ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆಯಿರಲಿ ಶುಭವಾಗುತ್ತದೆ
ಉದ್ಯೋಗದಲ್ಲಿ ಹೊಸ ಬದಲಾವಣೆಯಾಗುವ ಸೂಚನೆ
ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಸಿಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ಕೆಟ್ಟ ಅಭ್ಯಾಸಗಳು ನಿಮಗೆ ಚಿಂತೆಯನ್ನುಂಟು ಮಾಡಬಹುದು
- ಧಾರ್ಮಿಕ ಸಂಸ್ಥೆಗಳಿಗೆ ಸಹಾಯ ಮಾಡುವ ಆಲೋಚನೆ ಬರುತ್ತದೆ
- ಆಸ್ತಿಗೆ ಸಂಬಂಧಸಿದ ವಿವಾದಗಳು ಹೆಚ್ಚಾಗಿ ಮನಸ್ತಾಪ ಏರ್ಪಡುತ್ತದೆ
- ಉದ್ಯೋಗದಲ್ಲಿ ಹೊಸ ಬದಲಾವಣೆಯಾಗುವ ಸೂಚನೆಗಳು ಕಾಣಬಹುದು
- ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಅಮೋಘ ಅವಕಾಶಗಳು ದೊರೆಯುವಂತಹ ಸಾಧ್ಯತೆಗಳಿರುತ್ತದೆ
- ದುರ್ಗಾ ಹೋಮ ಮಾಡಿಸಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಶತ್ರುಗಳು ನಿಮ್ಮ ವಿರುದ್ಧ, ತೊಂದರೆ ಮಾಡಲು ಕಾಯುತ್ತಿರಬಹುದು ಬುದ್ಧಿವಂತಿಕೆಯಿಂದ ಅದನ್ನು ನಿಭಾಯಿಸಿ
- ಕೆಲಸದಲ್ಲಿ ಹಿರಿಯರ ಸಹಾಯ ನಿಮಗೆ ಅಗತ್ಯವಾಗಿ ಬೇಕಾಗಬಹುದು
- ವಸ್ತುಗಳು ಕಳುವಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
- ಹಯಗ್ರೀವರನ್ನು ಪ್ರಾರ್ಥಿಸಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ
- ವಿವಾಹ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು
- ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆಯಿರಲಿ ಶುಭವಾಗುತ್ತದೆ
- ನಿಮ್ಮ ಕೆಲಸಕ್ಕೆ ಮನೆಯವರ ಸಹಾಯ, ಸಹಕಾರ ದೊರೆಯದೆ ಇರಬಹುದು
- ಪ್ರತ್ಯಂಗಿರ ದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾಂತ್ರಿಕವಾದ ದೋಷ ನಿಮ್ಮನ್ನು ಮತ್ತು ಕುಟುಂಬವನ್ನು ಕಾಡಬಹುದು
- ಅನಗತ್ಯ ಹಣ ಖರ್ಚು ಮಾಡಿ ಸಮಸ್ಯೆ ಬಗೆ ಹರಿಯದೆ ಒದ್ದಾಡಬೇಕಾಗಬಹುದು
- ಮಾರ್ಗದರ್ಶನದ ಕೊರತೆಯಿಂದಾಗಿ ಹಲವು ಗೊಂದಲ ಉಂಟಾಗಬಹುದು
- ಉಚ್ಚಾಟನಾ ಸುದರ್ಶನ ಹೋಮ ಮಾಡಿಸಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಾಲು, ನೀರು, ಎಣ್ಣೆ ಇತ್ಯಾದಿ ದ್ರವ ಪದಾರ್ಥಗಳನ್ನು ವ್ಯಾಪಾರ ಮಾಡುವ ವ್ಯಕ್ತಿಗಳಿಗೆ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆಯಿರಲಿ
- ಇಂದು ಅನಿರೀಕ್ಷಿತ ಹಣ ನಿಮ್ಮ ಕೈ ಸೇರಬಹುದು
- ಅಪಘಾತದಿಂದ ಹೆಚ್ಚು ಹಣ ಖರ್ಚಾಗಬಹುದು ಜಾಗ್ರತೆ ಇರಲಿ
- ಇಂದು ಕಪಾಲಿನೀ ದೇವಿಯನ್ನು ಆರಾಧನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕ್ಷೇತ್ರದಲ್ಲಿ ವಿಶೇಷ ಗೌರವ ಸಿಗುವ ದಿನ
- ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ, ಸನ್ಮಾನ ಸಿಗುತ್ತವೆ
- ಭೂ ವ್ಯಾಪಾರಿಗಳಿಗೆ ಉತ್ತಮವಾದ ದಿನ
- ಭೋಜನ ಸಕಾಲಕ್ಕೆ ದೊರೆಯದೇ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ
- ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಸಿಗಬಹುದು
- ಅನ್ನಪೂಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಆತ್ಮ ವಿಶ್ವಾಸದ ಜೊತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲವು ದೊರೆಯಬಹುದು
- ನಿಮ್ಮ ಪ್ರತಿಭೆಯನ್ನು ವೈಯಕ್ತಿಕ ಲಾಭಕ್ಕಿಂತ ಸಮಾಜ ಸೇವೆಗೆ ಉಪಯೋಗಿಸಿ
- ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಾ ಇನ್ನೂ ಹೆಚ್ಚಿನ ಮನ್ನಣೆಯನ್ನು ಪಡೆಯಿರಿ
- ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ ಗಮನವಿರಲಿ
- ರಾಜಕೀಯ ವ್ಯಕ್ತಿಗಳ ಹಾಗೂ ಗಣ್ಯರ ಬೆಂಬಲ ಹೆಚ್ಚಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಪ್ರಯಾಣ ಮಾಡಬಹುದಾದ ದಿವಸ
- ಪ್ರೇಯಸಿಯೊಂದಿಗೆ ನಿಮ್ಮ ಪ್ರಯಾಣ ಆನಂದವಾಗಿರುತ್ತದೆ
- ಮಹಿಳೆಯರು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಲಾಭ ಪಡೆಯುವ ಸಾಧ್ಯತೆಗಳಿವೆ
- ಹಳೆಯ ಷೇರುಗಳಿದ್ದರೆ ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು
- ಸಂಪತ್ತು ಲಕ್ಷ್ಮಿಯನ್ನು ಪ್ರಾರ್ಥಿಸಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವ್ಯಾಪಾರ-ವ್ಯವಹಾರಗಳಲ್ಲಿ ತಪ್ಪು ಸಂಭವಿಸಬಹುದು
- ಸ್ನೇಹಿತರು ನಿಮ್ಮನ್ನು ವ್ಯವಹಾರದಿಂದ ಹೊರಗಿಟ್ಟು ರಹಸ್ಯವಾಗಿ ವ್ಯವಹರಿಸುತ್ತಾರೆ
- ನಿಮ್ಮ ಹಾಗೂ ನಿಮ್ಮ ಸ್ನೇಹಿತನ ಮಧ್ಯ ಅಸಮಾಧಾನ ಏರ್ಪಾಟಾಗಿ ಕಲಹವಾಗಬಹುದು
- ಇಂದು ನೀವು ವ್ಯವಹಾರವನ್ನು ರದ್ದು ಮಾಡಬಹುದು
- ನಿಮ್ಮ ಪಾಲುದಾರಿಕೆಯಿಂದ ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು
- ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸದಾಗಿ ಏನೊ ಮಾಡಬೇಕೆಂದು ಚಿಂತಿಸುತ್ತಾ ಬೇಡವಾದದ್ದನ್ನು ಗಂಟು ಹಾಕಿಕೊಳ್ಳುತ್ತೀರಿ
- ನಿಮ್ಮ ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಒಳಿತು
- ನಿಮಗೆ ಯಾರ ಸಹಕಾರವು ಸರಿಯಾಗಿ ಸಿಗುವುದಿಲ್ಲ
- ನಿಮ್ಮಿಂದ ಹಲವರು ಉಪಕಾರ ಪಡೆದು ನಿಮ್ಮ ಸ್ವಭಾವಕ್ಕೆ ಬೇಸತ್ತು ದೂರಾವಾಗುತ್ತಾರೆ
- ನೀವು ಆರಾಧನೆ ಮಾಡುವ ದೇವಿಯನ್ನು ದ್ರವ್ಯದಿಂದ ಆರಾಧಿಸಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿವಾಹದ ದೃಷ್ಟಿಯಿಂದ ನಿಮ್ಮ ಹಳೆಯ ಬಂಧುಗಳು ಹೊಸ ಸಂಬಂಧ ಬೆಳೆಸುವ ಅವಕಾಶವಿದೆ
- ನಿಮ್ಮ ಮಾತು ಇಂದು ಬಹಳ ಮುಖ್ಯವಾಗಿರುತ್ತದೆ
- ಏಕ ರಾಶಿ, ಏಕ ನಕ್ಷತ್ರದಲ್ಲಿರುವ ದಂಪತಿಗಳು ಇವತ್ತಿನ ಮಾತುಕತೆಗೆ ವ್ಯವಹಾರಕ್ಕೆ ಕೇಂದ್ರ ಬಿಂದುವಾಗಿರುತ್ತೀರಿ
- ಸ್ವಯಂವರ ಪಾರ್ವತೀ ದೇವಿಯನ್ನು ಆರಾಧನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಚರ್ಮ ರೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಜಾಗರೂಕರಾಗಿರಬೇಕು
- ನಿಮಗೆ ಚರ್ಮ ರೋಗ ಹೆಚ್ಚಾಗುವ ಸೂಚನೆಗಳಿವೆ
- ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ ಆನಂದವಾಗಿರುತ್ತೀರಿ
- ಕುಟುಂಬದಲ್ಲಿ, ವ್ಯವಹಾರದಲ್ಲಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ
- ಚರ್ಮ ರೋಗಿಗಳು ಅಮೃತಬಳ್ಳಿ ಎಲೆಗಳನ್ನು ಸೇವಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ