ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
ವಿದೇಶಕ್ಕೆ ಪ್ರಯಾಣ ಮಾಡುವವವರ ಆಸೆಗೆ ಶುಭ ಸೂಚನೆ
ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವವರು ಮಾರ್ಗದರ್ಶನ ಪಡೆಯಿರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದಲ್ಲಿ ನಿಮ್ಮ ಪ್ರಭಾವ ಅಥವಾ ನಿಮ್ಮ ಪರವಾದ ಅಲೆಗಳು ಹೆಚ್ಚಾಗುವ ದಿನ
- ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಇರುತ್ತದೆ
- ಇಂದು ನಿಮ್ಮ ಎಲ್ಲಾ ಚಟುವಟಿಕೆಗಳು ವೇಗವನ್ನು ಪಡೆದುಕೊಳ್ಳುತ್ತವೆ
- ನಿಮ್ಮ ಕೆಲಸದ ಗುಣಮಟ್ಟ ಬಹಳ ಪ್ರಶಂಸೆಗೆ ಪಾತ್ರವಾಗುತ್ತದೆ
- ದಾಂಪತ್ಯದಲ್ಲಿ ಒಂದಷ್ಟು ಕೊರತೆಗಳು ಬೇಸರವನ್ನು ತರಬಹುದು
- ಹಣದ ವಿಚಾರವಾಗಿ ನೆಮ್ಮದಿ ಇರುವ ದಿನ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ಕಾರಣಕ್ಕೂ ಈ ದಿನ ಹೊಸ ಕೆಲಸ, ಯೋಜನೆಗಳು ಬೇಡ
- ಮನೆಯವರ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಾದ ದಿನ
- ಇಂದು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
- ಕಾರ್ಯಕ್ಷೇತ್ರದಲ್ಲಿ ಅಪಹಾಸ್ಯಕ್ಕೆ ಗುರಿಯಾಗಬಹುದು
- ನಿಮ್ಮ ಗುರಿಯ ಬಗ್ಗೆ ಮಾತ್ರ ಸರಿಯಾದ ಗಮನ ಇಟ್ಟುಕೊಳ್ಳಬೇಕು
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಹೊಸ ಯೋಜನೆಯ ಬಗ್ಗೆ ಕುಟುಂಬದಲ್ಲಿ ಚರ್ಚೆ ಮಾಡಬಹುದು
- ಅವಿವಾಹಿತರಿಗೆ ವಿವಾಹ ವಿಚಾರ ಸಿಹಿಸುದ್ದಿ ತರಬಹುದು
- ಇಂದು ವಿದ್ಯಾರ್ಥಿಗಳಿಗೆ ಏಕಾಗ್ರತೆಯೇ ವರದಾನವಾಗುತ್ತದೆ
- ಉನ್ನತ ಹುದ್ದೆಯಲ್ಲಿ ಇರುವವರಿಗೆ ಶುಭಸುದ್ದಿ, ಶುಭಕರವಾದ ದಿನ
- ವ್ಯಾಪಾರ, ವ್ಯವಹಾರದಲ್ಲಿ ಅನುಕೂಲಕರ ದಿನ
- ಅನಿವಾರ್ಯ ಪ್ರಯಾಣವನ್ನು ಈ ದಿನ ಕೈಗೊಳ್ಳಬಹುದು ಅದರಿಂದ ಲಾಭವು ಕೂಡ ಇದೆ
- ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹೋದ್ಯೋಗಿಗಳಿಂದ ಉತ್ತಮ ಸಲಹೆಗಳನ್ನು ಪಡೆದುಕೊಳ್ಳುತ್ತೀರಿ
- ದೂರ ಪ್ರಯಾಣದ ಚಿಂತನೆ ಮನಸ್ಸಿಗೆ ಬರಬಹುದು
- ಮನಸ್ಸಿನಲ್ಲಿ ಏನೋ ಒಂದು ರೀತಿಯ ಅಹಿತವಾದ ವಾತಾವರಣ ಇರುತ್ತದೆ
- ಆರೋಗ್ಯದ ಬಗ್ಗೆ ಸ್ವಲ್ಪ ಚಿಂತನೆ ನಡೆಸಿ, ಹೃದಯ ಸಂಬಂಧಿ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆಯಿದೆ
- ಇಂದು ಶೀತ ಮತ್ತು ಹೊಟ್ಟೆ ನೋವು ತೊಂದರೆ ಮಾಡಬಹುದು
- ತಾಯಿಯ ಆಶೀರ್ವಾದ ಪಡೆದುಕೊಳ್ಳಿ, ತಾಯಿ ಮನಸ್ಸನ್ನು ಗೆಲ್ಲಲು ಪ್ರಯತ್ನ ಮಾಡಿ
- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆತ್ಮತೃಪ್ತಿಯ ಕೆಲಸವನ್ನು ಮಾಡುತ್ತೀರಿ ಸಮಾಧಾನ ಸಿಗುತ್ತದೆ
- ಇಂದು ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ತವಕದಲ್ಲಿ ಇರುತ್ತೀರಿ
- ನಿಮ್ಮ ಸಾಮರ್ಥ್ಯ ಮೀರಿ ಯಾವುದೇ ಕೆಲಸ ಮಾಡಲು ಮುಂದಾಗಬೇಡಿ
- ತೊಂದರೆಗಳು ಎದುರಾಗಬಹುದು ಆದರೆ ಅದನ್ನು ಎದುರಿಸುವ ಸಾಮರ್ಥ್ಯ ನಿಮಗಿರುತ್ತದೆ
- ಇಂದು ನಿಮ್ಮ ಕೆಲಸಕ್ಕಾಗಿ ಯಾರನ್ನು ಅವಲಂಬಿಸಬೇಡಿ
- ಇಂದು ಆರ್ಥಿಕವಾಗಿ ಯಾವುದೇ ಸಮಸ್ಯೆ, ಅಡ್ಡಿ ಇರುವುದಿಲ್ಲ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪಾಲಿಗೆ ವಿಚಿತ್ರವಾದ ದಿನ, ಇಂದು ಆಗುವುದಿಲ್ಲ ಅಂದುಕೊಂಡ ಕೆಲಸಗಳು ಆಗುತ್ತವೆ
- ಇಂದು ಸ್ವಂತದವರಿಂದಲೇ ನಿಮಗೆ ದ್ರೋಹ ಆಗಬಹುದು
- ರಾಜಕೀಯ ದೂಷಣೆ ಕೂಡ ನಡೆಯುವ ದಿನ
- ಶಾರೀರಿಕವಾದ ಸಮಸ್ಯೆ, ನರನಾಡಿಗಳಲ್ಲಿ ನೋವು ಕಾಡಬಹುದು
- ಇಂದು ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯಿದೆ
- ದುರ್ಗಾದೇವಿ ಆರಾಧನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ಇಂದು ಹಿರಿಯರು, ಅಧಿಕಾರಿಗಳು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
- ಇಂದು ನಕಾರಾತ್ಮಕವಾದ ಚಿಂತನೆಗಳಿಂದ ದೂರ ಇರಬೇಕು
- ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ
- ಅನುಭವಿಗಳ ಮಾರ್ಗದರ್ಶನದಿಂದ ನಿಮಗೆ ಯಶಸ್ಸಿದೆ
- ಧಾರ್ಮಿಕ ಅಥವಾ ಆಧ್ಯಾತ್ಮಿಕ ಮುಖಂಡರ ಭೇಟಿಯಾಗಬಹುದು ಅವರ ಮಾತು ಪ್ರಭಾವ ಬೀರಬಹುದು
- ಈಶ್ವರನ ಆರಾಧನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನ ಕಾಪಾಡಿಕೊಳ್ಳಬೇಕು
- ಮನೆಯಲ್ಲಿ ಏನೋ ಒಂದು ರೀತಿಯ ಹಬ್ಬದ ವಾತಾವರಣ ಇರುತ್ತದೆ
- ಜನರಿಂದ ಗೌರವ, ಆಕರ್ಷಣೆ, ಆದರ ಸಿಗುವ ದಿನ
- ಹಣ ಹೂಡಿಕೆ, ಬಡ್ಡಿ ವ್ಯವಹಾರ ಇತ್ಯಾದಿಗಳಲ್ಲಿ ಉತ್ತಮ ಯಶಸ್ಸು ಕಾಣುತ್ತೀರಿ
- ಪಾರದರ್ಶಕವಾಗಿ ವ್ಯವಹಾರ ಮುಂದುವರಿಸಿದರೆ ಬೇರೆಯವರಿಗೆ ಮಾದರಿ
- ಇಂದು ಗುಪ್ತವಾಗಿ ಜನ ನಿಮ್ಮನ್ನ ಕಾಯ್ತಾ ಇರ್ತಾರೆ
- ರುದ್ರಾರಾಧನೆಯನ್ನು ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ರಾಜಕೀಯಕ್ಕೆ ಸಂಬಂಧಪಟ್ಟ ಮಾತುಕತೆಗಳು ನಡೆಯುತ್ತವೆ
- ವ್ಯಾಪಾರ, ವ್ಯವಹಾರಗಳಲ್ಲಿ ಅನುಕೂಲತೆಗಳಿವೆ
- ರಾಜಕೀಯ ಪ್ರಭಾವ, ರಾಜಕೀಯ ಒತ್ತಡ ಇಂದು ಕೆಲಸ ಮಾಡುತ್ತದೆ
- ಆದಾಯದ ಮೂಲ ಗಟ್ಟಿಯಾಗುತ್ತದೆ
- ಧಾರ್ಮಿಕ ಕಾರ್ಯಗಳ ಬಗ್ಗೆ ಸ್ವಲ್ಪ ಚಿಂತನೆ ಮಾಡಿ ಒಳ್ಳೆಯದಾಗುತ್ತದೆ
- ಇಂದು ಲೇಖಕರಿಗೆ ಅನುಕೂಲಕರ ದಿನ
- ಇಂದು ಗೌರವ, ಆದರ, ಆತಿಥ್ಯಗಳು ಸಿಗುವ ದಿನ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮಹಿಳೆಯರು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ
- ಖರೀದಿಯಿಂದ ಮೋಸ ಹೋಗಬಹುದು ಅದಕ್ಕೆ ಅವಕಾಶವನ್ನು ಕೊಡಬೇಡಿ
- ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ನಿಮಗೆ ಧೈರ್ಯ ಇರಲಿ
- ಕಾರ್ಯಕ್ಷೇತ್ರದಲ್ಲಿ ಸಣ್ಣಪುಟ್ಟ ಮಾತಿನ ವಿಚಾರಕ್ಕೆ ಅವಮಾನವಾಗಬಹುದು
- ನಿಮ್ಮ ಆಲೋಚನೆಗಳನ್ನು ಎಲ್ಲರ ಜೊತೆ ಹಂಚಿಕೊಳ್ಳಿ
- ಇಂದು ಹಳೆಯ ನೆನಪುಗಳಿಂದ ಬೇಸರ, ನೋವಾಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮೆಲ್ಲಾ ಕಾರ್ಯಗಳು ಬಹಳ ಸುಗಮವಾಗಿ, ಸರಳವಾಗಿ ನಡೆಯುತ್ತವೆ
- ಹಿರಿಯರ ಮತ್ತು ಸಹೋದರರ ಉತ್ತಮ ಸಲಹೆ ನಿಮಗೆ ಅನುಕೂಲವಾಗುತ್ತದೆ
- ಇಂದು ಮಕ್ಕಳಿಂದ ಸಂತೋಷ ಸಿಗುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು
- ಸಂಗೀತಾಸಕ್ತರಿಗೆ ಉತ್ತಮವಾದ ದಿನ
- ಆಧ್ಯಾತ್ಮಿಕ ಚಿಂತನೆಯ ಪ್ರಭಾವ ಮನಸ್ಸಿಗೆ ಧೈರ್ಯವನ್ನು ಕೊಡುತ್ತದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ವ್ಯಾಪಾರದಲ್ಲಿ ಹೆಚ್ಚು ಖರ್ಚಾಗಬಹುದು
- ಕೈ ಕೆಳಗಿನ ಉದ್ಯೋಗಿಗಳಿಗೆ ಸಹಾಯ ಮಾಡಬಹುದು
- ಇಂದು ಪ್ರೇಮಿಗಳಿಗೆ ಶುಭ ದಿನ
- ಇಂದು ಸರ್ಕಾರಿ ನೌಕರರಿಗೆ ಲಾಭದ ದಿನ
- ಅನುಭವಿಗಳ ಮಾತು ನಿಮ್ಮ ಕಾರ್ಯಕ್ಕೆ ಸ್ಪೂರ್ತಿ ನೀಡುತ್ತದೆ
- ಹೊಸ ಯೊಜನೆಗಳಿಂದ ಬೇರೆಯವರಿಗೂ ಕೂಡ ಅನುಕೂಲ ಮಾಡಿಕೊಡುತ್ತೀರಿ
- ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ