ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ
ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ
ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯ ಸದಸ್ಯರ ಬಗ್ಗೆ ಸ್ವಲ್ಪ ಗಮನಹರಿಸಿ
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಾಬರಿ ಬೇಡ
- ದಾಯಾದಿಗಳಲ್ಲಿ ಮಾತಿಗೆ ಮಾತು ಬೆಳೆದು ವೈಮನಸ್ಯಕ್ಕೆ ಕಾರಣವಾಗಬಹುದು
- ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಶ್ರಮವಿರುತ್ತದೆ ಆದರೆ ಪ್ರತಿಫಲ ಸಮಾಧಾನ ಕೊಡುವುದಿಲ್ಲ
- ಕಹಿಯಾದ ಮಾತುಗಳಿಂದ ದೂರವಿರಿ
- ಹಣದ ವಿಚಾರದಲ್ಲಿ ಗಮನಹರಿಸಿ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ, ಮನೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸುವ ದಿನವಾಗಿರುತ್ತದೆ
- ನಿಂತು ಹೋದ ಕೆಲಸ ಪುನಃ ಆರಂಭವಾಗಲಿದೆ
- ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
- ನಿರೀಕ್ಷಿತವಾದ ಲಾಭವನ್ನು ಗಳಿಸುತ್ತೀರಿ
- ಎರಡನೇ ಮದುವೆ ಮಾಡಿಕೊಳ್ಳುವವರಿಗೆ ಅನುಕೂಲವಿದೆ
- ಈ ದಿನ ಪ್ರೇಮಿಗಳಿಗೆ ಶುಭವಿದೆ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಮಾಡುವ ಕೆಲಸ, ಮಾತು, ರೀತಿ-ರಿವಾಜುಗಳಿಗೆ, ಮನೆಯವರೆ ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ
- ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ ಆದರೆ ತೊಂದರೆಯಿಲ್ಲ
- ವೃತ್ತಿ ಅಥವಾ ನೌಕರಿಯಲ್ಲಿ ಸಮಸ್ಯೆಯಾಗಬಹುದು
- ನಿಮ್ಮ ಮೇಲಿರುವ ಜನರ ನಿರೀಕ್ಷೆ ಸುಳ್ಳಾಗಬಹುದು
- ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಯಾಗಬಹುದು
- ಇಂದು ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ನಿಮಿತ್ತ ಪ್ರಯಾಣ ಬೆಳೆಸಲು ಅನುಕೂಲವಿದೆ
- ಮನೆಯವರ ಸಹಕಾರ ಇದಕ್ಕೆಲ್ಲ ಕಾರಣವಾಗಲಿದೆ
- ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಯಶಸ್ಸಿದೆ
- ಮನೆಯಲ್ಲಿ ಸಂತೋಷದ ವಾತಾವರಣವಿದೆ
- ಈ ದಿನ ಮಕ್ಕಳಿಂದ ಸಮಾಧಾನವಿರಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಸಪ್ತ ಮಾತೆಯರನ್ನು ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ದಂಪತಿಗಳಲ್ಲಿ ವೈಮನಸ್ಯ ಇದ್ದರೆ ಬಗೆಹರಿಸಿಕೊಳ್ಳಿ
- ನಿಮ್ಮ ಕೆಲಸದಿಂದ ಅನುಕೂಲವಿದೆ
- ಮಕ್ಕಳ ವಿಚಾರಕ್ಕೆ ಸಮಯವನ್ನು ಕೊಡಿ
- ನಿಮ್ಮ ಕರ್ತವ್ಯವನ್ನು ಸಕಾಲದಲ್ಲಿ ನಿಭಾಯಿಸುವ ಕೀರ್ತಿ ಇರಲಿದೆ
- ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
- ಅನುಪಯುಕ್ತ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
- ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
- ನಾಗದೇವತೆಯನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತಲೆನೋವು, ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
- ಪ್ರೇಮಿಗಳ ಮಧ್ಯೆ ಬಿರುಕು ಬಿಡಬಹುದು
- ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
- ಕಾನೂನಿನ ಮೊರೆ ಹೋದರೂ ಜಯ ಸಿಗುವುದಿಲ್ಲ
- ಇಂದು ನಿಮಗೆ ತಾಳ್ಮೆಯಿರಲಿ
- ಈ ದಿನ ಶಾಂತತೆಯನ್ನು ಕಾಪಾಡಿಕೊಳ್ಳಿ
- ವಯಸ್ಸಾದ ದಂಪತಿಗಳಿಗೆ ಸಹಾಯ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಗುಪ್ತ ವಿಚಾರಗಳು, ರಹಸ್ಯ ವಿಚಾರಗಳ ಬಗ್ಗೆ ಕುತೂಹಲ ಹೆಚ್ಚಾಗಬಹುದು
- ಅತಿಯಾದ ನಂಬಿಕೆ ಒಳ್ಳೆಯದಲ್ಲ
- ಆಹಾರದ ಬಗ್ಗೆ ಗಮನವಿರಲಿ
- ಬೇರೆಯವರಿಂದ ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯಾಗಬಹುದು
- ಈ ದಿನ ಹೊಸ ಕೆಲಸದ ಆರಂಭ ಬೇಡ
- ನಿಮ್ಮ ಪ್ರಯತ್ನ ನಿರಂತರವಾಗಿರಲಿ
- ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರು ನಿಮ್ಮ ಬಗ್ಗೆ ತೋರಿಸುವ ಪ್ರೀತಿ, ವಿಶ್ವಾಸ, ಒಲವು,ಆಸಕ್ತಿ ನಿಮಗೆ ಅನುಕೂಲವನ್ನು ಮಾಡಿಕೊಡಲಿದೆ
- ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
- ಪ್ರವಾಸದಿಂದ ಸಂತೋಷವಾಗಲಿದೆ
- ಯಾವುದೇ ಸೋಂಕು ತಗಲದಂತೆ ಎಚ್ಚರಿಕೆವಹಿಸಿ
- ಮನೆಯಲ್ಲಿ ವಿವಾದಗಳು ಬೇಡ
- ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಿ
- ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಇಂದಿನ ದಿನಚರಿಯನ್ನು ಶಿಸ್ತುಬದ್ಧವಾಗಿ ಮಾಡಿ
- ಸ್ನೇಹಿತರ ಆಹ್ವಾನದಿಂದ ಸಂತೋಷವಾಗುತ್ತೀರಿ
- ಯಾರನ್ನೂ ಕೂಡ ದೂಷಿಸಬೇಡಿ
- ಕುಟುಂಬದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
- ನಿಮ್ಮ ಕೆಲಸದ ಬಗ್ಗೆ ಗರ್ವ ಬೇಡ
- ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡಿ
- ದುರ್ಗಾರಾಧನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಆದಾಯ ಸ್ಥಿರವಾಗಿರುತ್ತದೆ
- ವೈವಾಹಿಕ ಜೀವನ ಗೊಂದಲವಾಗಿರಲಿದೆ
- ನಿಮ್ಮ ಮನಸ್ಸು ಶಾಂತವಾಗಿರುವುದಿಲ್ಲ
- ನಿಮ್ಮ ವಿರೋಧಿಗಳಿಂದ ತೊಂದರೆಯಿದೆ
- ಪ್ರೇಮಿಗಳಿಗೆ ತೊಂದರೆಗಳು, ಅಡ್ಡಿಗಳು ಆಗಬಹುದು
- ಬೇರೆಯವರ ಅಭಿಪ್ರಾಯಕ್ಕೆ ಅವಕಾಶಕೊಡಿ
- ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿದೆ ಅದರ ಪರಿಹಾರದ ಚಿಂತೆಯಿರಲಿ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಗಮನಹರಿಸಿ
- ಬೇರೆಯವರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ
- ನಿಮ್ಮ ಗೌರವಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರವಹಿಸಿ
- ಅತಿಥಿಗಳ ಆಗಮನವಾಗಬಹುದು
- ಸ್ತಿರಾಸ್ಥಿಯ ವಿವಾದ ಉದ್ಭವವಾಗಲಿದೆ
- ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಲಾಭದ ದಿನ
- ಮಕ್ಕಳ ಸಾಧನೆ ಗೌರವನ್ನು ತರಲಿದೆ
- ಸಂಬಂಧಿಕರ ಜೊತೆ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಲಿದೆ
- ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲವಾಗಬಹುದು
- ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
- ಮನೆಯವರ ಸಹಕಾರ ಸಿಗಲಿದೆ
- ಆಂಜನೇಯ ಸ್ವಾಮಿಯನ್ನುಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ