ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮ ಪಡಬೇಕಾಗುತ್ತದೆ
ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ
ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ
- ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರುಕುತ್ತದೆ
- ಹಣದ ವಿಚಾರದಲ್ಲಿ ಇಂದು ನಿರಾಸೆ ಹೊಂದಬಹುದು
- ಅನಗತ್ಯ, ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ವಾದ-ವಿವಾದಗಳಿಂದ ಸಮಸ್ಯೆ ಮಾಡಿಕೊಳ್ಳಬಹುದು
- ಆತಂಕ ಬೇಡ ಸಮಾಧಾನದಿಂದ ಇರಬೇಕಾದ ದಿನ
- ಈಶ್ವರನ ಆರಾಧನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ
- ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಪಾಡಿ
- ನಿಮ್ಮ ನಡವಳಿಕೆಯಿಂದ ಮನೆಯಲ್ಲಿ ಅಶಾಂತಿ
- ಜನರು ನಿಮ್ಮ ಮಾತುಗಳನ್ನ ಕೇಳದೇ ಇರಬಹುದು, ಬಲವಂತ ಬೇಡ
- ಬಂಧುಗಳೊಂದಿಗೆ ಸಂತೋಷದ ಸಮಯ ಕಳೆಯುವಿರಿ
- ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಖಂಡಿತ ಇದೆ
- ಕೋಪದಿಂದ ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ
- ತುಳಸಿಯಿಂದ ಮಹಾವಿಷ್ಣುವನ್ನ ಅರ್ಚನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ವಿಚಾರಗಳನ್ನು, ಕಹಿ ಘಟನೆಗಳನ್ನು ದೂರ ಮಾಡಿ
- ಹೊಸ ಹೂಡಿಕೆಗೆ ಅನುಕೂಲಕರ ದಿನ
- ಇಂದು ನಿಮ್ಮ ಗುರಿಯನ್ನ ಮುಟ್ಟುವುದಕ್ಕೆ ಕಷ್ಟದ ದಿನ
- ಜನರಿಗೆ ನಿಮ್ಮನ್ನ ಕಂಡರೆ ಸ್ಪೂರ್ತಿ, ಬೇರೆಯವರನ್ನ ಆಕರ್ಷಣೆ ಮಾಡುತ್ತೀರಿ
- ಇಂದು ಬದಲಾವಣೆಗಳ ಬಗ್ಗೆ ಚಿಂತನೆ ಮಾಡಬೇಡಿ
- ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದಲ್ಲಿ ಸಮಸ್ಯೆಗಳು, ಅವಘಡಗಳಿವೆ ಎಚ್ಚರಿಕೆವಹಿಸಿ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಯಾವುದೇ ಗಣನೆಗೆ ಬರುವುದಿಲ್ಲ
- ಕಷ್ಟ ಪಟ್ಟಂತಹ ಕೆಲಸ ನಿಮಗೆ ಯಾವುದೇ ರೀತಿಯ ಶುಭಪಲವನ್ನು ನೀಡುತ್ತಿಲ್ಲ
- ಯಾರಿಗೂ ಕೂಡ ಸಾಲವನ್ನು ಕೊಡಬೇಡಿ ಮತ್ತು ಕೇಳಬೇಡಿ
- ಮನೆಯಲ್ಲೂ ವ್ಯಾವಹಾರಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಬರಲಿದೆ
- ಹಣದ ವಿಚಾರಕ್ಕೆ ಗಲಾಟೆಯಾಗುವ ಸಾಧ್ಯತೆ
- ದುರ್ಗಾರಾಧನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಧಾರ್ಮಿಕ ಆಚರಣೆಯಿಂದ ನೆಮ್ಮದಿ ಸಿಗುತ್ತದೆ
- ಸಮಾರಂಭಗಳಿಗೆ ಹಾಜರಾಗುವ ಯೋಗಯಿದೆ, ತಿರಸ್ಕಾರ ಮಾಡಬೇಡಿ
- ಮಕ್ಕಳಿಗೆ ನೀತಿಪಾಠ ಹೇಳಿ ಗೌರವ ಹೆಚ್ಚಾಗುತ್ತದೆ
- ಹೊಸ ಉದ್ಯಮಕ್ಕೋಸ್ಕರ ಬೇರೆಯವರ ಪರಿಚಯವಾಗುತ್ತದೆ
- ನಿಮ್ಮ ಕೆಲಸ, ಸಾಧನೆಗೆ ಜನರಿಂದ ಪ್ರಶಂಸೆ ಲಭಿಸುತ್ತದೆ
- ಇಂದು ಆರ್ಥಿಕ ಬಿಕ್ಕಟ್ಟು ಕಾಡಬಹುದು
- ಕುಬೇರಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರ ಸಲಹೆ ಬೇಡ
- ಇಂದು ತಾಳ್ಮೆ ಬಹಳ ಮುಖ್ಯ, ತಾಳ್ಮೆ ಕಾಪಾಡಿಕೊಳ್ಳಿ
- ಇಂದು ಯಾವುದೇ ರೀತಿಯ ಪರಿಸ್ಥಿತಿಗಳು ಬಂದರೂ ಗಟ್ಟಿಯಾಗಿ ಎದುರಿಸಿ
- ನಿಮ್ಮ ಕೆಲಸಗಳನ್ನ ಸಕಾಲಕ್ಕೆ ಮುಗಿಸಿ, ಜವಾಬ್ದಾರಿಗಳಿಂದ ಹೊರಬರಬೇಕು
- ಹೆಚ್ಚು ಜನರಿರುವ ಕಡೆ ಹೋಗಬೇಡಿ ತೊಂದರೆಯಿದೆ
- ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
- ಆಂಜನೇಯನನ್ನು ಉಪಾಸನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ಪ್ರಭಾವ ಇಂದು ಕೆಲಸ ಮಾಡುತ್ತದೆ
- ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ ಹಾಗೇ ಕೆಲಸಕ್ಕೂ ಅನುಕೂಲವಾಗುತ್ತದೆ
- ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮಪಡಬೇಕಾಗುತ್ತೆ
- ಇಂದು ಪ್ರೇಮಿಗಳಿಗೆ ಶುಭವಾದ ಸಮಯ
- ಕಾಲಿಗೆ ಪೆಟ್ಟಾಗಬಹುದು ಎಚ್ಚರ, ತಾತ್ಸಾರ ಮಾಡಬೇಡಿ
- ವಿಕಲಚೇತನರಿಗೆ ಸಹಾಯ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಿತ್ರರಿಂದಲೇ ವಿದ್ಯಾರ್ಥಿಗಳಿಗೆ ತೊಂದರೆಯಿದೆ
- ವ್ಯವಹಾರದಲ್ಲಿ ಉತ್ತಮ ಲಾಭ, ಶುಭವಿದೆ
- ಯಾರನ್ನಾದರೂ ಕ್ಷಮಿಸಬೇಕಾದ ಪ್ರಸಂಗ ಬಂದ್ರೆ ಕ್ಷಮಿಸಿ
- ಮನೆಯ ಅಗತ್ಯತೆಗೆ ಮೊದಲ ಆದ್ಯತೆ ಕೊಡಿ
- ಏಕಾಗ್ರತೆ ಉತ್ತಮವಾದ ಫಲಿತಾಂಶ ನೀಡುತ್ತದೆ
- ಜೀವನ ಶೈಲಿಯಲ್ಲಿ ಒಂದಿಷ್ಟು ಸುಧಾರಣೆಗೆ ಏಕಾಗ್ರತೆ ಕಾರಣವಾಗುತ್ತದೆ
- ವಿದ್ಯಾಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನೆಯಲ್ಲಿ ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನ ಕೊಡಿ
- ಬದಲಾವಣೆಯ ಆಲೋಚನೆ ಬರಬಹುದು ಆದರೆ ಸದ್ಯಕ್ಕೆ ಬೇಡ
- ಮದುವೆ ವಿಚಾರದಲ್ಲಿ ತೆಲೆಕೆಡಿಸಿಕೊಳ್ಳಬಹುದು ಆದರೆ ಉಪಯೋಗವಿಲ್ಲ
- ಆರೊಗ್ಯದಲ್ಲಿ ವ್ಯತ್ಯಯ, ಬೆನ್ನು ನೋವು ಕಾಡಬಹುದು
- ಇಂದು ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ, ಭಯ ಕಾಡಬಹುದು
- ನಿಮ್ಮ ಆಹಾರದ ಬಗ್ಗೆ ಗಮನಹರಿಸಿ
- ಸಾಯಂಕಾಲ ಕೆಲ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬಹುದು
- ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಜನರ ಮೆಚ್ಚಿಗೆಗಾಗಿ ಮಾಡುವ ತೋರಿಕೆ ಕೆಲಸದಿಂದ ನೀವು ಸಿಕ್ಕಿಹಾಕಿಕೊಳ್ಳಬಹುದು
- ಇಂದು ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
- ಸ್ವಯಂ ಪ್ರಜ್ಞೆಯಿಲ್ಲದೇ ಕೆಲ ಅನಾಹುತಗಳನ್ನು ಮಾಡಿಕೊಳ್ಳಬಹುದು
- ನಿಮ್ಮ ಪ್ರಗತಿಯ ಬಗ್ಗೆ ಭಯ ಉಂಟಾಗಬಹುದು
- ವೃತ್ತಿ, ಉದ್ಯೋಗ ಇತ್ಯಾದಿಗಳ ಒತ್ತಡಗಳಿಂದ ತೊಂದರೆ ಕಾಣಬಹುದು
- ಒಳ್ಳೆಯ ಸ್ನೇಹಿತರ, ಹಿತೈಷಿಗಳಿಂದ ಉತ್ತಮ ಮಾರ್ಗದರ್ಶನ ಕೇಳಿ ಪಡೆಯಿರಿ
- ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ವಿದ್ಯಾಭ್ಯಾಸ, ಪ್ರಗತಿ, ಆಸಕ್ತಿ ನಿಮಗೆ ಬಹಳ ಸಂತೋಷ ಉಂಟು ಮಾಡುತ್ತದೆ
- ನಿಮ್ಮ ಸಮಯ ಹೋಗಿದ್ದೇ ಗೊತ್ತಾಗದ ದಿನ
- ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಬೆಳವಣಿಗೆಯಿದೆ
- ಇಂದು ಸಂಬಂಧಿಕರ ಆಗಮನ, ಅವರ ಜೊತೆ ಚರ್ಚೆ ಖುಷಿ ಕೊಡುತ್ತದೆ
- ಬರಬೇಕಾದ ಬಾಕಿ ಹಣ ಇಂದು ಬರುತ್ತದೆ
- ಅನಾರೋಗ್ಯ ಮುಕ್ತರಾಗುತ್ತೀರಿ, ಸ್ನೇಹಿತರಿಂದ ಸಿಹಿಸುದ್ದಿ ಬರುತ್ತದೆ
- ಮಹಾಲಕ್ಷ್ಮಿಯನ್ನು ಮಲ್ಲಿಗೆ ಹೂವಿನಿಂದ ಅರ್ಚನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಚರ್ಚೆ ಮಾಡಬಹುದು
- ಮಿತ್ರರನ್ನು ಭೇಟಿ ಮಾಡಿ ನಿಮ್ಮ ವಿರೋಧಿಗಳ ಬಗ್ಗೆ ಚರ್ಚೆ ಮಾಡಬಹುದು
- ಮೂಲ ಉದ್ದೇಶವನ್ನು ಮರೆತು ಕಾರ್ಯಪ್ರವೃತ್ತರಾಗಬಹುದು ಆದರೆ ಅದು ಬೇಡ
- ಸಮಯಕ್ಕೆ ಆದ್ಯತೆ ನೀಡಿದರೆ ಧನಾತ್ಮಕ ಫಲಿತಾಂಶ ಕಾಣಬಹುದು
- ಇಂದು ಮಾನಸಿಕವಾಗಿ ನೆಮ್ಮದಿ ಕಡಿಮೆ
- ಇಂದು ಕೋಪ, ಆತಂಕ ಹೆಚ್ಚಾಗಿರುವ ದಿನ ಗಮನಿಸಿಕೊಳ್ಳಿ
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ