನ ಪಡೆಯಲು ಅವಕಾಶವಿದೆ
- ಸಾಲ ಸುಲಭವಾಗಿ ಸಿಗಬಹುದು ಆದರೆ ಯೋಚಿಸಿ
- ಬಿಡುವಿಲ್ಲದ ಕೆಲಸ ಆದರೆ ಸಂತೋಷ ಇರುತ್ತದೆ
- ಕುಲದೇವತಾ ಸ್ಮರಣೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ಆಲಸ್ಯ, ಸೋಮಾರಿತನ ಕಾಡಬಹುದು
- ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
- ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
- ಯಾವುದೋ ಕೀಟ ಕಚ್ಚಿ ಅಲರ್ಜಿಯಾಗಿ ನಿಮ್ಮನ್ನ ಕಾಡಬಹುದು ಜಾಗ್ರತೆಯಿರಲಿ
- ಇಂದು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ
- ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
- ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
- ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
- ಇಂದು ಭೂದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ತುಂಬಾ ಹಂಬಲಿಸುತ್ತೀರಿ
- ನಿಮ್ಮ ಪೂರ್ವಜರು ಮಾಡಿದ ಶ್ರೀ ಕೃಷ್ಣನ ಪೂಜೆ ಆರಾಧನೆಯಿಂದ ಶುಭಯೋಗ ಲಭಿಸುವ ಸಾಧ್ಯತೆ ಇದೆ
- ಹಾಸ್ಯ ಕಲಾವಿದರಿಗೆ, ಮಿಮಿಕ್ರಿ ಮಾಡುವವರಿಗೆ ಶುಭದಿನ
- ಈಶ್ವರ ವಾಹನ ನಂದೀಶ್ವರನನ್ನು ಪ್ರಾರ್ಥಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
- ನಿಮ್ಮ ಉದ್ಯೋಗ ಬದಲಾಗಬಹುದು, ಬಡ್ತಿ ಸಿಗಲಿದೆ, ಸಂಬಳ ಹೆಚ್ಚಾಗಬಹುದು
- ಆದರೆ ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥವಾಗಿರುತ್ತೀರಿ
- ನಿಮ್ಮ ಪಿತೃದೇವತೆಗಳನ್ನು ಸಂತೃಪ್ತಿ ಪಡಿಸಿ, ಅವರ ಪ್ರಾರ್ಥನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬರುವ ಸಾಧ್ಯತೆ
- ಆದರೆ ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
- ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಮಾಡಿಕೊಳ್ಳಬಹುದು
- ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
- ಇಂದು ಭಗವಂತನ ದಶಾವತಾರ ಸ್ಮರಣೆ ಮಾಡಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
- ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನ ಬಲ ದೊರೆಯುತ್ತದೆ
- ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕಾಣುತ್ತದೆ
- ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
- ಇಂದು ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ
- ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
- ಇಂದಲು ಯಾವುದೇ ವಿಚಾರವನ್ನು ಹೆಚ್ಚಿಗೆ ಚರ್ಚೆ ಮಾಡದಿದ್ದರೆ ಉತ್ತಮ
- ವಿದೇಶಿದಲ್ಲಿ ಕೆಲಸ ಮಾಡುವವರಿಗೆ ನೌಕರಿಯಲ್ಲಿ ಹಿನ್ನಡೆಯಾಗಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ
ಧನುಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
- ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
- ತಾವು ಪರಿಶ್ರಮದಿಂದ ಕಲೆ ಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
- ನಿಮ್ಮ ಬೇಜಾವಾಬ್ದಾರಿತನದಿಂದ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆಯಿರಲಿ
- ಮೃತ್ಯುಂಯನನ್ನು ಆರಾಧನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗುವ ಸಾಧ್ಯತೆ
- ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
- ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆವಹಿಸಿ
- ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿದು ಕೆಲಸ ಮಾಡಿ
- ತ್ವರಿತ ರುದ್ರನನ್ನು ಆರಾಧಿಸಿ, ಈಶ್ವರನಿಗೆ ಬಿಲ್ಪಪತ್ರೆ ಸಮರ್ಪಣೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದಿನ ನಿಮ್ಮ ದಿನಚರಿ ಶಿಸ್ತು ಬದ್ಧವಾಗಿ ಆರಂಭವಾಗುತ್ತದೆ
- ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
- ಹಣದ ಸಮಸ್ಯೆಗೆ ಪರಿಹಾರ ಮಾರ್ಗವು ದೊರೆಯಲಿದೆ
- ವಿದ್ಯಾರ್ಥಿಗಳಿಗೆ ತುಂಬಾ ಆತಂಕವುಂಟು ಮಾಡುವ ದಿನ
- ಕುಂಭ ರಾಶಿಯ ಅಧಿಪತಿ ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
- ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
- ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
- ಹಲವಾರು ಜನ ಟೀಕೆಗೆ ಒಳಗಾಗುತ್ತೀರಿ
- ಶ್ರೀ ಸೂಕ್ತ ಹೋಮ ಮಾಡಿಸಿ ಒಳ್ಳೆಯದಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us