ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ
ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದೆ ಇರುವವರನ್ನು ದ್ವೇಷಿಸಬೇಡಿ
ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆಹಾರದ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರಿಳಿತಗಳಾಗಬಹುದು ಗಮನಹರಿಸಿ
- ವ್ಯಾಪಾರ, ವ್ಯವಹಾರದಲ್ಲಿ ಲಾಭದ ಸೂಚನೆ ಇದೆ
- ನಿಮ್ಮ ಮನಸ್ಥೈರ್ಯ ಹೆಚ್ಚಾಗುವ ದಿನ
- ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ
- ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
- ಖರೀದಿಗೆ ಹೆಚ್ಚು ಅವಕಾಶವಿದೆ ಮೋಸ ಹೋಗಬೇಡಿ
- ಮನೆದೇವರನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ನೌಕರರಿಗೆ ಕಿರಿಕಿರಿಯಾಗಬಹುದು
- ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಕ್ಕೆ ಒಳಗಾಗಬಹುದು
- ಬೇರೆ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ
- ಮಾನಸಿಕವಾದ ಸಮಾಧಾನ ಬಹಳ ಮುಖ್ಯವಾಗಲಿದೆ
- ಈ ದಿನ ಬೇಸರವಾಗುವ ಸಾಧ್ಯತೆ ಹೆಚ್ಚಿರುತ್ತದೆ
- ಮಾನಸಿಕ ಸಮಾಧಾನ ಸಿಕ್ಕಿದರೆ ಸಾಧನೆ ಮಾಡುತ್ತೀರಿ
- ಇಂದು ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ
- ಬೇರೆಯವರನ್ನ ಗೌರವಿಸುವ ಮನೋಭಾವವಿರಲಿ
- ಇಂದು ಆತುರದ ನಿರ್ಧಾರ ಬೇಡ
- ನಿಧಾನವಾಗಿ ಆಲೋಚನೆ ಮಾಡಿ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೌಟುಂಬಿಕವಾಗಿ ಬಂದಂತಹ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗಿ
- ಬೇರೆಯವರು ಏನೇನೊ ಮಾತಾಡಿ ನಿಮ್ಮ ಮನಸ್ಸನ್ನು ಕೆಡಿಸಬಹುದು ಅದಕ್ಕೆ ಗಮನ ಕೊಡಬೇಡಿ
- ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಹೊಸದಾಗಿ ಮಾಡಿದ ವ್ಯವಹಾರವನ್ನು ಆರಂಭಿಸಲು ಉತ್ತಮವಾದ ದಿನ
- ಭೂ ವ್ಯವಹಾರ ಮಾಡುವವರು ಸಂಜೆಯ ನಂತರ ವ್ಯವಹರಿಸಿದರೆ ಒಳ್ಳೆಯದು
- ಈ ದಿನ ಮನೆಯಲ್ಲಿ ಜಗಳ ಮಾಡಬೇಡಿ
- ದುರ್ಗಾದೇವಿಯನ್ನು ಆರಾಧನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದೆ ಇರುವವರನ್ನು ದ್ವೇಷಿಸಬೇಡಿ
- ಕೆಲವರಿಂದ ಅಂತರವನ್ನು ಕಾಪಾಡಿಕೊಳ್ಳಿ
- ಅಗತ್ಯವಾದ ವಿಚಾರವನ್ನು ಮಾತ್ರ ಸ್ನೇಹಿತರಲ್ಲಿ ಚರ್ಚೆ ಮಾಡಿ
- ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚು ಮಾಡಲಿದೆ
- ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಅಡ್ಡಿಯಾಗಬಹುದು ಆತಂಕ ಬೇಡ
- ಸ್ಥಿರಾಸ್ತಿಯನ್ನು ಇಂದು ನೋಂದಾಯಿಸಿಕೊಳ್ಳಬಹುದು
- ಈಶ್ವರ ಪರಿವಾರ ದೇವತೆಯನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
- ರಕ್ತದ ಒತ್ತಡ ಇರುವವರಿಗೆ ಸಮಸ್ಯೆಯಿದೆ ಜಾಗ್ರತೆವಹಿಸಿ
- ಸರ್ಕಾರಿ ಉದ್ಯೋಗಿಗಳಿಗೆ ಅಡಚಣೆಯಾಗಬಹುದು
- ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವಾಗಬಹುದು
- ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಿದೆ
- ಇಂದು ಆಲಸ್ಯವನ್ನು ತೋರಿಸಬೇಡಿ
- ನಿಮ್ಮ ಮನಸ್ಸಿಗೆ ಆನಂದವಾಗಲಿದೆ
- ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತಲೆನೋವು, ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
- ಪ್ರೇಮಿಗಳ ಮಧ್ಯೆ ಬಿರುಕು ಬಿಡಬಹುದು
- ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
- ಕಾನೂನಿನ ಮೊರೆ ಹೋದರೂ ಜಯ ಸಿಗುವುದಿಲ್ಲ
- ಇಂದು ನಿಮಗೆ ತಾಳ್ಮೆಯಿರಲಿ
- ಈ ದಿನ ಶಾಂತತೆಯನ್ನು ಕಾಪಾಡಿಕೊಳ್ಳಿ
- ವಯಸ್ಸಾದ ದಂಪತಿಗಳಿಗೆ ಸಹಾಯ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯದಲ್ಲಿ ಆಸಕ್ತಿ ಹೊಂದಿರುವುದರಿಂದ ಅನುಕೂಲವಿದೆ
- ಇಂದು ಹಣದ ಅನುಕೂಲವಿದೆ
- ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವವರು ಮಾರ್ಗದರ್ಶನ ಪಡೆಯಿರಿ
- ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯವಿರುತ್ತದೆ
- ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಒಂದು ಒಳ್ಳೆಯ ಅವಕಾಶವಿದೆ
- ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬರುವ ಅನುಭವವಾಗುತ್ತದೆ
- ಯಾವುದರ ದುರುಪಯೋಗ ಮಾಡಿಕೊಳ್ಳಬೇಡಿ
- ಇಂದು ಕಾರ್ಯತತ್ಪರರಾಗಿ
- ನದಿ ತೀರದಲ್ಲಿ ದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶಕ್ಕೆ ಪ್ರಯಾಣ ಮಾಡುವವವರ ಆಸೆಗೆ ಶುಭ ಸೂಚನೆ
- ಹಣದ ಕೊರತೆ ಇರುವವರು ಸರಿಯಾದ ವ್ಯವಸ್ಥೆ ಮಾಡಿಕೊಂಡರೆ ಉತ್ತಮ
- ಪದವೀಧರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಹುದು
- ಇಲ್ಲಿ ಕೆಲಸಕ್ಕೆ ಅವಕಾಶವಿದ್ದರೂ ಕೂಡ ವಿದೇಶಕ್ಕೆ ಹೋಗುವ ಮನಸ್ಸು ಇರಲಿದೆ
- ಈ ಚಿಂತೆ ನಿಮ್ಮನ್ನು ಕಾಡಬಹುದು
- ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ
- ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗೌರವ ಸಿಗಲಿದೆ
- ತಾಯಿಯ ಕಡೆಯಿಂದ ಬೆಂಬಲ ಮತ್ತು ಧನ ಸಹಾಯ ಸಿಗಲಿದೆ
- ನಿಮ್ಮ ಬುದ್ದಿವಂತಿಕೆಯಿಂದ ಶುಭಫಲವಿದೆ
- ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವಿರಲಿದೆ
- ವಿದ್ಯಾರ್ಥಿಗಳು ಕಾರ್ಯಕ್ಷೇತ್ರದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾ ಉನ್ನತ ವ್ಯಾಸಾಂಗಕ್ಕೂ ಯೋಜನೆಯನ್ನು ಹಾಕಿಕೊಳ್ಳುತ್ತೀರಿ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕವಹಿಸಿ
- ಓದುವ ಹಂಬಲವಿರುವವರಿಗೆ ಸಹಾಯ ಮಾಡಿ
- ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪ್ರಾಮಾಣಿಕತೆ, ಕೆಲಸದಲ್ಲಿರುವ ಕಾಳಜಿ, ಆಸಕ್ತಿ, ಉತ್ತೇಜನ, ಉತ್ಸಾಹ, ಎಲ್ಲವೂ ನಿಮಗೆ ಅನುಕೂಲವನ್ನು ಮಾಡಿಕೊಡುತ್ತದೆ
- ಸಾಮಾಜಿಕವಾದ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ
- ಇಂದು ಆರ್ಥಿಕವಾಗಿ ಅನುಕೂಲವಿದೆ
- ಹಣಕ್ಕಿಂತ ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚುತ್ತಾರೆ
- ಮಾತು, ಮನಸ್ಸು ಮಾಧುರ್ಯವಾಗಿರುವ ದಿನ
- ನಿಮ್ಮನ್ನು ನೀವು ತೊಡಗಿಸಿಕೊಂಡರೆ ಲಾಭವಿದೆ
- ಗುರು ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಥಿತಿ ಸರಿಯಿಲ್ಲದೆ ಇರುವುದರಿಂದ ಸಹೋದರರ, ಸ್ನೇಹಿತರ, ಬಂಧುಗಳ ಮಧ್ಯೆ ಜಗಳವಾಗಬಹುದು
- ಮನೆಯವರ ವಿಚಾರದಲ್ಲಿ ಬೇರೆಯವರ ಸಲಹೆ ಅನಗತ್ಯ
- ಬೇರೆಯವರು ನಿಮ್ಮ ಪರವಾಗಿ ಮಾತಾಡಿದರೆ ಅವರಿಗೆ ಅವಮಾನವಾಗಬಹುದು
- ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
- ಇಂದು ಖರ್ಚನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
- ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರನ್ನು ಸಂಪರ್ಕಿಸಿ
- ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬೇಡಿ
- ನಿಮ್ಮ ಮನಸ್ಸು ಪರಿವರ್ತನೆಗೆ ಕಾಯ್ತಾ ಇರುತ್ತದೆ
- ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ದೊಡ್ಡವರ, ಅನುಭವಿಗಳ, ಹಿರಿಕರ ಮಾರ್ಗದರ್ಶನ ನಿಮಗೆ ಲಭ್ಯವಾಗುವ ದಿನ
- ಸ್ನೇಹಿತರ, ಬಂಧುಗಳ ವಿಶ್ವಾಸ ಸ್ಫೂರ್ತಿದಾಯಕವಾಗಿರುತ್ತದೆ
- ಧ್ಯಾನ, ಯೋಗ, ವ್ಯಾಯಾಮ ಇತ್ಯಾದಿಗಳಿಗೆ ಆದ್ಯತೆ ನೀಡಿ
- ಇಂದು ನಿಮಗೆ ಶುಭದಿನ
- ಸಮಾಜಕ್ಕೆ ಅನುಕೂಲವಾಗುವ ಸೇವೆಯನ್ನು, ಸಂದೇಶವನ್ನು ಕೊಡಿ
- ಕುಲದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ