ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿಯಾಗಬಹುದು
ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರ ಸಾಧ್ಯತೆ
ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆ ಆಗಲಿದೆ
- ಸಂಬಂಧಿಕರ ಬಾಂಧವ್ಯ ಗಟ್ಟಿಯಾಗುತ್ತದೆ
- ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
- ಕಾರ್ಯಕ್ಷೇತ್ರದಲ್ಲಿ ಗೌರವ ಮನ್ನಣೆ ಸಿಗಲಿದೆ
- ಅನಗತ್ಯ ವಿವಾದ ಸೃಷ್ಟಿಯಾಗಬಹುದು
- ಇಂದು ದೂರ ಪ್ರಯಾಣ ರದ್ದಾಗಬಹುದು
- ದುರ್ಗಾದೇವಿಯನ್ನು ಪ್ರಾರ್ಥಿಸಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾವಹಾರಿಕ, ವೃತ್ತಿ, ವಿದ್ಯಾ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ ಫಲ
- ಹೊಸ ಸಂಪರ್ಕಗಳಿಂದ ಅನುಕೂಲವಿದೆ
- ಹಳೆಯ ಸ್ನೇಹಿತರ ಮಿಲನ, ಪರಸ್ಪರ ಅಗತ್ಯ ವಿಷಯ ಚರ್ಚೆಯಾಗಲಿದೆ
- ಖಾಸಗಿ ನೌಕರರಿಗೆ ಪ್ರಯಾಣದ ಸಾಧ್ಯತೆ
- ಮಕ್ಕಳ ಜೊತೆಯಲ್ಲಿ ಆನಂದದಿಂದ ಸಮಯ ಕಳೆಯಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ತಪ್ಪು ತಿದ್ದಲು ಹೋಗಬೇಡಿ
- ಕೇಳಿದರೆ ಮಾತ್ರ ಬೇರೆಯವರಿಗೆ ಸಲಹೆ ಕೊಡಿ
- ಹೊಸ ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
- ಇಂದು ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
- ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
- ಮನೆಯಲ್ಲಿ ಹಣದ ಸಮಸ್ಯೆ ಕಾಡಬಹುದು
- ಉಮಾ ಮಹೇಶ್ವರನನ್ನು ಪ್ರಾರ್ಥಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಬೇಡ
- ಪತಿ-ಪತ್ನಿಯರ ಮಧ್ಯೆ ಸಾಮರಸ್ಯವಿರಲಿ
- ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
- ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ
- ಅಯ್ಯಪ್ಪ ಸ್ವಾಮಿಗೆ ವಿಭೂತಿಯಿಂದ ಅರ್ಚಿಸಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭರವಸೆ ನೀಡಬಾರದೆಂದು ಹೇಳಬೇಕಾದ ದಿನ
- ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶ
- ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
- ಉದ್ಯೋಗಸ್ಥರಿಗೆ ಭರ್ತಿ ಸೂಚನೆ
- ಒಡಹುಟ್ಟಿದವರೊಡನೆ ಘರ್ಷಣೆ ಅಶಾಂತಿ
- ಪ್ರೇಮಿಗಳಿಗೆ ಶುಭದಿನ
- ಉಗ್ರ ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
- ಮಾತಿನಿಂದ ಅವಮಾನ ಆಗಬಹುದು
- ಕುಟುಂಬ ಸಂಬಂಧಗಳು ಚೆನ್ನಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದ ದಿನ
- ಮಕ್ಕಳ ಚಟುವಟಿಕೆ ಅಥವಾ ಸ್ವಭಾವ ಬೇಸರ ತರುತ್ತದೆ
- ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
- ದೇವಿ ಉಪಾಸನೆಯನ್ನು ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಗಂಟಲಿನ ಸಮಸ್ಯೆ ಅಧಿಕವಾಗಿ ಕಾಡುತ್ತದೆ
- ನವ ವಿವಾಹಿತರಿಗೆ ಶುಭ ಸುದ್ದಿ
- ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
- ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ
- ಕೆಲಸಕ್ಕಾಗಿ ಜನರ ಹುಡುಕಾಟ ವಿಫಲವಾಗಬಹುದು
- ಸಾಲಿಗ್ರಾಮ ವಿಷ್ಣುವನ್ನು ಪ್ರಾರ್ಥಿಸಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಬೇಡ
- ನಕರಾತ್ಮಕ ಆಲೋಚನೆಯಿಂದ ದೂರವಿರಿ
- ನಿಮ್ಮ ಕಾರ್ಯ ವೈಖರಿಯಿಂದ ಟೀಕೆಗೆ ಗುರಿಯಾಗಬಹುದು
- ವಾದಗಳಿಂದ ಅಂತರ ಕಾಯ್ದುಕೊಳ್ಳಬೇಕು
- ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿಯಾಗಬಹುದು
- ವಾಹನ ಚಾಲನೆಯಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಪ್ರಾಣಿಗಳಿಗೆ ಆಹಾರವನ್ನು ನೀಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸಿಹಿ ಸುದ್ದಿ ಕೇಳುತ್ತೀರಿ ಆದರೆ ಸಮಾಧಾನವಿಲ್ಲ
- ಇಂದು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು
- ನಂಬಿದವರಿಂದ ವಂಚನೆಯಾಗುವ ಸೂಚನೆ ಇದೆ
- ವೈವಾಹಿಕ ಜೀವನದಲ್ಲಿ ಚುರುಕು ಕಾಣಬಹುದು
- ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ
- ಈ ದಿನ ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವವಿದೆ
- ಜ್ಞಾನಕ್ಕೆ ಶರಣು ಹೋಗಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಹಣ ಹೂಡಿಕೆ ಬೇಡ
- ಆಸೆ, ತೃಪ್ತಿ, ಸಮಾಧಾನ ಇವೆಲ್ಲಾ ವಿರುದ್ಧವಾಗುವ ದಿನ
- ಮನೆಗೆ ಬಂದ ಅಥಿತಿಗಳೊಂದಿಗೆ ವ್ಯವಹಾರ ಮಾಡುತ್ತೀರಿ
- ಪಾಲುದಾರಿಕೆ ಅಥವಾ ಬಡ್ಡಿ ವ್ಯವಹಾರದಲ್ಲಿ ಲಾಭ
- ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಬಹುದು
- ಸಮಾಜದಲ್ಲಿ ಪರೋಕ್ಷವಾಗಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶದಿಂದ ಸಿಹಿ ಸುದ್ದಿ ಬರಬಹುದು
- ಅಪರಿಚಿತರಿಂದ ದ್ರೋಹವಾಗುವ ಸಾಧ್ಯತೆ
- ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರ ಉಂಟಾಗಬಹುದು
- ಬೇರೆಯವರನ್ನು ಸಂಪೂರ್ಣ ಅವಲಂಬಿಸಬೇಡಿ
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ
- ಕೃಷಿ ಕೆಲಸ ಅಥವಾ ಜಮೀನು ಸಂಬಂಧಿ ಕೆಲಸಗಳಲ್ಲಿ ನಷ್ಟ ಉಂಟಾಗಬಹುದು
- ಗಣಪತಿಗೆ ಬಿಳಿ ಎಕ್ಕದ ಹೂವನ್ನು ನೀಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವೈಯಕ್ತಿಕ ಜೀವನದಲ್ಲಿ ಬೇಸರ, ಅಶಾಂತಿ, ಕೋಪ ಉಂಟಾಗಬಹುದು
- ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆಯಾಗಬಹುದು
- ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
- ಸಾಲ ಪಡೆದ ವ್ಯಕ್ತಿಗಳು ತಿರುಗಿ ಬೀಳಬಹುದು ನಷ್ಟದ ಸೂಚನೆ ಇದೆ
- ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರವಾಗಬಹುದು
- ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
- ವಿಷ್ಣುವಿಗೆ ಜೇನುತುಪ್ಪದ ಅಭಿಷೇಕವನ್ನು ಮಾಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ