ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ
ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಅಸಮಾಧಾನ
ನಿಲ್ಲಿಸಿದ ಹಲವು ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ತುಂಬಾ ವಿರಾಮವಾದ ದಿವಸ ಒತ್ತಡಗಳಿಲ್ಲ
- ವ್ಯವಹಾರದ ದುರ್ಬಲ ಅಂಶಗಳನ್ನು ದೂರ ಮಾಡಿ
- ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಿ
- ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸಬಹುದು
- ಈ ದಿನ ಸರ್ಕಾರಿ ಕೆಲಸಗಳಾಗಲಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
- ಸ್ನೇಹಿತರೊಂದಿಗಿನ ವ್ಯವಹಾರ ವೃದ್ದಿಸುತ್ತದೆ
- ಇಂದು ಶತ್ರು ಜಯ
- ಉದಾರ ವರ್ತನೆಯಿಂದ ಜನಪ್ರಿಯತೆ ಸಿಗಲಿದೆ
- ಕಾರ್ಯಕ್ಷೇತ್ರದಲ್ಲಿ ಹಲವಾರು ನಿಯಂತ್ರಣ ಕಾರ್ಯ ನಡೆಯುತ್ತದೆ
- ವೃತ್ತಿಗೆ ಸಂಬಂಧಿಸಿದಂತೆ ವಿಷಯ ಸಂಗ್ರಹ ಮಾಡಬಹುದು
- ಕಾರ್ತಿಕೇಯನ ಆರಾಧನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ತಪ್ಪು ತಿದ್ದಲು ಹೋಗಬೇಡಿ
- ಕೇಳಿದರೆ ಮಾತ್ರ ಬೇರೆಯವರಿಗೆ ಸಲಹೆ ಕೊಡಿ
- ಹೊಸ ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
- ಇಂದು ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
- ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
- ಮನೆಯಲ್ಲಿ ಹಣದ ಸಮಸ್ಯೆ ಕಾಡಬಹುದು
- ಉಮಾ ಮಹೇಶ್ವರನನ್ನು ಪ್ರಾರ್ಥಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯದಲ್ಲಿ ಒತ್ತಡ ಆಗಬಹುದು
- ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
- ಬುದ್ಧಿವಂತಿಕೆಯಿಂದ ಕೆಲಸ ಮಾಡಿ
- ಹೊಸಬರ ಪರಿಚಯ ಆಗಲಿದೆ
- ಭವಿಷ್ಯದ ಬಗ್ಗೆ ಚಿಂತಿಸಿ
- ವಾಹನಾಪಘಾತವಾಗಬಹುದು ಎಚ್ಚರಿಕೆವಹಿಸಿ
- ಲಕ್ಷ್ಮೀ ನಾರಾಯಣರ ಅನುಗ್ರಹ ಪಡೆಯಿರಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಬೇರೆಯವರನ್ನು ಅರ್ಥಮಾಡಿಕೊಳ್ಳಿ
- ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ
- ಇಂದು ನಿಮ್ಮ ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ
- ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ
- ಜೀವನ ಸಾಮರಸ್ಯದಿಂದ ಕೂಡಿರುತ್ತದೆ
- ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹೋದ್ಯೋಗಿಗಳೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಿ
- ಕೆಲಸದ ಒತ್ತಡ ತುಂಬಾ ಇರುತ್ತದೆ
- ಈ ದಿನ ಸಮಯಾಭಾವ ಅನಿಸಬಹುದು
- ವಿಶ್ರಾಂತಿಯ ಅಗತ್ಯ ತುಂಬಾ ಕಾಣುತ್ತದೆ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಇಂದು ಯಾವುದೇ ಹೊಸ ಕೆಲಸವನ್ನು ಮಾಡಬೇಡಿ
- ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರ,ವ್ಯವಹಾರ ಮಾಡುವವರಿಗೆ ದೊಡ್ಡ ಮೊತ್ತದ ಲಾಭ ಸಿಗಲಿದೆ
- ವೈಯಕ್ತಿಕ ಸಂಬಂಧಗಳಲ್ಲಿ ಗಟ್ಟಿತನ ಇರಲಿದೆ
- ಹೊಸ ಕೆಲಸಗಳಲ್ಲಿ ಆಸಕ್ತಿ ಹೊಂದುತ್ತೀರಿ
- ಕುಟುಂಬಕ್ಕೆ ಸಮಯ ನೀಡಲು ಅವಕಾಶ ಕಡಿಮೆ
- ಹಣಕಾಸಿನ ವಿಚಾರ ಗಂಭೀರವಾಗಲಿದೆ
- ಜವಾಬ್ದಾರಿ ಹೆಚ್ಚಾಗಿ ಆತಂಕ ಪ್ರಾರಂಭವಾಗುತ್ತದೆ
- ಐಶ್ವರ್ಯ ಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕ ಒತ್ತಡದಿಂದ ತೊಂದರೆಯಾಗಬಹುದು
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಬದಲಾಗುತ್ತಿರುವ ಹವಾಮಾನದಿಂದ ಶೀತ-ಜ್ವರದ ಸಮಸ್ಯೆಯಾಗಬಹುದು
- ಈ ದಿನ ಹೊಸ ಕೆಲಸ ಪ್ರಾರಂಭಿಸಬೇಡಿ
- ಇಂದು ಅತಿಯಾದ ಕೋಪದ ದಿನ
- ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಿರಿಕಿರಿ ಉಂಟಾಗಬಹುದು
- ಅಮೃತ ಮೃತ್ಯುಂಜಯನನ್ನು ಜಪ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಉದ್ಯೋಗದಲ್ಲಿ ನಿಮ್ಮ ಸೇವೆ ಬೇರೆಯವರಿಗೆ ಮಾದರಿಯಾಗಲಿದೆ
- ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ
- ತಾರ್ಕಿಕ ನಿಲುವು ಯಶಸ್ಸಿಗೆ ಕಾರಣವಾಗುತ್ತದೆ
- ಕಾನೂನಿನ ಹೋರಾಟದಲ್ಲಿ ಅಪಜಯವಾಗಬಹುದು
- ಇಂದು ಆದಾಯ ಕಡಿಮೆ ಕೆಲಸ ಹೆಚ್ಚು
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
- ಭೂ ವರಾಹ ಸ್ವಾಮಿಯನ್ನು ಅರ್ಚಿಸಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲು ಅವಕಾಶವಿದೆ
- ಪಿತೃ ಸಂಪತ್ತು ವೃದ್ಧಿಯಾಗಲಿದೆ
- ಕಲಾಕ್ಷೇತ್ರದಿಂದ ಪುರಸ್ಕಾರ ಸಿಗಲಿದೆ
- ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ನಿರಾಶೆಯಾಗಲಿದೆ
- ವ್ಯವಹಾರದಲ್ಲಿ ಹೊಸ ಸಿಬ್ಬಂದಿಯ ನೇಮಕಾತಿ
- ಅನುಭವಿಗಳಿಂದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
- ಶಾರದಾ ಪರಮೇಶ್ವರಿಯನ್ನು ಆರಾಧಿಸಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರೊಂದಿಗೆ ಕಾಲಾಹರಣ ಮಾಡುತ್ತೀರಿ
- ಯಾವುದೇ ಒತ್ತಡಗಳಿರುವುದಿಲ್ಲ
- ಭವಿಷ್ಯದಲ್ಲಿ ಮುಂದುವರಿಯುವ ಬಗ್ಗೆ ಚಿಂತನೆ
- ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು
- ನಿಮ್ಮ ವರ್ತನೆಯಿಂದ ಹಲವರು ದೂರವಾಗಬಹುದು
- ಆರೋಗ್ಯ ಸೇವೆ ಮಾಡುವವರಿಗೆ ಶುಭದಿನ
- ಸಂಪತ್ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಧಾನವಾಗಿ ನಡೆಯುತ್ತಿರುವ ಕಾರ್ಯಗಳು ತಕ್ಷಣ ನಿಲ್ಲಬಹುದು
- ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
- ಭಾವನೆಗಳಿಗೆ ಒಳಗಾಗಿ ಕೆಲಸ ಹಾಳಾಗಬಹುದು
- ಈ ದಿನ ಅತಿಯಾದ ಶಿಸ್ತು, ಕೋಪ ಬೇಡ
- ಒಟ್ಟಾರೆ ಈ ದಿನ ನಿಮಗೆ ಚೆನ್ನಾಗಿರುವುದಿಲ್ಲ
- ನಿಮ್ಮ ನಡವಳಿಕೆ, ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ