ಇಂದು ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
ಮಾರ್ಕೆಟಿಂಗ್ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅನುಕೂಲವಿದೆ
ಎಲ್ಲಾ ವಿಚಾರದಲ್ಲೂ ಇಂದು ಮನಸ್ಸಿಗೆ ತುಂಬಾ ಭಯ ಕಾಡಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಒಳ್ಳೆಯ ಆಲೋಚನೆ, ಸಮಾಜಮುಖಿ ಚಿಂತನೆ, ತತ್ವಗಳಿಂದ ಜನರನ್ನ ಪ್ರಭಾವಶಾಲಿಗಳನ್ನಾಗಿ ಮಾಡಬಹುದು
- ಇಂದು ಜನರು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ
- ಮಾರ್ಕೆಟಿಂಗ್ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅನುಕೂಲವಿದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಅವಕಾಶವಿದೆ
- ಭೂಮಿ ಖರೀದಿ, ಆರ್ಥಿಕ ಲಾಭದ ಶುಭ ಸಮಯ ಆದರೆ ಪ್ರಯತ್ನ ಇರಲಿ
- ಅಗತ್ಯ ಇರುವ ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ವಿಶೇಷ ಬೆಂಬಲ ಸಿಗುತ್ತದೆ
- ಆಹಾರ ಸೇವನೆಗೆ ತುಂಬಾ ಹಣವನ್ನು ಖರ್ಚು ಮಾಡಬಹುದು
- ನಿಮ್ಮ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಅಗತ್ಯವಾದ ಬದಲಾವಣೆಯನ್ನು ಮಾಡಿಕೊಳ್ಳಿ ಯಶಸ್ಸಿದೆ
- ಇಂದು ಕುಟುಂಬ ಸದಸ್ಯರಿಂದ ಏನನ್ನು ಕೂಡ ನಿರೀಕ್ಷೆ ಮಾಡಬೇಡಿ ನಿರಾಸೆಯಾಗಬಹುದು
- ಉದ್ಯೋಗಿಗಳಿಗೆ ತಮ್ಮ ಮೇಲಾಧಿಕಾರಿಗಳ ಒತ್ತಡ ಹಿಂಸೆ ಉಂಟು ಮಾಡಬಹುದು
- ಇಂದು ಕೋರ್ಟ್ ವಿವಾದಗಳು ಕೂಡ ಹೆಚ್ಚಾಗಬಹುದು
- ಬಾಣಲಿಂಗವನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಕೆಲಸದಲ್ಲಿ ಒಂದಿಷ್ಟು ವ್ಯತ್ಯಾಸಗಳು ಕಾಣಬಹುದು
- ಇಂದು ನಿಮಗೆ ಇದ್ದಕ್ಕಿದ್ದಂತೆ ಶೀತ ಅಥವಾ ಆಯಾಸದ ಅನುಭವ ಆಗಬಹುದು
- ಹೃದಯಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
- ನಿಮ್ಮ ಕೆಲಸಕ್ಕೆ ಎಚ್ಚರಿಕೆಯಿಂದ ಹೋಗಿ, ಅವಕಾಶವಿದ್ದರೆ ಇವತ್ತು ಕೆಲಸಕ್ಕೆ ರಜೆ ಹಾಕಿ ವಿಶ್ರಾಂತಿ ಮಾಡಿ
- ಕುಟುಂಬ ಸಮಸ್ಯೆಗಳು ಈ ದಿನ ಸ್ವಲ್ಪಮಟ್ಟಿಗೆ ಕಾಡಬಹುದು
- ಇಂದು ಕೆಲಸಕ್ಕೆ ಸಂಬಂಧಪಟ್ಟ ಹಣ ನಿಮ್ಮ ಕೈ ಸೇರತ್ತದೆ
- ಯಜ್ಞೇಶ್ವರನನ್ನ ಪ್ರಾರ್ಥನೆಯ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
- ಎಲ್ಲಾ ವಿಚಾರದಲ್ಲೂ ಇಂದು ಮನಸ್ಸಿಗೆ ತುಂಬಾ ಭಯ ಕಾಡಬಹುದು
- ಇಂದು ಬೇರೆಯವರ ಸಲಹೆಗೆ ಹೆಚ್ಚಿನ ಮಾನ್ಯತೆ ಕೊಡುವುದು ಬೇಡ
- ಇಂದು ಪ್ರೇಮಿಗಳಿಗೆ ಆಘಾತವಾಗುವಂತ ದಿನ
- ಯಾವುದೇ ಹೊಸ ಒಪ್ಪಂದ ಮಾಡಿಕೊಳ್ಳುವುದನ್ನ ಸ್ವಲ್ಪ ಮುಂದೆ ಹಾಕಿದರೆ ಒಳ್ಳೆಯದು
- ಕಾಲಭೈರವನನ್ನು ಸ್ಮರಣೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗದಲ್ಲಿ ನಿಮ್ಮ ಸೇವೆ, ನಿಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ಸಮಾಜದ ದೃಷ್ಟಿಯಿಂದ ನಿಮಗೆ ಗೌರವ, ಆದರಗಳು ಸಿಗುವ ದಿನ
- ನಿಮ್ಮ ಕೊಡುಗೆಗಳನ್ನು ಗಮನಿಸಿ ಅದಕ್ಕೆ ತಕ್ಕ ಪುರಸ್ಕಾರಗಳಿಗೆ ಭಾಜನರಾಗುವ ಅವಕಾಶವಿದೆ
- ಹೊಸ ಜನರ ಸಂಪರ್ಕ ನಿಮಗೆ ಸಿಗುತ್ತದೆ, ಒಂದಿಷ್ಟು ಮಾಹಿತಿಗಳನ್ನು ಪಡೆದುಕೊಳ್ಳುತ್ತೀರಿ
- ಇಂದು ಕೌಟುಂಬಿಕವಾದ ಸಾಮರಸ್ಯವನ್ನು ನೋಡುತ್ತೀರಿ
- ಅನುಭವಿಗಳ ಮಾತು, ಮಾರ್ಗದರ್ಶನ ನಿಮಗೆ ಬಹಳ ಫಲಕಾರಿಯಾಗಿ ಕೆಲಸ ಮಾಡುತ್ತದೆ
- ಮಕ್ಕಳಿಂದ ಉತ್ತಮವಾದ ಸಮಾಚಾರ ಕೇಳಬಹುದು
- ಕುಟುಂಬಕ್ಕೆ ಹೊಸಬರ ಆಗಮನವಾಗುವ ಸೂಚನೆಯಿದೆ
- ಕುಲದೇವರಿಗೆ ಎರಡು ತುಪ್ಪದ ದೀಪಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವೈಯಕ್ತಿಕ ವಿಚಾರಗಳು ಸಮಾಜದಲ್ಲಿ ಅವಮಾನಕ್ಕೆ ಕಾರಣವಾಗಬಹುದು
- ನಿಮ್ಮ ವರ್ತನೆ ಬದಲಾಗದೇ ಇದ್ದರೆ ಸಮಾಜದಲ್ಲಿ ಜನ ನಿಮ್ಮನ್ನು ತುಂಬಾ ಅವಮಾನ ಮಾಡಬಹುದು
- ಯಾವುದೋ ಅರ್ಧಕ್ಕೆ ನಿಂತು ಹೋದ ಕೆಲಸದಿಂದ ಹಣ ನಷ್ಟವಾಗುತ್ತದೆ
- ಪದಾರ್ಥಗಳು ಉಪಯೋಗಕ್ಕೆ ಬರದೇ ನಷ್ಟವಾಗಬಹುದು
- ನಿಮ್ಮ ಕೆಲಸಗೋಸ್ಕರವಾಗಿ ಬೇರೆಯವರನ್ನು ಅವಲಂಬಿಸಿಕೊಳ್ಳಬೇಡಿ
- ಇಂದು ಆರ್ಥಿಕ ಹೊಡೆತ ನಿಮ್ಮ ಮನಸ್ಸಿಗೆ ಬಹಳ ಆತಂಕವನ್ನ ಉಂಟು ಮಾಡಬಹುದು
- ಗಜಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ಸಾಲದ ಬಾಕಿಗೆ ಇವತ್ತು ಮುಹೂರ್ತ ಕೂಡಿ ಬರಬಹುದು
- ಎಷ್ಟೋ ದಿನದಿಂದ ನಿಮಗೆ ಬರಬೇಕಾದ ಹಣದ ವಸೂಲಿ ಇಂದು ಆಗಬಹುದು
- ನಿಮ್ಮ ಮೇಲಾಧಿಕಾರಿಗಳು, ಹಿರಿಯರು ನಿಮ್ಮ ಕಾರ್ಯವೈಖರಿಯನ್ನು ನೋಡಿ ಬಹಳ ತೃಪ್ತರಾಗ್ತಾರೆ
- ದೊಡ್ಡವರಿಗೆ ನೀವು ಬಹಳ ಹತ್ತಿರವಾಗಬಹುದು
- ಕಿರಿಯರಿಗೆ ನಿಮ್ಮ ಬಗ್ಗೆ ಹೆದರಿಕೆ, ಗೌರವ ಎಲ್ಲವೂ ಕೂಡ ಹೆಚ್ಚಾಗುತ್ತದೆ
- ಅವಸರದಿಂದ ಯಾವುದೇ ಕೆಲಸಗಳನ್ನು ಮಾಡಬೇಡಿ
- ದೊಡ್ಡವರ ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸಿ
- ಬೂದುಗುಂಬಳಕಾಯಿಯನ್ನು ಮೃತ್ಯುಂಜಯನ ಪ್ರಾರ್ಥನೆ ಮಾಡುವ ಮೂಲಕ ದಾನ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಅನಿರೀಕ್ಷಿತ ಪ್ರಯಾಣ ಬೆಳೆಸಬೇಕಾದ ಸಂದರ್ಭ ಬರಬಹುದು
- ಬೇರೆಯವರಿಗೆ ಸಹಾಯ ಮಾಡಬಹುದು ಆದರೆ ಸಹಾಯಕ್ಕೆ ಯಾವುದೇ ರೀತಿಯ ಗೌರವ ಸಿಗುವುದಿಲ್ಲ
- ಮನಸ್ಸಿಗೆ ಘಾಸಿಯಾಗಿ ಇಡೀ ದಿನ ಅದೇ ಯೋಚನೆಯಲ್ಲಿ ಕಳೆಯುವ ಸಾಧ್ಯತೆಯಿದೆ
- ಅಜೀರ್ಣ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಆಹಾರದ ಬಗ್ಗೆ ಗಮನಿಸಿಕೊಳ್ಳಿ
- ರಾಜಕೀಯ ಒಡನಾಟ ಇರುವ ವ್ಯಕ್ತಿಗಳಿಗೆ ತೊಂದರೆಯಾಗುವ ಸೂಚನೆ ಇದೆ
- ನಿಮ್ಮ ಮನಸ್ಥಿತಿ ಇದ್ದಕ್ಕಿದಂತೆ ಬದಲಾಗುವ ಸಾಧ್ಯತೆಯಿದೆ
- ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ, ನಿಮಗಿಂತ ಬಲಿಷ್ಠರಾದವರ ಜೊತೆ ಸೆಣೆಸಾಟಕ್ಕೆ ಹೋಗುವುದು ಬೇಡ ನರಸಿಂಹನನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಕೆಲಸ, ಕಾರ್ಯಕ್ಕೆ ತುಂಬಾ ಸೆಣಸಾಟ, ಹೋರಾಟವನ್ನು ಮಾಡುತ್ತೀರಿ
- ಸಾಯಂಕಾಲ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಬೇಕಾಗಬಹುದು
- ನಿಮ್ಮ ಕಠಿಣವಾದ ಪರಿಶ್ರಮ, ನಿಮ್ಮ ಮೇಲಿರುವ ಒತ್ತಡ ನಿಮಗೆ ತೃಪ್ತಿಯನ್ನು ಕೊಡುತ್ತದೆ
- ಇಂದು ನಿಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಸಂತೋಷವಾಗಿರುತ್ತೀರಿ
- ರಾತ್ರಿ ಹೊರಗಡೆಯಿಂದ ಮನೆಗೆ ಬರಬೇಕಾದರೆ ಬಹಳ ಜಾಗ್ರತೆ ವಹಿಸಿ
- ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿರುತ್ತೀರಿ
- ಉತ್ತಮ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯಲ್ಲಿ, ಉತ್ಸಾಹದಲ್ಲಿ ಇರುತ್ತೀರಿ ಆದರೆ ಅದು ಫಲಿಸದೆ ನಿರಾಶೆಯಾಗಬಹುದು
- ಯಾವುದೇ ರೀತಿಯ ಆಶಾಭಾವನೆಗಳನ್ನ ಕಳೆದು ಕೊಳ್ಳಬಾರದು
- ನಿಮ್ಮ ಪರಿಶ್ರಮ ವ್ಯರ್ಥವಾಯಿತು ಎಂಬ ಭಾವನೆ ಬರಬಹುದು ಆದರೆ ಆ ರೀತಿಯ ಆಲೋಚನೆ ಬೇಡ
- ಮಾತು ಬಾರದೇ ಇರುವ ಮಕ್ಕಳಿಗೆ ಚಿಕಿತ್ಸೆ ಫಲಕಾರಿಯಾಗುತ್ತೆ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಆಸ್ತಿ ಖರೀದಿ ಬಗ್ಗೆ ಆಲೋಚನೆ ಬರುತ್ತದೆ, ಅದರ ಬಗ್ಗೆ ಹೆಚ್ಚು ಗಮನ ಕೊಡಬಹುದು
- ಮಾರುಕಟ್ಟೆ ಬೆಲೆಕ್ಕಿಂತ ಅಧಿಕ ಬೆಲೆ ಕೊಟ್ಟು ಆಸ್ತಿ ಖರೀದಿ ಮಾಡಲು ಮುಂದಾಗಬಹುದು
- ಆಸ್ತಿಗಾಗಿ ಹೆಚ್ಚು ಹಣವನ್ನು ವ್ಯಯ್ಯ ಮಾಡಬಹುದು
- ವಿದ್ಯಾರ್ಥಿಗಳು ಹೊಸ ಪ್ರವೇಶಾತಿಗಳನ್ನ ತಮ್ಮ ಅಧ್ಯಯನಕ್ಕೆ ಪಡೆದುಕೊಳ್ಳುವ ಅವಕಾಶವಿದೆ
- ಒಟ್ಟಾರೆ ಈ ದಿನ ಹೋರಾಟ ಅಥವಾ ಸ್ಪರ್ಧೆಯ ದಿವಸ ಅಂತ ಹೇಳಬಹುದು
- ಹಳದಿ ಹೂಗಳಿಂದ ಭೂವರಾಹನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರ ದೃಷ್ಟಿಯಿಂದ ತಕ್ಷಣದಲ್ಲಿ ಪ್ರಯಾಣವನ್ನು ಮಾಡುವ ಸಂದರ್ಭ ಬರಬಹುದು
- ಕುಟುಂಬ ಸದಸ್ಯರ ಜೊತೆ ಜಗಳವಾಗುವ ಅವಕಾಶಗಳಿವೆ ಆದರೆ ಜಗಳ ಬೇಡ
- ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗಿ ತೊಂದರೆ ಅನುಭವಿಸಬಹುದು
- ನಿಮ್ಮ ಆಲೋಚನೆಗಳನ್ನ ಯಾರ ಮೇಲೂ ಒತ್ತಡವಾಗಿ ಹೇರಬೇಡಿ
- ಸರ್ಕಾರಿ ಕೆಲಸಗಳಿಂದ ನಿಮಗೆ ಕಿರಿಕಿರಿಯಾಗುವ ಸಾಧ್ಯತೆ ಹೆಚ್ಚಾಗಿದೆ ತಾಳ್ಮೆ ಇರಲಿ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ