ಮಕ್ಕಳು ಸಲಹೆ ನೀಡಿದ್ದರೆ ಗಂಭೀರದಿಂದ ತೆಗೆದುಕೊಳ್ಳಿ ನಿರ್ಲಕ್ಷ್ಯ ಬೇಡ
ವ್ಯಾಪಾರ, ವ್ಯವಹಾರ ಇತ್ಯಾದಿ ವಿಷಯಗಳಿಂದ ಪ್ರಯಾಣ ಮಾಡುತ್ತೀರಿ
ನಿಮ್ಮ ಉಪಕಾರವನ್ನು ಪಡೆದುಕೊಳ್ಳುವವರು ನಿಮ್ಮನ್ನು ಗೌರವಿಸುತ್ತಾರೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮಲ್ಲಿರುವ ಪ್ರತಿಭೆ, ಚಟುವಟಿಕೆಯನ್ನು ಅಭಿವೃದ್ಧಿ ಮಾಡಿಕೊಳ್ಳಲು ಉತ್ತಮ ಅವಕಾಶ
- ವ್ಯವಹಾರದಿಂದ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ
- ವ್ಯಾಪಾರ,ವ್ಯವಹಾರ ಇತ್ಯಾದಿ ವಿಷಯಗಳಿಂದ ಪ್ರಯಾಣ ಮಾಡುತ್ತೀರಿ
- ವಿದೇಶ ಪ್ರಯಾಣದ ಯೋಗ ಕೆಲವರಿಗೆ ಕೂಡಿ ಬರಲಿದೆ
- ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತೀರಿ
- ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ಪ್ರಯತ್ನಿಸುತ್ತೀರಿ
- ಬೇರೆಯವರನ್ನು ಅವಲಂಬಿಸಬೇಡಿ
- ನಾಗದೇವತೆಯನ್ನು, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉದ್ಯೋಗಿಗಳು, ನೌಕರರು, ತಮ್ಮ ಉದ್ಯೋಗವನ್ನು ಬದಲಾಯಿಸುವ ಯೋಜನೆಯಿದ್ದರೆ ಒಳ್ಳೆಯದು
- ಬೇರೆ ಕಡೆ ಅವಕಾಶಕ್ಕೆ ಎಲ್ಲ ಯೋಗಗಳು ಒದಗಿ ಬರಲಿದೆ
- ಕುಟುಂಬದಲ್ಲಿ ಉತ್ತಮವಾದ ಸಮಯವನ್ನು ಕಳೆಯುತ್ತೀರಿ
- ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
- ಈ ದಿನದ ದಿನಚರಿ ವ್ಯವಸ್ಥಿತವಾಗಿರುತ್ತದೆ
- ನಿಮ್ಮ ಮಾರ್ಗದರ್ಶನ ಅಪೇಕ್ಷೆ ಪಡುವವರಿಗೆ ಪಾಠವಾಗಲಿದೆ
- ನಿಮ್ಮ ಉಪಕಾರವನ್ನು ಪಡೆದುಕೊಳ್ಳುವವರು ನಿಮ್ಮನ್ನು ಗೌರವಿಸುತ್ತಾರೆ
- ಮನೆಯಲ್ಲಿ ಹಿರಿಯರ ಆಶೀರ್ವಾದವನ್ನು ಪಡೆಯಿರಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ವ್ಯಾಪಾರ, ವ್ಯವಹಾರ, ಉದ್ಯೋಗ ಎಲ್ಲದರಲ್ಲೂ ಮಂದಗತಿ ಇರಲಿದೆ
- ಯಾವುದೇ ಒಪ್ಪಂದಕ್ಕೆ ಸಹಿ ಮಾಡುವ ಸನ್ನಿವೇಶ ಬಂದರೆ ಆಲೋಚನೆ ಮಾಡಿ
- ಕುಟುಂಬದ ಜವಾಬ್ದಾರಿಗಳು ನಿಮಗೆ ಒತ್ತಡವನ್ನು ತರಬಹುದು
- ಅಧಿಕಾರಿ ವರ್ಗದಿಂದ ತೊಂದರೆಯಾಗಬಹುದು
- ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
- ಮೃತ್ಯುಂಜಯನನ್ನು ಆರಾಧನೆ ಮಾಡಿ ಶಿವನಿಗೆ ಬಿಲ್ವಪತ್ರೆಯನ್ನು ಸಮರ್ಪಿಸಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾನೂನಾತ್ಮಕವಾದ ಹೋರಾಟಗಳಿಂದ ಮನಸ್ಸಿಗೆ ಬೇಸರವನ್ನು ಮಾಡಿಕೊಳ್ಳುತ್ತೀರಿ
- ಅಗತ್ಯವಾಗಿ ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಿ ಜಯವಿದೆ
- ನಿಮ್ಮ ಕೆಲಸಕ್ಕೆ ಹೆಚ್ಚು ಗಮನ ಕೊಡಿ
- ಕೋರ್ಟ್ ಕೇಸ್ ನಲ್ಲಿ ನಿಮಗೆ ಜಯ ಸಿಗಲಿದೆ
- ಧನಾತ್ಮಕವಾದ ಬದಲಾವಣೆಯಾಗಬಹುದು
- ಹಳೆಯ ಕೇಸ್ ಗಳಿದ್ದರೆ ಜಯವನ್ನು ಪಡೆಯುತ್ತೀರಿ
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ
- ದೇವಿಯನ್ನು ಆರಾಧನೆ ಮಾಡಿ
- ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಸದಸ್ಯರ ಅಹವಾಲುಗಳು, ಆಸೆ, ಅಕಾಂಕ್ಷೆಯನ್ನು, ನಿರೀಕ್ಷೆಯನ್ನು ಪೂರೈಸಲು ಉತ್ತಮವಾದ ಸಮಯ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನ-ಮಾನ, ಗೌರವ ಸಿಗುವ ದಿನ
- ಆಲೋಚನೆ ಮಾಡಿರುವ ವಿಚಾರಗಳು ಮುನ್ನಲೆಗೆ ಬರಲಿದೆ
- ವಿವಾದಿತವಾದ ವಿಚಾರಗಳು ಇತ್ಯರ್ಥವಾಗಲಿದೆ
- ಮಕ್ಕಳು ಸಲಹೆ ನೀಡಿದ್ದರೆ ಗಾಂಭೀರ್ಯದಿಂದ ತೆಗೆದುಕೊಳ್ಳಿ ನಿರ್ಲಕ್ಷ್ಯ ಮಾಡಬೇಡಿ
- ಇಂದು ಸಮಯವನ್ನು ವ್ಯರ್ಥ ಮಾಡಬೇಡಿ
- ಇಂದು ನಿಮ್ಮ ಪ್ರತಿಕ್ಷಣವೂ ನಿಮಗೆ ಬಹಳ ಮುಖ್ಯವಾಗಲಿದೆ
- ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಹಠದ ಸ್ವಭಾವದಿಂದ ನಿಮ್ಮ ನೌಕರಿಯಲ್ಲಿ, ಉದ್ಯೋಗ, ವೃತ್ತಿ, ವ್ಯವಹಾರದಲ್ಲಿ ಹಿನ್ನಡೆಯನ್ನು ಕಾಣುತ್ತೀರಿ
- ಮಾನಸಿಕವಾದ ಬೇಸರ ಈ ದಿನ ಕಾಡಲಿದೆ
- ಪ್ರೇಮಿಗಳಿಗೆ ಉತ್ತಮವಾದ ದಿನ
- ನಿಮ್ಮ ತಪ್ಪಿಗೆ ನೀವೆ ಕಾರಣರಾಗುತ್ತೀರಿ
- ಸಂಬಂಧಿಕರ ಜೊತೆಯಲ್ಲಿ, ಸ್ನೇಹಿತರ ಜೊತೆಯಲ್ಲಿ ವಿಶ್ವಾಸ ಪೂರ್ಣವಾಗಿರಬೇಕು
- ಆದಿತ್ಯ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ತುಂಬಾ ಆತ್ಮ ವಿಶ್ವಾಸವನ್ನು ಹೊಂದಿರುವ ನೀವು ಆಲಸ್ಯವನ್ನು ದೂರ ಮಾಡಿ
- ನಿಮ್ಮ ಉದ್ಯೋಗಕ್ಕೆ ಆಲಸ್ಯ ಅಡ್ಡಿಯಾಗಬಹುದು
- ನೀವು ಹೊರಗೆ ಹೋಗಬೇಕಾದರೆ ಮೊದಲು ಕರ್ತವ್ಯಕ್ಕೆ ಆದ್ಯತೆ ನೀಡಿ
- ಮನಸ್ಸಿನಲ್ಲಿ ಭಯದ ವಾತಾವರಣ ಇರಲಿದೆ
- ಕ್ರಿಕೆಟ್ ಆಟಗಾರರಿಗೆ ಉತ್ತಮವಾದ ದಿನ
- ಅಪರಿಚಿತರು ನಿಮಗೆ ತೊಂದರೆ ಮಾಡುತ್ತಾರೆ
- ಇಂದು ಮಾನಸಿಕವಾಗಿ ಬೇಸರವಾಗಲಿದೆ ಕೋಪ ಹೆಚ್ಚಾಗಬಹುದು
- ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಪುಣ್ಯಕ್ಷೇತ್ರಕ್ಕೆ ಹೋಗುವ ಅವಕಾಶವಿದೆ
- ಇಂದು ನಿಮ್ಮ ಮನಸ್ಸು ಶುದ್ದವಾಗಿರಲಿ
- ಭಗವಂತನ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ
- ಕುಟುಂಬದವರ ಜೊತೆ ಸಮಯ ಕಳೆಯುತ್ತೀರಿ
- ಮಾನಸಿಕವಾಗಿ ಸಮಾಧಾನವಿರುವುದಿಲ್ಲ
- ಕ್ಷೇತ್ರ ದೇವತೆಗೆ ನಿಮ್ಮ ಸೇವೆಯನ್ನು ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನುಷ್ಯ ಸಾಧನೆ ಮಾಡಿ ಅಹಂಕಾರದಿಂದ ಇದ್ದರೆ ಎಲ್ಲ ಕೆಲಸಗಳಿಗೂ ಅಡಚಣೆಯಾಗಲಿದೆ
- ಕುಟುಂಬದಲ್ಲಿರುವ ಸದಸ್ಯರ ಆರೋಗ್ಯದ ಬಗ್ಗೆ ಗಮನ ಕೊಡಿ
- ನೌಕರಿಯಲ್ಲಿ ಹಲವಾರು ಸವಾಲುಗಳು, ಸಮಸ್ಯೆಗಳು ಎದುರಾಗಲಿದೆ
- ಅನಗತ್ಯ ಗೊಂದಲದಲ್ಲಿ ಸಿಲುಕಿಕೊಳ್ಳುತ್ತೀರಿ
- ಸ್ಥಿರ ಮನಸ್ಸಿನಿಂದ ಎಲ್ಲವನ್ನೂ ಎದುರಿಸಿ
- ನಾನು ಅನ್ನೋದು ಎಲ್ಲಾ ಕಡೆ ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಎಲ್ಲಾ ಕೆಲಸಗಳಲ್ಲಿ ಲಾಭವಿದೆ
- ನಿರೀಕ್ಷಿತವಾದ ಫಲಿತಾಂಶಗಳು ಮನಸ್ಸಿಗೆ ಸಮಾಧಾನವನ್ನು ನೀಡಲಿದೆ
- ವೈವಾಹಿಕ ಜೀವನದಲ್ಲಿರುವ ಒತ್ತಡಗಳು ದೂರವಾಗಬಹುದು
- ದೂರದ ಪ್ರಯಾಣ ಮಾಡಲು ಅವಕಾಶವಿದೆ
- ಮನೆಗೆ ಬಂದ ಅತಿಥಿಗಳ ಸೇವೆ ಮಾಡಿ
- ಕುಟುಂಬದ ಸದಸ್ಯರು, ಬಂಧುಗಳು ಮಾತುಕತೆಯನ್ನು ನಡೆಸುವ ಸಂದರ್ಭವಿದೆ
- ಮೂಲ ದೇವರನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭೂಮಿ, ಕಟ್ಟಡದ ಸಮಸ್ಯೆಯಿದ್ದರೆ ಎಲ್ಲವು ಒಳ್ಳೆಯದಾಗಲಿದೆ
- ವ್ಯವಹಾರದ ದೃಷ್ಟಿಯಿಂದ ಉತ್ತಮವಾದ ಪ್ರಗತಿ ಕಾಣುತ್ತೀರಿ
- ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದ ಸಮಸ್ಯೆಗಳು ದೂರವಾಗಲಿದೆ
- ಕುಟುಂಬದ ಸದಸ್ಯರ ಖುಷಿಗೆ ಹಣ ಖರ್ಚು ಮಾಡುತ್ತೀರಿ
- ದೂರದ ಪ್ರಯಾಣ ಮಾಡಿ ಮನೆಗೆ ಬರುವವರು ಜಾಗ್ರತೆವಹಿಸಿ
- ಹನುಮಾನ್ ಚಾಲೀಸಾ ಪಠಣೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯವಾಗಿ ಉಪಯೋಗವಿಲ್ಲದ ಕೆಲಸಕ್ಕೆ ಹಣ ಖರ್ಚಾಗಲಿದೆ
- ವಾದ-ವಿವಾದಗಳಲ್ಲಿ ಭಾಗಿಗಳಾಗುತ್ತೀರಿ ಅದು ಅಗತ್ಯವಿಲ್ಲ
- ಮಾನಸಿಕವಾಗಿ ಸಮಾಧಾನವಿರುವುದಿಲ್ಲ
- ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
- ಪ್ರಭಾವಿ ವ್ಯಕ್ತಿಗಳು ಮನೆಗೆ ಬರುವ ಅವಕಾಶವಿದೆ
- ನೀವು ಮನೆಯಿಂದ ಹೊರಗೆ ಹೋಗುವುದರಿಂದ ಬೇಸರವಾಗಲಿದೆ
- ಸಮಾಧಾನ ಮಾಡಲು ನಿಮ್ಮ ಹತ್ತಿರ ಸಮಯವಿರುವುದಿಲ್ಲ
- ನಿಮ್ಮ ಯೋಚನೆ ಬಗ್ಗೆ ಮಗ್ನರಾಗಿರುತ್ತೀರಿ
- ಕುಟುಂಬ ಸದಸ್ಯರ ಜೊತೆ ವಿರಸವನ್ನು ಮುಂದುವರೆಸಿಕೊಂಡು ಹೋಗುತ್ತೀರಿ
- ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ